AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧನ್ಯವಾದ ಟಿವಿ9 ವೀಕ್ಷಕರೇ.. ನೀವು ಕೊಟ್ಟ ಅಕ್ಕಿ ಬೇಳೆ ಕಿಟ್ ಅಫಜಲಪುರದತ್ತ ಹೊರಟಿತು

ಬೆಂಗಳೂರು: ಉತ್ತರ ಕರ್ನಾಟಕ ಕಳೆದ ವರ್ಷದಂತೆ ಈ ಬಾರಿಯೂ ಭಾರೀ ವರ್ಷಧಾರೆ ಕಂಡಿದ್ದು, ಮಳೆ ಪ್ರವಾಹ ಅಲ್ಲಿನ ಜನರನ್ನು ಈ ಬಾರಿಯೂ ಹೈರಾಣಗೊಳಿಸಿದೆ. ಮೊದಲೇ ಕೊರೊನಾದಿಂದ ಕಂಗೆಟ್ಟ ಮಂದಿಗೆ ವಿಪರೀತವಾದ ಮುಂಗಾರು ಮಳೆಯಿಂದಾಗಿ ಹರ್ಷಧಾರೆ ಎಂಬುದೇ ಇಲ್ಲವಾಗಿದೆ. ಇದನ್ನು ಮನಗಂಡು ನಿಮ್ಮ ನೆಚ್ಚಿನ ನಂಬರ್1ನ್ಯೂಸ್ ಚಾನೆಲ್ ಟಿವಿ9 ಕನ್ನಡ ಮತ್ತೊಮ್ಮೆ ತನ್ನ ಸಾಮಾಜಿಕ ಹೊಣೆಗಾರಿಕೆ ನಿಭಾಯಿಸಲು ಮುಂದಾಗಿದೆ. ಇದಕ್ಕೆ ಎಂದಿನಂತೆ ಟಿವಿ9 ವೀಕ್ಷಕರು ಸಹ ಕೈಜೋಡಿಸಿದ್ದಾರೆ. ಟಿವಿ9 ಕರೆಗೆ ಓಗೊಟ್ಟ ಸಹೃದಯೀ ವೀಕ್ಷಕರಿಗೆ ಧನ್ಯವಾದ ಉತ್ತರ ಕರ್ನಾಟಕದ […]

ಧನ್ಯವಾದ ಟಿವಿ9 ವೀಕ್ಷಕರೇ.. ನೀವು ಕೊಟ್ಟ ಅಕ್ಕಿ ಬೇಳೆ ಕಿಟ್ ಅಫಜಲಪುರದತ್ತ ಹೊರಟಿತು
ಸಾಧು ಶ್ರೀನಾಥ್​
|

Updated on: Oct 23, 2020 | 4:19 PM

Share

ಬೆಂಗಳೂರು: ಉತ್ತರ ಕರ್ನಾಟಕ ಕಳೆದ ವರ್ಷದಂತೆ ಈ ಬಾರಿಯೂ ಭಾರೀ ವರ್ಷಧಾರೆ ಕಂಡಿದ್ದು, ಮಳೆ ಪ್ರವಾಹ ಅಲ್ಲಿನ ಜನರನ್ನು ಈ ಬಾರಿಯೂ ಹೈರಾಣಗೊಳಿಸಿದೆ. ಮೊದಲೇ ಕೊರೊನಾದಿಂದ ಕಂಗೆಟ್ಟ ಮಂದಿಗೆ ವಿಪರೀತವಾದ ಮುಂಗಾರು ಮಳೆಯಿಂದಾಗಿ ಹರ್ಷಧಾರೆ ಎಂಬುದೇ ಇಲ್ಲವಾಗಿದೆ.

ಇದನ್ನು ಮನಗಂಡು ನಿಮ್ಮ ನೆಚ್ಚಿನ ನಂಬರ್1ನ್ಯೂಸ್ ಚಾನೆಲ್ ಟಿವಿ9 ಕನ್ನಡ ಮತ್ತೊಮ್ಮೆ ತನ್ನ ಸಾಮಾಜಿಕ ಹೊಣೆಗಾರಿಕೆ ನಿಭಾಯಿಸಲು ಮುಂದಾಗಿದೆ. ಇದಕ್ಕೆ ಎಂದಿನಂತೆ ಟಿವಿ9 ವೀಕ್ಷಕರು ಸಹ ಕೈಜೋಡಿಸಿದ್ದಾರೆ.

ಟಿವಿ9 ಕರೆಗೆ ಓಗೊಟ್ಟ ಸಹೃದಯೀ ವೀಕ್ಷಕರಿಗೆ ಧನ್ಯವಾದ ಉತ್ತರ ಕರ್ನಾಟಕದ ನೆರೆ, ಪ್ರವಾಹ ಪರಿಸ್ಥಿತಿಯಿಂದ ಬಸವಳಿದಿರುವ ಜನರಿಗೆ ನೆರವಾಗಲು ಟಿವಿ9 ತನ್ನ ವೀಕ್ಷಕರನ್ನು ಕೋರಿತ್ತು. ಟಿವಿ9 ಕರೆಗೆ ಓಗೊಟ್ಟು ಸಹೃದಯೀ ವೀಕ್ಷಕರು, ಕನ್ನಡ ಜನತೆ ಅಪಾರ ಪ್ರಮಾಣದಲ್ಲಿ ನೆರವು ನೀಡಿದ್ದಾರೆ. ಮುಖ್ಯವಾಗಿ ಅಕ್ಕಿ, ಬೇಳೆ, ಇತರೆ ಅಡುಗೆ ಸಾಮಾಗ್ರಿ ಜೊತೆಗೆ ಹಾಸಿಗೆ, ಹೊದಿಕೆ, ಕಂಬಳಿಯನ್ನೂ ಧಾರಾಳವಾಗಿ ನೀಡಿದ್ದಾರೆ.

ಟಿವಿ9 ವೀಕ್ಷಕರು ನೀಡಿರುವ ಈ ಕೊಡುಗೆಯನ್ನು ಸಂತ್ರಸ್ತರಿಗೆ ತಲುಪಿಸಲೆಂದು ಇಂದು ಟಿವಿ9 ತಂಡ ಸಾಮಾಗ್ರಿಗಳೊಂದಿಗೆ ಕಲಬುರಗಿ ಜಿಲ್ಲೆಯ ಅಫಜಲಪುರ ಪಟ್ಟಣದತ್ತ ಹೊರಟಿದೆ. ನಾಳೆ ಬೆಳಗ್ಗೆ ಅಫಜಲಪುರ ತಲುಪುತ್ತಿದ್ದಂತೆ ಅಲ್ಲಿನ ಸಂತ್ರಸ್ತರಿಗೆ ಟಿವಿ9 ವೀಕ್ಷಕರು ನೀಡಿರುವ ಸಾಮಾಗ್ರಿಗಳನ್ನು ತಲುಪಿಸಲಾಗುವುದು.

ಕಾರು ಅಪಘಾತಕ್ಕೆ 1 ವರ್ಷ: ಅಂದಿನ ಕಹಿ ಘಟನೆಯನ್ನು ಮೆಲುಕು ಹಾಕಿದ ಸಚಿವೆ
ಕಾರು ಅಪಘಾತಕ್ಕೆ 1 ವರ್ಷ: ಅಂದಿನ ಕಹಿ ಘಟನೆಯನ್ನು ಮೆಲುಕು ಹಾಕಿದ ಸಚಿವೆ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?
ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?