AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಡುಗೆ ಮನೆಯೇ ಇವುಗಳ ಟಾರ್ಗೆಟ್! ಕೋತಿಗಳ ಹಾವಳಿಗೆ ಬೇಸತ್ತು ಊರು ಬಿಡಲು ಮುಂದಾದ ಗ್ರಾಮಸ್ಥರು

ನೇರವಾಗಿ ಅಡುಗೆ ಮನೆಗೆ ದಾಳಿ ಮಾಡಿ ಆಹಾರ ವಸ್ತುಗಳನ್ನು ಹೊತ್ತೊಯ್ಯುತ್ತಿವೆ. ಜನರನ್ನು ನೆಮ್ಮದಿಯಾಗಿ ಬದಕಲೂ ಬಿಡದೆ ಕಾಟ ಕೊಡುತ್ತಿವೆ. ಈ ನಿಟ್ಟಿನಲ್ಲಿ ದೂರುಗಳನ್ನು ಕೊಟ್ಟರೂ ಅರಣ್ಯ ಇಲಾಖೆ, ಜಿ.ಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಈವರೆಗೆ ಕ್ರಮಕೈಗೊಳ್ಳದ ಹಿನ್ನೆಲೆ ರಾಯಚೂರು ತಾಲೂಕಿನ ಪಲವಲದೊಡ್ಡಿ ಗ್ರಾಮಸ್ಥರು ಊರು ಬಿಡಲು ನಿರ್ಧರಿಸಿದ್ದಾರೆ.

ಅಡುಗೆ ಮನೆಯೇ ಇವುಗಳ ಟಾರ್ಗೆಟ್! ಕೋತಿಗಳ ಹಾವಳಿಗೆ ಬೇಸತ್ತು ಊರು ಬಿಡಲು ಮುಂದಾದ ಗ್ರಾಮಸ್ಥರು
ಊರಿನಲ್ಲಿ
TV9 Web
| Edited By: |

Updated on:Aug 23, 2022 | 10:22 AM

Share

ರಾಯಚೂರು: ನೇರವಾಗಿ ಅಡುಗೆ ಮನೆಗೆ ದಾಳಿ ಮಾಡಿ ಆಹಾರ ವಸ್ತುಗಳನ್ನು ಹೊತ್ತೊಯ್ಯುತ್ತಿರುವ ಕೋತಿಗಳ ಹಾವಳಿಗೆ ಬೇಸತ್ತ ತಾಲೂಕಿನ ಪಲವಲದೊಡ್ಡಿ ಗ್ರಾಮದ ಜನರು ಊರು ಬಿಡಲು ಮುಂದಾಗಿದ್ದಾರೆ. ನಿರಂತರವಾದ ಕೋತಿಗಳ ಹಾವಳಿಯಿಂದ ಬೇಸತ್ತು ಹಲವಾರು ಬಾರಿ ದೂರು ಕೊಟ್ಟರೂ ಅರಣ್ಯ ಇಲಾಖೆ, ಜಿ.ಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಈವರೆಗೆ ಕ್ರಮಕೈಗೊಳ್ಳದ ಹಿನ್ನೆಲೆ ಊರನ್ನು ತೊರೆಯಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.

ಪಲವಲದೊಡ್ಡಿ ಗ್ರಾಮದಲ್ಲಿ ಕೋತಿಗಳ ಹಿಂಡೇ ಇದ್ದು, ಜನಸಂಖ್ಯೆಗಿಂತಿ ಕೋತಿಗಳ ಸಂಖ್ಯೆಯೇ ಹೆಚ್ಚಾಗಿದೆ. ಅದರಂತೆ ಆಹಾರವನ್ನು ಹುಡುಕುತ್ತಾ ಗ್ರಾಮದ ನಿವಾಸಿಗಳ ಮನೆಗೆ ನುಗ್ಗಿ ನೇರವಾಗಿ ಅಡುಗೆ ಮನೆಗೆ ದಾಳಿ ಇಟ್ಟು ಆಹಾರ ವಸ್ತುಗಳನ್ನು ಹೊತ್ತೊಯ್ಯುತ್ತಿವೆ. ಇದರಿಂದಾಗಿ ಈ ಗ್ರಾಮದ ಜನರು ನೆಮ್ಮದಿಯ ಜೀವನವನ್ನು ನಡೆಸಲಾಗದಂತಹ ಸ್ಥಿತಿ ನಿರ್ಮಾಣವಾಗಿದೆ.

ಕೋತಿಗಳ ಉಪಟಳ ಒಂದಾ? ಎರಡ?

