AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಥ್ರಿಲ್​ಗಾಗಿ ಬೆಟ್ಟ ಏರಿದ್ದ ಯುವತಿಯರಿಗೆ ಶಾಕ್: ವಾಪಸ್​ ಹೋಗಲು ದಾರಿ ಕಾಣದೆ ಆತಂಕ, ರಕ್ಷಣೆ

ರಾಮನಗರ ತಾಲೂಕಿನ ಹಂದಿಗುಂದಿ ಬೆಟ್ಟಕ್ಕೆ ಬೆಂಗಳೂರಿನಿಂದ 6 ಯುವತಿಯರ ತಂಡ ನಿನ್ನೆ ‌ಚಾರಣಕ್ಕೆ ಬಂದಿದ್ದಾರೆ. ಈ ವೇಳೆ ದಾರಿ ತಪ್ಪಿ ಬೇರೊಂದು ಬೆಟ್ಟಕ್ಕೆ ತೆರಳಿದ್ದಾರೆ. ಬಂದ ದಾರಿಯಲ್ಲಿ ವಾಪಾಸ್ ಹೋಗಲು ಆಗದೇ ಹಲವು ಗಂಟೆ ಆತಂಕಗೊಂಡಿದ್ದಾರೆ. ಬಳಿಕ ಪ್ರಾಣದ ಹಂಗು ತೊರೆದು ಯುವತಿಯರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.

ಥ್ರಿಲ್​ಗಾಗಿ ಬೆಟ್ಟ ಏರಿದ್ದ ಯುವತಿಯರಿಗೆ ಶಾಕ್: ವಾಪಸ್​ ಹೋಗಲು ದಾರಿ ಕಾಣದೆ ಆತಂಕ, ರಕ್ಷಣೆ
ರಕ್ಷಣೆಗೊಳಗಾದ ಯುವತಿಯರು
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Edited By: |

Updated on: Dec 17, 2023 | 8:03 PM

Share

ರಾಮನಗರ, ಡಿಸೆಂಬರ್​ 17: ಟ್ರಕ್ಕಿಂಗ್ (trekking) ವೇಳೆ ಕಾಡುದಾರಿ ತಪ್ಪಿದ್ದ 6 ಯುವತಿಯರನ್ನು ಪ್ರಾಣದ ಹಂಗು ತೊರೆದು ಪೊಲೀಸರು ರಕ್ಷಣೆ ಮಾಡಿರುವಂತಹ ಘಟನೆ ನಡೆದಿದೆ. ರಾಮನಗರ ತಾಲೂಕಿನ ಹಂದಿಗುಂದಿ ಬೆಟ್ಟಕ್ಕೆ ಬೆಂಗಳೂರಿನಿಂದ 6 ಯುವತಿಯರ ತಂಡ ನಿನ್ನೆ ‌ಚಾರಣಕ್ಕೆ ಬಂದಿದ್ದಾರೆ. ಈ ವೇಳೆ ದಾರಿ ತಪ್ಪಿ ಬೇರೊಂದು ಬೆಟ್ಟಕ್ಕೆ ತೆರಳಿದ್ದಾರೆ. ಬಂದ ದಾರಿಯಲ್ಲಿ ವಾಪಾಸ್ ಹೋಗಲು ಆಗದೇ ಹಲವು ಗಂಟೆ ಆತಂಕಗೊಂಡಿದ್ದಾರೆ.  ದಿನವೆಲ್ಲ ಸುತ್ತಾಡಿ ಸಂಜೆಯಾಗುತ್ತಿದ್ದಂತೆ ಕೊನೆಗೆ ದಾರಿ ಕಾಣದೆ ಪರದಾಡಿದ್ದಾರೆ.

