AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಯಚೂರು; 20 ದಿನಗಳಿಂದ ನೀರಿಲ್ಲದೆ ಹಾಸ್ಟೆಲ್ ವಿದ್ಯಾರ್ಥಿನಿಯರ ಪರದಾಟ, ಹೆಣ್ಮಕ್ಕಳ ಗೋಳು ಹೇಳುವವರಿಲ್ಲ

ಊರು, ಮನೆ, ಮಠ ಬಿಟ್ಟು ಶಿಕ್ಷಣಕ್ಕಾಗಿ ರಾಯಚೂರಿಗೆ ಬಂದಿದ್ದ ವಿದ್ಯಾರ್ಥಿನಿಯರು ಪರದಾಡುತ್ತಿದ್ದಾರೆ. ಕಳೆದ 20 ದಿನಗಳಿಂದ ಕುಡಿಯಲು ನೀರಿಲ್ಲಾ, ಬಳಕೆಗೂ ನೀರಿಲ್ಲದೇ ವಿದ್ಯಾರ್ಥಿನಿಯರು ಕಂಗಾಲಾಗಿದ್ದಾರೆ. ಊಟ ಮಾಡಿ ಪೇಪರ್ನಿಂದ ಕೈ ಒರೆಸಿಕೊಳ್ಳೊ ದುಸ್ಥಿತಿ ದೇವರಾಜ್ ಅರಸು ಮೆಟ್ರಿಕ್ ನಂತರದ ವೃತ್ತಿಪರ ಮಹಿಳಾ ಹಾಸ್ಟೆಲ್​ನಲ್ಲಿ ಬಂದಿದೆ.

ರಾಯಚೂರು; 20 ದಿನಗಳಿಂದ ನೀರಿಲ್ಲದೆ ಹಾಸ್ಟೆಲ್ ವಿದ್ಯಾರ್ಥಿನಿಯರ ಪರದಾಟ, ಹೆಣ್ಮಕ್ಕಳ ಗೋಳು ಹೇಳುವವರಿಲ್ಲ
ಹಾಸ್ಟೆಲ್ ಹೊರಗೆ ವಿದ್ಯಾರ್ಥಿನಿಯರ ಪ್ರತಿಭಟನೆ
Follow us
ಭೀಮೇಶ್​​ ಪೂಜಾರ್
| Updated By: ಆಯೇಷಾ ಬಾನು

Updated on: Dec 13, 2023 | 10:55 AM

ರಾಯಚೂರು, ಡಿ.13: ರಾಯಚೂರು ನಗರದಲ್ಲಿರುವ ದೇವರಾಜ್ ಅರಸು ಮೆಟ್ರಿಕ್ ನಂತರದ ವೃತ್ತಿಪರ ಮಹಿಳಾ ಹಾಸ್ಟೆಲ್ (Devaraj Arasu Women’s Hostel)  ವಿದ್ಯಾರ್ಥಿನಿಯರು ನೀರಿಲ್ಲದೇ (Water) ಅಕ್ಷರಶಃ ಪರದಾಡುತ್ತಿದ್ದಾರೆ. ಈ ಹಾಸ್ಟೆಲ್​ನಲ್ಲಿ ಸಮಸ್ಯೆಗಳ ಆಗರವೇ ಬಿಚ್ಚಿಕೊಂಡಿದೆ. ಪ್ರತಿಭಟನೆಗೆ (Protest) ಮುಂದಾಗಿರುವ ವಿದ್ಯಾರ್ಥಿಯರೆಲ್ಲಾ (Students) ಈಗ ಸಮಸ್ಯೆ ಬಗೆಹರಿಯುತ್ತೆ, ನಾಳೆ ಪರಿಹಾರವಾಗುತ್ತೆ ಅಂತ ಸುಮ್ಮನಿದ್ರು. ಆದರೆ ಈ ಹಾಸ್ಟೆಲ್​ನಲ್ಲಿ ವಾರ್ಡನ್ ಆಗಲೀ, ಮೇಲಾಧಿಕಾರಿಗಳಾಗಲೀ ಯಾರೂ ಈ ಬಗ್ಗೆ ಗಮನವನ್ನೇ ಹರಿಸಿಲ್ಲ. ಹೀಗಾಗಿ ವಿದ್ಯಾರ್ಥಿನಿಯರು ಆಕ್ರೋಶ ಹೊರ ಹಾಕಿದ್ದಾರೆ.

