ದಾವಣಗೆರೆಯಲ್ಲಿ ವೀರಶೈವ ಸಮಾವೇಶ ಬೆನ್ನಲ್ಲೆ ರಾಯಚೂರಿನಲ್ಲಿ ಸಮಾವೇಶ ನಡೆಸಲು ಕರೆ ಕೊಟ್ಟ ಜಯಮೃತ್ಯುಂಜಯ ಸ್ವಾಮೀಜಿ

| Updated By: ಆಯೇಷಾ ಬಾನು

Updated on: Dec 23, 2023 | 2:37 PM

ಪಂಚಮಸಾಲಿ 2ಎ ಮೀಸಲಾತಿಗಾಗಿ ಹಾಗೂ ಎಲ್ಲಾ ಲಿಂಗಾಯತರಿಗೂ ಓಬಿಸಿ ಮೀಸಲಾತಿಗಾಗಿ ರಾಯಚೂರಿನಲ್ಲಿ ಮೀಸಲಾತಿ ಸಮಾವೇಶ ನಡೆಸಲು ಜಯಮೃತ್ಯುಂಜಯ ಸ್ವಾಮೀಜಿ ಮುಂದಾಗಿದ್ದಾರೆ. ಹಾಘೂ ನಾಳೆ(ಡಿ.24) ಜಿಲ್ಲೆಯ ಲಿಂಗಸುಗೂರು ತಾಲೂಕಿನ ಯರಡೋಣಿ ಬಳಿಯ ರಾಜ್ಯ ಹೆದ್ದಾರಿ ಬಂದ್​ಗೆ ಕರೆ ನೀಡಿದ್ದಾರೆ.

ದಾವಣಗೆರೆಯಲ್ಲಿ ವೀರಶೈವ ಸಮಾವೇಶ ಬೆನ್ನಲ್ಲೆ ರಾಯಚೂರಿನಲ್ಲಿ ಸಮಾವೇಶ ನಡೆಸಲು ಕರೆ ಕೊಟ್ಟ ಜಯಮೃತ್ಯುಂಜಯ ಸ್ವಾಮೀಜಿ
ಜಯಮೃತ್ಯುಂಜಯ ಸ್ವಾಮೀಜಿ
Follow us on

ರಾಯಚೂರು, ಡಿ.23: ದಾವಣಗೆರೆಯ ವೀರಶೈವ ಲಿಂಗಾಯತ ಸಮಾವೇಶದ (Davanagere Veerashaiva-Lingayat meet) ಮಧ್ಯೆ ರಾಯಚೂರಿನಲ್ಲಿ ಮೀಸಲಾತಿ ಸಮಾವೇಶ ನಡೆಸಲು ಜಯಮೃತ್ಯುಂಜಯ ಸ್ವಾಮೀಜಿ (Jaya Mruthyunjaya Swamiji) ಕರೆ ಕೊಟ್ಟಿದ್ದಾರೆ. ಪಂಚಮಸಾಲಿ 2ಎ ಮೀಸಲಾತಿಗಾಗಿ ಹಾಗೂ ಎಲ್ಲಾ ಲಿಂಗಾಯತರಿಗೂ ಓಬಿಸಿ ಮೀಸಲಾತಿಗಾಗಿ ಸಮಾವೇಶ ನಡೆಸಲು ಮುಂದಾಗಿದ್ದಾರೆ. ಹಾಘೂ ನಾಳೆ(ಡಿ.24) ಜಿಲ್ಲೆಯ ಲಿಂಗಸುಗೂರು ತಾಲೂಕಿನ ಯರಡೋಣಿ ಬಳಿಯ ರಾಜ್ಯ ಹೆದ್ದಾರಿ ಬಂದ್​ಗೆ ಕರೆ ನೀಡಿದ್ದಾರೆ.

ನಾಳೆ ಹೆದ್ದಾರಿಯಲ್ಲೇ ಇಷ್ಟಲಿಂಗ ಪೂಜೆ ಮಾಡುವ ಮೂಲಕ ಸಮಾವೇಶಕ್ಕೆ ಚಾಲನೆ ನೀಡಲಾಗುತ್ತೆ. ಮಧ್ಯಾಹ್ನ ಯರಡೋಣದಲ್ಲೇ ಜಿಲ್ಲಾ ಮಟ್ಟದ ಮೀಸಲಾತಿ ಸಮಾವೇಶ ನಡೆಸಲಾಗುತ್ತೆ. ಸಮಾವೇಶಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ ವಿಜಯಾನಂದ ಕಾಶಪ್ಪನವರ್, ಸಂಸದ ಸಂಗಣ್ಣ ಕರಡಿ ಭಾಗಿಯಾಗಲಿದ್ದಾರೆ. ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಬೆಳಗಾವಿಯಿಂದ ಬೆಂಗಳೂರಿಗೆ ಹೋದ ಮೇಲೆ ಕಾನೂನು ತಜ್ಞರ ಸಭೆ ಕರೀತಿನಿ, ನಂತರ ನಿಮ್ಮ ಸಭೆ ಅಂತ ಭರವಸೆ ಕೊಟ್ಟಿದ್ರು. ಆ ಬಗ್ಗೆ ಸರ್ಕಾರದ ಗಮನ ಸೆಳೆಯಲು ಸಮಾವೇಶ ಮಾಡಲಾಗುತ್ತಿದೆ ಎಂದು ರಾಯಚೂರಿನಲ್ಲಿ ಜಯಮೃತ್ಯುಂಜಯ ಶ್ರೀಗಳು ತಿಳಿಸಿದರು.

