ಪ್ರತಿ ತಿಂಗಳ 2ನೇ ಮತ್ತು ಕೊನೇ ಶನಿವಾರ ಕನಕಪುರದ ಜನರಿಗೆ ಮೀಸಲಿಡುತ್ತೇನೆ: ಡಿಕೆ ಶಿವಕುಮಾರ್​​

ಒಬ್ಬ ನಾಯಕರು ಒಂದು ಸ್ಟೇಟ್ಮೆಂಟ್ ಕೊಟ್ಟಿದ್ದಾರೆ, ರಾಮನಗರ ಹೆಸರು ತೆಗೆದರೆ ಸರ್ವನಾಶ ಆಗುತ್ತೆ ಅಂದಿದ್ದಾರೆ. ಹಾಗಾದ್ರೆ ಅಷ್ಟು ಮಂತ್ರಿಗಳೂ, ಸರ್ಕಾರ ಸರ್ವನಾಶ ಆಗಬೇಕಾ?. ಇದಕ್ಕೆ ಉತ್ತರ ಕೊಡಬೇಕು ಎಂದು ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.

ಪ್ರತಿ ತಿಂಗಳ 2ನೇ ಮತ್ತು ಕೊನೇ ಶನಿವಾರ ಕನಕಪುರದ ಜನರಿಗೆ ಮೀಸಲಿಡುತ್ತೇನೆ: ಡಿಕೆ ಶಿವಕುಮಾರ್​​
ಡಿಕೆ ಶಿವಕುಮಾರ್
Edited By: ಕಿರಣ್ ಹನುಮಂತ್​ ಮಾದಾರ್

Updated on: Jul 27, 2024 | 10:39 PM

ರಾಮನಗರ, ಜು.27: ಕನಕಪುರದ ಜನರಿಗೆ ನನ್ನನ್ನು ಭೇಟಿ ಆಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತಿಂಗಳಿನ 2ನೇ ಶನಿವಾರ ಹಾಗೂ ಕೊನೇ ಶನಿವಾರ ಅವರಿಗಾಗಿಯೇ ಮೀಸಲಿಡುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್​(D. K. Shivakumar) ಹೇಳಿದರು. ಇಂದು(ಜು.27) ರಾಮನಗರ(Ramanagar)ದಲ್ಲಿ ಮಾತನಾಡಿದ ಅವರು, ‘ಒಬ್ಬ ನಾಯಕರು ಒಂದು ಸ್ಟೇಟ್ಮೆಂಟ್ ಕೊಟ್ಟಿದ್ದಾರೆ, ರಾಮನಗರ ಹೆಸರು ತೆಗೆದರೆ ಸರ್ವನಾಶ ಆಗುತ್ತೆ ಅಂದಿದ್ದಾರೆ. ಹಾಗಾದ್ರೆ ಅಷ್ಟು ಮಂತ್ರಿಗಳೂ, ಸರ್ಕಾರ ಸರ್ವನಾಶ ಆಗಬೇಕಾ?. ಇದಕ್ಕೆ ಉತ್ತರ ಕೊಡಬೇಕು ಎಂದು ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ಕಿಡಿಕಾರಿದ್ದಾರೆ.

‘ನಮ್ಮ ಕನಕಪುರದಲ್ಲಿ ಇರುವ ಕಾವೇರಿ ಉದ್ಯಾನವನ‌ ಇಡೀ ರಾಜ್ಯದಲ್ಲೂ ಇಲ್ಲ. ಇಲ್ಲಿನ ಮಕ್ಕಳ ಪ್ರತಿಭೆ ತೋರಿಸೋದಕ್ಕೂ ಜಾಗ ಇರಲಿಲ್ಲ. ಟೆಂಟ್‌ನಲ್ಲಿ ಮಕ್ಕಳ ಕಾರ್ಯಕ್ರಮ ನಡಿದಿತ್ತು. ಆಗ ಕನಕಪುರ ನನ್ನ ಬಳಿ ಇರಲಿಲ್ಲ. ನಾನು ಬಂದ ಮೇಲೆ ಕನಕಪುರ ಏನಾಗಿದೆ ಎಂಬುದು ನಿಮ್ಮ ಮುಂದಿದೆ. ದೇವೆಗೌಡರು ,ಜಾಫರ್ ಶರೀಫ್ ,‌ ಕುಮಾರಸ್ವಾಮಿ ಸಂಸದರಾಗಿದ್ದಾಗ ಕನಕಪುರ ಲೋಕಸಭೆ ಆಗಿತ್ತು. ಕನಕಪುರ ಹೆಸರು ತೆಗೆದು ಇದನ್ನು ಬೆಂಗಳೂರು ಗ್ರಾಮಾಂತರ ಎಂದು ಮಾಡಿದ್ದೇವು.

