AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

20 ವಿದೇಶಿ ತಳಿಯ ಶ್ವಾನಗಳ ಪಾಲನೆ: ಬೀದರ್ ರಾಜಕಾರಣಿಯ ಶ್ವಾನ ಪ್ರೀತಿ ಇತರರಿಗೆ ಮಾದರಿ

ಸಂಜಯ್ ಖೇಣಿ ನಾಯಿಗಳಿಗೆ ಆಹಾರ ನೀರು ಮತ್ತು ಅವುಗಳ ಆರೈಕೆ ಮಾಡಲು ದಿನದಲ್ಲಿ ಕೆಲವು ಗಂಟೆ ಮೀಸಲಿಟ್ಟಿದ್ದಾರತೆ. ಜೊತೆಗೆ ಬೇರೇ ಬೇರೆ ಜಿಲ್ಲೆಗಳಲ್ಲಿ ನಡೆಯುವ ಶ್ವಾನ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಯನ್ನ ಬಾಚಿಕೊಂಡಿದ್ದಾರೆ.

20 ವಿದೇಶಿ ತಳಿಯ ಶ್ವಾನಗಳ ಪಾಲನೆ: ಬೀದರ್ ರಾಜಕಾರಣಿಯ ಶ್ವಾನ ಪ್ರೀತಿ ಇತರರಿಗೆ ಮಾದರಿ
ಸಂಜಯ್ ಖೇಣಿ
preethi shettigar
| Updated By: ರಶ್ಮಿ ಕಲ್ಲಕಟ್ಟ|

Updated on: Mar 07, 2021 | 11:32 AM

Share

ಬೀದರ್: ಮಾನವನಿಗೆ ಅತ್ಯಂತ ಪ್ರೀತಿ ಪಾತ್ರವಾಗಿರುವ ಪ್ರಾಣಿ ಎಂದರೆ ಅದು ಶ್ವಾನಗಳು. ನಾಯಿಗಳು ಅತ್ಯಂತ ಪ್ರಾಮಾಣಿಕ ಪ್ರಾಣಿಗಳು ಎಂತಲೇ ಕರೆಸಿಕೊಳ್ಳುತ್ತವೆ. ಇದೀಗ ರಾಜಕಾರಣಿಯೊಬ್ಬರು ವಿದೇಶಿಯ ವಿವಿಧ ಜಾತಿಯ ನಾಯಿಗಳನ್ನು ತಮ್ಮ ಮನೆ ಮಕ್ಕಳಂತೆ ಸಾಕಿ ಸಲಹುತ್ತಿದ್ದು ಈ ಮೂಲಕ ಪ್ರಾಣಿ ಪ್ರೀತಿ ಮೆರೆದಿದ್ದಾರೆ.

ಬೀದರ್ ಜಿಲ್ಲೆ ಹುಮ್ನಾಬಾದ್ ತಾಲೂಕಿನ ಸೀತಾಳಗೇರಾ ಗ್ರಾಮದ ಸಂಜಯ್ ಖೇಣಿ ವೃತ್ತಿಯಲ್ಲಿ ರಾಜಕಾರಣಿಯಾಗಿದ್ದು, ತಮ್ಮ ಮನೆಯಲ್ಲಿಯೇ ಲಕ್ಷ ಲಕ್ಷ ರೂಪಾಯಿ ಬೆಲೆ ಬಾಳುವ ವಿದೇಶದ ನಾಯಿಗಳನ್ನು ಸಾಕಿದ್ದಾರೆ. ಪ್ರತಿ ತಿಂಗಳು ಈ ನಾಯಿಗಳ ಆಹಾರಕ್ಕೆ ಒಂದು ಲಕ್ಷ ರೂಪಾಯಿ ‌ಖರ್ಚಾಗುತ್ತದೆ. ಕೃಷಿಕರಾಗಿರುವ ಸಂಜಯ್ ಖೇಣಿ ವಿವಿಧ ತಳಿಯ 20ಕ್ಕೂ ಅಧಿಕ ನಾಯಿ ಮರಿಗಳನ್ನು ತಮ್ಮ ಫಾರ್ಮ್ ಹೌಸ್​​ನಲ್ಲಿ ಸಾಕುತ್ತಿದ್ದಾರೆ.

