Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆನರಾ ಬ್ಯಾಂಕ್ ಅಧಿಕಾರಿಗಳ ಎಡವಟ್ಟು, ಬೀದಿಗೆ ಬಿದ್ದ ವೃದ್ದ ದಂಪತಿ: ಬ್ಯಾಂಕ್ ಅಧಿಕಾರಿಗಳ ಈ ಕ್ರಮ ಸಾಧುವೇ?

Nanjangud Canara Bank: ಬ್ಯಾಂಕ್ ಅಧಿಕಾರಿಗಳು ನಿಯಮಾನುಸಾರ ಸಾಲ ವಸೂಲಿ ಮಾಡಬೇಕಿತ್ತು. ಅವಧಿ ಮುಗಿದರೂ ಅಂದರೆ 12 ವರ್ಷಗಳ ನಂತರವೂ ಸಾಲ ವಸೂಲಿಗೆ ಬ್ಯಾಂಕ್ ನವರು ಪ್ರಯತ್ನವೇ ಮಾಡಿಲ್ಲವಂತೆ. ಆದರೆ ಈಗ ಜ್ಞಾನೋದಯವಾದವರಂತೆ ಏಕಾ ಏಕಿ ಬ್ಯಾಂಕ್ ಸಿಬ್ಬಂದಿ ಮನೆಯನ್ನು ವಶಕ್ಕೆ ಪಡೆದಿದ್ದಾರೆ.

ಕೆನರಾ ಬ್ಯಾಂಕ್ ಅಧಿಕಾರಿಗಳ ಎಡವಟ್ಟು, ಬೀದಿಗೆ ಬಿದ್ದ ವೃದ್ದ ದಂಪತಿ: ಬ್ಯಾಂಕ್ ಅಧಿಕಾರಿಗಳ ಈ ಕ್ರಮ ಸಾಧುವೇ?
ಕೆನರಾ ಬ್ಯಾಂಕ್ ಅಧಿಕಾರಿಗಳ ಎಡವಟ್ಟು, ಬೀದಿಗೆ ಬಿದ್ದ ವೃದ್ದ ದಂಪತಿ: ಬ್ಯಾಂಕ್ ಅಧಿಕಾರಿಗಳ ಈ ಕ್ರಮ ಸಾಧುವೇ?
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jun 23, 2021 | 10:54 AM

ಮೈಸೂರು: ಬ್ಯಾಂಕ್​ ಅಧಿಕಾರಿಗಳ  ಎಡವಟ್ಟುಗಳು ಒಂದಲ್ಲಾ,  ಎರಡಲ್ಲಾ… ಇದು ಆಗಾಗ ಘಟಿಸುತ್ತಲೇ ಇರುತ್ತದೆ. ಮತ್ತು ಇದಕ್ಕೆ ಬಲಿಯಾಗುವವರು ಮಾತ್ರ ಅಮಾಯಕ ಜನರು.  ಕೋಟ್ಯಂತರ ರೂಪಾಯಿ ಯಾಮಾರಿಸಿ, ವಿದೇಶಗಳಲ್ಲಿ ವಿಶ್ರಾಂತ ಜೀವನ ನಡೆಸುವವರ ಮಧ್ಯೆ ನಮ್ಮ ಗೋಳು ಕೇಳುವವರು ಯಾರು? ಎಂದು ಬ್ಯಾಂಕ್​ ಗ್ರಾಹಕರು ಆಗಾಗ ತಮ್ಮ ಒಡಲಾಳದ ನೋವನ್ನು ಹೊರಹಾಕುತ್ತಲೇ ಇರುತ್ತಾರೆ… ತಾಜಾ ಪ್ರಕರಣದಲ್ಲಿ ಕೆನರಾ ಬ್ಯಾಂಕ್ ಅಧಿಕಾರಿಗಳು ಎಡವಟ್ಟು ಮಾಡಿರುವುದು ಮೇಲ್ನೋಟಕ್ಕೆ  ಎದ್ದುಕಾಣುತ್ತಿದೆ. ಮತ್ತು ಇದಕ್ಕೆ ಬಲಿಯಾಗಿ,  ಬೀದಿಗೆ ಬಂದಿರುವವರು ವೃದ್ದ ದಂಪತಿ! 

ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ನಡೆದಿರುವ ಪ್ರಕರಣದಲ್ಲಿ ಕೆನರಾ ಬ್ಯಾಂಕ್ ಅಧಿಕಾರಿಗಳ ಎಡವಟ್ಟಿನಿಂದಾಗಿ ವೃದ್ದ ದಂಪತಿ ಬೀದಿಗೆ ಬಿದ್ದಿದ್ದಾರೆ.  ಸಾಲ ವಾಪಸಾತಿ ನಿಯಮವನ್ನ ಉಲ್ಲಂಘಿಸಿ ಆರೋಪದ ಮೇರೆಗೆ ವೃದ್ದ ದಂಪತಿಗೆ ಕೆನರಾ ಬ್ಯಾಂಕ್​ ಸಿಬ್ಬಂದಿ ಟಾರ್ಚರ್ ನೀಡಿದ್ದಾರೆ ಎನ್ನಲಾಗಿದೆ. ವೃದ್ದ ದಂಪತಿಯ ಆಸ್ತಿಯನ್ನ ಬಲವಂತವಾಗಿ ಬ್ಯಾಂಕ್​ ತನ್ನ ಸ್ವಾಧೀನಕ್ಕೆ ಪಡೆದಿದೆ ಎಂದು ಆರೋಪಿಸಲಾಗಿದೆ.

ಕೆನರಾ ಬ್ಯಾಂಕ್ ಅಧಿಕಾರಿಗಳ ಎಡವಟ್ಟಿನಿಂದಾಗಿ ಸ್ವಂತ ಸೂರಿದ್ದರೂ ನಂಜನಗೂಡಿನ ಶ್ರೀಕಂಠಪುರ ಬಡಾವಣೆಯ ನಿವಾಸಿ ಲಿಂಗರಾಜು ದಂಪತಿಗೆ ಆಶ್ರಯವಿಲ್ಲ ಎಂಬಂತಾಗಿದೆ.  ಈ ಮಧ್ಯೆ, ಜಿಲ್ಲಾಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿದ ಬ್ಯಾಂಕ್​ ಸಿಬ್ಬಂದಿ, ತಮ್ಮ ಮನೆಯನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ ಎಂದು ದಂಪತಿ  ಆರೋಪಿಸಿದ್ದಾರೆ.

ಕೆನರಾ ಬ್ಯಾಂಕ್ ಅಧಿಕಾರಿಗಳ ವಿರುದ್ದ ಲಿಂಗರಾಜು  ದಂಪತಿ ಆರೋಪ

Nanjangud canara bank officials confiscate mortgage loan house after 12 years without producing notice 2

ಕೆನರಾ ಬ್ಯಾಂಕ್ ಅಧಿಕಾರಿಗಳ ವಿರುದ್ದ ಲಿಂಗರಾಜು  ದಂಪತಿ ಆರೋಪ

ಕಾಫಿ ಟೀ ಮಾರುವ ಕೆಲಸ ಮಾಡುತ್ತಿದ್ದ ಲಿಂಗರಾಜು 2003 ರಲ್ಲಿ ನಂಜನಗೂಡಿನ ಎಂ.ಜಿ. ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಿಂದ ಮನೆ ನಿರ್ಮಾಣಕ್ಕಾಗಿ 1 ಲಕ್ಷ 40 ಸಾವಿರ (1,40,000) ರೂಪಾಯಿ ಅಡಮಾನ ಸಾಲ ಪಡೆದಿದ್ದರು. ತಮ್ಮ ಸಾಲಕ್ಕಾಗಿ ಶ್ರೀಕಂಠಪುರದ ತಮ್ಮ ಮನೆಯನ್ನ ಮಾರ್ಟ್​​​ಗೇಜ್ ಮಾಡಿದ್ದರಂತೆ. 12 ವರ್ಷಗಳ ಸುದೀರ್ಘ ಕಾಲದ ಸಾಲ ಪಡೆದ ಲಿಂಗರಾಜು ಒಂದು ವರ್ಷದಲ್ಲಿ ಸುಮಾರು 40 ಸಾವಿರ ಹಿಂದಿರುಗಿಸಿದ್ದಾರೆ. ನಂತರ ವೈಯುಕ್ತಿಕ ಕಾರಣದಿಂದ ಸಾಲ ತೀರಿಸಲು ಆಶಕ್ತರಾಗಿದ್ದಾರೆ ಎಂದು ಹೇಳುತ್ತಿದ್ದಾರೆ.