ಇದನ್ನೂ ಓದಿ:ಡಿಸಿಎಂ ಡಿಕೆ ಶಿವಕುಮಾರ್​​ರಿಂದಲೇ ಡ್ಯಾಂಗಳು ತುಂಬಿ ತುಳುಕುತ್ತಿವೆ: ಕುಮಾರಸ್ವಾಮಿ ವ್ಯಂಗ್ಯ

ಇದು ಬೆಂಗಳೂರು ಸಿಟಿ, ಕೆಂಪೇಗೌಡ ಕಟ್ಟಿದ್ದಂತಹ ಬೆಂಗಳೂರು ಜಿಲ್ಲೆ ಇದು. ಆನೇಕಲ್,‌ ದೇವನಹಳ್ಳಿ, ಮಾಗಡಿ, ರಾಮನಗರ ಇವೆಲ್ಲವೂ ಬೆಂಗಳೂರೇ. ನನ್ನ ಹೆಸರು ದೊಡ್ಡ ಆಲಹಳ್ಳಿ‌ ಕೆಂಪೇಗೌಡ ಶಿವಕುಮಾರ್. ನಾವು ಬೆಂಗಳೂರಿನವರು. ಎಚ್ ಡಿ ದೇವೇಗೌಡರ ಹೆಸರೇನು?, ಹರದನಹಳ್ಳಿ, ದೊಡ್ಡೇಗೌಡರು ದೇವೇಗೌಡರು. ತಂದೆ-ತಾಯಿ‌ ಮಾತ್ರ ಇಲ್ಲಿ ಕಷ್ಟದಲ್ಲಿ ಕೆಲಸ ಮಾಡ್ತಾ ಇದ್ದಾರೆ. ಅವರ ಮಕ್ಕಳು ಬೆಂಗಳೂರಿನಲ್ಲಿದ್ದಾರೆ. ಅದಕ್ಕೆ ಅವರ ಮಕ್ಕಳು ಇಲ್ಲೇ ಇರಲಿ, ಇಲ್ಲೇ‌ ಕೆಲಸ‌ ಮಾಡಲಿ ಎಂದು ನಾವು ಪ್ರಯತ್ನ‌ ಮಾಡುತ್ತಾ ಇದ್ದೇವೆ.

ಮಿಸ್ಟರ್ ಕುಮಾರಸ್ವಾಮಿ, ಮಾಜಿ ಪ್ರಧಾನಿ ಹೇಳಿದ ಮಾತಿದು, ‘ವಿಶ್ವದ ನಾಯಕರು ಮೊದಲು ದೆಹಲಿಗೆ ಬರುತ್ತಾ ಇದ್ದರೂ, ದೆಹಲಿ, ಕಲ್ಕತ್ತಾ, ಚೆನೈ, ಬೆಂಗಳೂರಿಂದ ಹೋಗುತ್ತಿದ್ದರು. ಬಹಳ‌ ದೂರದ ಆಲೋಚನೆ‌ ಮಾಡಿ, ಹೊಸ ರೂಪ ಕೊಟ್ಟು ಮಾಡುತ್ತಿದ್ದೇವೆ. ರಾಮನಗರ ಹಾಗೇ ಇರುತ್ತೆ. ಇದು‌ ಎಲ್ಲೂ ಹೋಗಲ್ಲ, ಮೊದಲು ಕ್ಲೋಸ್ ಪೇಟೆ ಎಂದು ಇತ್ತು. ಆಮೇಲೆ‌ ರಾಮನಗರ ಅಂತಾಯ್ತು. ರಾಮನಗರ ಅಂತರಾಷ್ಟ್ರೀಯ ಮಟ್ಟದಲ್ಲಿ ಆಗಬೇಕು ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Syed Nizamuddin

