ಮೈಸೂರು: ವೀಲಿಂಗ್ ಪ್ರಶ್ನಿಸಿದ ಕಾನ್ಸ್​ಟೇಬಲ್ ಮೇಲೆಯೇ ಆಟೋ ಹತ್ತಿಸಲು ಯತ್ನ, ಆರೋಪಿ ಅಂದರ್

ಹುಣಸೂರು ತಾಲ್ಲೂಕಿನ ಚಿಕ್ಕಹುಣಸೂರು ಹಾಗೂ ರತ್ನಪುರಿ ಕ್ರಾಸ್ ಬಳಿ ಆಟೋದಲ್ಲಿ ಅಪಾಯಕಾರಿ ವೀಲಿಂಗ್ ಮಾಡುತ್ತಿದ್ದವನನ್ನ ಕಾನ್ಸಟೇಬಲ್​ರೊಬ್ಬರು ಪ್ರಶ್ನಿಸಿದ್ದು, ಇದರಿಂದ ಕೋಪಗೊಂಡ ಚಾಲಕ ಅವರ ಮೇಲೇಯೇ ಆಟೋ ಹತ್ತಿಸಲು ಬಂದಿದ್ದ ಘಟನೆ ನಡೆದಿದೆ. ಇದೀಗ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೈಸೂರು: ವೀಲಿಂಗ್ ಪ್ರಶ್ನಿಸಿದ ಕಾನ್ಸ್​ಟೇಬಲ್ ಮೇಲೆಯೇ ಆಟೋ ಹತ್ತಿಸಲು ಯತ್ನ, ಆರೋಪಿ ಅಂದರ್
ಆರೋಪಿ
Edited By: ಕಿರಣ್ ಹನುಮಂತ್​ ಮಾದಾರ್

Updated on: Aug 16, 2023 | 12:08 PM

ಮೈಸೂರು, ಆ.16: ಆಟೋದಲ್ಲಿ ಅಪಾಯಕಾರಿ ವೀಲಿಂಗ್(Wheeling) ಮಾಡುತ್ತಿದ್ದವನನ್ನ ಪ್ರಶ್ನಿಸಿದ ಕಾನ್ಸಟೇಬಲ್ ಮೇಲೇಯೇ ಆಟೋ ಹತ್ತಿಸಲು ಮುಂದಾಗಿದ್ದ ಆರೋಪಿಯನ್ನು ಬಂಧಿಸಿದ ಘಟನೆ ಮೈಸೂರು(Mysore) ಜಿಲ್ಲೆಯ ಹುಣಸೂರು ತಾಲ್ಲೂಕಿನ ಚಿಕ್ಕಹುಣಸೂರು ಹಾಗೂ ರತ್ನಪುರಿ ಕ್ರಾಸ್ ಬಳಿ ನಡೆದಿದೆ. ರೋಷನ್ ಜಮೀರ್ ಅಹಮದ್ 26 ಬಂಧಿತ ಆರೋಪಿ. ಇತ ವಿ.ಪಿ ಬೋರೆ ಕಡೆಯಿಂದ ಮಾರುತಿ ಬಡಾವಣೆಗೆ ಬರುತ್ತಿದ್ದ. ಈ ವೇಳೆ ಹಿಂಭಾಗದ ಒಂದು ಚಕ್ರ ಎತ್ತಿ ಅತೀ ವೇಗವಾಗಿ ವೀಲಿಂಗ್ ಮಾಡಿದ್ದಾನೆ. ಇದನ್ನು ಗಮನಿಸಿದ ಪೊಲೀಸ ಪೇದೆ ಆಟೋ ತಡೆಯಲು ಮುಂದಾಗಿದ್ದು, ಅವರ ಮೇಲೇಯೇ ಹತ್ತಿಸಲು ಯತ್ನಿಸಿದ್ದಾನೆ.

