ಹಿಮಾಚಲ ಪ್ರದೇಶಕ್ಕೆ ಪ್ರವಾಸಕ್ಕೆ ತೆರಳಿದ್ದ ಮೈಸೂರಿನ ನಾಲ್ವರು ನಾಪತ್ತೆ

| Updated By: ವಿವೇಕ ಬಿರಾದಾರ

Updated on: Jul 11, 2023 | 8:11 AM

ಹಿಮಾಚಲ ಪ್ರದೇಶದ ಬಿಯಾಸ್​​ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಪ್ರವಾಹವಾಗಿ ಮನೆ, ವಾಹನ, ಸೇತುವೆ ಹೂಗೂ ನೀರಿನ ರಭಸಕ್ಕೆ ರಸ್ತೆಗಳು ಕೊಚ್ಚಿಕೊಂಡು ಹೋಗಿವೆ. ಇದರಿಂದ ಸಂಪರ್ಕ ಕಡಿತವಾಗಿದೆ. ಇನ್ನು ಪ್ರವಾಸಕ್ಕೆ ತೆರಳಿದ್ದ ಮೈಸೂರಿನ ಪ್ರವಾಸಿಗರು ನಾಪತ್ತೆಯಾಗಿದ್ದಾರೆ.

ಹಿಮಾಚಲ ಪ್ರದೇಶಕ್ಕೆ ಪ್ರವಾಸಕ್ಕೆ ತೆರಳಿದ್ದ ಮೈಸೂರಿನ ನಾಲ್ವರು ನಾಪತ್ತೆ
ಮೈಸೂರಿನ ಪ್ರವಾಸಿಗರು
Follow us on

ಮೈಸೂರು: ಹಿಮಾಚಲ ಪ್ರದೇಶದ (Himachal Pradesh) ಸೇರಿದಂತೆ ಉತ್ತರ ಭಾರತ ನೈಸರ್ಗಿಕ ವಿಕೋಪದಿಂದ (Natural disaster) ತತ್ತರಿಸಿದೆ. ಒಂದೇಸಮ ಮಳೆ ಸುರಿಯುತ್ತಿರುವುದರಿಂದ ನದಿಗಳು ಉಕ್ಕಿ ಹರಿಯುತ್ತಿದ್ದು ಹಲವಾರು ಕಡೆಗಳಲ್ಲಿ ಪ್ರವಾಹ ಉಂಟಾಗಿದೆ. ಹಿಮಾಚಲ ಪ್ರದೇಶದ ಬಿಯಾಸ್​​ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಪ್ರವಾಹವಾಗಿ ಮನೆ, ವಾಹನ, ಸೇತುವೆ ಹೂಗೂ ನೀರಿನ ರಭಸಕ್ಕೆ ರಸ್ತೆಗಳು ಕೊಚ್ಚಿಕೊಂಡು ಹೋಗಿವೆ. ಇದರಿಂದ ಸಂಪರ್ಕ ಕಡಿತವಾಗಿದೆ. ಈ ಹಿನ್ನೆಲೆ ಭಾರತೀಯ ಹವಾಮಾನ ಇಲಾಖೆ (India Meteorological Department) ಹಿಮಾಚಲ ಪ್ರದೇಶದಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಇನ್ನು ಹಿಮಾಚಲ ಪ್ರದೇಶದ ಕುಲು-ಮನಾಲಿ ಪ್ರವಾಸಕ್ಕೆ ತೆರಳಿದ್ದ ಮೈಸೂರಿನ ಪ್ರವಾಸಿಗರು ನಾಪತ್ತೆಯಾಗಿದ್ದಾರೆ.

ಪ್ಯಾಕೇಜ್ ಟೂರ್‌ನಲ್ಲಿ ಹೋಗಿದ್ದ ಶ್ರೀನಿಧಿ, ನವ್ಯ, ವೀರ್ ಹಾಗೂ ಅವರ ಪತ್ನಿ ನಾಪತ್ತೆಯಾದವರು. ನಾಲ್ವರು ಕಳೆದ ಗುರುವಾರ ಮೈಸೂರಿನಿಂದ ಕುಲು-ಮನಾಲಿಗೆ ತೆರಳಿದ್ದರು. ಭಾನುವಾರ ರಾತ್ರಿ ಕೊನೆಯ ಬಾರಿಗೆ ಸಂಪರ್ಕಕ್ಕೆ ಸಿಕ್ಕಿದ್ದರು. ಈ ವೇಳೆ ಮಳೆ ಜಾಸ್ತಿ ಇದೆ ರೆಡ್​ ಅಲರ್ಟ್​ ಘೋಷಿಸಿದ್ದಾರೆ. ನಾವು ಸುರಕ್ಷಿತವಾಗಿದ್ದೇವೆಂದು ಕುಟುಂಬಸ್ಥರಿಗೆ ತಿಳಿಸಿದ್ದರು. ಬಳಿಕ ಸಂಪರ್ಕಕ್ಕೆ ಸಿಗದ ಹಿನ್ನೆಲೆ ಕುಟುಂಬಸ್ಥರು ಆತಂಕಗೊಂಡಿದ್ದಾರೆ. ನಮ್ಮವರನ್ನು ಸುರಕ್ಷಿತವಾಗಿ ಕರೆತರುವಂತೆ ಕುಟುಂಬಸ್ಥರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಅಮರನಾಥ ಯಾತ್ರೆಗೆ ತೆರಳಿದ್ದ ಕಾಫಿನಾಡಿಗರು ಸೇಫ್

ಚಿಕ್ಕಮಗಳೂರು: ಅಮರನಾಥ ಯಾತ್ರೆಗೆ ತೆರಳಿದ್ದ ಕಾಫಿನಾಡು ಚಿಕ್ಕಮಗಳೂರಿನ ಐವರು ಸೇಫ್​ ಆಗಿದ್ದಾರೆ. ಮಳೆಯಿಂದ ಶೇಷನಾಗ್ ಪ್ರದೇಶದಲ್ಲಿ ಐವರು ಸಿಲುಕಿದ್ದರು. ನಿನ್ನೆ (ಜು.10) ಅಮರನಾಥನ ದರ್ಶನ ಪಡೆದು ಇಂದು ಬೆಲ್ತಾಲ್ ಬೇಸ್ಗೆ ವಾಪಸ್ ಆಗಿದ್ದಾರೆ.  ಶ್ರೀನಿವಾಸ್ ,ಮಣಿ ,ಭರತ್, ಚಂದ್ರಶೇಖರ್, ಮನೋಜ್  ಐವರ ತಂಡ ಕಳೆದ ವಾರ ಚಿಕ್ಕಮಗಳೂರಿನಿಂದ ಯಾತ್ರೆಗೆ ತೆರಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:31 am, Tue, 11 July 23