Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಗಾತಿ ಸೆಳೆಯಲು ಗರಿ ಬಿಚ್ಚಿ ಕುಣಿದ ನವಿಲು.. ಗಡಿ ಜಿಲ್ಲೆಯಲ್ಲಿ ಮನ ಮೋಹಕ ಲೀಲೆ

ವಿಪರೀತ ಬೇಸಿಗೆಯಿಂದ ಕಂಗೆಟ್ಟಿದ್ದ ಜನರಿಗೆ ಮಾತ್ರವಲ್ಲದೆ ಪ್ರಾಣಿಪಕ್ಷಿಗಳಿಗೂ ಈ ಬಾರಿಯ ಮಳೆ ಹಿತಾನುಭವ ನೀಡಿದೆ. ಇದಕ್ಕೆ ಸಾಕ್ಷಿ ಎಂದರೆ ಬೀದರ್ನಲ್ಲಿ ಕಂಡು ಬಂದ ಆ ಒಂದು ನವಿಲು ನರ್ತನ.

ಸಂಗಾತಿ ಸೆಳೆಯಲು ಗರಿ ಬಿಚ್ಚಿ ಕುಣಿದ ನವಿಲು.. ಗಡಿ ಜಿಲ್ಲೆಯಲ್ಲಿ ಮನ ಮೋಹಕ ಲೀಲೆ
ನವಿಲು ನರ್ತನ
Follow us
TV9 Web
| Updated By: ಆಯೇಷಾ ಬಾನು

Updated on: Jul 04, 2021 | 12:49 PM

ಬೀದರ್: ಗಡಿ ಜಿಲ್ಲೆ ಬೀದರ್ನಲ್ಲಿ ಅಷ್ಟೇನೂ ಮಳೆಯಾಗದಿದ್ದರು ಆಗಾಗ ತುಂತುರು ಮಳೆಯಾಗಿ ಎಲ್ಲಾ ಕಡೆ ಹಸಿರು ರಾಶಿ ಕಂಗೊಳಿಸುತ್ತಿದೆ. ಈ ನಡುವೆ ಬೀದರ್ ಪಟ್ಟಣದ ಬಯಲು ಪ್ರದೇಶದಲ್ಲಿ ನವಿಲು ನರ್ತನದ ಅಪರೂಪದ ದೃಶ್ಯವೊಂದು ಮನಸೂರೆಗೊಳಿಸಿದೆ.

ವಿಪರೀತ ಬೇಸಿಗೆಯಿಂದ ಕಂಗೆಟ್ಟಿದ್ದ ಜನರಿಗೆ ಮಾತ್ರವಲ್ಲದೆ ಪ್ರಾಣಿಪಕ್ಷಿಗಳಿಗೂ ಈ ಬಾರಿಯ ಮಳೆ ಹಿತಾನುಭವ ನೀಡಿದೆ. ಇದಕ್ಕೆ ಸಾಕ್ಷಿ ಎಂದರೆ ಬೀದರ್ನಲ್ಲಿ ಕಂಡು ಬಂದ ಆ ಒಂದು ನವಿಲು ನರ್ತನ. ಈ ನರ್ತನವನ್ನು ನೋಡಿ ಜನ ರೋಮಾಂಚನಗೊಂಡಿದ್ದಾರೆ. ಸುತ್ತಲೂ ಹೆಣ್ಣು ನವಿಲುಗಳು, ನಡುವಲ್ಲಿ ಗಂಡು ನವಿಲು ಗರಿಬಿಚ್ಚಿ ಕುಣಿಯುವ ಈ ಸುಂದರ ದೃಶ್ಯಗಳನ್ನು ನೋಡಿ ಪ್ರಕೃತಿಯ ವಿಸ್ಮಯಕ್ಕೆ ಜನ ಖುಷಿಯಾಗಿದ್ದಾರೆ. ಸುಮಾರು 10 ನಿಮಿಷಕ್ಕೂ ಹೆಚ್ಚು ಕಾಲ ಗರಿ ಬಿಚ್ಚಿ ಗಂಡು ನವಿಲು ನೃತ್ಯ ಮಾಡಿದ್ದ ದೃಶ್ಯ ಜನ ಮೈಮರೆತಿದ್ದರು.

peacock dance

ನವಿಲು ನರ್ತನ

ಗಂಡು ನವಿಲು ಕುಣಿಯುವುದೇಕೆ? ಹೆಣ್ಣು ನವಿಲಿನೊಂದಿಗೆ ಸೇರಲು ಗಂಡು ನವಿಲು ಕಾತರಿಸುವ ವೇಳೆ ಆಕಾಶದಲ್ಲಿ ಕಾಣುವ ಕರಿ ಮೋಡ ಅಥವಾ ಮಳೆಯ ಸೂಚನೆ ಸಿಕ್ಕಿದೊಡನೆ ಸಂಭ್ರಮಿಸುತ್ತದೆ. ತಮ್ಮ ಗರಿಗಳನ್ನು ಒಂದಕ್ಕೊಂದು ಬಡಿದು ಕೂಗುತ್ತ ತನ್ನ ಸಂಗಾತಿಯನ್ನು ತನ್ನತ್ತ ಸೆಳೆಯುತ್ತದೆ. ರಾಷ್ಟ್ರ ಪಕ್ಷಿಯಾಗಿರುವ ನವಿಲಿನ ಕುಣಿತ ಅದರ ಅಂದ ಕೇಳುವುದಕ್ಕಿಂತ ನೋಡುವುದೇ ಚಂದ.

