ಪಾದರಾಯನಪುರ ಅಟ್ಟಹಾಸ: ಪುಂಡಾಟ ನಡೆಸಿದ್ದವನ ಪತ್ನಿಗೂ ಅಂಟಿಕೊಂಡ ಕೊರೊನಾ!

ಬೆಂಗಳೂರು: ಕೊರೊನಾ ತವರೂರೇ ಆಗಿರುವ ಪಾದರಾಯನಪುರದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಱಂಡಮ್‌ ಟೆಸ್ಟ್‌ನಲ್ಲಿ ಮತ್ತೋರ್ವ ಮಹಿಳೆಗೆ ಸೋಂಕು ಇರುವುದು ಪತ್ತೆಯಾಗಿದೆ. ಱಂಡಮ್ ಟೆಸ್ಟ್‌ನಲ್ಲಿ ನಿನ್ನೆ ಇಬ್ಬರಿಗೆ ಸೋಂಕು ಪತ್ತೆಯಾಗಿತ್ತು. ಇಂದು 35 ವರ್ಷದ ಮತ್ತೋರ್ವ ಮಹಿಳೆಗೆ ಕೊರೊನಾ ಸೋಂಕಿರುವುದು ದೃಢವಾಗಿದೆ. 49 ಜನರ ಱಂಡಮ್‌ ಟೆಸ್ಟ್‌ನಲ್ಲಿ ಒಟ್ಟು ಮೂವರಿಗೆ ಕೊರೊನಾ ತಗುಲಿದ್ದು, ಮೂವರಲ್ಲಿ ಇಬ್ಬರು ಮಹಿಳೆಯರು, ಓರ್ವ ಯುವಕ ಸೇರಿದ್ದಾರೆ. ತಬ್ಲೀಗಿ ನಂಟನ್ನು ಹೊಂದಿರುವ ಪಾದರಾಯನಪುರದಲ್ಲಿ ಸೋಂಕಿತ ಸಂಖ್ಯೆ ಬೆಳೆಯುತ್ತಲೇ ಹೋಗುತ್ತಿದೆ. ಸದ್ಯ ಬಾಪೂಜಿನಗರ ಸೀಲ್ ಡೌನ್​ನಿಂದ […]

ಪಾದರಾಯನಪುರ ಅಟ್ಟಹಾಸ: ಪುಂಡಾಟ ನಡೆಸಿದ್ದವನ ಪತ್ನಿಗೂ ಅಂಟಿಕೊಂಡ ಕೊರೊನಾ!
ಪ್ರಾತಿನಿಧಿಕ ಚಿತ್ರ
ಸಾಧು ಶ್ರೀನಾಥ್​

Updated on: May 08, 2020 | 10:10 AM

ಬೆಂಗಳೂರು: ಕೊರೊನಾ ತವರೂರೇ ಆಗಿರುವ ಪಾದರಾಯನಪುರದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಱಂಡಮ್‌ ಟೆಸ್ಟ್‌ನಲ್ಲಿ ಮತ್ತೋರ್ವ ಮಹಿಳೆಗೆ ಸೋಂಕು ಇರುವುದು ಪತ್ತೆಯಾಗಿದೆ. ಱಂಡಮ್ ಟೆಸ್ಟ್‌ನಲ್ಲಿ ನಿನ್ನೆ ಇಬ್ಬರಿಗೆ ಸೋಂಕು ಪತ್ತೆಯಾಗಿತ್ತು. ಇಂದು 35 ವರ್ಷದ ಮತ್ತೋರ್ವ ಮಹಿಳೆಗೆ ಕೊರೊನಾ ಸೋಂಕಿರುವುದು ದೃಢವಾಗಿದೆ.

49 ಜನರ ಱಂಡಮ್‌ ಟೆಸ್ಟ್‌ನಲ್ಲಿ ಒಟ್ಟು ಮೂವರಿಗೆ ಕೊರೊನಾ ತಗುಲಿದ್ದು, ಮೂವರಲ್ಲಿ ಇಬ್ಬರು ಮಹಿಳೆಯರು, ಓರ್ವ ಯುವಕ ಸೇರಿದ್ದಾರೆ. ತಬ್ಲೀಗಿ ನಂಟನ್ನು ಹೊಂದಿರುವ ಪಾದರಾಯನಪುರದಲ್ಲಿ ಸೋಂಕಿತ ಸಂಖ್ಯೆ ಬೆಳೆಯುತ್ತಲೇ ಹೋಗುತ್ತಿದೆ. ಸದ್ಯ ಬಾಪೂಜಿನಗರ ಸೀಲ್ ಡೌನ್​ನಿಂದ ಮುಕ್ತವಾದ್ರೆ. ಪಾದರಾಯನಪುರಕ್ಕೆ ಸೀಲ್ ಡೌನ್ ರಿಲೀಫ್ ಸಿಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ.

Published On - 8:39 am, Fri, 8 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us