ರೈತರನ್ನು ಅಟ್ಟಾಡಿಸಿಕೊಂಡು ಹೋದ 30 ಕಾಡಾನೆಗಳ ಹಿಂಡು: ಅನ್ನದಾತ ಬಚಾವ್

ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಗ್ರಾಮದ ಬಳಿ ಬೈಕ್​ನಲ್ಲಿ ತೆರಳುತ್ತಿದ್ದ ರೈತರಿಬ್ಬರನ್ನು ಸುಮಾರು 30 ಆನೆಗಳ ಹಿಂಡು ಹಿಂಬಾಲಿಸಿದ್ದು, ಓಡಿ ಹೋಗಿ ಜೀವ ರಕ್ಷಣೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ರೈತರಿಬ್ಬರು ಬೈಕ್ ಬಿಟ್ಟು ಬೆಟ್ಟದ ಕಡೆ ಓಡಿ ಹೋಗಿ ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ. ಇತ್ತ ಸಿಟ್ಟಿನಲ್ಲಿ ಕಾಡಾನೆಗಳ ಹಿಂಡು ಬೈಕ್ ಪುಡಿಗಟ್ಟಿದೆ.

ರೈತರನ್ನು ಅಟ್ಟಾಡಿಸಿಕೊಂಡು ಹೋದ 30 ಕಾಡಾನೆಗಳ ಹಿಂಡು: ಅನ್ನದಾತ ಬಚಾವ್
ಕಾಡಾನೆ ದಾಳಿಗೆ ಬೈಕ್​ ಪುಡಿ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Dec 29, 2023 | 10:24 PM

ರಾಮನಗರ, ಡಿಸೆಂಬರ್​ 29: ಜಿಲ್ಲೆಯ ಕನಕಪುರ ತಾಲೂಕಿನ ಗ್ರಾಮದ ಬಳಿ ಬೈಕ್​ನಲ್ಲಿ ತೆರಳುತ್ತಿದ್ದ ರೈತರಿಬ್ಬರನ್ನು ಸುಮಾರು 30 ಆನೆಗಳ (elephant) ಹಿಂಡು ಹಿಂಬಾಲಿಸಿದ್ದು, ಓಡಿ ಹೋಗಿ ಜೀವ ರಕ್ಷಣೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಹೊಲದಲ್ಲಾದ ಹಾನಿ ನೋಡಲು ರೈತರು ತೆರಳಿದ್ದಾರೆ. ಈ ವೇಳೆ ಕಾಡಾನೆಗಳ ಹಿಂಡು ಏಕಾಏಕಿ ನುಗಿದೆ. ರೈತರಿಬ್ಬರು ಬೈಕ್ ಬಿಟ್ಟು ಬೆಟ್ಟದ ಕಡೆ ಓಡಿ ಹೋಗಿ ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ. ಇತ್ತ ಸಿಟ್ಟಿನಲ್ಲಿ ಕಾಡಾನೆಗಳ ಹಿಂಡು ಬೈಕ್ ಪುಡಿಗಟ್ಟಿದೆ.

ಬನ್ನೇರುಘಟ್ಟದ ಬಿಳಿಕಲ್ ಅರಣ್ಯ ಕಡೆಯಿಂದ ಕಾಡಾನೆ ಗುಂಪು ಬಂದಿದ್ದು, ಹಲವು ಆನೆಗಳ ಪೈಕಿ ಮರಿಗಳೇ ಹೆಚ್ಚಿದ್ದವು. ಕನಕಪುರ ಸುತ್ತಮುತ್ತಲಿನ ಗ್ರಾಮದಲ್ಲಿ ಬೆಳೆ ನಾಶ ಮಾಡುತ್ತಿದ್ದವು. ಅರಣ್ಯ ಇಲಾಖೆ ಸಿಬ್ಬಂದಿಗಳು ಆನೆಗಳನ್ನು ಕಾಡಿನೆಡೆಗೆ ಓಡಿಸಿದ್ದಾರೆ.

ಇದನ್ನೂ ಓದಿ: ರಾಮನಗರ: ಆನೆ ಪಳಗಿಸುತ್ತೇನೆ ಎಂದು ಕಾಡಿಗೆ ಹೋದವನು ಕಾಡಾನೆಗೆ ಬಲಿ

ಕಳೆದ ವಾರ ಕಾಡಾನೆಗಳ ಹಿಂಡು ಬೆಳೆ ನಾಶಪಡಿಸುತ್ತಿರುವ ಬಗ್ಗೆ ರೈತರು ಹಲವು ಬಾರಿ ದೂರು ನೀಡಿದ್ದರು. ಹಿಗಾಗಿ ಅರಣ್ಯ ಇಲಾಖೆ ಬೆಟ್ಟೇಗೌಡನ ದೊಡ್ಡಿ ಗ್ರಾಮಕ್ಕೆ ಭೇಟಿ ನೀಡಿ ಆನೆಗಳನ್ನು ಕಾಡಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿತ್ತು.

ಮಾನವ-ಪ್ರಾಣಿ ಸಂಘರ್ಷ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ರಾಜ್ಯದಲ್ಲಿ ಆನೆ ಕಾರ್ಯಪಡೆಗಳನ್ನು ಬಲಪಡಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು. ಈ ವರ್ಷ ಆನೆಗಳು ಮಾನವ ವಾಸಸ್ಥಳಕ್ಕೆ ನುಗ್ಗಿದ ಹಲವಾರು ನಿದರ್ಶನಗಳು ವರದಿಯಾಗಿವೆ. ರಾಜ್ಯಾದ್ಯಂತ ಕಳೆದ ಮೂರು ತಿಂಗಳಲ್ಲಿ ಆನೆ ದಾಳಿಗೆ ಕನಿಷ್ಠ ಮೂವರು ಪ್ರಾಣ ಕಳೆದುಕೊಂಡಿದ್ದಾರೆ.

ಕುರಿ ಕಾಯಲು ತೆರಳಿದ್ದ ರೈತನ ತುಳಿದು ಹಾಕಿದ ಕಾಡಾನೆ

ಜಿಲ್ಲೆಯ ಕನಕಪುರ ಹೊರವಲಯ ಹಾಗೂ ಹಾರೋಹಳ್ಳಿ ಭಾಗದ ರೈತರು ಆನೆಗಳ ದಾಳಿಗೆ ತತ್ತಿರಿಸಿದ್ದು ತಮ್ಮ ಬೆಳೆ ಉಳಿಸಿಲು ಹೋಗಿ ಪ್ರಾಣವನ್ನೇ ಕಳೆದುಕೊಳ್ಳುವ ಆತಂಕದಲ್ಲಿ ಬದುಕುತ್ತಿದ್ದಾರೆ. ಕನಕಪುರ ಹೊರವಲಯದ ಬನ್ನಿಮೂಡ್ಲು ಗ್ರಾಮದ ಐವತ್ತು ಐದು‌ ವರ್ಷದ ಚಂದ್ರಣ್ಣ ಕುರಿ ಮೇಯಿಸಲು ಕಾಡಿನೆಡೆಗೆ ಹೊರಟಿದ್ದ, ಅರಣ್ಯದೊಳಗೆ ಹೋಗಬೇಡ ಅಲ್ಲಿ ಕಾಡಾನೆ ಗುಂಪಿದೆ ಅಂತ ಗ್ರಾಮಸ್ಥರು ಎಚ್ಚಸಿದ್ದಾರೆ.‌

ಇದನ್ನೂ ಓದಿ: ರಾಮನಗರ: ತೋಟಕ್ಕೆ ತೆರಳಿದ ರೈತನ ಮೇಲೆ ಒಂಟಿ ಸಲಗ ದಾಳಿ; ಸ್ಥಳದಲ್ಲೇ ಸಾವು

ಇದ್ಯಾವುದನ್ನು ಲೆಕ್ಕಿಸದ ಚಂದ್ರಣ್ಣ, ನಾನು ಆನೆ‌ ಪಳಗಿಸುತ್ತೇನೆ ನನಗೇನು ಆಗಲ್ಲ ಅಂತ ಸೋಮವಾರ ಕಾಡಿಗೆ ನುಗ್ಗಿದ್ದಾನೆ.‌ ಕುರಿಗಳೆಲ್ಲವೂ‌ ಮೇಯ್ದು ಗ್ರಾಮಕ್ಕೆ ವಾಪಾಸ್ ಆದರೂ ಚಂದ್ರಣ್ಣ ಮನೆಗೆ ವಾಪಾಸ್ ಬರಲೇ ಇಲ್ಲ. ಅನುಮಾನಗೊಂಡು ಅರಣ್ಯ ಇಲಾಖೆ‌ ಸಿಬ್ಬಂದಿಗೆ ವಿಚಾರ ತಿಳಿಸಿದಾಗ ಬನ್ನೇರುಘಟ್ಟ ಅರಣ್ಯ ಇಲಾಖೆ ಸಿಬ್ಬಂದಿ ಹುಡುಕಾಟ‌ಮಾಡಿದಾಗ ಚಂದ್ರಣ್ಣ ಶವ ಪತ್ತೆಯಾಗಿದ್ದ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:21 pm, Fri, 29 December 23

ತಾಜಾ ಸುದ್ದಿ
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು