AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಂಸ್ಕೃತಿಕ ನಗರಿಯಲ್ಲಿ ಕಣ್ಮರೆಯಾಗಲಿದೆ ಗುಲ್ ಮೋಹರ್!

ಮೈಸೂರು: ನಗರದ ರಸ್ತೆಗಳ ಸೌಂದರ್ಯ ಹೆಚ್ಚಿಸುತ್ತಿದ್ದ ಗುಲ್ ಮೋಹರ್ ಮರಗಳು‌ ಮುಂದಿನ ದಿನಗಳಲ್ಲಿ ಕಣ್ಮರೆಯಾಗಲಿದೆ. ಇನ್ನು ಮುಂದೆ ಪಾಲಿಕೆ ಗುಲ್ ಮೋಹರ್ ಗಿಡಗಳನ್ನ ನೆಡಬಾರದು ಎಂದು ನಿರ್ಧಾರಕ್ಕೆ ಬಂದಿದೆ. ಅಷ್ಟೆ ಅಲ್ಲದೆ ದುರ್ಬಲವಾಗಿರುವ ಮರಗಳನ್ನು ಕೆಡವಲು ಮೈಸೂರು ಮಹಾನಗರ ಪಾಲಿಕೆ ನಿರ್ಧರಿಸಿದೆ. ಇಡೀ ಮೈಸೂರು ನಗರದ ಸೌಂದರ್ಯವನ್ನು ಮತ್ತಷ್ಟು ಹೆಚ್ವಿಸುತ್ತಿದಿದ್ದು ಅಂದ್ರೆ ಅದು ಗುಲ್ ಮೋಹರ್ ಮರದಲ್ಲಿ ಅರಳುತ್ತಿದ್ದ ಹೂಗಳೆ. ಆದ್ರೆ ದುರ್ಬಲವಾಗಿರುವ ಈ ಮರಗಳು ಗಾಳಿಗೆ ಬೀಳುತ್ತಿದ್ದು, ಇದರಿಂದ ಆಸ್ತಿಪಾಸ್ತಿ ನಷ್ಟ ಉಂಟಾಗುತ್ತಿದೆ. ಅಷ್ಟೆ ಅಲ್ಲದೆ […]

ಸಾಂಸ್ಕೃತಿಕ ನಗರಿಯಲ್ಲಿ ಕಣ್ಮರೆಯಾಗಲಿದೆ ಗುಲ್ ಮೋಹರ್!
ಸಾಧು ಶ್ರೀನಾಥ್​
| Edited By: |

Updated on:May 25, 2020 | 8:59 AM

Share

ಮೈಸೂರು: ನಗರದ ರಸ್ತೆಗಳ ಸೌಂದರ್ಯ ಹೆಚ್ಚಿಸುತ್ತಿದ್ದ ಗುಲ್ ಮೋಹರ್ ಮರಗಳು‌ ಮುಂದಿನ ದಿನಗಳಲ್ಲಿ ಕಣ್ಮರೆಯಾಗಲಿದೆ. ಇನ್ನು ಮುಂದೆ ಪಾಲಿಕೆ ಗುಲ್ ಮೋಹರ್ ಗಿಡಗಳನ್ನ ನೆಡಬಾರದು ಎಂದು ನಿರ್ಧಾರಕ್ಕೆ ಬಂದಿದೆ. ಅಷ್ಟೆ ಅಲ್ಲದೆ ದುರ್ಬಲವಾಗಿರುವ ಮರಗಳನ್ನು ಕೆಡವಲು ಮೈಸೂರು ಮಹಾನಗರ ಪಾಲಿಕೆ ನಿರ್ಧರಿಸಿದೆ.

ಇಡೀ ಮೈಸೂರು ನಗರದ ಸೌಂದರ್ಯವನ್ನು ಮತ್ತಷ್ಟು ಹೆಚ್ವಿಸುತ್ತಿದಿದ್ದು ಅಂದ್ರೆ ಅದು ಗುಲ್ ಮೋಹರ್ ಮರದಲ್ಲಿ ಅರಳುತ್ತಿದ್ದ ಹೂಗಳೆ. ಆದ್ರೆ ದುರ್ಬಲವಾಗಿರುವ ಈ ಮರಗಳು ಗಾಳಿಗೆ ಬೀಳುತ್ತಿದ್ದು, ಇದರಿಂದ ಆಸ್ತಿಪಾಸ್ತಿ ನಷ್ಟ ಉಂಟಾಗುತ್ತಿದೆ. ಅಷ್ಟೆ ಅಲ್ಲದೆ ಪ್ರಾಣ ಹಾನಿಗೂ ಕಾರಣವಾಗುತ್ತಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಪಾಲಿಕೆ ನಗರ ವ್ಯಾಪ್ತಿಯಲ್ಲಿ ಇರುವ ದುರ್ಬಲ ಗುಲ್ ಮೋಹರ್ ಮರಗಳನ್ನು ತೆರವು ಮಾಡಲು ನಿರ್ಧಾರ ಮಾಡಲಾಗಿದೆ.‌

