ಕರ್ನಾಟಕ ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್: ಬೆಳಗಾವಿ, ಸಿಕಂದರಾಬಾದ್, ಚರ್ಲಪಲ್ಲಿ ವೀಕ್ಲಿ ವಿಶೇಷ ರೈಲುಗಳು ಇನ್ನು ಕಾಯಂ!

ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ನಡುವಿನ ರೈಲ್ವೆ ಪ್ರಯಾಣಿಕರಿಗೆ ನೈಋತ್ಯ ರೈಲ್ವೆ ಸಿಹಿ ಸುದ್ದಿ ನೀಡಿದೆ. ಬೆಳಗಾವಿಯಿಂದ ಸಿಕಂದರಾಬಾದ್ ಹಾಗೂ ಚರ್ಲಪಲ್ಲಿಗೆ ಸಂಚರಿಸುವ ವಿಶೇಷ ವೀಕ್ಲಿ ರೈಲುಗಳನ್ನು ರೈಲ್ವೆ ಮಂಡಳಿಯು ಈಗ ಕಾಯಂಗೊಳಿಸಿದೆ. ಈ ಮೂಲಕ ಮೂರು ರಾಜ್ಯಗಳ ನಡುವಿನ ಸಂಪರ್ಕ ವ್ಯವಸ್ಥೆ ಮತ್ತಷ್ಟು ಬಲಗೊಂಡಿದೆ.

ಕರ್ನಾಟಕ ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್: ಬೆಳಗಾವಿ, ಸಿಕಂದರಾಬಾದ್, ಚರ್ಲಪಲ್ಲಿ ವೀಕ್ಲಿ ವಿಶೇಷ ರೈಲುಗಳು ಇನ್ನು ಕಾಯಂ!
ಸಾಂದರ್ಭಿಕ ಚಿತ್ರ
Image Credit source: istockphoto.com

Updated on: May 14, 2026 | 12:11 PM

ಬೆಂಗಳೂರು, ಮೇ 14: ಕರ್ನಾಟಕ (Karnataka), ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ನಡುವೆ ರೈಲ್ವೆ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ರೈಲ್ವೆ ಮಂಡಳಿಯು (Railway Board) ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಪ್ರಯಾಣಿಕರ ದಟ್ಟಣೆ ಮತ್ತು ಬೇಡಿಕೆಯನ್ನು ಪರಿಗಣಿಸಿ, ಈ ಹಿಂದೆ ವಿಶೇಷ ರೈಲುಗಳಾಗಿ ಸಂಚರಿಸುತ್ತಿದ್ದ ಎರಡು ಪ್ರಮುಖ ವೀಕ್ಲಿ ರೈಲುಗಳನ್ನು ಈಗ ಕಾಯಂ (Regularization) ಗೊಳಿಸಿ ಆದೇಶ ಹೊರಡಿಸಿದೆ. ಈ ಕ್ರಮವು ಬೆಳಗಾವಿ ಹಾಗೂ ಹೈದರಾಬಾದ್ ಭಾಗದ ಪ್ರಯಾಣಿಕರಿಗೆ ಪ್ರಯೋಜನಕಾರಿಯಾಗಲಿದೆ.

ಮುಖ್ಯಾಂಶಗಳು

  • ಚರ್ಲಪಲ್ಲಿ – ಬೆಳಗಾವಿ – ಚರ್ಲಪಲ್ಲಿ ವೀಕ್ಲಿ ಎಕ್ಸ್‌ಪ್ರೆಸ್ ರೈಲು ಇನ್ಮುಂದೆ ಕಾಯಂ ಆಗಿ ಸಂಚರಿಸಲಿದೆ.
  • ಸಿಕಂದರಾಬಾದ್ – ಬೆಳಗಾವಿ – ಸಿಕಂದರಾಬಾದ್ ವೀಕ್ಲಿ ಎಕ್ಸ್‌ಪ್ರೆಸ್ ರೈಲಿಗೂ ರೈಲ್ವೆ ಮಂಡಳಿಯಿಂದ ಕಾಯಂ ಮಾನ್ಯತೆ.
  • ಈ ನಿರ್ಧಾರದಿಂದ ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ ನಡುವಿನ ರೈಲ್ವೆ ಸಂಪರ್ಕ ಮತ್ತಷ್ಟು ವೃದ್ಧಿಯಾಗಲಿದೆ.

ನೈಋತ್ಯ ರೈಲ್ವೆ ಸಂಪರ್ಕ ಕ್ರಾಂತಿ

ದಕ್ಷಿಣ ನೈಋತ್ಯ ರೈಲ್ವೆಯ ಮಾಹಿತಿಯಂತೆ, ಹೈದರಾಬಾದ್‌ನ ಉಪನಗರವಾದ ಚರ್ಲಪಲ್ಲಿಯಿಂದ ಬೆಳಗಾವಿಗೆ ಸಂಚರಿಸುವ ರೈಲು ಹಾಗೂ ಸಿಕಂದರಾಬಾದ್‌ನಿಂದ ಬೆಳಗಾವಿಗೆ ಸಂಚರಿಸುವ ರೈಲುಗಳನ್ನು ಕಾಯಂಗೊಳಿಸಿರುವುದರಿಂದ ಪ್ರವಾಸಿಗರಿಗೆ ಮತ್ತು ಉದ್ಯೋಗದ ನಿಮಿತ್ತ ಸಂಚರಿಸುವವರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಮೊದಲು ಈ ರೈಲುಗಳು ಸೀಮಿತ ಅವಧಿಯ ವಿಶೇಷ ರೈಲುಗಳಾಗಿ ಸಂಚರಿಸುತ್ತಿದ್ದವು. ಈಗ ಇವುಗಳಿಗೆ ಅಧಿಕೃತ ಮಾನ್ಯತೆ ಸಿಕ್ಕಿರುವುದರಿಂದ ವೇಳಾಪಟ್ಟಿಯಲ್ಲಿ ಸ್ಥಿರತೆ ಬರಲಿದ್ದು, ಮುಂಗಡ ಕಾಯ್ದಿರಿಸುವಿಕೆಗೂ ಸಹಕಾರಿಯಾಗಲಿದೆ.

ನೈಋತ್ಯ ರೈಲ್ವೆ ಎಕ್ಸ್ ಸಂದೇಶ


ಸಿಕಂದರಾಬಾದ್ ಮತ್ತು ಬೆಳಗಾವಿ ನಡುವಿನ ರೈಲು ತೆಲಂಗಾಣ ಮಾತ್ರವಲ್ಲದೆ ಆಂಧ್ರಪ್ರದೇಶದ ಭಾಗಗಳಿಗೂ ಸಂಪರ್ಕ ಕಲ್ಪಿಸುವುದರಿಂದ ಮೂರು ರಾಜ್ಯಗಳ ನಡುವಿನ ಆರ್ಥಿಕ ಮತ್ತು ಪ್ರವಾಸೋದ್ಯಮ ಚಟುವಟಿಕೆಗಳಿಗೆ ವೇಗ ಸಿಗಲಿದೆ. ದಕ್ಷಿಣ ನೈಋತ್ಯ ರೈಲ್ವೆಯು ಈ ಬಗ್ಗೆ ತನ್ನ ಅಧಿಕೃತ ಎಕ್ಸ್ (X) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸುಧಾರಿತ ರೈಲ್ವೆ ಸಂಪರ್ಕದ ಬಗ್ಗೆ ಹರ್ಷ ವ್ಯಕ್ತಪಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us