AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚನ್ನಪಟ್ಟಣದಿಂದಲೇ ಬಿಜೆಪಿ ಪಕ್ಷದಿಂದಲೇ ಸ್ಪರ್ಧೆ ಮಾಡುತ್ತೇನೆ: ಸಚಿವ ಸಿ ಪಿ ಯೋಗೇಶ್ವರ್ ದೃಢ ನುಡಿ

ಬೆಂಗಳೂರು: ಚನ್ನಪಟ್ಟಣ ನಾನು ಹುಟ್ಟಿದ ತಾಲೂಕು, ಅಲ್ಲಿಂದ ಐದು ಬಾರಿ ಗೆದ್ದಿದ್ದೇನೆ. ನಾನು ಮತ್ತೆ ಅದೇ ವಿಧಾನಸಭಾ ಕ್ಷೇತ್ರದಿಂದಲೇ ಬಿಜೆಪಿಯಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಬೆಂಗಳೂರಲ್ಲಿ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ. ಕಳೆದ ಎರಡ್ಮೂರು ದಿನಗಳಿಂದ ಮಂಡ್ಯ ಸಂಸದೆ ಮತ್ತು ಕುಮಾರಸ್ವಾಮಿ ಫೈಟಿಂಗ್ ನಡೆಯುತ್ತಿದೆ. ನಾನು ಗಮನಿಸಿದ ಹಾಗೆ ಕೆಆರ್​ಎಸ್ ಡ್ಯಾಂನ ಇಪ್ಪತ್ತು ಮೂವತ್ತು ಕಿಮೀ ಸುತ್ತಲೂ ನಿರಂತರವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಡ್ಯಾಂಗೆ ಸಮಸ್ಯೆ ಆಗಬಹುದು ಅಂತ ಸಂಸದರಿಗೆ ಆತಂಕವಿರಬಹುದು. ಕುಮಾರಸ್ವಾಮಿ ಈಗಾಗಲೇ ಅವರ ವ್ಯಕ್ತಿತ್ವ […]

ಚನ್ನಪಟ್ಟಣದಿಂದಲೇ ಬಿಜೆಪಿ ಪಕ್ಷದಿಂದಲೇ  ಸ್ಪರ್ಧೆ ಮಾಡುತ್ತೇನೆ: ಸಚಿವ ಸಿ ಪಿ ಯೋಗೇಶ್ವರ್ ದೃಢ ನುಡಿ
ಸಚಿವ ಸಿ.ಪಿ.ಯೋಗೇಶ್ವರ್
TV9 Web
| Edited By: |

Updated on:Jul 08, 2021 | 6:12 PM

Share

ಬೆಂಗಳೂರು: ಚನ್ನಪಟ್ಟಣ ನಾನು ಹುಟ್ಟಿದ ತಾಲೂಕು, ಅಲ್ಲಿಂದ ಐದು ಬಾರಿ ಗೆದ್ದಿದ್ದೇನೆ. ನಾನು ಮತ್ತೆ ಅದೇ ವಿಧಾನಸಭಾ ಕ್ಷೇತ್ರದಿಂದಲೇ ಬಿಜೆಪಿಯಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಬೆಂಗಳೂರಲ್ಲಿ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ.

ಕಳೆದ ಎರಡ್ಮೂರು ದಿನಗಳಿಂದ ಮಂಡ್ಯ ಸಂಸದೆ ಮತ್ತು ಕುಮಾರಸ್ವಾಮಿ ಫೈಟಿಂಗ್ ನಡೆಯುತ್ತಿದೆ. ನಾನು ಗಮನಿಸಿದ ಹಾಗೆ ಕೆಆರ್​ಎಸ್ ಡ್ಯಾಂನ ಇಪ್ಪತ್ತು ಮೂವತ್ತು ಕಿಮೀ ಸುತ್ತಲೂ ನಿರಂತರವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಡ್ಯಾಂಗೆ ಸಮಸ್ಯೆ ಆಗಬಹುದು ಅಂತ ಸಂಸದರಿಗೆ ಆತಂಕವಿರಬಹುದು. ಕುಮಾರಸ್ವಾಮಿ ಈಗಾಗಲೇ ಅವರ ವ್ಯಕ್ತಿತ್ವ ಕಳೆದುಕೊಂಡಿದ್ದಾರೆ. ನಾವೇನು ಕುಮಾರ ಸ್ವಾಮಿ ಯನ್ನು ಹೈಲೈಟ್ ಮಾಡುವ ಅವಶ್ಯಕತೆ ಇಲ್ಲ. ಅವರ ಇತ್ತೀಚಿನ ಹೇಳಿಕೆ ತೂಕ ಕಳೆದುಕೊಂಡಿದೆ. ನಾನು ನನ್ನ ಜಿಲ್ಲೆಯ ಸಮಸ್ಯೆ ಬಗ್ಗೆ ಹೇಳಿಕೊಂಡರೆ ಅದು ನನಗೆ ರಿವರ್ಸ್ ಆಗ್ತಿದೆ. ಕುಮಾರಸ್ವಾಮಿ ಅವರು ದಿನೇದಿನೇ ರಾಜಕೀಯ ನೆಲೆ ಕಳೆದುಕೊಳ್ಳುತ್ತಿದ್ದಾರೆ.ಆ ಆತಂಕದಿಂದ ವಿಚಲಿತರಾಗಿ ಮಾತಾಡ್ತಿದ್ದಾರೆ. ಅವಾಚ್ಯವಾಗಿ ಮಾತಾಡುವುದು ಕುಮಾರಸ್ವಾಮಿ ಅವಿರಿಗ ಶೋಭೆ ತರುವಂತದಲ್ಲ. ಅವರು ರಾಜಕೀಯ ದಿನೇ ದಿನೇ ವೀಕ್ ಆಗ್ತಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಟೀಕಿಸಿದ್ದಾರೆ.

ಮಾಜಿ ಸಿಎಂ ಕುಮಾರಸ್ವಾಮಿ ಬೆಳಗ್ಗೆ ಹೋಗ್ತಾರೆ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ರಾತ್ರಿ ಹೋಗ್ತಾರೆ. ಸಿಪಿವೈ ಮಾತನಾಡಿದ್ರೆ ಸಿಎಂ ಹತ್ರ ಇವರಿಬ್ಬರೂ ಹೋಗ್ತಾರೆ. ರೇಣುಕಾಚಾರ್ಯ ಸಿಎಂ ಕಾರ್ಯದರ್ಶಿಯಾಗಲು ಸಿ.ಪಿ.ಯೋಗೇಶ್ವರ್ ಕಾರಣ ಎಂಬುದನ್ನ ಮರೆಯಬಾರದು. 7 ಮಿನಿಸ್ಟರ್ಸ್​ ಕ್ವಾರ್ಟರ್ಸ್​ನಲ್ಲಿ ಎಂಪಿಆರ್​ಗೆ ಸ್ಥಾನ ಸಿಕ್ಕಿದ್ದೇಗೆ? ಅದಕ್ಕೂ ಯೋಗೇಶ್ವರ್ ಕಾರಣ ಎಂಬುದನ್ನ ಮರೆಯಬಾರದು. ಎಂ.ಪಿ.ರೇಣುಕಾಚಾರ್ಯಗೆ ಸಾವಿರ ಕೋಟಿ ಅನುದಾನ ಸಿಕ್ಕಿದೆ. ಅದಕ್ಕೆ ಸಿ.ಪಿ.ಯೋಗೇಶ್ವರ್ ಶ್ರಮ ಕಾರಣ ಎಂದು ಗೊತ್ತಿರಲಿ ಎಂದು ಬೆಂಗಳೂರಲ್ಲಿ ಪ್ರವಾಸೋದ್ಯಮ ಸಚಿವ ಯೋಗೇಶ್ವರ್ ಹೇಳಿದ್ದಾರೆ.

ಇದನ್ನೂ ಓದಿ: 

ನಾನೇನು ಅಂಬರೀಶ್‌ಗೆ ಗುಲಾಮ ಆಗಿದ್ದೆನಾ? ಜನಸಾಮಾನ್ಯರು ಬಂದರೂ ನಾನು ಕೈಕಟ್ಟಿ ನಿಲ್ಲುತ್ತೇನೆ: ಕುಮಾರಸ್ವಾಮಿ ತಿರುಗೇಟು

‘ಸ್ಯಾಂಡಲ್​ವುಡ್​ ಸ್ಮಗ್ಲರ್’​ ಟ್ಯಾಗ್​ ಕೊಟ್ಟು ನನ್ನ ಮತ್ತು ಆದಿಚುಂಚನಗಿರಿ ಮಠಾಧೀಶರ ದೂರವಾಣಿ ಕದ್ದಾಲಿಸಲಾಗಿದೆ: ಸಂಸದೆ ಸುಮಲತಾ ಗಂಭೀರ ಆರೋಪ

(Tourism minister CP Yogeshwar says will contest from Channapatna assembly and BJP in next election)

Published On - 4:16 pm, Thu, 8 July 21

ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