AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಡುಗೆ ಮನೆಯೇ ಇವುಗಳ ಟಾರ್ಗೆಟ್! ಕೋತಿಗಳ ಹಾವಳಿಗೆ ಬೇಸತ್ತು ಊರು ಬಿಡಲು ಮುಂದಾದ ಗ್ರಾಮಸ್ಥರು

ನೇರವಾಗಿ ಅಡುಗೆ ಮನೆಗೆ ದಾಳಿ ಮಾಡಿ ಆಹಾರ ವಸ್ತುಗಳನ್ನು ಹೊತ್ತೊಯ್ಯುತ್ತಿವೆ. ಜನರನ್ನು ನೆಮ್ಮದಿಯಾಗಿ ಬದಕಲೂ ಬಿಡದೆ ಕಾಟ ಕೊಡುತ್ತಿವೆ. ಈ ನಿಟ್ಟಿನಲ್ಲಿ ದೂರುಗಳನ್ನು ಕೊಟ್ಟರೂ ಅರಣ್ಯ ಇಲಾಖೆ, ಜಿ.ಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಈವರೆಗೆ ಕ್ರಮಕೈಗೊಳ್ಳದ ಹಿನ್ನೆಲೆ ರಾಯಚೂರು ತಾಲೂಕಿನ ಪಲವಲದೊಡ್ಡಿ ಗ್ರಾಮಸ್ಥರು ಊರು ಬಿಡಲು ನಿರ್ಧರಿಸಿದ್ದಾರೆ.

ಅಡುಗೆ ಮನೆಯೇ ಇವುಗಳ ಟಾರ್ಗೆಟ್! ಕೋತಿಗಳ ಹಾವಳಿಗೆ ಬೇಸತ್ತು ಊರು ಬಿಡಲು ಮುಂದಾದ ಗ್ರಾಮಸ್ಥರು
ಊರಿನಲ್ಲಿ
TV9 Web
| Edited By: |

Updated on:Aug 23, 2022 | 10:22 AM

Share

ರಾಯಚೂರು: ನೇರವಾಗಿ ಅಡುಗೆ ಮನೆಗೆ ದಾಳಿ ಮಾಡಿ ಆಹಾರ ವಸ್ತುಗಳನ್ನು ಹೊತ್ತೊಯ್ಯುತ್ತಿರುವ ಕೋತಿಗಳ ಹಾವಳಿಗೆ ಬೇಸತ್ತ ತಾಲೂಕಿನ ಪಲವಲದೊಡ್ಡಿ ಗ್ರಾಮದ ಜನರು ಊರು ಬಿಡಲು ಮುಂದಾಗಿದ್ದಾರೆ. ನಿರಂತರವಾದ ಕೋತಿಗಳ ಹಾವಳಿಯಿಂದ ಬೇಸತ್ತು ಹಲವಾರು ಬಾರಿ ದೂರು ಕೊಟ್ಟರೂ ಅರಣ್ಯ ಇಲಾಖೆ, ಜಿ.ಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಈವರೆಗೆ ಕ್ರಮಕೈಗೊಳ್ಳದ ಹಿನ್ನೆಲೆ ಊರನ್ನು ತೊರೆಯಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.

ಪಲವಲದೊಡ್ಡಿ ಗ್ರಾಮದಲ್ಲಿ ಕೋತಿಗಳ ಹಿಂಡೇ ಇದ್ದು, ಜನಸಂಖ್ಯೆಗಿಂತಿ ಕೋತಿಗಳ ಸಂಖ್ಯೆಯೇ ಹೆಚ್ಚಾಗಿದೆ. ಅದರಂತೆ ಆಹಾರವನ್ನು ಹುಡುಕುತ್ತಾ ಗ್ರಾಮದ ನಿವಾಸಿಗಳ ಮನೆಗೆ ನುಗ್ಗಿ ನೇರವಾಗಿ ಅಡುಗೆ ಮನೆಗೆ ದಾಳಿ ಇಟ್ಟು ಆಹಾರ ವಸ್ತುಗಳನ್ನು ಹೊತ್ತೊಯ್ಯುತ್ತಿವೆ. ಇದರಿಂದಾಗಿ ಈ ಗ್ರಾಮದ ಜನರು ನೆಮ್ಮದಿಯ ಜೀವನವನ್ನು ನಡೆಸಲಾಗದಂತಹ ಸ್ಥಿತಿ ನಿರ್ಮಾಣವಾಗಿದೆ.

ಕೋತಿಗಳ ಉಪಟಳ ಒಂದಾ? ಎರಡ?

ಕಳೆದೊಂದು ವರ್ಷದಿಂದ ಈ ಗ್ರಾಮದ ಜನರ ಪಾಡು ದೇವರೇ ಬಲ್ಲ. ನೆಮ್ಮದಿಂದ ಕುಳಿತುಕೊಳ್ಳುವಂತಿಲ್ಲ, ಮಲಗುವಂತೆಯೂ ಇಲ್ಲ, ಅಡುಗೆ ಮನೆಗೆ ನುಗ್ಗಿ ಆಹಾರ ಹೊತ್ತೊಯ್ಯುವುದರ ಜೊತೆಗೆ ಮಕ್ಕಳು, ಮಹಿಳೆಯರ ಮೈ ಮೇಲೆ ಬಿದ್ದು ಕಾಟ ಕೊಡುತ್ತಿವೆ. ಮನೆಗೆ ನುಗ್ಗಿದ ಕೂತಿಗಳನ್ನು ಓಡಿಲು ಮುಂದಾದರೆ ಅಂತಹವರ ಮೇಲೆಯೇ ದಾಳಿ ನಡೆಸಿ ಕಚ್ಚಿ ಓಡಿ ಹೋಗುತ್ತಿವೆ. ಮನೆಯಲ್ಲಿ ಟಿವಿ ಹಾಕಿ ಮನರಂಜನೆ ಪಡೆಯುವ ಎಂದು ಕೂರುವ ಎಂದರೂ ಡಿಸ್ ಮೇಲೆ, ಡಿಶ್ ವಯರ್ ಮೇಲೆ ಕುಳಿತುಕೊಂಡು ತೊಂದರೆ ಕೊಡಲು ಪ್ರಾರಂಭಿಸುತ್ತವೆ. ಮುಂದುವರಿದು ವಿದ್ಯುತ್ ಕಂಬಳ ಮೇಲೆ ಕುಳಿತುಕೊಂಡು ತೊಂದರೆ ಕೊಡುತ್ತಿವೆ. ಮಕ್ಕಳು ಕೈಯಲ್ಲಿ ತಿಂಡಿ ತಿನಿಸುವ ಹಿಡಿದುಕೊಂಡಿದ್ದರೆ ಮಕ್ಕಳನ್ನು ಅಟ್ಟಾಡಿಸಿ ಅವರ ಕೈಯಲ್ಲಿರುವ ತಿಂಡಿಗಳನ್ನು ಕಸಿದು ತಿನ್ನುತ್ತಿವೆ. ಕೋತಿಗಳ ನಿರಂತರ ಉಪಟಳದಿಂದಾಗಿ ಜನರು ನಿತ್ಯವೂ ಬಾಗಿಲು ಹಾಕಿ ಮನೆಯೊಳಗೆ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೋತಿಗಳ ನಿರಂತರ ಹಾವಳಿಯಿಂದ ಬೇಸತ್ತು ಹಲವು ಬಾರಿ ದೂರುಗಳನ್ನು ಕೊಟ್ಟರೂ ಅರಣ್ಯ ಇಲಾಖೆ, ಜಿಲ್ಲಾ ಪಂಚಾಯತಿ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಇಷ್ಟಕ್ಕೂ ಸುಮ್ಮನಾಗದ ಜನರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೊರೆಯೂ ಹೋಗಿದ್ದಾರೆ. ಅದರಂತೆ ಸರಣಿ ನೋಟಿಸ್ ಜಾರಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.

ಅದಾಗ್ಯೂ, ಕೋತಿಗಳ ವಿರುದ್ಧ ತೋಳ್ಬಲ ತೋರಿಸಲೂ ಆಗದೆ, ಕಾನೂನಾತ್ಮಕವಾಗಿ ಸ್ಥಳೀಯರ ಸರ್ಕಾರಿ ಆಡಳಿತದ ಮೂಲಕವೂ ನ್ಯಾಯ ಪಡೆಯಲು ಸಾಧ್ಯವಾಗದಿರುವ ಹಿನ್ನೆಲೆ ಊರಿನ ಜನರು ಗ್ರಾಮವನ್ನು ತೊರೆಯಲು ಮುಂದಾಗಿದ್ದಾರೆ. ಅಲ್ಲದೆ ಕೊನೆಯ ಪ್ರಯತ್ನವಾಗಿ ನ್ಯಾಯಾಲಯದ ಮೆಟ್ಟಿಲು ಕೂಡ ಹತ್ತಲು ಮುಂದಾಗಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:01 am, Tue, 23 August 22

ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