AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ration Card Fraud | ಸರ್ಕಾರ ಮತ್ತು ಫನಾನುಭವಿಗಳಿಗೆ ವಂಚಿಸಿದ್ದ ನ್ಯಾಯಬೆಲೆ ಅಂಗಡಿಯ ಲೈಸೆನ್ಸ್ ರದ್ದು

Ration Card Fraud | ರೇಷನ್ ಅಂಗಡಿ ಮಾಲೀಕ ಮೃತಪಟ್ಟಿದ್ದವರ ಹೆಸರಲ್ಲಿ ರೇಷನ್ ಪಡೆಯುತ್ತಿದ್ದ. ಹಾಗಾಗಿ ಹುನಗನಹಳ್ಳಿಯ ನ್ಯಾಯ ಬೆಲೆ ಅಂಗಡಿಯ ಲೈಸೆನ್ಸ್ ರದ್ದುಗೊಳಿಸಲಾಗಿದೆ.

Ration Card Fraud | ಸರ್ಕಾರ ಮತ್ತು ಫನಾನುಭವಿಗಳಿಗೆ ವಂಚಿಸಿದ್ದ ನ್ಯಾಯಬೆಲೆ ಅಂಗಡಿಯ ಲೈಸೆನ್ಸ್ ರದ್ದು
ನ್ಯಾಯಬೆಲೆ ಅಂಗಡಿ ಮಾಲೀಕ ರಾಜೇಗೌಡ
shruti hegde
| Edited By: |

Updated on: Feb 25, 2021 | 3:02 PM

Share

ಮಂಡ್ಯ: ಮೃತಪಟ್ಟಿದ್ದವರ ಹೆಸರಲ್ಲಿ ರೇಷನ್ ಕಾರ್ಡುದಾರರ ಹೆಸರಿನಲ್ಲಿ ಪಡಿತರ ಕಬಳಿಸುತ್ತಿದ್ದ ಆರೋಪದ ಮೇರೆಗೆ ಹುನಗನಹಳ್ಳಿಯ ನ್ಯಾಯ ಬೆಲೆ ಅಂಗಡಿಯ ಲೈಸೆನ್ಸ್ ರದ್ದುಗೊಳಿಸಲಾಗಿದೆ. ಮಾಲೀಕ, ಮೃತಪಟ್ಟಿದ್ದ ಫಲಾನುಭವಿಗಳ ಹೆಸರಿನಲ್ಲಿ ಬರುತ್ತಿದ್ದ ಅಕ್ಕಿಗೆ ಕನ್ನ ಹಾಕುತ್ತಿದ್ದ. ಮೃತರ ಕುಟುಂಬಗಳಿಗೆ ಅಕ್ಕಿ ವಿತರಿಸದೇ ಮೋಸ ಮಾಡುತ್ತಿದ್ದ. ಮೃತರ ಕುಟುಂಬದವರಿಗೆ ಮೃತರ ಹೆಸರಿನ್ಲಲಿರುವ ಕಾರ್ಡ್​ ರದ್ದಾಗಿದೆ ಎನ್ನುತ್ತಿದ್ದ.  ಈ ಆರೋಪದ ಹಿನ್ನೆಲೆಯಲ್ಲಿ ನ್ಯಾಯ ಬೆಲೆ ಅಂಗಡಿಯ ಪರವಾನಗಿಯನ್ನು ಅಮಾನತುಗೊಳಿಸಲಾಗಿದೆ.

ಹುನಗನಹಳ್ಳಿಯಲ್ಲಿರುವ ನ್ಯಾಯಬೆಲೆ ಅಂಗಡಿ ಮಾಲೀಕ ರಾಜೇಗೌಡ ವಿರುದ್ಧ ಹೀಗೆ 750 ಕ್ವಿಂಟಾಲ್ ಅಕ್ಕಿ ಅಕ್ರಮವಾಗಿ ಕಬಳಿಸಿರುವ ಆರೋಪ ಕೇಳೀಬಂದಿತ್ತು. 2-3 ವರ್ಷದಿಂದ ಸರ್ಕಾರದ ಕಣ್ತಪ್ಪಿಸಿ ಈತ ಮೋಸ ಮಾಡುತ್ತಿದ್ದ. ನ್ಯಾಯ ಬೆಲೆ ಅಂಗಡಿ ವ್ಯಾಪ್ತಿಗೆ 6 ಗ್ರಾಮಗಳ 900 ಪಡಿತರ ಕುಟಂಬಗಳು ಸೇರುತ್ತವೆ. 900 ಪಡಿತರ ಕುಟುಂಬಗಳ ಪೈಕಿ 300 ಕುಟುಂಬಗಳಲ್ಲಿ ಮೃತಪಟ್ಟ ಫಲಾನುವಿಗಳಿದ್ದಾರೆ ಎನ್ನುವ ಶಂಕೆ ಇದೆ.

ಕೆಂಪಮ್ಮ ಹೆಸರಿನಲ್ಲಿರುವ ನ್ಯಾಯ ಬೆಲೆ ಅಂಗಡಿಯನ್ನು ರಾಜೇಗೌಡ ನೋಡಿಕೊಳ್ಳುತ್ತಿದ್ದ. ಕರ್ನಾಟಕ ಅಗತ್ಯ ವಸ್ತುಗಳ ನಿಯಂತ್ರಣ ಆದೇಶ 2016, ತಿದ್ದುಪಡಿ ಆದೇಶ 2017ರ ಸಾಮಾನ್ಯ ಮತ್ತು ವಿಶೇಷ ಷರತ್ತು ಮತ್ತು ನಿಬಂಧನೆಗಳನ್ನು ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕಿ ಕುಮುದಾ ಶರತ್ ಅವರು ನಿನ್ನೆ (ಫೆ.24) ನ್ಯಾಯ ಬೆಲೆ ಅಂಗಡಿಯ ಲೈಸೆನ್ಸ್ ರದ್ದು ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಮಂಡ್ಯದ ಹುನಗನಹಳ್ಳಿ ಗ್ರಾಮದಲ್ಲಿ ಪಡಿತರ ಅಕ್ರಮ; ಮೃತರ ಹೆಸರಲ್ಲಿಯೂ ನಡೆದಿದೆ ವಂಚನೆ!

ಇದನ್ನೂ ಓದಿ: KIADBಯಿಂದ ರೈತರಿಗೆ ವಂಚನೆ ಆರೋಪ: ರಾಜ್ಯ ಸರ್ಕಾರಕ್ಕೆ ಪತ್ರ ಬರೆದ ವಕೀಲ