ಈ ವೇಳೆ, ಬ್ಯಾಂಕ್ ಅಧಿಕಾರಿಗಳು ನಿಯಮಾನುಸಾರ ಸಾಲ ವಸೂಲಿ ಮಾಡಬೇಕಿತ್ತು. ಅವಧಿ ಮುಗಿದರೂ ಅಂದರೆ 12 ವರ್ಷಗಳ ನಂತರವೂ ಸಾಲ ವಸೂಲಿಗೆ ಬ್ಯಾಂಕ್ ನವರು ಪ್ರಯತ್ನವೇ ಮಾಡಿಲ್ಲವಂತೆ. ಒಂದು ನೋಟೀಸ್ ಸಹ ಜಾರಿ ಮಾಡಿಲ್ಲ. ಆದರೆ ಈಗ ಜ್ಞಾನೋದಯವಾದವರಂತೆ ಏಕಾ ಏಕಿ ಬ್ಯಾಂಕ್ ಸಿಬ್ಬಂದಿ ಮನೆಯನ್ನು ವಶಕ್ಕೆ ಪಡೆದಿದ್ದಾರೆ. ಇದರಿಂದ ಮನೆಯಿಲ್ಲದೆ ಲಿಂಗರಾಜು ದಂಪತಿ ಬೀದಿಯಲ್ಲಿ ನಿಂತಿದ್ದಾರೆ.

(Nanjangud canara bank officials confiscate mortgage loan house after 12 years without producing notice)

ಜೈಸ್ವಾಲ್ ಸಿಡಿಲಬ್ಬರದ ಬ್ಯಾಟಿಂಗ್​ಗೆ ಪಂಜಾಬ್ ಬೌಲರ್ಸ್​ ಸುಸ್ತು
ಜೈಸ್ವಾಲ್ ಸಿಡಿಲಬ್ಬರದ ಬ್ಯಾಟಿಂಗ್​ಗೆ ಪಂಜಾಬ್ ಬೌಲರ್ಸ್​ ಸುಸ್ತು
ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಪುಟ್ಟ ಬಾಲಕನ ದೈವ ನರ್ತನ: ಮೈ ಜುಮ್ಮೆನಿಸುವ ವಿಡಿಯೋ ನೋಡಿ
ಪುಟ್ಟ ಬಾಲಕನ ದೈವ ನರ್ತನ: ಮೈ ಜುಮ್ಮೆನಿಸುವ ವಿಡಿಯೋ ನೋಡಿ
CET ಪರೀಕ್ಷೆ ಬಗ್ಗೆ ಭಯ ಬೇಡ; ತಜ್ಞರು ನೀಡಿರುವ ಟಿಪ್ಸ್​​ ಇಲ್ಲಿದೆ
CET ಪರೀಕ್ಷೆ ಬಗ್ಗೆ ಭಯ ಬೇಡ; ತಜ್ಞರು ನೀಡಿರುವ ಟಿಪ್ಸ್​​ ಇಲ್ಲಿದೆ
ಒಂದು ಕಾಲದ ಜೋಡೆತ್ತುಗಳು, ಈಗ ಬದ್ಧ ವೈರಿಗಳು!
ಒಂದು ಕಾಲದ ಜೋಡೆತ್ತುಗಳು, ಈಗ ಬದ್ಧ ವೈರಿಗಳು!