AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವಿಲುಗಳ ಬಿಂದಾಸ್ ಹಾರಾಟ.. ಬೆಳಗಾವಿ ವ್ಯಾಕ್ಸಿನ್ ಡಿಪೋದಲ್ಲಿ ಇಮ್ಮಡಿಸಿದ ಚೆಲುವು

ಬೆಳಗಾವಿ: ಕುಂದಾನಗರಿ ಬೆಳಗಾವಿ ಪಶ್ಚಿಮ ಘಟ್ಟಗಳಿಗೆ ಹೊಂದಿಕೊಂಡಿರುವುದರಿಂದ ಅದರ ನೋಟವೇ ವಿಭಿನ್ನವಾಗಿದೆ. ಅದ್ರಲ್ಲೂ ಮಳೆಗಾಲದಲ್ಲಿಯಂತೂ ಬೆಳಗಾವಿಯ ಕೆಲವೊಂದಿಷ್ಟು ಪ್ರದೇಶಗಳು ಎಲ್ಲರ ಕಣ್ಮನ ಸೆಳೆಯುತ್ತವೆ. ಎಲ್ಲೇ ಇದ್ದರು ಮಳೆಗಾಲದಲ್ಲಿ ಒಂದು ಬಾರಿ ಬೆಳಗಾವಿಗೆ ಭೇಟಿ ನೀಡಬೇಕೆನ್ನುವಷ್ಟು ಸೆಳೆಯುತ್ತದೆ ಇಲ್ಲಿನ ಹಚ್ಚ ಹಸಿರಿನ ಪರಿಸರ. ಸುಂದರವಾದ ಪರಿಸರದ ನಡುವೆ ಹಕ್ಕಿಗಳ  ಚಲನವಲನ, ಒನಪು ವಯ್ಯಾರ ನೋಡುಗರ ಮನಸ್ಸನ್ನ ಇನ್ನಷ್ಟು ಮುದಗೊಳಿಸುತ್ತದೆ. ಬೆಳಗಾವಿ ನಗರದಲ್ಲೇ ಇಂತಹ ಪ್ರದೇಶಗಳಿರೋದು ಇನ್ನೂ ವಿಶೇಷ. ನಗರ ಪ್ರದೇಶದಲ್ಲಿ ಗಿಡ ಮರಗಳು ಇರೋದೆ ಕಷ್ಟ ಆದ್ರೆ ಕುಂದಾನಗರಿಯಲ್ಲಿ […]

ನವಿಲುಗಳ ಬಿಂದಾಸ್ ಹಾರಾಟ.. ಬೆಳಗಾವಿ ವ್ಯಾಕ್ಸಿನ್ ಡಿಪೋದಲ್ಲಿ ಇಮ್ಮಡಿಸಿದ ಚೆಲುವು
ಆಯೇಷಾ ಬಾನು
ಆಯೇಷಾ ಬಾನು| Edited By: |

Updated on:Jul 27, 2020 | 10:09 PM

Share

ಬೆಳಗಾವಿ: ಕುಂದಾನಗರಿ ಬೆಳಗಾವಿ ಪಶ್ಚಿಮ ಘಟ್ಟಗಳಿಗೆ ಹೊಂದಿಕೊಂಡಿರುವುದರಿಂದ ಅದರ ನೋಟವೇ ವಿಭಿನ್ನವಾಗಿದೆ. ಅದ್ರಲ್ಲೂ ಮಳೆಗಾಲದಲ್ಲಿಯಂತೂ ಬೆಳಗಾವಿಯ ಕೆಲವೊಂದಿಷ್ಟು ಪ್ರದೇಶಗಳು ಎಲ್ಲರ ಕಣ್ಮನ ಸೆಳೆಯುತ್ತವೆ.

ಎಲ್ಲೇ ಇದ್ದರು ಮಳೆಗಾಲದಲ್ಲಿ ಒಂದು ಬಾರಿ ಬೆಳಗಾವಿಗೆ ಭೇಟಿ ನೀಡಬೇಕೆನ್ನುವಷ್ಟು ಸೆಳೆಯುತ್ತದೆ ಇಲ್ಲಿನ ಹಚ್ಚ ಹಸಿರಿನ ಪರಿಸರ. ಸುಂದರವಾದ ಪರಿಸರದ ನಡುವೆ ಹಕ್ಕಿಗಳ  ಚಲನವಲನ, ಒನಪು ವಯ್ಯಾರ ನೋಡುಗರ ಮನಸ್ಸನ್ನ ಇನ್ನಷ್ಟು ಮುದಗೊಳಿಸುತ್ತದೆ. ಬೆಳಗಾವಿ ನಗರದಲ್ಲೇ ಇಂತಹ ಪ್ರದೇಶಗಳಿರೋದು ಇನ್ನೂ ವಿಶೇಷ.

