AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಎಫೆಕ್ಟ್! ಮುಂದಿನ ವರ್ಷ ಶಾಲಾ ಮಕ್ಕಳು ಹೆಚ್ಚು ಓದಬೇಕಿಲ್ಲ!

ಬೆಂಗಳೂರು: ಥ್ಯಾಂಕ್ಸ್ ಟು ಕೊರೊನಾ ವೈರಸ್, ಮುಂದಿನ ಶೈಕ್ಷಣಿಕ ವರ್ಷ ವಿಳಂಬವಾಗುವ ಹಿನ್ನೆಲೆ ಶಾಲಾ ಮಕ್ಕಳು ಹೆಚ್ಚು ಓದ ಬೇಕಿಲ್ಲ! ಪ್ರಾಥಮಿಕ, ಪ್ರೌಢಶಿಕ್ಷಣ‌ ಸಚಿವ ಸುರೇಶ್‌ಕುಮಾರ್ ಈ ಕುರಿತು ಸುಳಿವು ನೀಡಿದ್ದಾರೆ. 15 ದಿನ, 1 ತಿಂಗಳು, ಒಂದೂವರೆ ತಿಂಗಳು ಹಾಗೂ 2 ತಿಂಗಳ ಹಂತವಾರು ಹೆಚ್ಚುವರಿ ಪಠ್ಯಗಳನ್ನ ಗುರುತಿಸಿ ಅವುಗಳನ್ನು ಕೈಬಿಡುವ ಬಗ್ಗೆ ವಿಸ್ತೃತ ವರದಿ ಸಲ್ಲಿಕೆಗೆ ಸೂಚನೆ ನೀಡಲಾಗಿದೆ. ಪಠ್ಯ ಪುಸ್ತಕ ಪ್ರವೇಶಿಸಲಿದೆ ಮಾರಕ ಕೊರೊನಾ ವೈರಸ್! 1ರಿಂದ 10ನೇ ತರಗತಿ ಹಾಗೂ ಪದವಿ […]

ಕೊರೊನಾ ಎಫೆಕ್ಟ್! ಮುಂದಿನ ವರ್ಷ ಶಾಲಾ ಮಕ್ಕಳು ಹೆಚ್ಚು ಓದಬೇಕಿಲ್ಲ!
ಸಾಧು ಶ್ರೀನಾಥ್​
|

Updated on:May 07, 2020 | 7:22 PM

Share

ಬೆಂಗಳೂರು: ಥ್ಯಾಂಕ್ಸ್ ಟು ಕೊರೊನಾ ವೈರಸ್, ಮುಂದಿನ ಶೈಕ್ಷಣಿಕ ವರ್ಷ ವಿಳಂಬವಾಗುವ ಹಿನ್ನೆಲೆ ಶಾಲಾ ಮಕ್ಕಳು ಹೆಚ್ಚು ಓದ ಬೇಕಿಲ್ಲ! ಪ್ರಾಥಮಿಕ, ಪ್ರೌಢಶಿಕ್ಷಣ‌ ಸಚಿವ ಸುರೇಶ್‌ಕುಮಾರ್ ಈ ಕುರಿತು ಸುಳಿವು ನೀಡಿದ್ದಾರೆ. 15 ದಿನ, 1 ತಿಂಗಳು, ಒಂದೂವರೆ ತಿಂಗಳು ಹಾಗೂ 2 ತಿಂಗಳ ಹಂತವಾರು ಹೆಚ್ಚುವರಿ ಪಠ್ಯಗಳನ್ನ ಗುರುತಿಸಿ ಅವುಗಳನ್ನು ಕೈಬಿಡುವ ಬಗ್ಗೆ ವಿಸ್ತೃತ ವರದಿ ಸಲ್ಲಿಕೆಗೆ ಸೂಚನೆ ನೀಡಲಾಗಿದೆ.

ಪಠ್ಯ ಪುಸ್ತಕ ಪ್ರವೇಶಿಸಲಿದೆ ಮಾರಕ ಕೊರೊನಾ ವೈರಸ್! 1ರಿಂದ 10ನೇ ತರಗತಿ ಹಾಗೂ ಪದವಿ ಪೂರ್ವ ಶಿಕ್ಷಣದವರೆಗೆ 2020-21ನೇ ಸಾಲಿನ ಶಾಲಾ ಪಠ್ಯಗಳನ್ನು ಕಡಿತಗೊಳಿಸುವಂತೆ ಅಧಿಕಾರಿಗಳಿಗೆ ಆದೇಶಿಸಲಾಗಿದೆ. ಕಡಿತಗೊಳಿಸಬಹುದಾದಂತಹ ಹೆಚ್ಚುವರಿ ಪಠ್ಯವನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಶೈಕ್ಷಣಿಕ ವರ್ಷದಲ್ಲಿ ಕಳೆದುಕೊಳ್ಳುವ ಅವಧಿಯ ಆಧಾರದಲ್ಲಿ ಮಕ್ಕಳ ಕಲಿಕೆಗೆ ಹೊರೆಯಾಗದ ರೀತಿ ಪಠ್ಯ ಕೈಬಿಡಲು ಸೂಚನೆ ನೀಡಲಾಗಿದೆ. ಹೆಚ್ಚುವರಿ ಪಠ್ಯವನ್ನು ಗುರುತಿಸಿ ವಿಸ್ತೃತ ವರದಿ ಸಲ್ಲಿಕೆಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಾರಕ ಕೊವಿಡ್‌ ಬಗ್ಗೆಯೂ ಪಠ್ಯ ಅಳವಡಿಸುವಂತೆ ಸೂಚನೆ ಸಿಕ್ಕಿದೆ. ಈ ಬಗ್ಗೆ ಕೂಡಲೇ ಕ್ರಿಯಾ ಯೋಜನೆ ಸಿದ್ಧಪಡಿಸಲು ಸೂಚನೆ ನೀಡಲಾಗಿದೆ ಎಂದು ಸಚಿವ ಸುರೇಶ್‌ಕುಮಾರ್ ಹೇಳಿದ್ದಾರೆ.

