AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Neelakurinji Flowers: ಕೊಡಗಿನಲ್ಲಿ 12 ವರ್ಷದ ಬಳಿಕ ಅರಳಿತು ನೀಲಕುರಿಂಜಿ ಹೂವು; ನೀಲಿಮಯವಾಯ್ತು ಮಂದಲಪಟ್ಟಿ

Neelakurinji Flowers: ಮಡಿಕೇರಿ ಬಳಿ ಇರುವ ಮಂದಲಪಟ್ಟಿಯಲ್ಲಿ 12 ವರ್ಷಗಳ ಬಳಿಕ ನೀಲಕುರಿಂಜಿ ಹೂವುಗಳು ಅರಳಿವೆ. ಇದರಿಂದ ಕೊಡಗಿನ ಮಂದಲಪಟ್ಟಿ ಬೆಟ್ಟ ಪೂರ್ತಿ ನೀಲಿಮಯವಾಗಿದೆ.

Neelakurinji Flowers: ಕೊಡಗಿನಲ್ಲಿ 12 ವರ್ಷದ ಬಳಿಕ ಅರಳಿತು ನೀಲಕುರಿಂಜಿ ಹೂವು; ನೀಲಿಮಯವಾಯ್ತು ಮಂದಲಪಟ್ಟಿ
ಮಂದಲಪಟ್ಟಿ ಬೆಟ್ಟದಲ್ಲಿ ನೀಲಕುರಿಂಜಿ ಹೂವುಗಳು
TV9 Web
| Edited By: |

Updated on: Aug 19, 2021 | 8:15 PM

Share

ಮಡಿಕೇರಿ: ಪ್ರಕೃತಿಯಲ್ಲಿ ಸಾಕಷ್ಟು ವಿಸ್ಮಯಗಳು ನಡೆಯುತ್ತಲೇ ಇರುತ್ತವೆ. ಅದರಲ್ಲೂ ಮಲೆನಾಡು, ಕರಾವಳಿ ಭಾಗದಲ್ಲಿರುವ ಪಶ್ಚಿಮ ಘಟ್ಟಗಳಲ್ಲಿ (Western Ghats) ಇರುವ ಕಾಡಿನಲ್ಲಿ ವಿಸ್ಮಯಕಾರಿ ಹೂವು, ಹಣ್ಣುಗಳು ಬಿಡುತ್ತವೆ. ಕರ್ನಾಟಕದ ಪ್ರೇಕ್ಷಣೀಯ ಸ್ಥಳಗಳಲ್ಲಿ ಪ್ರಮುಖವಾಗಿರುವ ಕೊಡಗಿನಲ್ಲಿ ಅತ್ಯುತ್ತಮ ಪ್ರದೇಶಗಳಿವೆ. ಅವುಗಳಲ್ಲಿ ಮಂದಲಪಟ್ಟಿ (Mandalpatti Hill)  ಕೂಡ ಒಂದು. ಮಡಿಕೇರಿ (Madikeri) ಬಳಿ ಇರುವ ಮಂದಲಪಟ್ಟಿಯಲ್ಲಿ 12 ವರ್ಷಗಳ ಬಳಿಕ ನೀಲಕುರಿಂಜಿ ಹೂವುಗಳು (Neelakurinji flowers) ಅರಳಿವೆ. ಇದರಿಂದ ಕೊಡಗಿನ ಮಂದಲಪಟ್ಟಿ ಬೆಟ್ಟ ಪೂರ್ತಿ ನೀಲಿಮಯವಾಗಿದೆ.

ಕೊರೊನಾ ನಡುವೆಯೂ ಕೊಡಗಿನಲ್ಲಿ ಪ್ರವಾಸಿಗರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಈ ಅಪರೂಪದ ನೀಲಿ ಬಣ್ಣದ ಹೂಗಳು ಇಡೀ ಬೆಟ್ಟವನ್ನು ಆವರಿಸಿದ್ದು, ಪ್ರವಾಸಿಗರನ್ನು ಸೆಳೆಯುತ್ತಿದೆ. ಒಂದು ವಾರದ ಹಿಂದೆ ಈ ನೀಲಿಕುರಿಂಜ ಹೂವುಗಳು ಅರಳಿದ್ದು, ಗುಂಪಾಗಿ ಗಿಡದ ತುಂಬ ಅರಳಿರುವ ಈ ಹೂಗಳನ್ನು ಇನ್ನೂ ಕೆಲವು ದಿನಗಳ ಕಾಲ ನೋಡಲು ಸಿಗಲಿವೆ. ಇದೇ ರೀತಿ ಚಿಕ್ಕಮಗಳೂರಿನಲ್ಲಿ ಕೂಡ ನೀಲಕುರಿಂಜಿ ಹೂಗಳು ಆಗುತ್ತವೆ.