ಮಾರಾಟದ ಉದ್ದೇಶ ಹೊಂದಿರದ ಸಂಜಯ್ ನಾಯಿ ಮರಿಗಳೊಂದಿಗೆ ಕಾಲ ಕಳೆಯುತ್ತಿದ್ದು, ಸದಾ ಒತ್ತಡದ ಬದುಕಿನಲ್ಲಿ ಕಾಲ ಕಳೆಯುವುದರಿಂದ ನೆಮ್ಮದಿಯ ಸುಂದರ ಬದುಕಿಗೆ ಶ್ವಾನ ಸಾಕಾಣಿಕೆ ನೆರವಾಗಿದೆ ಎಂದು ಹೇಳಿದ್ದಾರೆ. ಇವರ ಬಳಿ ಕೆನೆಕ್ವಾರ್ಸ್, ರಾಟ್ ವ್ಹೀಲರ್, ನಿಯೋ ಪಾಲಿಟನ್ ಮಾಸ್ಟ್ರಿಫ್, ಅಮೆರಿಕನ್ ಬುಲ್, ಡೋಗೊ ಅರ್ಜೆಂಟೀನಾ, ಬೊರ್ ವೆಲ್, ಟರ್ಕಿಸ್ ಕಂಗಾಲ್, ಫಿಲಾ ಬೇರ್ಜಿಲೋ, ಜರ್ಮನ್ ಶೆಫರ್ಡ್, ಗೋಲ್ಡನ್ ರೀಟ್ಟೀಮ್ ಹೀಗೆ ವಿದೇಶಿ ತಳಿಯ 20 ಕ್ಕೂ ಹೆಚ್ಚು ಶ್ವಾನ ತಳಿ ಇವೆ.

bidar dogs love

ವಿದೇಶಿ ತಳಿಯ ಶ್ವಾನಗಳು

ಮುದ್ದಿನ ನಾಯಿಗಳು ಸೆಕ್ಯುರಿಟಿ ಗಾರ್ಡ್​ಗಳಾಗಿದ್ದು, ತಮ್ಮ ಜಮೀನಿನ ರಕ್ಷಣೆಗೂ ಸಹ ನಾಯಿಗಳನ್ನು ಬಳಸುತ್ತಿದ್ದಾರೆ. ಬೆಂಗಳೂರು, ಗೋವಾ, ಪುದುಚೇರಿ, ಚೆನ್ನೈ ಕೊಯಮತ್ತೂರುಗಳಿಂದ ನಾಯಿ ಮರಿಗಳನ್ನು ತರಿಸಿದ್ದು, ಶ್ವಾನಗಳ ಪಾಲನೆಗಾಗಿ ಕೆಲಸಗಾರರನ್ನು ನೇಮಕ ಮಾಡಲಾಗಿದೆ. ಒಂದೂವರೆ ತಿಂಗಳ ಮರಿಯಿಂದ, 2 ವರ್ಷದವರೆಗಿನ ನಾಯಿಯನ್ನು ಅವರು ಸಾಕುತ್ತಿದ್ದು, ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದೆ.

bidar dogs love

ಶ್ವಾನ ಪ್ರೀತಿ ಮೆರೆದ ಸಂಜಯ್ ಖೇಣಿ

ಇನ್ನು ಸಂಜಯ್ ಖೇಣಿ ನಾಯಿಗಳಿಗೆ ಆಹಾರ ನೀರು ಮತ್ತು ಅವುಗಳ ಆರೈಕೆ ಮಾಡಲು ದಿನದಲ್ಲಿ ಕೆಲವು ಗಂಟೆ ಮೀಸಲಿಟ್ಟಿದ್ದಾರತೆ. ಜೊತೆಗೆ ಬೇರೇ ಬೇರೆ ಜಿಲ್ಲೆಗಳಲ್ಲಿ ನಡೆಯುವ ಶ್ವಾನ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಯನ್ನ ಬಾಚಿಕೊಂಡಿದ್ದಾರೆ. ಇನ್ನೂ ಇವರ ಶ್ವಾನ ಸಾಕುವುದರ ಹಿಂದಿನ ಕಾರಣ ಬಹಳ ಕುತೂಹಲಕಾರಿಯಾಗಿದೆ.