ಕಳೆದ ನಾಲ್ಕು ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, ಹಲವು ಬಗೆಯ ಡಿಪಾರ್ಟ್ಮೆಂಟ್ ಗಳಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಪ್ರಥಮದಲ್ಲಿ ಟಿವಿ9 ಮುಖ್ಯ ಕಚೇರಿಯಲ್ಲಿಯೇ ಕೆಲಸ ಮಾಡಿ,‌ಮೆಟ್ರೋ,ಪೊಲಿಟಿಕಲ್, ಕ್ರೈಂ ಹಾಗೂ ಲೈಫ್ ಸ್ಟೈಲ್ ನ ವಿಭಾಗದಲ್ಲೂ ಕೆಲಸ ಮಾಡುವ ಅವಕಾಶ ದೊರಕಿತ್ತು. ಕೊರೊನಾ ಸಂದರ್ಭದಲ್ಲಿ ಮಾಡಿದ ಕೇಸ್ ಸ್ಟಡಿಸ್, ನಂತರ ಬ್ಲ್ಯಾಕ್ ಫಂಗಸ್ ಗಾಗಿ ಒಂದು ತಿಂಗಳು ವಿಜಯಪುರ ಜಿಲ್ಲೆ, ಬಳಿಕ ಎರಡು ವರ್ಷ ಆನೆಕಲ್‌ ನಲ್ಲಿ ಕೆಲಸ ಮಾಡಿ ಕಳೆದ ಆರು ತಿಂಗಳಿನಿಂದ ರಾಮನಗರ ಜಿಲ್ಲೆಯಲ್ಲಿ ಕೆಲಸ ನಿಭಾಯಿಸುತ್ತಿದ್ದೇನೆ. ಖುಷಿ ಕೊಟ್ಟ ಸಾವಿರಾರು ಸುದ್ದಿಗಳ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಿಟ್ ಚಾಟ್ ಬಹಳ ತೃಪ್ತಿ ತಂದ ಹೈಲೇಟ್.. ಆನೇಕಲ್‌ ನ ಡ್ರಗ್ಸ್ ಸ್ಟೋರಿ, ಪರಪ್ಪನ ಅಗ್ರಹಾರದ ಆಫಿಸರ್ಸ್ ಸ್ಕ್ಯಾಂಡಲ್, ಎಲೆಕ್ಟ್ರಾನಿಕ್ ಸಿಟಿ ಯ ಟೋಯಿಂಗ್ ಬಂದ್, ಸರ್ಜಾಪುರದ ಪ್ರವಾಹ ಸಂದರ್ಭ,ಹೀಗೆ ಹತ್ತು ಹಲವು ಸುದ್ದಿಗಳು ಖಷಿ ಕೊಟ್ಟಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಹಲವು ರಾಜ್ಯಗಳಿಗೆ ತೆರಳಿ ಹಿಂದಿ‌ಹಾಗೂ ಕನ್ನಡಕ್ಕೆ ಕೆಲಸ ಮಾಡೋ ಅವಕಾಶ ನನ್ನ ಇನ್ಪುಟ್ ಟೀಂ ಕೊಟ್ಟಿದೆ. ಇನ್ನು ಹವ್ಯಾಸ ಗ್ಗೆ ಹೇಳೋದಾದ್ರೆ, ಸಂಗೀತ,ಕೇಳೊದು,ಹಾಡೋದು ಇಷ್ಟ. ಕ್ರೀಡೆ ವಿಚಾರಕ್ಕೆ ಬಂದ್ರೆ ಕ್ರಿಕೆಟ್ ಅಂಡ್ ಕಬ್ಬಡ್ಡಿ ಸ್ವಿಮಿಂಗ್. ಸ

Read More
Follow Us