Published On - 7:20 pm, Thu, 7 May 20

ಗಿಲ್ಲಿ ಬಗ್ಗೆ ಜನರಿಗೆ ಇರುವ ಕ್ರೇಜ್ ನೋಡಿ ಫಸ್ಟ್ ರಿಯಾಕ್ಷನ್ ಕೊಟ್ಟ ಕಾವ್ಯಾ
ಗಿಲ್ಲಿ ಬಗ್ಗೆ ಜನರಿಗೆ ಇರುವ ಕ್ರೇಜ್ ನೋಡಿ ಫಸ್ಟ್ ರಿಯಾಕ್ಷನ್ ಕೊಟ್ಟ ಕಾವ್ಯಾ
ಅಧಿಕಾರ ಬಿಟ್ಟಕೊಡಿ ಎಂದು ಕೇಳೋದು ಕಷ್ಟ: ಸಿಎಂಗೆ ಟಾಂಗ್ ಕೊಟ್ರಾ ಡಿಕೆಸು!
ಅಧಿಕಾರ ಬಿಟ್ಟಕೊಡಿ ಎಂದು ಕೇಳೋದು ಕಷ್ಟ: ಸಿಎಂಗೆ ಟಾಂಗ್ ಕೊಟ್ರಾ ಡಿಕೆಸು!
ನಿತಿನ್ ನಬಿನ್ ನನ್ನ ಬಾಸ್, ನಾನು ಕೇವಲ ಪಕ್ಷದ ಕಾರ್ಯಕರ್ತ: ಪ್ರಧಾನಿ ಮೋದಿ
ನಿತಿನ್ ನಬಿನ್ ನನ್ನ ಬಾಸ್, ನಾನು ಕೇವಲ ಪಕ್ಷದ ಕಾರ್ಯಕರ್ತ: ಪ್ರಧಾನಿ ಮೋದಿ
ಲಕ್ಕುಂಡಿ: ಉತ್ಖನನ ವೇಳೆ ಮನೆಯೊಂದರಲ್ಲಿ ಪುರಾತನ ದೇವಸ್ಥಾನ ಪತ್ತೆ!
ಲಕ್ಕುಂಡಿ: ಉತ್ಖನನ ವೇಳೆ ಮನೆಯೊಂದರಲ್ಲಿ ಪುರಾತನ ದೇವಸ್ಥಾನ ಪತ್ತೆ!
ಶ್ರೀಕೃಷ್ಣಮಠದಲ್ಲಿ ವಸ್ತ್ರಸಂಹಿತೆ ಜಾರಿ: ಇಲ್ಲಿದೆ ಭಕ್ತರಿಗೆ ಕೆಲ ಸೂಚನೆ
ಶ್ರೀಕೃಷ್ಣಮಠದಲ್ಲಿ ವಸ್ತ್ರಸಂಹಿತೆ ಜಾರಿ: ಇಲ್ಲಿದೆ ಭಕ್ತರಿಗೆ ಕೆಲ ಸೂಚನೆ
‘ದೊಡ್ಡದಾಗಿ ಏನೋ ಕಾಯ್ತಿರಬಹುದು, ಆಗೋದಲ್ಲ ಆಗ್ಲಿ’; ಧನುಶ್
‘ದೊಡ್ಡದಾಗಿ ಏನೋ ಕಾಯ್ತಿರಬಹುದು, ಆಗೋದಲ್ಲ ಆಗ್ಲಿ’; ಧನುಶ್
ಡಿಜಿಪಿ ರಾಮಚಂದ್ರ ರಾವ್ ಅಮಾನತು
ಡಿಜಿಪಿ ರಾಮಚಂದ್ರ ರಾವ್ ಅಮಾನತು
VIDEO: ಪಾಕ್ ಆಟಗಾರನ ಕ್ಯಾಚ್​ಗೆ ಕ್ರಿಕೆಟ್ ಪ್ರೇಮಿಗಳು ಮೂಕವಿಸ್ಮಿತ
VIDEO: ಪಾಕ್ ಆಟಗಾರನ ಕ್ಯಾಚ್​ಗೆ ಕ್ರಿಕೆಟ್ ಪ್ರೇಮಿಗಳು ಮೂಕವಿಸ್ಮಿತ
‘ನಾನು ಕಪ್ ಗೆಲ್ಲದಿರಬಹುದು, ಶೋ ಗೆದ್ದಿದ್ದೇನೆ’; ಧ್ರುವಂತ್
‘ನಾನು ಕಪ್ ಗೆಲ್ಲದಿರಬಹುದು, ಶೋ ಗೆದ್ದಿದ್ದೇನೆ’; ಧ್ರುವಂತ್
ಕುಡಿದ ಮತ್ತಿನಲ್ಲಿ ಸ್ವಿಗ್ಗಿ ಡೆಲಿವರಿ ಏಜೆಂಟ್ ಮೇಲೆ ಕಾರು ಹತ್ತಿಸಿದ ವೈದ್ಯ
ಕುಡಿದ ಮತ್ತಿನಲ್ಲಿ ಸ್ವಿಗ್ಗಿ ಡೆಲಿವರಿ ಏಜೆಂಟ್ ಮೇಲೆ ಕಾರು ಹತ್ತಿಸಿದ ವೈದ್ಯ