AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದ್ಯದ ಅಂಗಡಿ ತೆರೆಯಲು ಭರ್ಜರಿ ತಯಾರಿ, ಅಂಗಡಿ ಮುಂದೆ ಮದ್ಯ ಪ್ರಿಯರ ಕ್ಯೂ

ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಹೀಗಾಗಿ ರಾಜ್ಯದ ಅನೇಕ ಕಡೆ ಭರ್ಜರಿ ತಯಾರಿ ನಡೆದಿದೆ. ವೈನ್ ಶಾಪ್​ಗಳ ಎದರು ಕಟ್ಟಿಗೆ ಬ್ಯಾರಿಕೇಡ್ ಹಾಕಿ ವ್ಯವಸ್ಥೆ ಮಾಡಲಾಗಿದೆ. ಪೂಜೆ ಮಾಡಿ ಅಂಗಡಿ ತೆರೆಯೋಕೆ ರೆಡಿಯಾಗಿದ್ದಾರೆ. ಎಣ್ಣೆಪ್ರಿಯರು‌ ಮದ್ಯದಂಗಡಿ ಮುಂದೆ ಕ್ಯೂ‌ ನಿಂತಿದ್ದಾರೆ. ಹಳೇ ದರದಲ್ಲೇ ಮದ್ಯ ಮಾರಾಟ ಮಾಡಲು ಮದ್ಯ ಮಾರಾಟಗಾರರಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಏಪ್ರಿಲ್ 1ರಿಂದ ಮದ್ಯದ ಮೇಲಿನ ತೆರಿಗೆ ಶೇ.6ರಷ್ಟು ಹೆಚ್ಚಳ ಮಾಡಿ ಸರ್ಕಾರ ಆದೇಶಿಸಿತ್ತು. ಆದರೆ ಏಪ್ರಿಲ್ […]

ಮದ್ಯದ ಅಂಗಡಿ ತೆರೆಯಲು ಭರ್ಜರಿ ತಯಾರಿ, ಅಂಗಡಿ ಮುಂದೆ ಮದ್ಯ ಪ್ರಿಯರ ಕ್ಯೂ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: May 04, 2020 | 7:46 AM

Share

ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಹೀಗಾಗಿ ರಾಜ್ಯದ ಅನೇಕ ಕಡೆ ಭರ್ಜರಿ ತಯಾರಿ ನಡೆದಿದೆ. ವೈನ್ ಶಾಪ್​ಗಳ ಎದರು ಕಟ್ಟಿಗೆ ಬ್ಯಾರಿಕೇಡ್ ಹಾಕಿ ವ್ಯವಸ್ಥೆ ಮಾಡಲಾಗಿದೆ. ಪೂಜೆ ಮಾಡಿ ಅಂಗಡಿ ತೆರೆಯೋಕೆ ರೆಡಿಯಾಗಿದ್ದಾರೆ. ಎಣ್ಣೆಪ್ರಿಯರು‌ ಮದ್ಯದಂಗಡಿ ಮುಂದೆ ಕ್ಯೂ‌ ನಿಂತಿದ್ದಾರೆ.

ಹಳೇ ದರದಲ್ಲೇ ಮದ್ಯ ಮಾರಾಟ ಮಾಡಲು ಮದ್ಯ ಮಾರಾಟಗಾರರಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಏಪ್ರಿಲ್ 1ರಿಂದ ಮದ್ಯದ ಮೇಲಿನ ತೆರಿಗೆ ಶೇ.6ರಷ್ಟು ಹೆಚ್ಚಳ ಮಾಡಿ ಸರ್ಕಾರ ಆದೇಶಿಸಿತ್ತು. ಆದರೆ ಏಪ್ರಿಲ್ 1ಕ್ಕೂ ಮೊದಲೇ ಮದ್ಯ ಖರೀದಿ ಹಿನ್ನೆಲೆಯಲ್ಲಿ ಹಳೇ ದರದಲ್ಲೇ ಮದ್ಯ ಮಾರಾಟ ಮಾಡಲು ಸೂಚನೆ ನೀಡಲಾಗಿದೆ.

ಮಾಸ್ಕ್ ಹಾಕಿದವರಿಗೆ ಮಾತ್ರ ಎಣ್ಣೆ: ಗದಗ ಜಿಲ್ಲೆಯ ವೈನ್ ಶಾಪ್​ಗಳ ಎದರು ಕಟ್ಟಿಗೆ ಬ್ಯಾರಿಕೇಡ್ ಹಾಕಿ ವ್ಯವಸ್ಥೆ ಮಾಡಲಾಗಿದೆ. ಸಿಎಲ್-2 55 & MSIL 15 ಮದ್ಯ ದಂಗಡಿ ಇಂದು ತೆರೆಯಲಿವೆ. ನೂಕು ನುಗ್ಗಲು, ಗದ್ದಲ, ಗಲಾಟೆ ಆಗದಂತೆ ಅಂಗಡಿ ಮಾಲೀಕರು ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಸಾಮಾಜಿಕ ಅಂತರ, ಮಾಸ್ಕ್ ಹಾಕಿದವರಿಗೆ ಮಾತ್ರ ಎಣ್ಣೆ ಖರೀದಿಗೆ ಅವಕಾಶ ನೀಡಲಾಗುತ್ತೆ. CL-2 & MSILಮಾಲೀಕರಿಂದ ಎಲ್ಲಾ ಭದ್ರತೆ ವ್ಯವಸ್ಥೆ ಕಾರ್ಯ ನಡೆದಿದೆ. ಮಾಲೀಕರು ಕೂಡ ಮಾಸ್ಕ್, ಹ್ಯಾಂಡ್ ಗ್ಲೌಸ್, ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಲು ತಯಾರಿ ನಡೆದಿದೆ.

ಮದ್ಯದ ಅಂಗಡಿ ಮುಂದೆ ಮದ್ಯ ಪ್ರಿಯರ ಕ್ಯೂ: ಇಂದಿನಿಂದ ಮದ್ಯದ ಅಂಗಡಿಗಳು ಓಪನ್ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಸ್ಟೇಷನ್ ರಸ್ತೆ ಮದ್ಯದಂಗಡಿ ಎದುರು ಮದ್ಯ ಖರೀದಿಗೆ ಸರತಿಸಾಲಿನಲ್ಲಿ ಮದ್ಯ ಪ್ರಿಯರು ಕ್ಯೂ ನಿಂತಿದ್ದಾರೆ.

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು