AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದಿನ ದೂರನ್ನೇ ಯಥಾವತ್ತಾಗಿ ಹೇಳಿದ್ದಾರಂತೆ ಸಿಡಿ ಲೇಡಿ; ಈಗ ವಿಚಾರಣೆ ಬಳಿಕ ಸಂತ್ರಸ್ತೆ ವಾಸ್ತವ್ಯ ಎಲ್ಲಿ?

ಈ ಮೊದಲು ದೂರು ನೀಡಿದ್ದ ಆಧಾರದ ಮೇಲೆ ಸಿಡಿ ಲೇಡಿ ಈ ಬಾರಿ ಹೇಳಿಕೆ ನೀಡಿದ್ದಾರಂತೆ. ಯುವತಿ ಹಿಂದಿನ ದೂರನ್ನೇ ಯಥಾವತ್ತಾಗಿ ಹೇಳಿಕೆ ನೀಡಿರುವ ಮಾಹಿತಿ ಸಿಕ್ಕಿದೆ.

ಹಿಂದಿನ ದೂರನ್ನೇ ಯಥಾವತ್ತಾಗಿ ಹೇಳಿದ್ದಾರಂತೆ ಸಿಡಿ ಲೇಡಿ; ಈಗ ವಿಚಾರಣೆ ಬಳಿಕ ಸಂತ್ರಸ್ತೆ ವಾಸ್ತವ್ಯ ಎಲ್ಲಿ?
ಹಿಂದಿನ ದೂರನ್ನೇ ಯಥಾವತ್ತಾಗಿ ಹೇಳಿದ್ದಾರಂತೆ ಸಿಡಿ ಲೇಡಿ
KUSHAL V
|

Updated on: Mar 30, 2021 | 8:17 PM

Share

ಬೆಂಗಳೂರು: ಈ ಮೊದಲು ದೂರು ನೀಡಿದ್ದ ಆಧಾರದ ಮೇಲೆ ಸಿಡಿ ಲೇಡಿ ಈ ಬಾರಿ ಹೇಳಿಕೆ ನೀಡಿದ್ದಾರಂತೆ. ಯುವತಿ ಹಿಂದಿನ ದೂರನ್ನೇ ಯಥಾವತ್ತಾಗಿ ಹೇಳಿಕೆ ನೀಡಿರುವ ಮಾಹಿತಿ ಸಿಕ್ಕಿದೆ. ಅಂದ ಹಾಗೆ, ಸದ್ಯ, ಟೆಕ್ನಿಕಲ್ ವಿಂಗ್​ನಲ್ಲಿ CD ಲೇಡಿ ಹೇಳಿಕೆ ಮುಗಿಸಿ ವಾಪಸ್ ಆಗಿದ್ದಾರೆ. ಆಡುಗೋಡಿಯಲ್ಲಿರುವ ಟೆಕ್ನಿಕಲ್ ವಿಂಗ್​ನಲ್ಲಿ ಸಂತ್ರಸ್ತೆಯ ಆಡಿಯೋ, ವಿಡಿಯೋ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ಧ್ವನಿ ಪರೀಕ್ಷೆ ನಡೆಸಲು ಎಸ್​​ಐಟಿ ಅಧಿಕಾರಿಗಳು ಸಿಡಿ ಲೇಡಿಯ ಆಡಿಯೋ ಪಡೆದಿರುವ ಮಾಹಿತಿ ಸಿಕ್ಕಿದೆ.

ಈ ಮಧ್ಯೆ, ಇಂದು ಸಿಡಿ ಲೇಡಿಯನ್ನ ಮೆಡಿಕಲ್ ಟೆಸ್ಟ್​ಗೆ ಒಳಪಡಿಸಲ್ಲ. ಹಾಗಾಗಿ, ಪೊಲೀಸರು ನಾಳೆ ಆಕೆಯನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ಯುವ ಸಾಧ್ಯತೆಯಿದೆ. ಇಂದು ಪ್ರಯಾಣ, ಜಡ್ಜ್ ಮುಂದೆ ಹೇಳಿಕೆ, SIT ವಿಚಾರಣೆ ಹಾಗೂ ಬೆಳಗ್ಗೆಯಿಂದ ನಡೆಸಿರುವ ಓಡಾಟದಿಂದ ಆಯಾಸವಾಗಿರುವ ಹಿನ್ನೆಲೆಯಲ್ಲಿ ಯುವತಿ ನಾಳೆ ಬೆಳಗ್ಗೆ ಮೆಡಿಕಲ್ ಟೆಸ್ಟ್​ಗೆ ಒಳಗಾಗಲಿರುವ ಮಾಹಿತಿ ಸಿಕ್ಕಿದೆ.

ಅತ್ತ, ಇಂದು ರಾತ್ರಿ ವಾಸ್ತವ್ಯ ಇರಲು ಯುವತಿ ನಿರ್ಧಾರಕ್ಕೆ ಬಿಟ್ಟದ್ದು. ಆರ್​.ಟಿ.ನಗರದ ಪಿಜಿಯಲ್ಲಿ ಇರುವ ಹಾಗಿದ್ದರೆ ಇರಬಹುದು. ಇಲ್ಲವಾದರೆ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಬಹುದು. ವೈಯಕ್ತಿಕವಾಗಿ ಎಲ್ಲೇ ಇರುವುದಾದರೂ ರಕ್ಷಣೆ ನೀಡುತ್ತೇವೆ. ನಿಮಗೆ ಯಾವುದೇ ತೊಂದರೆ ಆಗದಂತೆ ರಕ್ಷಣೆ ನೀಡುತ್ತೇವೆ ಎಂದು ಸಿಡಿ ಲೇಡಿಗೆ ಎಸ್​ಐಟಿ ಅಧಿಕಾರಿಗಳು ಭರವಸೆ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ‘ನನ್ನನ್ನು ಯಾರೂ ಕಿಡ್ನ್ಯಾಪ್​ ಮಾಡಿರಲಿಲ್ಲ; ನನ್ನ ತಂದೆ, ತಾಯಿ, ಸೋದರ ರಮೇಶ್ ಜಾರಕಿಹೊಳಿ ಹಿಡಿತದಲ್ಲಿದ್ದಾರೆ’

Follow Us
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ
ಅಮೆರಿಕದಿಂದ ಇರಾನ್​ಗೆ 300 ಡಾಲರ್ ಆರ್ಥಿಕ ನೆರವು
ಅಮೆರಿಕದಿಂದ ಇರಾನ್​ಗೆ 300 ಡಾಲರ್ ಆರ್ಥಿಕ ನೆರವು
ಬೆಂಗಳೂರಿನಲ್ಲಿ ನಕಲಿ ನಾಗಸಾಧುಗಳಿಂದ ಉಂಗುರ ಕಳ್ಳತನ
ಬೆಂಗಳೂರಿನಲ್ಲಿ ನಕಲಿ ನಾಗಸಾಧುಗಳಿಂದ ಉಂಗುರ ಕಳ್ಳತನ
ಕೋಲಾರದಲ್ಲಿ ವಾಹನಗಳನ್ನು ತಡೆದು ಮಾವು ಬೆಳೆಗಾರರ ಪ್ರತಿಭಟನೆ!
ಕೋಲಾರದಲ್ಲಿ ವಾಹನಗಳನ್ನು ತಡೆದು ಮಾವು ಬೆಳೆಗಾರರ ಪ್ರತಿಭಟನೆ!
ಬ್ರಹ್ಮರಕೂಟ್ಲು ಟೋಲ್ ಗೇಟ್‌ನಲ್ಲಿ ಸಿಪಿಐಎಂ ಕಾರ್ಯಕರ್ತರ ದಾಂಧಲೆ
ಬ್ರಹ್ಮರಕೂಟ್ಲು ಟೋಲ್ ಗೇಟ್‌ನಲ್ಲಿ ಸಿಪಿಐಎಂ ಕಾರ್ಯಕರ್ತರ ದಾಂಧಲೆ