ಕುರಿಂಜಿ ಹೂವುಗಳು ಎಂದು ಕರೆಯಲ್ಪಡುವ ಈ ನೀಲಿ ಹೂಗಳಿಗೆ ವೈಜ್ಞಾನಿಕವಾಗಿ ಸ್ಟ್ರೋಬಿಲಂಥೆಸ್ ಕುಂತಿಯಾನ ಎಂದು ಕರೆಯಲಾಗುತ್ತದೆ. 12 ವರ್ಷಗಳಿಗೊಮ್ಮೆ ಈ ಹೂವುಗಳು ಅರಳುತ್ತವೆ. ಈ ಅಪರೂಪದ ಹೂವುಗಳ ಫೋಟೋಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ಹೂವುಗಳ ಸೌಂದರ್ಯವನ್ನು ನೋಡಲೆಂದೇ ಪ್ರವಾಸಿಗರು ಮಡಿಕೇರಿಯತ್ತ ಬರುತ್ತಿದ್ದಾರೆ. ರಾಷ್ಟ್ರೀಯ ಮಾಧ್ಯಮಗಳಲ್ಲಿ ಕೂಡ ಈ ನೀಲಕುರಿಂಜಿ ಹೂವುಗಳ ಫೋಟೋಗಳು ಹರಿದಾಡುತ್ತಿವೆ.

neelakurinji flowers

ಮಂದಲಪಟ್ಟಿ ಬೆಟ್ಟದಲ್ಲಿ ನೀಲಕುರಿಂಜಿ ಹೂವುಗಳು

ಈ ನೀಲಕುರಿಂಜಿ ಹೂವುಗಳಲ್ಲಿ ಹಲವು ಪ್ರಭೇದಗಳಿವೆ. 5ರಿಂದ 16 ವರ್ಷಗಳಿಗೊಮ್ಮೆ ಬಿಡುವ ಹೂವುಗಳೂ ಇವೆ. ಈ ಗಿಡಗಳು 60 ಸೆ.ಮೀ. ಉದ್ದ ಬೆಳೆಯುತ್ತವೆ. ಈ ಹೂವುಗಳು ಸುಮಾರು 2 ತಿಂಗಳ ಕಾಲ ಗಿಡದಲ್ಲೇ ಇರಲಿವೆ. ಹೀಗಾಗಿ, ಇನ್ನೂ ಒಂದೂವರೆ ತಿಂಗಳು ಪ್ರವಾಸಿಗರು ಈ ಹೂಗಳ ಸೌಂದರ್ಯವನ್ನು ಸವಿಯಬಹುದು.

ಇದನ್ನೂ ಓದಿ: ಕೊಡಗಿನಲ್ಲಿ ಸಿಎಂ ಆದೇಶಕ್ಕೆ ಡೋಂಟ್ ಕೇರ್; ವೀಕೆಂಡ್ ಕರ್ಫ್ಯೂ ನಡುವೆ ಬೆಳಗಾವಿಯಲ್ಲಿ ನಾಟಿ ಕೋಳಿಗೆ ಮುಗಿಬಿದ್ದ ಜನ

ಮಾಸ್ಕ್ ಧರಿಸದವರಿಗೆ 250 ರೂ. ದಂಡ; ಹಬ್ಬಗಳ ಹಿನ್ನೆಲೆ ಬೆಂಗಳೂರಿಗರಿಗೆ ಹೊಸ ನಿಯಮ ಜಾರಿ

(Neelakurinji flowers blossom in Karnataka Kodagu Districts Mandalapatti Hill after 12 years near Madikeri)

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?