ಅಷ್ಟೆ ಅಲ್ಲದೆ ಮರಗಳನ್ನು ತೆರವು ಮಾಡಿದ ಸ್ಥಳಕ್ಕೆ ಮತ್ತೆ ಬೇರೆ ಗಿಡಗಳನ್ನು ನೆಡಲು ಪಾಲಿಕೆ ತೀರ್ಮಾನಿಸಿದೆ. ಆದ್ರೆ ಈ‌ ಮರಗಳು‌ ದುರ್ಬಲವಾಗಲು ಪಾಲಿಕೆ ತೆಗೆದುಕೊಂಡ ಅವೈಜ್ಞಾನಿಕ ನೀತಿಯೆ ಕಾರಣ ಎಂಬುದು ಕೆಲವರ ಆರೋಪವಾಗಿದೆ. ನಗರ ಸಂಪೂರ್ಣ ಕಾಂಕ್ರಿಟ್ ಹಾಗೂ ಡಾಂಬರೀಕರಣವಾಗಿದೆ. ಮರದ ಬುಡದ ವರೆಗು ಡಾಂಬರಾಕಿದ್ದರಿಂದ ನೀರು ಇಂಗಲು ಸಾಧ್ಯವಾಗದೆ ಮರ ದುರ್ಬಲವಾಗುತ್ತಿದೆ. ಮರ ಕೆಡುವ ಬದಲು ಮರದ ಬುಡುವನ್ನು ಡಾಂಬರಿಂದ ದೂರ ಮಾಡಿದ್ರೆ ಸಾಕು ಎನ್ನುವ ಮಾತುಗಳು ಸಹ‌ ಕೇಳಿ ಬರುತ್ತಿದೆ.

ಗುಲ್‌ ಮೋಹರ್ ಮರದ ಹಿನ್ನೆಲೆ: ಬೇಸಿಗೆ ಸಂದರ್ಭದಲ್ಲಿ ಹೂ ಬಿಡುವ ಮರಗಳು ನೋಡುಗರ ಕಣ್ಮನ ಸೆಳೆಯುತ್ತವೆ. ಅದರಲ್ಲು ಮೈಸೂರಿನ ಪ್ರಮುಖ ರಸ್ತೆಯ ಬದಿಯಲ್ಲಿ ಈ ಮರಗಳನ್ನು ನೆಡಲಾಗಿದ್ದು ಪ್ರವಾಸಿಗರಿಗೆ ಆಕರ್ಷಣೆಯಾಗಿ ಕಾಣುತ್ತಿದೆ. ಈ ಮರ ಪೂರ್ವ ಆಫ್ರಿಕಾದ ಮಡಗಾಸ್ಕರ್ ದ್ವೀಪ ರಾಷ್ಟ್ರದಿಂದ ಬಂತೆದ್ದು ಹೇಳಲಾಗುತ್ತೆ. ಭಾರತಕ್ಕೆ 125 ವರ್ಷಗಳ ಮುಂಚೆ ಬಂತೆದ್ದು ಹೇಳಲಾಗುತ್ತೆ.‌ ಇದನ್ನ ಹೆಚ್ಚಾಗಿ ರಸ್ತೆ ಬದಿಯಲ್ಲಿ ನೆಡಲಾಗುತ್ತೆ.

ಗುಲ್ ಮೋಹರ್​ಗೆ ಪರ್ಯಾಯ ಏನು? ಬೇಸಿಗೆ ಸಂದರ್ಭದಲ್ಲಿ ನಗರದ ಸೌಂದರ್ಯ ಹೆಚ್ಚಿಸುತ್ತಿದ್ದ ಗುಲ್ ಮೋಹರ್ ಮರಗಳನ್ನು ತೆಗೆದರೆ ಸೌಂದರ್ಯ ಹಾಳಾಗುತ್ತೆ. ಕಾಲಕ್ರಮೇಣ ಗುಲ್ ಮೋರ್ ಮರಗಳು ಕಡಿಮೆಯಾದ್ರೆ ಬದಲಿ ಏನು ಅನ್ನೋ ಪ್ರಶ್ನೆ ಸಹಜವಾಗಿ ಮೂಡುತ್ತೆ. ಇದರಿಂದ ಗುಲ್ ಮೋಹರ್ ಬದಲಿಗೆ ಹೂ ಬಿಡುವಂತ ಸಸಿಗಳನ್ನೆ ನೆಡಲು ಪಾಲಿಕೆ ತೀರ್ಮಾನ ಮಾಡಿದೆ.

Published On - 8:30 am, Mon, 25 May 20

ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