ಸಿಎಂ ಸಿದ್ದರಾಮಯ್ಯ ಒಂದು ವಾರದಲ್ಲಿ ಕಾನೂನು ತಜ್ಞರ ಸಭೆ ಕರೀತಿನಿ. ಬಳಿಕ ನಿಮ್ಮ ಜೊತೆ ಮಾತನಾಡ್ತಿನಿ ಎಂದಿದ್ದರು. ಕೊಟ್ಟ ಮಾತಿನಂತೆ ಸಂಕ್ರಾತಿ ಒಳಗೆ ಸಭೆ ಕರೆದು ಅಂತಿಮ ತೀರ್ಮಾನಕ್ಕೆ ಬರಬೇಕು. ಲೋಕಸಭೆ ಚುನಾವಣೆ ಒಳಗೆ ಕೇಂದ್ರಲ್ಲಿ ಓಬಿಸಿ, ರಾಜ್ಯದಲ್ಲಿ 2ಎ ಮೀಸಲಾತಿ ಕೊಡಬೇಕು ಎಂದು ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ದಾವಣಗೆರೆ: ಶಾಮನೂರು ಶಿವಶಂಕರಪ್ಪರ ಮೆರವಣಿಗೆ ಮೂಲಕ ವೀರಶೈವ ಮಹಾಸಭಾ ಅಧಿವೇಶನಕ್ಕೆ ಚಾಲನೆ

ಇನ್ನು ಇದೇ  ವೇಳೆ ದಾವಣಗೆರೆ ವೀರಶೈವ-ಲಿಂಗಾಯತ ಸಮಾವೇಶಕ್ಕೆ ಅಧಿಕೃತ ಆಹ್ವಾನ ಇಲ್ಲದ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಜಯಮೃತ್ಯುಂಜಯ ಸ್ವಾಮೀಜಿ, ಮೀಸಲಾತಿ ಹೋರಾಟ ಶುರುವಾದ ಬಳಿಕ ನಿತ್ಯ ಪ್ರತಿ ಊರಲ್ಲಿ, ನೂರಾರು ಅಧಿವೇಶನ, ಸಮಾವೇಶ ಆಗ್ತಿವೆ ನಾನು ಹೋಗ್ತಿಲ್ಲ. 2ಎ ಮೀಸಲಾತಿಗೆ ಹೋರಾಟ ಮಾತ್ರ ಮಾಡ್ತಿದ್ದೇನೆ ಎಂದರು.

ಶಾಮನೂರು ಶಿವಶಂಕರಪ್ಪ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ ಸ್ವಾಮೀಜಿ

ಅವರ ವಿರುದ್ಧ ಎಲ್ಲಾ ಕಡೆ ಮುನಿಸಿಕೊಂಡಿದ್ದಾರೆ. ಮೀಸಲಾತಿ ಹೋರಾಟಕ್ಕೆ ಇವತ್ತಿನವರೆಗೆ ಹೋರಾಟಕ್ಕೆ ಬೆಂಬಲ ಪತ್ರ ಅವರಿಂದ ಬಂದಿಲ್ಲ. ಲಿಂಗಾಯತರಲ್ಲಿ 82 ಪರ್ಸೆಂಟ್ ನಾವೇ ಇದ್ದಿವಿ. ಕೊನೆ ಪಕ್ಷ ಎರಡು ದಿನ ನಡೆಯುವ ಕಾರ್ಯಕ್ರಮದಲ್ಲಿ ಪಂಚಮಸಾಲಿ ಹೋರಾಟಕ್ಕೆ ಬೆಂಬಲ ಕೊಡೊ ನಿರ್ಣಯಗಳು, ಎಲ್ಲಾ ಲಿಂಗಾಯತರನ್ನ ಓಬಿಸಿಗೆ ಮೀಸಲಾತಿ ಸೇರ್ಪಡೆ ನಿರ್ಣಯಗಳು, ಬಸವಣ್ಣವರನ್ನ ನಮ್ಮ ಧರ್ಮ ಗುರು ಅಂತ ಘೋಷಣೆ ನಿರ್ಣಯ ಮಾಡಬೇಕು. ಅದಕ್ಕೆ ಸಲಹೆ ಬೇಕಿದ್ರೆ ಕೊಡ್ತಿನಿ ಎಂದು ಶಾಮನೂರು ಶಿವಶಂಕರಪ್ಪ ವಿರುದ್ಧ ಪರೋಕ್ಷವಾಗಿ  ಜಯಮೃತ್ಯುಂಜಯ ಸ್ವಾಮೀಜಿ ಅಸಮಾಧಾನ ಹೊರಹಾಕಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