ಪೊಲೀಸ್​ ಪೇದೆ ಮೇಲೆ ಆಟೋ ಹತ್ತಿಸಲು ಮುಂದಾದ ಆರೋಪಿ ರೋಷನ್

ಹೌದು, ವೀಲಿಂಗ್​ ಮಾಡಿದ್ದನ್ನು ಪ್ರಶ್ನಿಸಿದ ಪೊಲೀಸ್​ ಮೇಲೆಯೇ ಆಟೋ ಹತ್ತಿಸಲು ಮುಂದಾಗಿದ್ದ. ಕೂಡಲೇ ಎಚ್ಚೆತ್ತ ಪೊಲೀಸ್ ಸಿಬ್ಬಂದಿ ಪಕ್ಕಕ್ಕೆ ಸರಿದಿದ್ದಾರೆ. ಬಳಿಕ ಪೊಲೀಸ್ ವಾಹನದ ಮುಂಭಾಗದ ಎಡಭಾಗಕ್ಕೆ ಡಿಕ್ಕಿ ಹೊಡೆದು ಎಸ್ಕೇಪ್​ ಆಗಲು ಯತ್ನಿಸಿದ್ದ. ಇದೀಗ ಸಾರ್ವಜನಿಕರ ಸಹಾಯದಿಂದ ಆರೋಪಿ ರೋಷನ್‌ನನ್ನು ಪೊಲೀಸರು ಹಿಡಿದಿದ್ದಾರೆ. ಈ ಹಿಂದೆ ಹಲವು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿರುವ ರೋಷನ್ ವಿರುದ್ದ ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಘಟನೆಯಲ್ಲಿ ಪೊಲೀಸ್ ವಾಹನ ಜಖಂ ಆಗಿದೆ.

ಇದನ್ನೂ ಓದಿ:ತುಮಕೂರು ರಿಂಗ್ ರಸ್ತೆಯಲ್ಲಿ ವೀಲಿಂಗ್ ಪುಂಡರ ಹಾವಳಿ; ವಾಹನ ಸವಾರರಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ

ಬೆಳಗಾವಿಯ ಕಪಿಲೇಶ್ವರ ದೇಗುಲದ ಹೊಂಡದಲ್ಲಿ ಇಬ್ಬರ ಶವ ಪತ್ತೆ

ಬೆಳಗಾವಿ: ನಗರದ ಕಪಿಲೇಶ್ವರ ದೇವಸ್ಥಾನದ ಹಿಂದಿನ ಹೊಂಡದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಎರಡು ಅಪರಿಚಿತ ಶವಗಳು ಪತ್ತೆಯಾಗಿದೆ. ಇದೀಗ ಇಬ್ಬರ ಮೃತದೇಹವನ್ನು ಸ್ಥಳೀಯರು, ಪೊಲೀಸರು ಸೇರಿ ಹೊರ ತೆಗೆದಿದ್ದಾರೆ. 70 ವರ್ಷದ ಗಂಡು, 60 ವರ್ಷದ ಹೆಣ್ಣು ಮೃತದೇಹ ಇದಾಗಿದ್ದು, ಗುರುತು ಇನ್ನೂ ಪತ್ತೆಯಾಗಿಲ್ಲ. ಇಂದು ಬೆಳಗ್ಗೆ ಹೊಂಡದಲ್ಲಿ ಈಜಲು ಬಂದವರಿಗೆ ಶವಗಳು ಕಾಣಿಸಿದ್ದಾವೆ. ಇನ್ನು ಈ ಕುರಿತು ಪೊಲೀಸರು ‘ಆತ್ಮಹತ್ಯೆ ಮಾಡಿಕೊಂಡ್ರಾ ಅಥವಾ ಯಾರಾದರೂ ಹೊಂಡದಲ್ಲಿ ತಳ್ಳಿ ಕೊಲೆ ಮಾಡಿದ್ರಾ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಘಟನೆ ಬೆಳಗಾವಿಯ ಖಡೇಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮತ್ತಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us