ದೇವರಾಜ್ ಅರಸು ಮೆಟ್ರಿಕ್ ನಂತರದ ವೃತ್ತಿಪರ ಮಹಿಳಾ ಹಾಸ್ಟೆಲ್​ನಲ್ಲಿ ಕಳೆದ 20 ದಿನಗಳಿಂದ ನೀರಿಲ್ಲ. ವಿದ್ಯಾರ್ಥಿನಿಯರು ಹನಿ ನೀರಿಗೂ ಪರದಾಡುತ್ತಿದ್ದಾರೆ. ನಮಗೆ ಕುಡಿಯಲು ನೀರಿಲ್ಲ, ಬಳಕೆಗೂ ನೀರಿಲ್ಲ ಅಂತ ವಿದ್ಯಾರ್ಥಿನಿಯರು ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ. 150 ಜನ ವಿದ್ಯಾರ್ಥಿನಿಯರಿಗೆ ಕೇವಲ ಒಂದೇ ಒಂದು ಟ್ಯಾಂಕರ್ ಮೂಲಕ ನೀರನ್ನ ಸಪ್ಲೈ ಮಾಡಲಾಗುತ್ತಿದೆ. ನಾವು ಹೆಣ್ಮಕ್ಕಳು ಹತ್ತಾರು ಸಮಸ್ಯೆ ಇರತ್ತೆ. ಇದನ್ನ ಬಾಯ್ಬಿಟ್ಟು ಹೇಳಿದ್ರೂ ನಮಗೆ ನೀರಿನ ವ್ಯವಸ್ಥೆ ಮಾಡ್ತಿಲ್ಲ ಎಂದು ವಿದ್ಯಾರ್ಥಿನಿಯಲು ಕಣ್ಣೀರು ಹಾಕ್ತಿದ್ದಾರೆ.

ದೇವರಾಜ್ ಅರಸು ಮೆಟ್ರಿಕ್ ನಂತರದ ವೃತ್ತಿಪರ ಮಹಿಳಾ ಹಾಸ್ಟೆಲ್​ನಲ್ಲಿ ನರ್ಸಿಂಗ್ ,ಬಿಇಡಿ, ಇಂಜಿನಿಯರಿಂಗ್ ಸೇರಿ ವಿವಿಧ ವಿಭಾಗಗಳ ವಿದ್ಯಾರ್ಥಿನಿಯರಿದ್ದಾರೆ. ಎಲ್ರೂ ಬೆಳಿಗ್ಗೆ 5 ಗಂಟೆಗೆ ಎದ್ದು ಕಾಲೇಜುಗಳಿಗೆ ಹೋಗುತ್ತಾರೆ. ಆದರೆ ನೀರಿಲ್ಲದ ಹಿನ್ನೆಲೆ ತರಗತಿಗಳಿಗೆ ಹೋಗೋದಕ್ಕೂ ಸಮಸ್ಯೆಯಾಗ್ತಿದೆ. ಯಾಕಂದ್ರೆ ನೀರು ಸಿಗುವವರೆಗೂ ಹಾಸ್ಟೆಲ್​ನಲ್ಲಿ ಕಾಯಲೇಬೇಕಾದ ಅನಿವಾರ್ಯತೆ ಇದೆ. ಇದಷ್ಟೇ ಅಲ್ಲ ವಿದ್ಯಾರ್ಥಿನಿಯರು ಊಟ ಮಾಡಿದ ಬಳಿಕ ಕೈತೊಳೆದುಕೊಳ್ಳಲೂ ನೀರಿಲ್ಲ. ಹೀಗಾಗಿ ಪೇಪರ್ನಿಂದ ಕೈ ಒರೆಸಿಕೊಳ್ಳುವಂತಾಗಿದೆ. ಉಪಹಾರ ಸೇವಿಸಿ ಕಾಲೇಜುಗಳಿಗೆ ಹೋಗಿ ನೀರು ಕುಡಿಯೋ ದುಸ್ಥಿತಿ ಎದುರಾಗಿದೆ.

ಇದನ್ನೂ ಓದಿ: ಚಿನ್ನದ ನಾಡಿನ ಕರಾಟೆ ಲೇಡಿ! ಕೋಲಾರದ ರುಮಾನಾ ಕೌಸರ್ ಕೊರಳಿಗೆ ಚಿನ್ನದ ಪದಕ, ತಂದೆ ಆಟೋ ಚಾಲಕ

