ಮಳೆಯ ಆರ್ಭಟಕ್ಕೆ ಕ್ಲೀನ್ ಆಯ್ತು ಸಿಲಿಕಾನ್ ಸಿಟಿ ಗಾಳಿ!; ಬಹುತೇಕ ಜಿಲ್ಲೆಗಳಲ್ಲಿ ‘ಉತ್ತಮ’ ವಾಯು ಗುಣಮಟ್ಟ ದಾಖಲು!

ಕಳೆದ ಎರಡು ದಿನಗಳ ಮುಂಗಾರು ಪೂರ್ವ ಮಳೆಯಿಂದ ಕರ್ನಾಟಕದ ವಾಯು ಮಾಲಿನ್ಯ ಗಣನೀಯವಾಗಿ ಕುಸಿದಿದೆ. ರಾಜಧಾನಿ ಬೆಂಗಳೂರಿನ AQI 55-69ಕ್ಕೆ ಇಳಿದು ಸಾಧಾರಣ ಮಟ್ಟಕ್ಕೆ ತಲುಪಿದೆ. ಮಂಗಳೂರು, ಉಡುಪಿ ಸೇರಿ ಹಲವೆಡೆ ವಾಯು ಗುಣಮಟ್ಟ 'ಉತ್ತಮ'ವಾಗಿದೆ. ಮಳೆಯು ಧೂಳಿನ ಕಣಗಳನ್ನು ಕಡಿಮೆಗೊಳಿಸಿ, ಉಸಿರಾಟದ ಸಮಸ್ಯೆ ಇರುವವರಿಗೆ ಹಾಗೂ ಹಿರಿಯ ನಾಗರಿಕರಿಗೆ ಶುದ್ಧ ಗಾಳಿಯನ್ನು ಒದಗಿಸಿದೆ. ಇದು ಪರಿಸರಕ್ಕೆ ಉತ್ತಮ ಸುದ್ದಿ.

ಮಳೆಯ ಆರ್ಭಟಕ್ಕೆ ಕ್ಲೀನ್ ಆಯ್ತು ಸಿಲಿಕಾನ್ ಸಿಟಿ ಗಾಳಿ!; ಬಹುತೇಕ ಜಿಲ್ಲೆಗಳಲ್ಲಿ ‘ಉತ್ತಮ’ ವಾಯು ಗುಣಮಟ್ಟ ದಾಖಲು!
ಇಂದಿನ ಗಾಳಿ ಮಟ್ಟ
Image Credit source: Tv9 kannada

Updated on: May 26, 2026 | 8:02 AM

ಬೆಂಗಳೂರು, ಮೇ.26: ಕಳೆದ ಎರಡು ದಿನಗಳಿಂದ ರಾಜ್ಯದಾದ್ಯಂತ ಸುರಿಯುತ್ತಿರುವ ಮುಂಗಾರು ಪೂರ್ವ (Pre-Monsoon) ಮಳೆ ಮತ್ತು ಬಿರುಗಾಳಿಯ ಪ್ರಭಾವದಿಂದಾಗಿ ಕರ್ನಾಟಕದ ಪ್ರಮುಖ ನಗರಗಳಲ್ಲಿ ವಾಯು ಮಾಲಿನ್ಯ ಗಣನೀಯವಾಗಿ ಕುಸಿದಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇಂದು ಗಾಳಿಯ ಗುಣಮಟ್ಟವು ಅತ್ಯಂತ ಆರೋಗ್ಯಕರ ಮಟ್ಟಕ್ಕೆ ತಲುಪಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.

