AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರದ ಏಪಿಎಂಸಿ ಗೊಡೌನ್​ಗಳು ಖಾಸಗಿ ಪಾಲು, ಕೋಟ್ಯಂತರ ಮೌಲ್ಯದ ಗೊಡೌನ್ ಲಕ್ಷಕ್ಕೆ ಮಾರಾಟ, ಕಿಕ್​​ಬ್ಯಾಕ್​ ಆರೋಪ

ರಾಯಚೂರು ಏಪಿಎಂಸಿ ಅಧೀನದ ಒಂದು 1000 ಮೆಟ್ರಿಕ್ ಟನ್, ಮೂರು 500 ಮೆಟ್ರಿಕ್ ಟನ್ ಸಾಮರ್ಥ್ಯದ ಗೋದಾಮುಗಳ ಮಾರಾಟ ಮಾಡಲಾಗಿದೆ.. ಇವುಗಳನ್ನ ಶೈಲೇಶ್ವರ ಕಾಟನ್ ಟ್ರೇಡರ್ಸ್, ರೇಣುಕಾ ಟ್ರೇಡರ್ಸ್, ಶ್ರೀನಾಥ್ ಇಂಡಸ್ಟ್ರೀಸ್ ಹಾಗೂ ಲಕ್ಷ್ಮೀ ವೆಂಕಟೇಶ್ವರ ಟ್ರೇಡರ್ಸ್ ಗೆ ಮಾರಾಟ ಮಾಡಲಾಗಿದೆ -ಜೆಡಿಎಸ್ ಜಿಲ್ಲಾಧ್ಯಕ್ಷ ವಿರೂಪಾಕ್ಷ ಆರೋಪ

ಸರ್ಕಾರದ ಏಪಿಎಂಸಿ ಗೊಡೌನ್​ಗಳು ಖಾಸಗಿ ಪಾಲು, ಕೋಟ್ಯಂತರ ಮೌಲ್ಯದ ಗೊಡೌನ್ ಲಕ್ಷಕ್ಕೆ ಮಾರಾಟ, ಕಿಕ್​​ಬ್ಯಾಕ್​ ಆರೋಪ
ಸರ್ಕಾರದ ಏಪಿಎಂಸಿ ಗೊಡೌನ್​ಗಳು ಖಾಸಗಿ ಪಾಲು, ಕಿಕ್​​ಬ್ಯಾಕ್​ ಆರೋಪ
ಭೀಮೇಶ್​​ ಪೂಜಾರ್
| Edited By: |

Updated on:Jan 13, 2024 | 11:36 AM

Share

ರೈತರ ಹಿತ ಕಾಪಾಡಬೇಕಿದ್ದ ಏಪಿಎಂಸಿ, ಸರ್ಕಾರದ ಆಸ್ತಿಯನ್ನೇ ಮಾರಾಟ ಮಾಡಿರೋ ಗಂಭೀರ ಆರೋಪ ಕೇಳಿಬಂದಿದೆ. ಕೋಟಿ ಕೋಟಿ ಮೌಲ್ಯದ ಗೊಡೌನ್​ಗಳನ್ನ ಅತೀ ಕಡಿಮೆ ಬೆಲೆಗೆ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿ ಕಿಕ್ ಬ್ಯಾಕ್ ಪಡೆಯಲಾಗಿದೆ ಅನ್ನೋ ಆರೋಪ ಸಂಚಲನಕ್ಕೆ ಕಾರಣವಾಗಿದೆ. ಹೌದು.. ಇದು ರಾಯಚೂರು ನಗರದಲ್ಲಿರೊ ಏಪಿಎಂಸಿ.. ಸುತ್ತಲಿನ ಜಿಲ್ಲೆಗಳು, ಗಡಿ ಭಾಗದ ಆಂಧ್ರ, ತೆಲಂಗಾಣ ರೈತರ ಪಾಲಿಗೂ ಇದೇ ಏಪಿಎಂಸಿ ಆಧಾರವಾಗಿದೆ.. ಏಪಿಎಂಸಿ ಅಧೀನದ ಗೊಡೌನ್​ಗಳು ರೈತರು ಹೊತ್ತು ತರುವ ಭತ್ತ, ಹತ್ತಿ, ತೊಗರಿ ಸೇರಿ ವಿವಿಧ ಮಾಲುಗಳನ್ನ ಸಂರಕ್ಷಿಸಿಡಲು ಬಳಕೆ ಮಾಡಲಾಗತ್ತೆ. ಇದರ ಸಾಧಕ ಭಾದಕಗಳನ್ನ ಏಪಿಎಂಸಿ ಹಾಗೂ ಅಲ್ಲಿನ ಆಡಳಿತಾಧಿಕಾರಿಗಳು ನೋಡಿಕೊಳ್ಳಬೇಕು.. ರೈತರ ಹಿತ ಕಾಪಾಡಬೇಕಿದ್ದ ಏಪಿಎಂಸಿ ಅಧಿಕಾರಿಗಳು, ಆಡಳಿತ ವರ್ಗ ರೈತರ ಬಳಕೆಯ ಗೊಡೌನ್​ಗಳನ್ನ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿರೋ ಗಂಭೀರ ಆರೋಪ ಕೇಳಿ ಬಂದಿದೆ.

