
ಕನ್ನಡ ನಮ್ಮ ಅಮ್ಮ, ಆಕೆ ನಮ್ಮ ಉಸಿರು, ಈ ಮಾತು ಕೇವಲ ಒಂದು ದಿನದ ಮಾತಾಗಬಾರದು. ಕರ್ನಾಟಕ ಏಕೀಕರಣಕ್ಕೆ ಹೋರಾಡಿದ, ಕನ್ನಡದ ಉಳಿವಿಗಾಗಿ, ಶ್ರೇಯೋಭಿವೃದ್ಧಿಗಾಗಿ, ಬೆಳವಣಿಗೆಗಾಗಿ ಶ್ರಮಿಸಿದ ಹಲವು ಹಿರಿಜೀವಗಳನ್ನು ಪ್ರತಿ ದಿನವೂ ನೆನೆಸಿಕೊಳ್ಳಬೇಕು. ‘ನವೆಂಬರ್ ಕನ್ನಡಿಗರು’ ನಾವು ಮತ್ತು ನಮ್ಮ ಮುಂದಿನ ಪೀಳಿಗೆ ಆಗಬಾರದು ಎಂದರೆ ಇಂದಿನಿಂದಲೇ ನಮ್ಮ ಮಕ್ಕಳಿಗೆ ಕನ್ನಡದ ಕಂಪಿನ ಬಗೆಗೆ ಅರಿವು ಮೂಡಿಸಬೇಕಾಗಿದೆ. ನಮ್ಮ ಪೂರ್ವಜರು ಮತ್ತು ಕವಿಗಣ್ಯರು ಹೇಳಿದ ನಾಣ್ನುಡಿಗಳನ್ನು ಬಳಸುವ ಮೂಲಕವೇ ಸಂದೇಶ ಕಳುಹಿಸುವುದರಿಂದ ನಮ್ಮ ಕನ್ನಡದ ಕಂಪು ಮನೆ ಮನೆಗೂ ಎಲ್ಲರ ಮನಸ್ಸಿಗೂ ತಲುಪುವಂತಾಗುತ್ತದೆ. ಹಾಗಾದರೆ ಇನ್ನೇಕೆ ತಡ ಈ ಕೆಳಗಿನ ನುಡಿಮುತ್ತು ಮತ್ತು ಕೆಲವು ಅರ್ಥ ಗರ್ಭಿತ ಮಾತುಗಳನ್ನು ಕನ್ನಡ ಪ್ರೇಮಿಗಳಿಗೆ ಕಳುಹಿಸಿ.
ಎಲ್ಲಾದರು ಇರು, ಎಂತಾದರು ಇರು
ಎಂದೆಂದಿಗು ನೀ ಕನ್ನಡವಾಗಿರು
ಕನ್ನಡ ಗೋವಿನ ಓ ಮುದ್ದಿನ ಕರು,
ಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು!
ಇದನ್ನು ವಾಟ್ಸಪ್, ಫೇಸ್ಬುಕ್ ಸಂದೇಶಗಳ ಮಾದರಿಯಲ್ಲಿ ನಿಮ್ಮ ಸ್ನೇಹಿತರು, ಬಂಧುಬಾಂಧವರ ಜೊತೆ ಹಂಚಿಕೊಳ್ಳಬಹುದು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