ಕಳೆದೊಂದು ವರ್ಷದಿಂದ ಈ ಗ್ರಾಮದ ಜನರ ಪಾಡು ದೇವರೇ ಬಲ್ಲ. ನೆಮ್ಮದಿಂದ ಕುಳಿತುಕೊಳ್ಳುವಂತಿಲ್ಲ, ಮಲಗುವಂತೆಯೂ ಇಲ್ಲ, ಅಡುಗೆ ಮನೆಗೆ ನುಗ್ಗಿ ಆಹಾರ ಹೊತ್ತೊಯ್ಯುವುದರ ಜೊತೆಗೆ ಮಕ್ಕಳು, ಮಹಿಳೆಯರ ಮೈ ಮೇಲೆ ಬಿದ್ದು ಕಾಟ ಕೊಡುತ್ತಿವೆ. ಮನೆಗೆ ನುಗ್ಗಿದ ಕೂತಿಗಳನ್ನು ಓಡಿಲು ಮುಂದಾದರೆ ಅಂತಹವರ ಮೇಲೆಯೇ ದಾಳಿ ನಡೆಸಿ ಕಚ್ಚಿ ಓಡಿ ಹೋಗುತ್ತಿವೆ. ಮನೆಯಲ್ಲಿ ಟಿವಿ ಹಾಕಿ ಮನರಂಜನೆ ಪಡೆಯುವ ಎಂದು ಕೂರುವ ಎಂದರೂ ಡಿಸ್ ಮೇಲೆ, ಡಿಶ್ ವಯರ್ ಮೇಲೆ ಕುಳಿತುಕೊಂಡು ತೊಂದರೆ ಕೊಡಲು ಪ್ರಾರಂಭಿಸುತ್ತವೆ. ಮುಂದುವರಿದು ವಿದ್ಯುತ್ ಕಂಬಳ ಮೇಲೆ ಕುಳಿತುಕೊಂಡು ತೊಂದರೆ ಕೊಡುತ್ತಿವೆ. ಮಕ್ಕಳು ಕೈಯಲ್ಲಿ ತಿಂಡಿ ತಿನಿಸುವ ಹಿಡಿದುಕೊಂಡಿದ್ದರೆ ಮಕ್ಕಳನ್ನು ಅಟ್ಟಾಡಿಸಿ ಅವರ ಕೈಯಲ್ಲಿರುವ ತಿಂಡಿಗಳನ್ನು ಕಸಿದು ತಿನ್ನುತ್ತಿವೆ. ಕೋತಿಗಳ ನಿರಂತರ ಉಪಟಳದಿಂದಾಗಿ ಜನರು ನಿತ್ಯವೂ ಬಾಗಿಲು ಹಾಕಿ ಮನೆಯೊಳಗೆ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೋತಿಗಳ ನಿರಂತರ ಹಾವಳಿಯಿಂದ ಬೇಸತ್ತು ಹಲವು ಬಾರಿ ದೂರುಗಳನ್ನು ಕೊಟ್ಟರೂ ಅರಣ್ಯ ಇಲಾಖೆ, ಜಿಲ್ಲಾ ಪಂಚಾಯತಿ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಇಷ್ಟಕ್ಕೂ ಸುಮ್ಮನಾಗದ ಜನರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೊರೆಯೂ ಹೋಗಿದ್ದಾರೆ. ಅದರಂತೆ ಸರಣಿ ನೋಟಿಸ್ ಜಾರಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.

ಅದಾಗ್ಯೂ, ಕೋತಿಗಳ ವಿರುದ್ಧ ತೋಳ್ಬಲ ತೋರಿಸಲೂ ಆಗದೆ, ಕಾನೂನಾತ್ಮಕವಾಗಿ ಸ್ಥಳೀಯರ ಸರ್ಕಾರಿ ಆಡಳಿತದ ಮೂಲಕವೂ ನ್ಯಾಯ ಪಡೆಯಲು ಸಾಧ್ಯವಾಗದಿರುವ ಹಿನ್ನೆಲೆ ಊರಿನ ಜನರು ಗ್ರಾಮವನ್ನು ತೊರೆಯಲು ಮುಂದಾಗಿದ್ದಾರೆ. ಅಲ್ಲದೆ ಕೊನೆಯ ಪ್ರಯತ್ನವಾಗಿ ನ್ಯಾಯಾಲಯದ ಮೆಟ್ಟಿಲು ಕೂಡ ಹತ್ತಲು ಮುಂದಾಗಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:01 am, Tue, 23 August 22

Follow Us
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ
ಮಾನವೀಯತೆ ಮರೆತ್ರಾ ವೈದ್ಯರು?: ರೋಗಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಆರೋಪ
ಮಾನವೀಯತೆ ಮರೆತ್ರಾ ವೈದ್ಯರು?: ರೋಗಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಆರೋಪ
ದೇವಿಯರಿಗೆ ಉಡಿ ತುಂಬಿ, ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದ ಮುಸ್ಲಿಮರು
ದೇವಿಯರಿಗೆ ಉಡಿ ತುಂಬಿ, ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದ ಮುಸ್ಲಿಮರು
ಹುಲಿ ಕಾರ್ತಿಕ್​​ಗೆ ಚಾಲೆಂಜ್ ಮಾಡಿದ ಅನುಶ್ರೀ; ಗೆದ್ದಿದ್ದು ಯಾರು?
ಹುಲಿ ಕಾರ್ತಿಕ್​​ಗೆ ಚಾಲೆಂಜ್ ಮಾಡಿದ ಅನುಶ್ರೀ; ಗೆದ್ದಿದ್ದು ಯಾರು?
ಪೆನ್ ಕ್ಯಾಪ್ ನುಂಗಿದ ಬಾಲಕನ ಜೀವ ಉಳಿಸಿದ ವೈದ್ಯರು
ಪೆನ್ ಕ್ಯಾಪ್ ನುಂಗಿದ ಬಾಲಕನ ಜೀವ ಉಳಿಸಿದ ವೈದ್ಯರು