ನಿರಂತರ ವಾಹನ ಸಂಚಾರದಿಂದ ಸದಾ ಧೂಳಿನಿಂದ ಕೂಡಿರುತ್ತಿದ್ದ ಬೆಂಗಳೂರಿನ ವಾಯು ಗುಣಮಟ್ಟ ಇಂದು ಅತ್ಯಂತ ನಿರಾಳತೆ ತಂದಿದೆ. ನಗರದ ಸರಾಸರಿ AQI ಇಂದು 55 ರಿಂದ 69ರ ಆಸುಪಾಸಿನಲ್ಲಿ ದಾಖಲಾಗಿದ್ದು, ಇದು ಸಾಧಾರಣ ಎಂದು ಹೇಳಲಾಗಿದೆ. ಮಳೆಯ ಕಾರಣದಿಂದಾಗಿ ಗಾಳಿಯಲ್ಲಿನ ಧೂಳಿನ ಕಣಗಳು PM2.5 ಮತ್ತು PM10 ಇದೆ. ಹೆಬ್ಬಾಳ ಮತ್ತು ಜಯನಗರದಲ್ಲಿ ವಾಯು ಗುಣಮಟ್ಟ ಉತ್ತಮವಾಗಿದ್ದರೆ, ಸಿಲ್ಕ್ ಬೋರ್ಡ್‌ನಂತಹ ದಟ್ಟ ಟ್ರಾಫಿಕ್ ವಲಯಗಳಲ್ಲಿ ಮಾತ್ರ ಕೊಂಚ ಹೆಚ್ಚಿನ ಮಾಲಿನ್ಯ ಕಂಡುಬಂದಿದೆ.

ಮಂಗಳೂರು, ಉಡುಪಿ, ಶಿವಮೊಗ್ಗ ಮತ್ತು ಮಡಿಕೇರಿ ಜಿಲ್ಲೆಗಳಲ್ಲಿ ಇಂದು ವಾಯು ಗುಣಮಟ್ಟವು ‘Good’ (ಉತ್ತಮ – 50ಕ್ಕಿಂತ ಕಡಿಮೆ) ವಲಯದಲ್ಲಿದೆ. ಇಲ್ಲಿ ನಿರಂತರ ಗಾಳಿ ಮತ್ತು ಮಳೆಯ ಮುನ್ಸೂಚನೆ ಇರುವುದರಿಂದ ವಾತಾವರಣವು ಕಂಪ್ಲೀಟ್ ಫ್ರೆಶ್ ಆಗಿದೆ. ಶ್ವಾಸಕೋಶದ ತೊಂದರೆ ಇರುವವರು ಹಾಗೂ ಹಿರಿಯ ನಾಗರಿಕರು ಮುಕ್ತವಾಗಿ ಹೊರಗೆ ಓಡಾಡಬಹುದು.

ಇದನ್ನೂ ಓದಿ: ರಾಜ್ಯದ ಜನತೆಗೆ ಸಿಕ್ತು ಬಿಸಿಲಿನಿಂದ ಬಿಗ್ ರಿಲೀಫ್!; ಬೆಂಗಳೂರು ಸೇರಿದಂತೆ ಹಲವೆಡೆ ಇಂದು ಗುಡುಗು ಸಹಿತ ಭಾರಿ ಮಳೆ

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

ಉತ್ತಮ- 0-50

ಮಧ್ಯಮ – 50-100

ಕಳಪೆ – 100-150

ಅನಾರೋಗ್ಯಕರ – 150-200

ಗಂಭೀರ – 200 – 300

ಅಪಾಯಕಾರಿ – 300 -500+

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Akshay Pallamajalu

ನನ್ನ ಹೆಸರು ಅಕ್ಷಯ್ ಕುಮಾರ್ ಪಲ್ಲಮಜಲು, ನನ್ನ ಊರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕು, ಡಿಜಿಟಲ್​ ವಿಭಾಗದಲ್ಲಿ 3 ವರ್ಷಗಳ ಅನುಭವ, ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದು, ಟಿವಿ9ನಲ್ಲೂ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದೇನೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಲೇಖನಗಳನ್ನು ಬರೆಯುತ್ತೇನೆ.

Read More
Follow Us