ರಾಮನಗರ: ಕನ್ಯಾಕುಮಾರಿ ಟು ಕಾಶ್ಮೀರಕ್ಕೆ ಯುವತಿಯ ಬೈಕ್ ರೈಡ್! ವಯಸ್ಸಾದ ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸದಿರಲು ಮನವಿ

ವೃದ್ಧಾಶ್ರಮ ಸಂಖ್ಯೆ ಹೆಚ್ಚಾಗಬಾರದು ಎನ್ನುವ ಆಶಯದೊಂದಿಗೆ ರಾಮನಗರದ ಚೈತ್ರ ರಾವ್ ಎಂಬುವವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಬರೊಬ್ಬರಿ 3590 ಕಿ.ಮೀ ಬೈಕ್​ ರೈಡ್​ ಕೈಗೊಂಡಿದ್ದಾರೆ. ಇದಕ್ಕೆ ಅವರ ಪೋಷಕರು ಸಪೋರ್ಟ್​ ಮಾಡಿದ್ದು, ಅವರು ಕೂಡ ರಾಮನಗರದಲ್ಲಿ ವೃದ್ಧಾಶ್ರಮ ನಡೆಸುತ್ತಿದ್ದಾರೆ.

ರಾಮನಗರ: ಕನ್ಯಾಕುಮಾರಿ ಟು ಕಾಶ್ಮೀರಕ್ಕೆ ಯುವತಿಯ ಬೈಕ್ ರೈಡ್! ವಯಸ್ಸಾದ ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸದಿರಲು ಮನವಿ
ರಾಮನಗರ ಯವತಿ ಚೈತ್ರಾ ರಾವ್​
Edited By: ಕಿರಣ್ ಹನುಮಂತ್​ ಮಾದಾರ್

Updated on: Aug 25, 2023 | 3:08 PM

ರಾಮನಗರ, ಆ.25: ಇವತ್ತೀನ ಬ್ಯುಸಿ ಜೀವನದಲ್ಲಿ ನಮ್ಮನ್ನು ಹೆತ್ತು ಹೊತ್ತು ಸಾಕಿದ ತಂದೆ-ತಾಯಿಗಳಿಗೆ (Parents)ಸಮಯ ಕೊಡಲು ಆಗುತ್ತಿಲ್ಲ. ಕೆಲವರಂತು ನಮಗೂ ಕೂಡ ವಯಸ್ಸಾಗುತ್ತದೆ ಎಂಬುದನ್ನು ಮರೆತು, ನೋಡಿಕೊಳ್ಳಲು ಆಗದೇ ವೃದ್ಧಾಶ್ರಮಕ್ಕೆ (Old Age Home) ಸೇರಿಸುತ್ತಿದ್ದಾರೆ. ಹೀಗಿರುವಾಗ ಇಲ್ಲೊರ್ವ 24 ವರ್ಷದ ಯುವತಿ ರಾಮನಗರದ (Ramanagara)  ಚೈತ್ರ ರಾವ್ ಎಂಬುವವರು ‘ಮುಪ್ಪಾದ ತಂದೆ ತಾಯಿಯನ್ನು ಅನಾಥಾಶ್ರಮಕ್ಕೆ ಸೇರಿಸಬಾರದು ಎನ್ನುವ ಆಶಯದಿಂದ ಕನ್ಯಾಕುಮಾರಿ ಟು ಕಾಶ್ಮೀರಕ್ಕೆ ಬೈಕ್ ರೈಡ್ ಕೈಗೊಂಡಿದ್ದಾರೆ. ಬರೊಬ್ಬರಿ 3590 ಕಿ.ಮೀ ಏಕಾಂಗಿಯಾಗಿ ಬೈಕ್ ಚಲಾಯಿಸಲಿದ್ದಾರೆ.

ರಾಮನಗರದಲ್ಲಿ ವೃದ್ಧಾಶ್ರಮ ನಡೆಸುತ್ತಿರುವ ಚೈತ್ರಾ ರಾವ್ ಪೋಷಕರು

ಹೌದು, ಚೈತ್ರಾ ರಾವ್ ಪೋಷಕರು ರಾಮನಗರದಲ್ಲಿ ವೃದ್ಧಾಶ್ರಮ ನಡೆಸುತ್ತಿದ್ದಾರೆ. ಹೀಗಾಗಿ ತಂದೆ ತಾಯಿಯ ಆಶಯವನ್ನು ಎತ್ತಿ ಹಿಡಿಯಲು ಕನ್ಯಕುಮಾರಿಯಿಂದ ಕಾಶ್ಮೀರದ ವರೆಗೆ ಬೈಕ್ ರೈಡ್ ಮಾಡಲು ಸಜ್ಜಾಗಿದ್ದಾರೆ. ಅವರು ಸಂಚರಿಸುವ ಮಾರ್ಗ ಹೀಗಿದೆ. ಕನ್ಯಾಕುಮಾರಿಯಿಂದ ಸೇಲಂ(460km),‌ ಸೇಲಂ ನಿಂದ ಚಿತ್ರದುರ್ಗ(409km), ಚಿತ್ರದುರ್ಗ ಸೋಲಾಪುರ(420), ಸೋಲಾಪುರದಿಂದ ಧುಲೆ(460km), ಧುಲೆ- ಟು‌ಧೋನ್ಸಾವಸ್ (340km), ಧೋನ್ಸಾವಾಸ್ – ಕಿಶನಗಡ(412km), ಕಿಶನಗಡ ಟು ಖನೌರಿ(473km), ಖನೌರಿ ಟು ಉಧಮಪುರ(441), ಉಧಮ್ ಪುರ – ಶ್ರೀನಗರ(182) ತಲುಪಲಿದ್ದಾರೆ.