ಈ ಬಗ್ಗೆ ರಾಯಚೂರು ಜಿಲ್ಲೆ ಜೆಡಿಎಸ್​ ಜಿಲ್ಲಾಧ್ಯಕ್ಷ ವಿರೂಪಾಕ್ಷ ಅನ್ನೋರು ದಾಖಲೆಗಳ ಸಮೇತ ಏಪಿಎಂಸಿ ಕರ್ಮಕಾಂಡವನ್ನ ಬಯಲಿಗೆಳೆದಿದ್ದಾರೆ. ವ್ಯವಸ್ಥಿತವಾಗಿ ನಿಯಮಗಳನ್ನ ದುರುಪಯೋಗ ಪಡಿಸಿಕೊಂಡು ನಾಲ್ಕು ಗೊಡೌನ್​ಗಳನ್ನ ಖಾಸಗಿ ವ್ಯಕ್ತಿಗಳ ಒಡೆತನದ ಕಂಪನಿಗಳಿಗೆ ಮಾರಾಟ ಮಾಡಲಾಗಿದೆ ಅಂತ ಜೆಡಿಎಸ್ ಜಿಲ್ಲಾಧ್ಯಕ್ಷ ವಿರೂಪಾಕ್ಷ ಆರೋಪಿಸಿದ್ದಾರೆ.

ಹೌದು..ಏಪಿಎಂಸಿ ಅಧೀನದ ಒಂದು 1000 ಮೆಟ್ರಿಕ್ ಟನ್, ಮೂರು 500 ಮೆಟ್ರಿಕ್ ಟನ್ ಸಾಮರ್ಥ್ಯದ ಗೋದಾಮುಗಳ ಮಾರಾಟ ಮಾಡಲಾಗಿದೆ.. ಇವುಗಳನ್ನ ಶೈಲೇಶ್ವರ ಕಾಟನ್ ಟ್ರೇಡರ್ಸ್, ರೇಣುಕಾ ಟ್ರೇಡರ್ಸ್, ಶ್ರೀನಾಥ್ ಇಂಡಸ್ಟ್ರೀಸ್ ಹಾಗೂ ಲಕ್ಷ್ಮೀ ವೆಂಕಟೇಶ್ವರ ಟ್ರೇಡರ್ಸ್ ಗೆ ಮಾರಾಟ ಮಾಡಲಾಗಿದೆಯಂತೆ..

ಆದ್ರೆ ಈ ಗೋದಾಮುಗಳನ್ನ APMC ಕಾನೂನಿನಲ್ಲಿ ಮಾರಾಟ ಮಾಡಲು ಅವಕಾಶ ಇಲ್ಲ.. ಅಂಗಡಿ ಹಾಗೂ ಗೋದಾಮು ಹೊಂದಿಕೊಂಡಿದ್ದರೇ ಮಾತ್ರ ಮಾರಾಟ ಮಾಡಬಹುದು.. ಆದ್ರೆ ಇದೇ ನಿಯಮವನ್ನ ದುರುಪಯೋಗಪಡಿಸಿಕೊಂಡು ಈ ನಾಲ್ಕು ಗೋದಾಮುಗಳನ್ನ ಮಾರಾಟ ಮಾಡಲಾಗಿದೆಯಂತೆ. ಸುಮಾರು ಐದು ಕೋಟಿ ಮೌಲ್ಯದ ಗೋದಾಮುಗಳನ್ನ ಕೇವಲ 34 ಲಕ್ಷ, 64 ಲಕ್ಷ, 57 ಲಕ್ಷಕ್ಕೆ ಮಾರಾಟ ಮಾಡಿ ಸರಕಾರಕ್ಕೆ ಆರ್ಥಿಕ ನಷ್ಟವನ್ನುಂಟು ಮಾಡಿದೆ.