peacock dance

ನವಿಲು ನರ್ತನ

peacock dance

ನವಿಲು ನರ್ತನ

peacock dance

ನವಿಲು ನರ್ತನ

ಇದನ್ನೂ ಓದಿ: ನವಿಲುಗಳ ಬಿಂದಾಸ್ ಹಾರಾಟ.. ಬೆಳಗಾವಿ ವ್ಯಾಕ್ಸಿನ್ ಡಿಪೋದಲ್ಲಿ ಇಮ್ಮಡಿಸಿದ ಚೆಲುವು

ರವಿಚಂದ್ರನ್ ಲುಕ್​ನಲ್ಲಿ ಮಂಜು ಪಾವಗಡ; ನಾಗವಲ್ಲಿ ಆದ ಚೈತ್ರಾ ಕುಂದಾಪುರ
ರವಿಚಂದ್ರನ್ ಲುಕ್​ನಲ್ಲಿ ಮಂಜು ಪಾವಗಡ; ನಾಗವಲ್ಲಿ ಆದ ಚೈತ್ರಾ ಕುಂದಾಪುರ
IPL 2025: RCB ಅಭ್ಯಾಸ ಪಂದ್ಯದಲ್ಲಿ ಅಬ್ಬರಿಸಿದ ದೇವದತ್ತ್ ಪಡಿಕ್ಕಲ್
IPL 2025: RCB ಅಭ್ಯಾಸ ಪಂದ್ಯದಲ್ಲಿ ಅಬ್ಬರಿಸಿದ ದೇವದತ್ತ್ ಪಡಿಕ್ಕಲ್
ಪ್ರಿಯಕರನ ಜತೆ ಸೇರಿ ಪತಿಯ ಕೊಲೆ ಪ್ರಕರಣ, ಆರೋಪಿಗಳ ಮೇಲೆ ವಕೀಲರಿಂದ ಹಲ್ಲೆ
ಪ್ರಿಯಕರನ ಜತೆ ಸೇರಿ ಪತಿಯ ಕೊಲೆ ಪ್ರಕರಣ, ಆರೋಪಿಗಳ ಮೇಲೆ ವಕೀಲರಿಂದ ಹಲ್ಲೆ
ಮಂತ್ರಗಳನ್ನು ಪಠಿಸುವುದರಿಂದ ರೋಗಗಳು ಗುಣವಾಗುತ್ತವೆಯೇ? ಇಲ್ಲಿದೆ ವಿವರ
ಮಂತ್ರಗಳನ್ನು ಪಠಿಸುವುದರಿಂದ ರೋಗಗಳು ಗುಣವಾಗುತ್ತವೆಯೇ? ಇಲ್ಲಿದೆ ವಿವರ
ರವಿ ಮೀನ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
ರವಿ ಮೀನ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
ಯಾರ ದಯೆಯಿಂದಲೂ ನಾನಿಲ್ಲಿ ಬಂದಿಲ್ಲ; ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ
ಯಾರ ದಯೆಯಿಂದಲೂ ನಾನಿಲ್ಲಿ ಬಂದಿಲ್ಲ; ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ
ಶಾಸಕರ ಪರವಾಗಿ ಕ್ಷಮೆ ಕೇಳಿದ ಅಜಯ್ ರಾವ್, ಕಾರಣ?
ಶಾಸಕರ ಪರವಾಗಿ ಕ್ಷಮೆ ಕೇಳಿದ ಅಜಯ್ ರಾವ್, ಕಾರಣ?
ಬಿಜ್ನೋರ್ ವ್ಯಸನ ಮುಕ್ತಿ ಕೇಂದ್ರದಲ್ಲಿ ಯುವಕನ ಕತ್ತು ಹಿಸುಕಿ ಕೊಲೆ
ಬಿಜ್ನೋರ್ ವ್ಯಸನ ಮುಕ್ತಿ ಕೇಂದ್ರದಲ್ಲಿ ಯುವಕನ ಕತ್ತು ಹಿಸುಕಿ ಕೊಲೆ
ಅಪ್ಪುನ್ ಜಾತ್ರಿಯಲ್ಲಿ ಕಬ್ಬಿನ ಜ್ಯೂಸ್, ಐಸ್ ಕ್ಯಾಂಡಿಗೆ ಭರ್ಜರಿ ಬೇಡಿಕೆ
ಅಪ್ಪುನ್ ಜಾತ್ರಿಯಲ್ಲಿ ಕಬ್ಬಿನ ಜ್ಯೂಸ್, ಐಸ್ ಕ್ಯಾಂಡಿಗೆ ಭರ್ಜರಿ ಬೇಡಿಕೆ
ಶಾಸಕರನ್ನೂ ಬಿಡದ ಕಳ್ಳರು: ಬಿಜೆಪಿ ಎಂಎಲ್​ಎ ಕಚೇರಿಗೆ ನುಗ್ಗಿ ಕಳ್ಳತನ
ಶಾಸಕರನ್ನೂ ಬಿಡದ ಕಳ್ಳರು: ಬಿಜೆಪಿ ಎಂಎಲ್​ಎ ಕಚೇರಿಗೆ ನುಗ್ಗಿ ಕಳ್ಳತನ