AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಟ್ಟೆ ಒಗೆಯುವ ವಿಚಾರದಲ್ಲಿ ತಾಯಿ ಜತೆ ಜಗಳವಾಡಿ, ತನ್ನದೇ ಕಂದನನ್ನು ಕಣ್ವ ಹೊಳೆಗೆ ಬಿಸಾಡಿ ಸಾಯಿಸಿದ ತಾಯಿ

ಮೂರು ವರ್ಷಗಳ‌ ಹಿಂದೆ ದೊಡ್ಡ ಆಲಹಳ್ಳಿ ಯುವಕನ‌ ಜೊತೆ ಭಾಗ್ಯಳ ಮದುವೆ ಮಾಡಿಕೊಡಲಾಗಿತ್ತು. ಗಂಡನನ್ನು ಬಿಟ್ಟು ಭಾಗ್ಯ ತವರಿಗೆ ಬಂದು ನೆಲೆಸಿದ್ದಳು. ಅದೇ ಊರಿನ‌ ಶ್ರೀನಿವಾಸನ ಜೊತೆ ಸಂಬಂಧ ಆಗಿತ್ತು. ಮೃತಪಟ್ಟಿರುವ ಮಗು ದೇವರಾಜ್, ಭಾಗ್ಯ ಮತ್ತು ಶ್ರೀನಿವಾಸ್ ಮಗ.

ಬಟ್ಟೆ ಒಗೆಯುವ ವಿಚಾರದಲ್ಲಿ ತಾಯಿ ಜತೆ ಜಗಳವಾಡಿ, ತನ್ನದೇ ಕಂದನನ್ನು ಕಣ್ವ ಹೊಳೆಗೆ ಬಿಸಾಡಿ ಸಾಯಿಸಿದ ತಾಯಿ
ಬಟ್ಟೆ ಒಗೆಯುವ ವಿಚಾರದಲ್ಲಿ ಮಗುವಿನ ಜೊತೆ ಜಗಳವಾಡಿ, ಸಾಯಿಸಿದ ತಾಯಿ
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Edited By: |

Updated on:Dec 20, 2023 | 11:32 AM

Share

ರಾಮನಗರ, ಡಿಸೆಂಬರ್​ 20: ಬಟ್ಟೆ ತೊಳೆಯುವ ವಿಚಾರದಲ್ಲಿ ತಾನೇ ಎಲ್ಲ ಕೆಲಸ ಮಾಡಬೇಕಾ ಎಂದು ಹೆತ್ತಮ್ಮನ ಜೊತೆ ಗಲಾಟೆ ಮಾಡಿಕೊಂಡ ಯುವ ತಾಯಿಯೊಬ್ಬಳು, ತನ್ನ ಮಗುವನ್ನೇ  ಜಲಾಶಯಕ್ಕೆ ಹಾಕಿ, ಕೊಂದಿರುವ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ (Channapatna, Ramanagara) ಕಾಲಿಕೆರೆ ಗ್ರಾಮದಲ್ಲಿ ನಡೆದಿದೆ. ಒಂದು ವರ್ಷ ಮೂರು ತಿಂಗಳ ಮಗು (Toddler) ದೇವರಾಜ್ ಸಾವಿಗೀಡಾಗಿರುವ ನತದೃಷ್ಟ ಮಗು. ತನ್ನ ಮಗುವನ್ನೇ ಕೊಂದ ತಾಯಿ ಭಾಗ್ಯ (21)‌ಳನ್ನು ಪೊಲೀಸರು​ ವಶಕ್ಕೆ ಪಡೆದಿದ್ದಾರೆ.

ಬಟ್ಟೆ ತೊಳೆಯುವ ವಿಚಾರದಲ್ಲಿ ತಾಯಿಯ ಜೊತೆ ಜಗಳವಾಡಿದ್ದಳಂತೆ ಆರೋಪಿ ತಾಯಿ. ಆ ವೇಳೆ ಸಿಟ್ಟಿನಿಂದ ತಾಯಿ ಭಾಗ್ಯ ತನ್ನ ಆ ಅಬೋಧ ಕಂದಮ್ಮನನ್ನು ಕಣ್ವ ಹೊಳೆಗೆ (Kanva Reservoir) ಬಿಸಾಡಿದ್ದಾಳೆ. ಬಳಿಕ ಕಾಲಿಕೆರೆ ದೇವಸ್ಥಾನದ ಬಳಿ ಬಂದು ಭಾಗ್ಯ ರೋದಿಸಿದ್ದಾಳೆ. ತನ್ನ ಮಗುವನ್ನು ಹೊಳೆಗೆ ಹಾಕಿರುವ ಬಗ್ಗೆ ಸ್ವತಃ ಭಾಗ್ಯಳೇ ಅಳುತ್ತಾ ಹೇಳಿಕೊಂಡಳಂತೆ.

ಸ್ಥಳೀಯರು ಕೂಡಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ನಿನ್ನೆ ಮಂಗಳವಾರ ರಾತ್ರಿ 7.30‌ರ‌ ಸುಮಾರಿಗೆ ಕಂದನನ್ನು ಬಿಸಾಡಿದ್ದಾಗಿ ಭಾಗ್ಯ ಹೇಳಿಕೊಂಡಿದ್ದಾಳೆ. ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ತಾಯಿ ಭಾಗ್ಯಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ವಿಚಿತ್ರ ಸ್ವಭಾವದ ಯುವ ಹೆಣ್ಣುಮಗಳು ಭಾಗ್ಯಳ ಜೀವನ ಹೀಗಿತ್ತು…

ಮೂರು ವರ್ಷಗಳ‌ ಹಿಂದೆ ದೊಡ್ಡ ಆಲಹಳ್ಳಿ ಯುವಕನ‌ ಜೊತೆ ಭಾಗ್ಯಳ ಮದುವೆ ಮಾಡಿಕೊಡಲಾಗಿತ್ತು. ಗಂಡನನ್ನು ಬಿಟ್ಟು ಭಾಗ್ಯ ತವರಿಗೆ ಬಂದು ನೆಲೆಸಿದ್ದಳು. ತಾಯಿ ಊರು ಕಾಲಿಕೆರೆಯಲ್ಲಿಯೇ ಭಾಗ್ಯ ವಾಸಿಸುತ್ತಿದ್ದಳು. ಅದೇ ಊರಿನ‌ ಶ್ರೀನಿವಾಸನ ಜೊತೆ ಸಂಬಂಧ ಆಗಿತ್ತು. ಮೃತಪಟ್ಟಿರುವ ಮಗು ದೇವರಾಜ್, ಭಾಗ್ಯ ಮತ್ತು ಶ್ರೀನಿವಾಸ್ ಮಗ.

ಇದನ್ನೂ ಓದಿ: ಕೊಳ್ಳೆಗಾಲ ಒಂಟಿ ಮಹಿಳೆ ಸಾವು ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್, ಕೊಲೆ ಹಿಂದಿನ ದಿನ ಮಗಳನ್ನು ಬಾಲಮಂದಿರಕ್ಕೆ ಸೇರಿಸಿದ್ದ ತಾಯಿ, ಯಾಕೆ?

ಭಾಗ್ಯ ತನ್ನ ತಾಯಿಯ ಜೊತೆ ಆಗಾಗ ಜಗಳವಾಡುತ್ತಿದ್ದಳಂತೆ. ಶ್ರೀನಿವಾಸನ‌ ಜೊತೆ ಅನೈತಿಕ‌ ಸಂಬಂಧ ಇಟ್ಟುಕೊಂಡಿದ್ದ‌ ಭಾಗ್ಯ, ಆತನ ಜೊತೆಯೂ ಸತತವಾಗಿ ಜಗಳವಾಡುತ್ತಿದ್ದ‌ಳಂತೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:16 am, Wed, 20 December 23

Follow Us
ಅಶ್ಲೀಲ ಕಮೆಂಟ್ ಮಾಡಿದವರಿಗೆ 7 ವರ್ಷ ಜೈಲು ಶಿಕ್ಷೆ ಸಾಧ್ಯತೆ: ಶಾಕಿಂಗ್ ವಿಷಯ
ಅಶ್ಲೀಲ ಕಮೆಂಟ್ ಮಾಡಿದವರಿಗೆ 7 ವರ್ಷ ಜೈಲು ಶಿಕ್ಷೆ ಸಾಧ್ಯತೆ: ಶಾಕಿಂಗ್ ವಿಷಯ
ಇದೆಂಥಾ ಪ್ರಶ್ನೆ? ಪತ್ರಕರ್ತರ ಪ್ರಶ್ನೆಗೆ ಕೆರಳಿದ ಇಶಾನ್ ಕಿಶನ್
ಇದೆಂಥಾ ಪ್ರಶ್ನೆ? ಪತ್ರಕರ್ತರ ಪ್ರಶ್ನೆಗೆ ಕೆರಳಿದ ಇಶಾನ್ ಕಿಶನ್
ಒಳಮೀಸಲಾತಿ ಜಟಾಪಟಿ: ಸಭೆಯಲ್ಲಿ ಮಹತ್ವದ ತೀರ್ಮಾನ
ಒಳಮೀಸಲಾತಿ ಜಟಾಪಟಿ: ಸಭೆಯಲ್ಲಿ ಮಹತ್ವದ ತೀರ್ಮಾನ
ಅಶ್ಲೀಲ ಕಮೆಂಟ್ ಪ್ರಕರಣ: ರಮ್ಯಾ ಹಠ ಹಿಡಿದು ಕೇಸ್ ಹಾಕಿದ್ದಕ್ಕೆ ಇದೇ ಕಾರಣ
ಅಶ್ಲೀಲ ಕಮೆಂಟ್ ಪ್ರಕರಣ: ರಮ್ಯಾ ಹಠ ಹಿಡಿದು ಕೇಸ್ ಹಾಕಿದ್ದಕ್ಕೆ ಇದೇ ಕಾರಣ
ಆರ್​ ಅಶೋಕ್‌ ಹೇಳಿದ ಮನಕಲಕುವ ಸತ್ಯ ಘಟನೆಗೆ ಸದನವೇ ನಿಶ್ಯಬ್ದ
ಆರ್​ ಅಶೋಕ್‌ ಹೇಳಿದ ಮನಕಲಕುವ ಸತ್ಯ ಘಟನೆಗೆ ಸದನವೇ ನಿಶ್ಯಬ್ದ
ಯುಗಾದಿ ವರ್ಷ ಭವಿಷ್ಯ; ಈ ರಾಶಿಗೆ ಆರ್ಥಿಕ ಪ್ರಗತಿ ಮತ್ತು ಆಕಸ್ಮಿಕ ಧನಯೋಗ
ಯುಗಾದಿ ವರ್ಷ ಭವಿಷ್ಯ; ಈ ರಾಶಿಗೆ ಆರ್ಥಿಕ ಪ್ರಗತಿ ಮತ್ತು ಆಕಸ್ಮಿಕ ಧನಯೋಗ
ಅಶ್ಲೀಲ ಕಮೆಂಟ್ ಕೇಸು, ನ್ಯಾಯಾಲಯಕ್ಕೆ ಬಂದ ನಟಿ ರಮ್ಯಾ: ವಿಡಿಯೋ
ಅಶ್ಲೀಲ ಕಮೆಂಟ್ ಕೇಸು, ನ್ಯಾಯಾಲಯಕ್ಕೆ ಬಂದ ನಟಿ ರಮ್ಯಾ: ವಿಡಿಯೋ
ಯುಗಾದಿ ವರ್ಷ ಭವಿಷ್ಯ; ವೃಶ್ಚಿಕ ರಾಶಿಗೆ ಈ ವರ್ಷ ಹೇಗಿರಲಿದೆ?
ಯುಗಾದಿ ವರ್ಷ ಭವಿಷ್ಯ; ವೃಶ್ಚಿಕ ರಾಶಿಗೆ ಈ ವರ್ಷ ಹೇಗಿರಲಿದೆ?
ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಅಂತಾರಾಷ್ಟ್ರೀಯ ಮಟ್ಟದ ಬಸ್​ ನಿಲ್ದಾಣ
ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಅಂತಾರಾಷ್ಟ್ರೀಯ ಮಟ್ಟದ ಬಸ್​ ನಿಲ್ದಾಣ
ಶಾರ್ಟ್​ ಸರ್ಕೂಟ್​ನಿಂದ ಹೊತ್ತಿ ಉರಿದ ಕೊಳ್ಳೇಗಾಲ ಸಿಪಿಐ ಕಚೇರಿ!
ಶಾರ್ಟ್​ ಸರ್ಕೂಟ್​ನಿಂದ ಹೊತ್ತಿ ಉರಿದ ಕೊಳ್ಳೇಗಾಲ ಸಿಪಿಐ ಕಚೇರಿ!