Also Read:  156 ವರ್ಷಗಳ ಸರ್ಕಾರಿ ಪ್ರಾಥಮಿಕ ಶಾಲೆ ಈಗ ಮಲ್ಟಿಪ್ಲೆಕ್ಸ್ ಪಾರ್ಕಿಂಗ್ ಗಾಗಿ ನೆಲಸಮ! ಎಲ್ಲಿ?

ಈ ಅಕ್ರಮದಲ್ಲಿ ಏಪಿಎಂಸಿ ಅಧಿಕಾರಿಗಳು, ಆಡಳಿತ ವರ್ಗ ಕಾರಣ.. ಅಧಿಕಾರಿಗಳನ್ನ ಅಮಾನತ್ತು ಮಾಡಿ ಅವರ ಆಸ್ತಿ ಮುಟ್ಟುಗೋಲು ಮಾಡಿಕೊಳ್ಳಬೇಕು ಅಂತ ಆಗ್ರಹಿಸಲಾಗಿದೆ..ಮಾರಾಟವಾದ ಒಂದೊಂದು ಗೋದಾಮಿನಿಂದ ಸುಮಾರು 3 ಕೋಟಿಯಷ್ಟು ಕಿಕ್​ಬ್ಯಾಕ್ ಪಡೆಯಲಾಗಿದೆ ಅಂತ ಜೆಡಿಎಸ್ ಜಿಲ್ಲಾಧ್ಯಕ್ಷ ವಿರೂಪಾಕ್ಷ ಆರೋಪಿಸಿದ್ದಾರೆ.. ಆದ್ರೆ ಯಾವುದೂ ಅಕ್ರಮವಾಗಿಲ್ಲ.. ಖಾಲಿ ಬಿದ್ದಿದ್ದ ಗೋದಾಮುಗಳನ್ನ ಎಸ್ಟಿಮೇಶನ್ ನಂತೆ ಮಾರಾಟ ಮಾಡಲಾಗಿದೆ ಅಂತ ಏಪಿಎಂಸಿ ಸೆಕ್ರೆಟರಿ ಆದಮ್ಮ ಹೇಳ್ತಿದ್ದಾರೆ.

ಅದೆನೇ ಇರ್ಲಿ ಈ ಪ್ರಕರಣದಲ್ಲಿ ನಿಯಮ ಉಲ್ಲಂಘನೆಯಾಗಿ, ಭ್ರಷ್ಟಾಚಾರ ನಡೆದಿದೆ ಅಂತ ವಿರೂಪಾಕ್ಷ ಖುದ್ದು ಕೃಷಿ ಮಾರುಕಟ್ಟೆ ಉತ್ಪನ್ನಗಳ ಸಚಿವ ಶಿವಾನಂದ್ ಪಾಟೀಲ್​​ಗೆ ದೂರು ನೀಡಿದ್ದಾರೆ.. ಒಂದು ವೇಳೆ ಕೂಡಲೇ ಗೋದಾಮುಗಳನ್ನ ಮತ್ತೆ ಸ್ವಾಧೀನ ಪಡಿಸಿಕೊಳ್ಳದಿದ್ರೆ, ರೈತರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಸ್ವಾಧೀನ ಪಡಿಸಿಕೊಳ್ಳಬೇಕಾಗುತ್ತೆ ಅಂತ ಹೋರಾಟಗಾರರು ಎಚ್ಚರಿಸಿದ್ದಾರೆ.. ಅದೇನೆ ಇರಲಿ ಸರ್ಕಾರ ಈ ಬಗ್ಗೆ ಎಚ್ಚೆತ್ತುಕೊಂಡು ಗೋದಾಮು ಮಾರಾಟದ ಕಿಕ್​​ಬ್ಯಾಕ್​​ ಬಗ್ಗೆ ತನಿಖೆ ನಡೆಸಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:36 am, Sat, 13 January 24

Follow Us
Bhemesh Poojar
Bhemesh Poojar

ಕಳೆದ 10 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.ಈ ಹಿಂದೆ ಬೆಂಗಳೂರು ನಗರದಲ್ಲಿ ಕ್ರೈಂ ರಿಪೋರ್ಟರ್ ಆಗಿ ಎಂಟು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದೇನೆ.ಟಿವಿ9 ಸಂಸ್ಥೆಯಲ್ಲಿ ಕಳೆದ ಎರಡು ವರ್ಷಗಳಿಂದ ರಾಯಚೂರು ಜಿಲ್ಲಾ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.ನನ್ನ ಹವ್ಯಾಸ ಕ್ರಿಕೆಟ್ ಆಡುವುದು.

Read More
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?