AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಥ್ರಿಲ್​ಗಾಗಿ ಬೆಟ್ಟ ಏರಿದ್ದ ಯುವತಿಯರಿಗೆ ಶಾಕ್: ವಾಪಸ್​ ಹೋಗಲು ದಾರಿ ಕಾಣದೆ ಆತಂಕ, ರಕ್ಷಣೆ

ರಾಮನಗರ ತಾಲೂಕಿನ ಹಂದಿಗುಂದಿ ಬೆಟ್ಟಕ್ಕೆ ಬೆಂಗಳೂರಿನಿಂದ 6 ಯುವತಿಯರ ತಂಡ ನಿನ್ನೆ ‌ಚಾರಣಕ್ಕೆ ಬಂದಿದ್ದಾರೆ. ಈ ವೇಳೆ ದಾರಿ ತಪ್ಪಿ ಬೇರೊಂದು ಬೆಟ್ಟಕ್ಕೆ ತೆರಳಿದ್ದಾರೆ. ಬಂದ ದಾರಿಯಲ್ಲಿ ವಾಪಾಸ್ ಹೋಗಲು ಆಗದೇ ಹಲವು ಗಂಟೆ ಆತಂಕಗೊಂಡಿದ್ದಾರೆ. ಬಳಿಕ ಪ್ರಾಣದ ಹಂಗು ತೊರೆದು ಯುವತಿಯರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.

ಥ್ರಿಲ್​ಗಾಗಿ ಬೆಟ್ಟ ಏರಿದ್ದ ಯುವತಿಯರಿಗೆ ಶಾಕ್: ವಾಪಸ್​ ಹೋಗಲು ದಾರಿ ಕಾಣದೆ ಆತಂಕ, ರಕ್ಷಣೆ
ರಕ್ಷಣೆಗೊಳಗಾದ ಯುವತಿಯರು
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Edited By: |

Updated on: Dec 17, 2023 | 8:03 PM

Share

ರಾಮನಗರ, ಡಿಸೆಂಬರ್​ 17: ಟ್ರಕ್ಕಿಂಗ್ (trekking) ವೇಳೆ ಕಾಡುದಾರಿ ತಪ್ಪಿದ್ದ 6 ಯುವತಿಯರನ್ನು ಪ್ರಾಣದ ಹಂಗು ತೊರೆದು ಪೊಲೀಸರು ರಕ್ಷಣೆ ಮಾಡಿರುವಂತಹ ಘಟನೆ ನಡೆದಿದೆ. ರಾಮನಗರ ತಾಲೂಕಿನ ಹಂದಿಗುಂದಿ ಬೆಟ್ಟಕ್ಕೆ ಬೆಂಗಳೂರಿನಿಂದ 6 ಯುವತಿಯರ ತಂಡ ನಿನ್ನೆ ‌ಚಾರಣಕ್ಕೆ ಬಂದಿದ್ದಾರೆ. ಈ ವೇಳೆ ದಾರಿ ತಪ್ಪಿ ಬೇರೊಂದು ಬೆಟ್ಟಕ್ಕೆ ತೆರಳಿದ್ದಾರೆ. ಬಂದ ದಾರಿಯಲ್ಲಿ ವಾಪಾಸ್ ಹೋಗಲು ಆಗದೇ ಹಲವು ಗಂಟೆ ಆತಂಕಗೊಂಡಿದ್ದಾರೆ.  ದಿನವೆಲ್ಲ ಸುತ್ತಾಡಿ ಸಂಜೆಯಾಗುತ್ತಿದ್ದಂತೆ ಕೊನೆಗೆ ದಾರಿ ಕಾಣದೆ ಪರದಾಡಿದ್ದಾರೆ.

