AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಯಮ ಪಾಲಿಸಿಲ್ಲ ಅಂತಾ ಲಿಕ್ಕರ್ ಶಾಪ್ ಬಂದ್

ಬೆಂಗಳೂರು: ಇಂದು ರಾಜ್ಯದ ಎಲ್ಲಾ ಮದ್ಯಪ್ರಿಯರಿಗೆ ಸುದಿನ. ಎಣ್ಣೆ ಇಲ್ಲದೆ ಊಟನೇ ಮಾಡೋಲ್ಲ ಎಂಬುವವರಿಗೆ ಇವತ್ತು ಹೊಟ್ಟೆ ತುಂಬುವಷ್ಟು ಕುಡಿದು ಕುಪ್ಪಳಿಸುವ ದಿನ. ರಾಜ್ಯ ಸರ್ಕಾರ ಆದೇಶದ ಮೇರೆಗೆ ಇಂದು ಕೆಲ ಮದ್ಯದಂಗಡಿಗಳನ್ನು ತೆರೆಯಲಾಗಿದೆ. ಎಲ್ಲಾ ಮದ್ಯಪ್ರಿಯರು ಬೆಳಗ್ಗಿನ ಜಾವದಿಂದಲೇ ಸರತಿ ಸಾಲಿನಲ್ಲಿ ನಿಂತು ಮದ್ಯ ಖರೀದಿಗೆ ಮುಂದಾಗಿದ್ದಾರೆ. ಆದರೆ ಮರಿಯಪ್ಪನಪಾಳ್ಯದ ನಿವಾಸಿಗಳಿಗೆ ಇದರ ಭಾಗ್ಯವಿಲ್ಲದಂತಾಗಿದೆ. ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕವಾದರೂ ನಮ್ಮ ಜನ ಎಣ್ಣೆ ಕುಡಿಯುವುದನ್ನು ಬಿಡಲ್ಲ. ಹೀಗಾಗಿ ಬೆಳಗ್ಗಿನ ಜಾವವೇ ಮದ್ಯದಂಗಡಿ ಮುಂದೆ ಜಮಾಯಿಸಿದ್ದಾರೆ. ಆದರೆ […]

ನಿಯಮ ಪಾಲಿಸಿಲ್ಲ ಅಂತಾ ಲಿಕ್ಕರ್ ಶಾಪ್ ಬಂದ್
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: May 04, 2020 | 11:29 AM

Share

ಬೆಂಗಳೂರು: ಇಂದು ರಾಜ್ಯದ ಎಲ್ಲಾ ಮದ್ಯಪ್ರಿಯರಿಗೆ ಸುದಿನ. ಎಣ್ಣೆ ಇಲ್ಲದೆ ಊಟನೇ ಮಾಡೋಲ್ಲ ಎಂಬುವವರಿಗೆ ಇವತ್ತು ಹೊಟ್ಟೆ ತುಂಬುವಷ್ಟು ಕುಡಿದು ಕುಪ್ಪಳಿಸುವ ದಿನ. ರಾಜ್ಯ ಸರ್ಕಾರ ಆದೇಶದ ಮೇರೆಗೆ ಇಂದು ಕೆಲ ಮದ್ಯದಂಗಡಿಗಳನ್ನು ತೆರೆಯಲಾಗಿದೆ. ಎಲ್ಲಾ ಮದ್ಯಪ್ರಿಯರು ಬೆಳಗ್ಗಿನ ಜಾವದಿಂದಲೇ ಸರತಿ ಸಾಲಿನಲ್ಲಿ ನಿಂತು ಮದ್ಯ ಖರೀದಿಗೆ ಮುಂದಾಗಿದ್ದಾರೆ. ಆದರೆ ಮರಿಯಪ್ಪನಪಾಳ್ಯದ ನಿವಾಸಿಗಳಿಗೆ ಇದರ ಭಾಗ್ಯವಿಲ್ಲದಂತಾಗಿದೆ.

ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕವಾದರೂ ನಮ್ಮ ಜನ ಎಣ್ಣೆ ಕುಡಿಯುವುದನ್ನು ಬಿಡಲ್ಲ. ಹೀಗಾಗಿ ಬೆಳಗ್ಗಿನ ಜಾವವೇ ಮದ್ಯದಂಗಡಿ ಮುಂದೆ ಜಮಾಯಿಸಿದ್ದಾರೆ. ಆದರೆ ಅಬಕಾರಿ ನಿಯಮ ಪಾಲಿಸದ್ದಕ್ಕೆ ಲಿಕ್ಕರ್ ಶಾಪ್ ಬಂದ್ ಮಾಡಲಾಗಿದೆ. ಬೆಂಗಳೂರಿನ ಮರಿಯಪ್ಪನಪಾಳ್ಯದಲ್ಲಿ ಬಾರ್​ ಕ್ಲೋಸ್ ಮಾಡಿಸಲಾಗಿದೆ.

ಮದ್ಯದಂಗಡಿ ಮಾಲೀಕ ಬ್ಯಾರಿಕೇಡ್ ಹಾಕದೆ, ಭದ್ರತಾ ವ್ಯವಸ್ಥೆಯನ್ನು ಕೈಗೊಂಡಿಲ್ಲ ಹೀಗಾಗಿ ಪೊಲೀಸರು ತಕ್ಷಣ ಲಿಕ್ಕರ್ ಶಾಪ್ ಬಂದ್​ ಮಾಡಿಸಿದ್ದಾರೆ. ಶಾಪ್ ಬಂದ್ ಆದರೂ ಮದ್ಯ ಖರೀದಿಸಲು ಜನರು ಸಾಲುಗಟ್ಟಿ ನಿಂತಿದ್ದಾರೆ.

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು