Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು: ಖಾಸಗಿ ಮೆಡಿಕಲ್ ಸ್ಟೋರ್​​ನಿಂದ ಔಷಧಿ ತರುವಂತೆ ಚೀಟಿ ಬರೆದುಕೊಟ್ಟು ಸಿಕ್ಕಿ‌ ಬಿದ್ದ ಸರ್ಕಾರಿ ವೈದ್ಯ

ಚಿಕಿತ್ಸೆಗೆ ಆಸ್ಪತ್ರೆಯ ಎದುರಿನ ಖಾಸಗಿ, ಶಿವು ಮೆಡಿಕಲ್ಸ್​​ ಸ್ಟೋರ್​​ನಿಂದಲೇ ಇಂಜೆಕ್ಷನ್ ತರುವಂತೆ ಪಿರಿಯಾಪಟ್ಟಣ ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ.ಫೃಥ್ವಿ ಚೀಟಿ ಬರೆದುಕೊಟ್ಟಿದ್ದರು. ವೈದ್ಯರ ಸೂಚನೆ ಮೇರೆಗೆ ರೋಗಿಯ ಸಂಬಂಧಿಕರು ಇಂಜೆಕ್ಷನ್ ಖರೀದಿಸಲು ಮೆಡಿಕಲ್​ಸ್ಟೋರ್​ಗೆ ಹೋಗಿದ್ದರು. ಮುಂದೇನಾಯ್ತು ಈ ಸ್ಟೋರಿ ಓದಿ

ಮೈಸೂರು: ಖಾಸಗಿ ಮೆಡಿಕಲ್ ಸ್ಟೋರ್​​ನಿಂದ ಔಷಧಿ ತರುವಂತೆ ಚೀಟಿ ಬರೆದುಕೊಟ್ಟು ಸಿಕ್ಕಿ‌ ಬಿದ್ದ ಸರ್ಕಾರಿ ವೈದ್ಯ
ಖಾಸಗಿ ಮೆಡಿಕಲ್​ ಸ್ಟೋರ್​ ಸಿಬ್ಬಂದಿ
Follow us
ದಿಲೀಪ್​, ಚೌಡಹಳ್ಳಿ
| Updated By: ವಿವೇಕ ಬಿರಾದಾರ

Updated on: Nov 03, 2023 | 8:28 AM

ಮೈಸೂರು ನ.03: ಔಷಧಿಗಳನ್ನು ಖಾಸಗಿ ಮೆಡಿಕಲ್​​​ ಸ್ಟೋರ್​ನಿಂದಲೇ (Medical Store) ತರುವಂತೆ ಚೀಟಿ ಬರೆದು ಕೊಡುವ ಮೂಲಕ ಸರ್ಕಾರಿ ವೈದ್ಯ (Government Doctor) ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ. ಆಯುಷ್ಮಾನ್ ಭಾರತ್ ಯೋಜನೆಯಡಿ ಇಬ್ಬರು ರೋಗಿಗಳು ಮೂಲವ್ಯಾದಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಪಿರಿಯಾಪಟ್ಟಣದ (Periyapatna) ಸಾರ್ವಜನಿಕ ಆಸ್ಪತ್ರೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರಚಿಕಿತ್ಸೆ ಮಾಡುವ ಸಲುವಾಗಿ ವೈದ್ಯರು ಒಳ ರೋಗಿಗಳಾಗಿ ದಾಖಲು ಮಾಡಿಕೊಂಡಿದ್ದರು. ಚಿಕಿತ್ಸೆಗೆ ಆಸ್ಪತ್ರೆಯ ಎದುರಿನ ಖಾಸಗಿ, ಶಿವು ಮೆಡಿಕಲ್ಸ್​​ ಸ್ಟೋರ್​​ನಿಂದಲೇ ಇಂಜೆಕ್ಷನ್ ತರುವಂತೆ ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ.ಫೃಥ್ವಿ ಚೀಟಿ ಬರೆದುಕೊಟ್ಟಿದ್ದರು.

ವೈದ್ಯರ ಸೂಚನೆ ಮೇರೆಗೆ ರೋಗಿಯ ಸಂಬಂಧಿಕರು ಇಂಜೆಕ್ಷನ್ ಖರೀದಿಸಲು ಮೆಡಿಕಲ್​ಸ್ಟೋರ್​ಗೆ ಹೋಗಿದ್ದರು. ಮೆಡಿಕಲ್ ಸ್ಟೋರ್​ನಲ್ಲಿ ಸಿಬ್ಬಂದಿ, ಒಬ್ಬರಿಗೆ 5,500 ರೂ. ಮತ್ತೊಬ್ಬರಿಗೆ 5 ಸಾವಿರ ರೂ. ಹಣ ಪಡೆದನು. ಅನುಮಾನಗೊಂಡ ರೋಗಿಯ ಸಂಬಂಧಿಕರು ಒಂದೇ ಇಂಜೆಕ್ಷನ್​ಗೇ ಹೀಗೇಕೆ ಬೇರೆ ಬೇರೆ ದರ ಎಂದು ಪ್ರಶ್ನೆ ಮಾಡಿದರು.

ಇದನ್ನೂ ಓದಿ: HIV ಸೋಂಕಿತ ಎಂದು ಹೇಳದೇ ಇದ್ದುದಕ್ಕೆ ರೋಗಿಗೆ ಥಳಿಸಿದ ವೈದ್ಯ ಅಮಾನತು

ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಈ ಔಷಧಿಯನ್ನು ಆಸ್ಪತ್ರೆಯಲ್ಲಿಯೇ ಕೊಡಬೇಕು ಎಂಬ ನಿಯಮವಿದೆ ಆದರೂ ಹೊರಗಡೆಯಿಂದ ತರಸಲಾಗುತ್ತಿದೆ. ನೀವು ಅಕ್ರಮವಾಗಿ ಇಂಜೆಕ್ಷನ್ ಮಾರಾಟ ಮಾಡುತ್ತಿದ್ದೀರಿ, ಇದಕ್ಕೆ ರಸೀದಿ ನೀಡಿ ಎಂದು ಪಟ್ಟು ಹಿಡಿದಿದ್ದಾರೆ. ಇದರಿಂದ ತಬ್ಬಿಬ್ಬುಗೊಂಡ ಮೆಡಿಕಲ್ ಸ್ಟೋರ್ ಸಿಬ್ಬಂದಿ ವೈದ್ಯರು ಹೇಳಿದ್ದರಿಂದ ಈ ಇಂಜೆಕ್ಷನ್ ಕೊಡುತ್ತಿದ್ದೇವೆ ಎಂದು ಹೇಳಿದ್ದಾರೆ.

ವೈದ್ಯರ ಶಿಫಾರಸು ಚೀಟಿ ಇಲ್ಲದೆ ಮತ್ತು ಔಷಧಿ ನೀಡಿರುವುದಕ್ಕೆ ರಸೀದಿ ನೀಡದೆ ಹಣ ಪಡೆಯುತ್ತಿರುವುದು ಅಕ್ರಮ ಎಂದು ರೋಗಿಯ ಕಡೆಯವರು ತರಾಟೆಗೆ ತೆಗೆದುಕೊಂಡಿದ್ದಾರೆ. ತಕ್ಷಣ ಮೆಡಿಕಲ್ ಸ್ಟೋರ್​ನ ಸಿಬ್ಬಂದಿಗಳು ಇಬ್ಬರಿಗೂ ಹಣ ವಾಪಸ್ ನೀಡಿದ್ದಾರೆ. ಇದು ನಮ್ಮ ತಪ್ಪಲ್ಲವೆಂದು ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?