6 ಯುವತಿಯರು ಬನ್ನೇರುಘಟ್ಟ ರಸ್ತೆ ಹೊರಮಾವು ಬಳಿಯ ನಿವಾಸಿಗಳು ಎನ್ನಲಾಗುತ್ತಿದೆ. ರಾಮನಗರ ಬಸವನಪುರ ಬಳಿ ಕಾರು ನಿಲ್ಲಿಸಿ‌ ನಿನ್ನೆ ಬೆಳಿಗ್ಗೆ 10‌‌ ಗಂಟೆಗೆ ಟ್ರಕ್ಕಿಂಗ್ ತೆರಳಿದ್ದರು. ಮಧ್ಯಾಹ್ನದ ವೇಳೆ ಬೆಟ್ಟ ಇಳಿದು ವಾಪಾಸ್​ ಆಗುತ್ತಿದ್ದು, ಎಷ್ಟೇ ನಡೆದರೂ ಹೆದ್ದಾರಿ ಸಿಗದ ಕಾರಣ ಹೈರಾಣಗಿದ್ದಾರೆ. ರಾತ್ರಿ ಆದರೂ ಕಾಡಿನಲ್ಲೇ ಸುತ್ತಾಡಿದ್ದಾರೆ. ಮತ್ತೆ ವಾಪಾಸ್ ಬೆಟ್ಟ ಹತ್ತಿ 112ಗೆ ಕರೆ ಮಾಡಿದ್ದಾರೆ.

ಇದನ್ನೂ ಓದಿ: ಕನಕಪುರ ಸರ್ಕಾರಿ ಶಾಲೆಯಲ್ಲಿದೆಂತ ಸ್ಥಿತಿ, ಮಕ್ಕಳ ಕೈಯಿಂದಲೇ ಶಾಲೆ ಆವರಣದಲ್ಲಿ ಬಿದ್ದ ಬಿಯರ್ ಬಾಟಲ್, ಮಲ ಸ್ವಚ್ಛ ಕಾರ್ಯ

ಇತ್ತ ಕರ್ತವ್ಯ ನಿರ್ವಹಿಸುತ್ತಿದ್ದ ರಾಜೇಶ್ ಹಾಗೂ ರಮೇಶ್ ಎಂಬುವವರು ಯುವತಿಯರಿಗೆ ಧೈರ್ಯ ತುಂಬಿದ್ದಾರೆ. ಬಳಿಕ ವಾಹನ ತೆರಳಲು ಸಾಧ್ಯವಾಗದೆ ಸ್ಥಳಕ್ಕೆ ಸ್ಥಳಿಯರ ಸಹಾಯದಿಂದ ಕಾಲ್ನಡಿಗೆಯಲ್ಲೇ ಪೊಲೀಸರು ತೆರಳಿದ್ದಾರೆ. ಕಾಡಾನೆ ಪ್ರದೇಶ ಹಿನ್ನೆಲೆ ಯುವತಿಯರು ಬಹಳಷ್ಟು ಭಯ ಪಟ್ಟಿದ್ದರು. ರಾತ್ರಿ 8:3೦ರ ವೇಳೆಗೆ ಬೆಟ್ಟದ ತುದಿಯಲ್ಲಿ ಯುವತಿಯರ ರಕ್ಷಣೆ ಮಾಡಲಾಗಿದೆ. ಪೊಲೀಸರು ಆಗಮನದ ನಂತರ ಯುವತಿಯರು ನಿಟ್ಟುಸಿರು ಬಿಟ್ಟಿದ್ದಾರೆ.

ವನ್ಯ ಮೃಗಗಳ ಭಯದ ನಡುವೆ ರಕ್ಷಣೆಗೆ ನಿಂತ 112 ಸಿಬ್ಬಂದಿ

ಸುಮಾರು 10 ಕಿ.ಮೀ ಕಾಲ್ನಡಿಗೆಯಲ್ಲಿ ಯುವತಿಯರಿಗಾಗಿ ಹುಡುಕಾಟ ನಡೆಸಿದ್ದು, ಮೊಬೈಲ್ ನೆಟ್ ವರ್ಕ್ ಆಧರಿಸಿ, ಟಾರ್ಚ್ ಬೆಳಕಿನೆಡಿಗೆ ಯುವತಿಯರನ್ನು ಹುಡುಕಾಡಲಾಗಿದೆ. ಸತತ ಎರಡು ಗಂಟೆ ಕಾಲ ಯುವತಿಯರ ರಕ್ಷಣೆಗಾಗಿ ಕಾರ್ಯಾಚರಣೆ ಮಾಡಿದ್ದರು, ಬಳಿಕ 6 ಯುವತಿಯರನ್ನು 112 ಪೊಲೀಸರು ರಕ್ಷಿಸಿ ಕರೆತಂದಿದ್ದಾರೆ. ರಾಜೇಶ್ ಹಾಗೂ ರಮೇಶ್​ ಅವರ ಕೆಲಸಕ್ಕೆ‌ ಪ್ರಶಂಸೆ ವ್ಯಕ್ತವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್