AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಣ್ಣು ಮಗು ಹುಟ್ಟಿತು ಎಂಬ ಒಂದೇ ಕಾರಣಕ್ಕೆ.. ನವಜಾತ ಶಿಶುವನ್ನು ತಿಪ್ಪೆಗುಂಡಿಗೆ ಬಿಸಾಡಿದ ಪಾಪಿಗಳು

ನವಜಾತ ಶಿಶುವನ್ನು ಪಾಪಿಗಳು ತಿಪ್ಪೆಗುಂಡಿಯಲ್ಲಿ ಎಸೆದಿರುವ ಹೀನ ಕೃತ್ಯ ಜಿಲ್ಲೆಯ ಮಾಲೂರು ತಾಲೂಕಿನ ಚಿಕ್ಕನಾಯಕನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಹೆಣ್ಣು ಶಿಶು ಹುಟ್ಟಿದೆ ಎಂಬ ಒಂದೇ ಕಾರಣಕ್ಕೆ ಪಾಪಿಗಳು ತಿಪ್ಪೆಗುಂಡಿಗೆ ಬಿಸಾಡಿ ಹೋಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಹೆಣ್ಣು ಮಗು ಹುಟ್ಟಿತು ಎಂಬ ಒಂದೇ ಕಾರಣಕ್ಕೆ.. ನವಜಾತ ಶಿಶುವನ್ನು ತಿಪ್ಪೆಗುಂಡಿಗೆ ಬಿಸಾಡಿದ ಪಾಪಿಗಳು
ನವಜಾತ ಶಿಶುವನ್ನು ರಕ್ಷಿಸಿದ ಗ್ರಾ,ಮಸ್ಥರು
Follow us
KUSHAL V
|

Updated on: Jan 01, 2021 | 10:53 PM

ಕೋಲಾರ: ನವಜಾತ ಶಿಶುವನ್ನು ಪಾಪಿಗಳು ತಿಪ್ಪೆಗುಂಡಿಯಲ್ಲಿ ಎಸೆದಿರುವ ಹೀನ ಕೃತ್ಯ ಜಿಲ್ಲೆಯ ಮಾಲೂರು ತಾಲೂಕಿನ ಚಿಕ್ಕನಾಯಕನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಹೆಣ್ಣು ಶಿಶು ಹುಟ್ಟಿದೆ ಎಂಬ ಒಂದೇ ಕಾರಣಕ್ಕೆ ಪಾಪಿಗಳು ತಿಪ್ಪೆಗುಂಡಿಗೆ ಬಿಸಾಡಿ ಹೋಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಇತ್ತ, ಮಗು ಅಳುತ್ತಿದ್ದ ಶಬ್ದ ಕೇಳಿದ ಗ್ರಾಮಸ್ಥರು ಶಿಶುವನ್ನು ರಕ್ಷಿಸಿದ್ದಾರೆ. ನಂತರ ಸ್ಥಳೀಯ ಆಶಾ ಕಾರ್ಯಕರ್ತೆ ಹಾಗೂ ಅಂಗನವಾಡಿ ಕಾರ್ಯಕರ್ತೆಗೆ ಮಾಹಿತಿ ನೀಡಿ ಹೆಣ್ಣು ಶಿಶುವಿಗೆ ಹೆಚ್ಚಿನ ಚಿಕಿತ್ಸೆ ಕೊಡಿಸಲು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಮುಳಬಾಗಿಲು ಬಳಿ ಕಾರು ಪಲ್ಟಿ: 8 ವರ್ಷದ ಬಾಲಕಿ ಸ್ಥಳದಲ್ಲೇ ಸಾವು