ನಗರ ಪ್ರದೇಶದಲ್ಲಿ ಗಿಡ ಮರಗಳು ಇರೋದೆ ಕಷ್ಟ ಆದ್ರೆ ಕುಂದಾನಗರಿಯಲ್ಲಿ ಎಲ್ಲಿ ನೋಡಿದ್ರೂ ಮರಗಿಡಗಳು, ಉದ್ಯಾನವನಗಳು ಕಾಣಿಸುತ್ತವೆ. ಅದ್ರಲ್ಲೂ ಬೆಳಗಾವಿಯ ಟೀಳಕವಾಡಿಯಲ್ಲಿರುವ ವ್ಯಾಕ್ಸಿನ್ ಡಿಪೋ ಅರಣ್ಯದಂತೆ ಕಂಡು ಬಂದ್ರೂ ಆದು ನಗರದ ಮಧ್ಯಭಾಗದಲ್ಲಿದೆ ಎಂಬುದು ವಿಶೇಷ. ಗಿಡ ಮರಗಳ ಜತೆಗೆ ಇಲ್ಲಿ ಹಕ್ಕಿಗಳ ಸಂಕುಲವೇ ಇದೆ. ಇಪ್ಪತ್ತಕ್ಕೂ ಅಧಿಕ ವಿಭಿನ್ನ ಹಕ್ಕಿಗಳನ್ನು ಕಾಣಬಹುದು ಅದರಲ್ಲಿ ನವಿಲುಗಳೇ ಹೆಚ್ಚಾಗಿ ಕಾಣಸಿಗುತ್ತವೆ.

ನಗರದ ಮಧ್ಯೆ ನವಿಲುಗಳು ಬಿಂದಾಸ್ ಹಾರಾಟ ಟೀಳಕವಾಡಿಯ ವ್ಯಾಕ್ಸಿನ್ ಡಿಪೋದಲ್ಲಿರುವ ಅರಣ್ಯದಲ್ಲಿ ಸದ್ಯ ನವಿಲುಗಳ ನರ್ತನ ಹಾಗೂ ಹಾರಾಟ ಜೋರಾಗಿ ಕಂಡು ಬರುತ್ತಿದೆ. ಗಿಡಮರಗಳು ಚಿಗುರೊಡೆದು ಹಚ್ಚ ಹಸಿರಿನಿಂದ ವ್ಯಾಕ್ಸಿನ್ ಡಿಪೋ ಕಂಗೊಳಿಸುತ್ತಿದ್ದು ಅದರ ಸೌಂದರ್ಯವನ್ನ ಈ ನವಿಲುಗಳ ಹಾರಾಟದಿಂದ ಇನ್ನಷ್ಟು ಇಮ್ಮಡಿಗೊಂಡಿದೆ.

ಇನ್ನೂ ಈ ಸುಂದರ ಸೊಬಗನ್ನ ನೋಡಲು ನಿತ್ಯವೂ ಜನರು ಕೂಡ ಆಗಮಿಸುತ್ತಿದ್ದರೆ ಇದೇ ಜಾಗದಲ್ಲಿ ವಾಯುವಿಹಾರಕ್ಕೆ ಸ್ಥಳೀಯರು ಬರುತ್ತಿದ್ದು ನವಿಲುಗಳನ್ನ ನೋಡಿ ಖುಷಿಯಿಂದ ವಾಕಿಂಗ್ ಮಾಡುತ್ತಿದ್ದಾರೆ.

ಪೋಟೋಗ್ರಾಫರ್ ಕ್ಯಾಮೆರಾದಲ್ಲಿ ಸೆರೆಯಾದ್ವು ನವಿಲುಗಳು ಬೆಳಗಾವಿಯ ಪ್ರಸಿದ್ದ ಪೋಟೋಗ್ರಾಫರ್ ಪಿ.ಕೆ ಬಡಿಗೇರ್ ನವಿಲುಗಳ ಪೋಟೋಗಳನ್ನ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಇಪ್ಪತ್ತು ವರ್ಷದಿಂದ ಫೋಟೋಗ್ರಫಿ ವೃತ್ತಿ ಮಾಡುತ್ತಿರುವ ಇವರು ಬಿಡುವಿನ ಸಂದರ್ಭದಲ್ಲಿ ನಿಸರ್ಗದ ಹಾಗೂ ಪ್ರಾಣಿ ಪಕ್ಷಿಗಳ ಫೋಟೋಗಳನ್ನ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಾರೆ.

ವ್ಯಾಕ್ಸಿನ್ ಡಿಪೋದಲ್ಲಿ ಹೆಚ್ಚಾಗಿರುವ ನವಿಲುಗಳನ್ನ ಸದ್ಯ ತಮ್ಮ ಕ್ಯಾಮೆರದಾಲ್ಲಿ ಪಿಕೆ ಬಡಿಗೇರ್ ಸೆರೆ ಹಿಡಿದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಇದಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮನುಷ್ಯರನ್ನ ಕಂಡರೇ ಮಾರುದ್ದ ಓಡುವ ನವಿಲುಗಳನ್ನ ಕ್ಯಾಮೆರಾದಲ್ಲಿ ಹಿಡಿದಿದ್ದು ಒಂದೊಂದು ನವಿಲಿನ ಫೋಟೋಗಳು ವಿಭಿನ್ನವಾಗಿವೆ, ಫೋಟೋಗಳನ್ನ ನೋಡುತ್ತಿದ್ದರೆ ಖುಷಿ ಕೊಡುವಷ್ಟು ಚೆನ್ನಾಗಿವೆ ಅಂತಿದ್ದಾರೆ ಸಾರ್ವಜನಿಕರು ಸಹದೇವ ಮಾನೆ

Published On - 12:53 pm, Mon, 27 July 20

Follow Us
Ayesha Banu
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