ಇದನ್ನೂ ಓದಿ:Old Man’s Story: ಒಬ್ಬ ಮಗ ಐಎಎಸ್, ಇನ್ನೊಬ್ಬ ಬ್ಯುಸಿನೆಸ್; ವೃದ್ಧಾಶ್ರಮಕ್ಕೆ ಬಂದು ಕಣ್ಣೀರಿಟ್ಟ ವೃದ್ಧ; ಕರುಳುಹಿಂಡುತ್ತದೆ ಇವರ ಕಥೆ

ನಾಳೆ ಬೆಳಿಗ್ಗೆಯಿಂದಲೇ ಕನ್ಯಾಕುಮಾರಿಯಿಂದ ಬಿಡಲಿರೋ ಚೈತ್ರಾ ರಾವ್​

ಇನ್ನು ತಂದೆ-ತಾಯಿಗಳ ಆಶಯವನ್ನು ಸಾಕಾರಗೊಳಿಸಲು ಚೈತ್ರಾ ರಾವ್​ ಅವರು ರಾಯಲ್ ಎನ್​ಫೀಲ್ಡ್ ಜೊತೆ ನಾಳೆ ಬೆಳಿಗ್ಗೆಯಿಂದಲೇ ಕನ್ಯಾಕುಮಾರಿಯಿಂದ ಸವಾರಿ ಮಾಡುವುದಕ್ಕೆ ರೆಡಿಯಾಗಿದ್ದಾರೆ. ಇನ್ನು ಕರ್ನಾಟಕದಿಂದ ಕನ್ಯಾಕುಮಾರಿ ವರೆಗೂ ರೈಲಿನಲ್ಲಿ‌ ಪ್ರಯಾಣ ಬೆಳಸಿದ್ದು, ನಾಳೆ(ಆ.26) ಅಲ್ಲಿಂದ ಕಾಶ್ಮೀರ ಕಡೆ ಏಕಾಂಗಿಯಾಗಿ ಬೈಕ್ ಸವಾರಿ ಆರಂಭಿಸಲಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Syed Nizamuddin

ಕಳೆದ ನಾಲ್ಕು ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, ಹಲವು ಬಗೆಯ ಡಿಪಾರ್ಟ್ಮೆಂಟ್ ಗಳಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಪ್ರಥಮದಲ್ಲಿ ಟಿವಿ9 ಮುಖ್ಯ ಕಚೇರಿಯಲ್ಲಿಯೇ ಕೆಲಸ ಮಾಡಿ,‌ಮೆಟ್ರೋ,ಪೊಲಿಟಿಕಲ್, ಕ್ರೈಂ ಹಾಗೂ ಲೈಫ್ ಸ್ಟೈಲ್ ನ ವಿಭಾಗದಲ್ಲೂ ಕೆಲಸ ಮಾಡುವ ಅವಕಾಶ ದೊರಕಿತ್ತು. ಕೊರೊನಾ ಸಂದರ್ಭದಲ್ಲಿ ಮಾಡಿದ ಕೇಸ್ ಸ್ಟಡಿಸ್, ನಂತರ ಬ್ಲ್ಯಾಕ್ ಫಂಗಸ್ ಗಾಗಿ ಒಂದು ತಿಂಗಳು ವಿಜಯಪುರ ಜಿಲ್ಲೆ, ಬಳಿಕ ಎರಡು ವರ್ಷ ಆನೆಕಲ್‌ ನಲ್ಲಿ ಕೆಲಸ ಮಾಡಿ ಕಳೆದ ಆರು ತಿಂಗಳಿನಿಂದ ರಾಮನಗರ ಜಿಲ್ಲೆಯಲ್ಲಿ ಕೆಲಸ ನಿಭಾಯಿಸುತ್ತಿದ್ದೇನೆ. ಖುಷಿ ಕೊಟ್ಟ ಸಾವಿರಾರು ಸುದ್ದಿಗಳ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಿಟ್ ಚಾಟ್ ಬಹಳ ತೃಪ್ತಿ ತಂದ ಹೈಲೇಟ್.. ಆನೇಕಲ್‌ ನ ಡ್ರಗ್ಸ್ ಸ್ಟೋರಿ, ಪರಪ್ಪನ ಅಗ್ರಹಾರದ ಆಫಿಸರ್ಸ್ ಸ್ಕ್ಯಾಂಡಲ್, ಎಲೆಕ್ಟ್ರಾನಿಕ್ ಸಿಟಿ ಯ ಟೋಯಿಂಗ್ ಬಂದ್, ಸರ್ಜಾಪುರದ ಪ್ರವಾಹ ಸಂದರ್ಭ,ಹೀಗೆ ಹತ್ತು ಹಲವು ಸುದ್ದಿಗಳು ಖಷಿ ಕೊಟ್ಟಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಹಲವು ರಾಜ್ಯಗಳಿಗೆ ತೆರಳಿ ಹಿಂದಿ‌ಹಾಗೂ ಕನ್ನಡಕ್ಕೆ ಕೆಲಸ ಮಾಡೋ ಅವಕಾಶ ನನ್ನ ಇನ್ಪುಟ್ ಟೀಂ ಕೊಟ್ಟಿದೆ. ಇನ್ನು ಹವ್ಯಾಸ ಗ್ಗೆ ಹೇಳೋದಾದ್ರೆ, ಸಂಗೀತ,ಕೇಳೊದು,ಹಾಡೋದು ಇಷ್ಟ. ಕ್ರೀಡೆ ವಿಚಾರಕ್ಕೆ ಬಂದ್ರೆ ಕ್ರಿಕೆಟ್ ಅಂಡ್ ಕಬ್ಬಡ್ಡಿ ಸ್ವಿಮಿಂಗ್. ಸ

Read More
Follow Us