6 ಯುವತಿಯರು ಬನ್ನೇರುಘಟ್ಟ ರಸ್ತೆ ಹೊರಮಾವು ಬಳಿಯ ನಿವಾಸಿಗಳು ಎನ್ನಲಾಗುತ್ತಿದೆ. ರಾಮನಗರ ಬಸವನಪುರ ಬಳಿ ಕಾರು ನಿಲ್ಲಿಸಿ‌ ನಿನ್ನೆ ಬೆಳಿಗ್ಗೆ 10‌‌ ಗಂಟೆಗೆ ಟ್ರಕ್ಕಿಂಗ್ ತೆರಳಿದ್ದರು. ಮಧ್ಯಾಹ್ನದ ವೇಳೆ ಬೆಟ್ಟ ಇಳಿದು ವಾಪಾಸ್​ ಆಗುತ್ತಿದ್ದು, ಎಷ್ಟೇ ನಡೆದರೂ ಹೆದ್ದಾರಿ ಸಿಗದ ಕಾರಣ ಹೈರಾಣಗಿದ್ದಾರೆ. ರಾತ್ರಿ ಆದರೂ ಕಾಡಿನಲ್ಲೇ ಸುತ್ತಾಡಿದ್ದಾರೆ. ಮತ್ತೆ ವಾಪಾಸ್ ಬೆಟ್ಟ ಹತ್ತಿ 112ಗೆ ಕರೆ ಮಾಡಿದ್ದಾರೆ.

ಇದನ್ನೂ ಓದಿ: ಕನಕಪುರ ಸರ್ಕಾರಿ ಶಾಲೆಯಲ್ಲಿದೆಂತ ಸ್ಥಿತಿ, ಮಕ್ಕಳ ಕೈಯಿಂದಲೇ ಶಾಲೆ ಆವರಣದಲ್ಲಿ ಬಿದ್ದ ಬಿಯರ್ ಬಾಟಲ್, ಮಲ ಸ್ವಚ್ಛ ಕಾರ್ಯ

ಇತ್ತ ಕರ್ತವ್ಯ ನಿರ್ವಹಿಸುತ್ತಿದ್ದ ರಾಜೇಶ್ ಹಾಗೂ ರಮೇಶ್ ಎಂಬುವವರು ಯುವತಿಯರಿಗೆ ಧೈರ್ಯ ತುಂಬಿದ್ದಾರೆ. ಬಳಿಕ ವಾಹನ ತೆರಳಲು ಸಾಧ್ಯವಾಗದೆ ಸ್ಥಳಕ್ಕೆ ಸ್ಥಳಿಯರ ಸಹಾಯದಿಂದ ಕಾಲ್ನಡಿಗೆಯಲ್ಲೇ ಪೊಲೀಸರು ತೆರಳಿದ್ದಾರೆ. ಕಾಡಾನೆ ಪ್ರದೇಶ ಹಿನ್ನೆಲೆ ಯುವತಿಯರು ಬಹಳಷ್ಟು ಭಯ ಪಟ್ಟಿದ್ದರು. ರಾತ್ರಿ 8:3೦ರ ವೇಳೆಗೆ ಬೆಟ್ಟದ ತುದಿಯಲ್ಲಿ ಯುವತಿಯರ ರಕ್ಷಣೆ ಮಾಡಲಾಗಿದೆ. ಪೊಲೀಸರು ಆಗಮನದ ನಂತರ ಯುವತಿಯರು ನಿಟ್ಟುಸಿರು ಬಿಟ್ಟಿದ್ದಾರೆ.

ವನ್ಯ ಮೃಗಗಳ ಭಯದ ನಡುವೆ ರಕ್ಷಣೆಗೆ ನಿಂತ 112 ಸಿಬ್ಬಂದಿ

ಸುಮಾರು 10 ಕಿ.ಮೀ ಕಾಲ್ನಡಿಗೆಯಲ್ಲಿ ಯುವತಿಯರಿಗಾಗಿ ಹುಡುಕಾಟ ನಡೆಸಿದ್ದು, ಮೊಬೈಲ್ ನೆಟ್ ವರ್ಕ್ ಆಧರಿಸಿ, ಟಾರ್ಚ್ ಬೆಳಕಿನೆಡಿಗೆ ಯುವತಿಯರನ್ನು ಹುಡುಕಾಡಲಾಗಿದೆ. ಸತತ ಎರಡು ಗಂಟೆ ಕಾಲ ಯುವತಿಯರ ರಕ್ಷಣೆಗಾಗಿ ಕಾರ್ಯಾಚರಣೆ ಮಾಡಿದ್ದರು, ಬಳಿಕ 6 ಯುವತಿಯರನ್ನು 112 ಪೊಲೀಸರು ರಕ್ಷಿಸಿ ಕರೆತಂದಿದ್ದಾರೆ. ರಾಜೇಶ್ ಹಾಗೂ ರಮೇಶ್​ ಅವರ ಕೆಲಸಕ್ಕೆ‌ ಪ್ರಶಂಸೆ ವ್ಯಕ್ತವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?