ಕಳಪೆ ಗುಣಮಟ್ಟದ ಆಹಾರ

ಮೊನ್ನೆಯಷ್ಟೇ ರಾಯಚೂರು ಜಿಲ್ಲೆ ಮಾನ್ವಿ ಪಟ್ಟಣದಲ್ಲಿನ ಸರ್ಕಾರಿ ಹಾಸ್ಟೆಲ್​ನಲ್ಲಿ ಫುಡ್ ಪಾಯ್ಸನ್ ನಿಂದ 14 ಜನ ವಿದ್ಯಾರ್ಥಿನಿಯರು ಉಸಿರಾಟದ ತೊಂದರೆ, ಹೊಟ್ಟೆ ನೋವಿನಿಂದ ಆಸ್ಪತ್ರೆ ಸೇರಿದ್ದರು. ಅದೇ ರೀತಿ ಈ ದೇವರಾಜ್ ಅರಸು ಮೆಟ್ರಿಕ್ ನಂತರದ ವೃತ್ತಿಪರ ಮಹಿಳಾ ಹಾಸ್ಟೆಲ್​ನಲ್ಲಿ ಅಡುಗೆ ವಿಚಾರದಲ್ಲೂ ಅವಾಂತರಗಳು ಆಗ್ತಿವೆ. ಅಕ್ಕಿ ಸ್ವಚ್ಛಗೊಳಿಸಲ್ಲ, ಹುಳು ಬಿದ್ದಿರೋ ರೀತಿ ಅನ್ನ ಇರತ್ತೆ. ಸಾಂಬಾರ್ ಕೇಳಲೇ ಬೇಡಿ. ಅದು ನೀರಾ, ಸಾಂಬರ್ನಾ ಅನ್ನೋದೇ ಗೊತ್ತಾಗಲ್ಲ. ಬಾತ್ರೂಂಗಳಂತೋ ಹಾಳಾಗಿ ಹೋಗಿವೆ ಅಂತ ವಿದ್ಯಾರ್ಥಿನಿಯರು ಸಮಸ್ಯೆಗಳ ಸರಮಾಲೆಯನ್ನ ಬಿಚ್ಚಿಟ್ಟಿದ್ದಾರೆ.

ವಿದ್ಯಾರ್ಥಿನಿಯರು ಕುಡಿಯೋ ನೀರಿಗಾಗಿ ಪರದಾಡಿ ಪ್ರತಿಭಟಿಸುತ್ತಿದ್ರೆ, ಲೇಡಿ ವಾರ್ಡನ್ ಗಿರಿಜಾ ಮೇಡಂ ಬಂದು ವಿದ್ಯಾರ್ಥಿಗಳನ್ನ ಹತ್ತಿಕ್ಕೊ ಕೆಲಸ ಮಾಡಿದ್ರು. ಮಾದ್ಯಮಗಳ ಎದುರೇ ಪ್ರತಿಭಟನೆ ಮಾಡ್ಬೇಡಿ ಅಂತ ವಾರ್ನ್ ಮಾಡಿದ್ರು. ಬೋರ್ವೇಲ್ ಅಪ್ರೂವ್ ಆಗಿದ್ದು ಸಮಸ್ಯೆ ಬಗೆಹರಿಯುತ್ತೆ ಎಂದಿದ್ದಾರೆ. ಅದೇನೆ ಇರ್ಲಿ, ಕೂಡಲೇ ಜಿಲ್ಲಾಡಳಿತವಾಗ್ಲಿ ಇಲ್ಲ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ಬಗ್ಗೆ ಎಚ್ಚೆತ್ತುಕೊಂಡು ನೀರಿನ ಸಮಸ್ಯೆ ಪರಿಹರಿಸಬೇಕಿದೆ.

ರಾಯಚೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಗಂಡ-ಹೆಂಡ್ತಿ ಜಗಳದಲ್ಲಿ ಮದ್ವೆ ಮಾಡಿಸಿದ್ದ ಬ್ರೋಕರ್ ಕೊಲೆ
ಗಂಡ-ಹೆಂಡ್ತಿ ಜಗಳದಲ್ಲಿ ಮದ್ವೆ ಮಾಡಿಸಿದ್ದ ಬ್ರೋಕರ್ ಕೊಲೆ
ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ
ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ
ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ
ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ
ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?
ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
‘ನನ್ನ ಗಂಡನ ಪರ ನಿಲ್ಲುತ್ತೇನೆ’; ಮನು ಪತ್ನಿ ಅಚಲ ನಿರ್ಧಾರ
‘ನನ್ನ ಗಂಡನ ಪರ ನಿಲ್ಲುತ್ತೇನೆ’; ಮನು ಪತ್ನಿ ಅಚಲ ನಿರ್ಧಾರ
ತಾಳಿ ಕಟ್ಟುವಷ್ಟರಲ್ಲಿ ಲವರ್ ಕಾಲ್: ಮದುವೆ ರದ್ದು ಬಗ್ಗೆ ಸಂಬಂಧಿಕರೇನಂದ್ರು?
ತಾಳಿ ಕಟ್ಟುವಷ್ಟರಲ್ಲಿ ಲವರ್ ಕಾಲ್: ಮದುವೆ ರದ್ದು ಬಗ್ಗೆ ಸಂಬಂಧಿಕರೇನಂದ್ರು?
‘ಮೌನ ಹಾಗೂ ನಗು’; ಉತ್ತರಿಸಲು ಹೊಸ ತಂತ್ರ ಕಂಡುಕೊಂಡ ಪವಿತ್ರಾ ಗೌಡ
‘ಮೌನ ಹಾಗೂ ನಗು’; ಉತ್ತರಿಸಲು ಹೊಸ ತಂತ್ರ ಕಂಡುಕೊಂಡ ಪವಿತ್ರಾ ಗೌಡ