bidar dogs love

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಶ್ವಾಗಳ ಪಾಲನೆ

ಇವರ ಬಳಿಯಿರುವ ನಾಯಿಗಳ ಅಂತಿಥಾ ಶ್ವಾನಗಳಲ್ಲ ನೋಡಲು ಆಕರ್ಷಕವಾಗಿದ್ದು, ದೈತ್ಯದೇಹವನ್ನ ಹೊಂದಿವೆ. ಸಂಜಯ್ ಖೇಣಿ ಬಳಿ ಇರುವ ನಾಯಿಗಳು ವಿದೇಶದಲ್ಲಿ ಕುರಿಗಳನ್ನು ಕಾಯಲು ಬಳಕೆ ಮಾಡುತ್ತಾರೆ. ಎರಡು ನಾಯಿಗಳು ಸೇರಿದರೆ ಕಾಡು ಪ್ರಾಣಿಯನ್ನಾದರು ಕೊಲ್ಲದೇ ಬಿಡುವುದಿಲ್ಲ. ಅಷ್ಟು ಶಕ್ತಿಯ ಬುದ್ಧಿವಂತ ನಾಯಿಗಳು ಇವಾಗಿದ್ದು, ಒಂದು ನಾಯಿ ಮರಿ ಕನಿಷ್ಟವೆಂದರೂ ಎರಡರಿಂದ ಮೂರು ಲಕ್ಷ ರೂಪಾಯಿ ಬೆಲೆ ಬಾಳುತ್ತವೆ. ಇನ್ನೂ ಇವುಗಳ ಆಹಾರ ಪದ್ಧತಿಯನ್ನು ಗಮನಿಸುವುದಾದರೆ  ಒಂದು ನಾಯಿ ಮೂರರಿಂದ ನಾಲ್ಕು ಕೇಜಿಯಷ್ಟಾದರೂ ಮಾಂಸ ತಿನ್ನುತ್ತದೆ.

bidar dogs love

ಸಂಜಯ್ ಖೇಣಿ ಫಾರ್ಮ್ ಹೌಸ್​ನಲ್ಲಿದೆ 20 ತಳಿಯ ನಾಯಿ

ತಿಂಗಳಿಗೆ ಲಕ್ಷಾಂತರ ರೂಪಾಯಿ ಹಣವನ್ನು ಖರ್ಚು ಮಾಡಿ ತಮ್ಮ ಮನೆಯ ಮಕ್ಕಳಂತೆ ಸಾಕಿ ಸಲುಹುತ್ತಿದ್ದಾರೆ ಸಂಜಯ್ ಖೇಣಿ . ಇವರ ಬಳಿ ನೂರಾರು ಎಕರೆಯಷ್ಟೂ ಜಮೀನಿದ್ದು, ಅದರಿಂದ ಬರುವ ಆದಾಯದಲ್ಲಿಯೇ ನಾಯಿಗಳನ್ನ ಸಾಕುತ್ತಿದ್ದಾರೆ. ಇನ್ನೂ ಈ ನಾಯಿಗಳ ಆರೋಗ್ಯದ ಬಗ್ಗೆ ತಪಾಸಣೆ ಮಾಡಲು ಓರ್ವ ವೈದ್ಯರನ್ನೂ ಸಹ ನೇಮಕ ಮಾಡಿದ್ದು, ಅವರು ಆಗಾಗ ಬಂದು ನಾಯಿಗಳ ಆರೋಗ್ಯ ತಪಾಸಣೆ ಮಾಡಿ ಹೋಗುತ್ತಾರೆ.

ಇದನ್ನೂ ಓದಿ: ಉಡುಪಿಯಲ್ಲೊಂದು ಚಿಕ್ಕ ಪ್ರಾಣಿ ಸಂಗ್ರಹಾಲಯ: ಮಾಜಿ ಸೈನಿಕನ ಮನೆಯಲ್ಲಿದೆ ಅಪರೂಪ ತಳಿಯ ಶ್ವಾನಗಳು

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