ಶಿವಮೊಗ್ಗ: ವೈಯಕ್ತಿಕ ಕಾರಣಕ್ಕೆ ಯುವಕರ ನಡುವೆ ಗಲಾಟೆ; 3 ಮಂದಿಗೆ ಚಾಕು ಇರಿತ

| Updated By: ವಿವೇಕ ಬಿರಾದಾರ

Updated on: Nov 10, 2023 | 3:00 PM

ಶಿವಮೊಗ್ಗದ ಜೆಪಿನಗರ ಬಳಿ ಗುರುವಾರ ರಾತ್ರಿ ವೈಯಕ್ತಿಕ ಕಾರಣಕ್ಕೆ ಎರಡು ಗ್ಯಾಂಗ್​ಗಳ ನಡುವೆ ಗಲಾಟೆ ನಡೆದಿದ್ದು ಮೂವರಿಗೆ ಚಾಕು ಇರಿಯಲಾಗಿದೆ. ಗಾಯಗೊಂಡ ಮೂವರು ರೌಡಿಶೀಟರ್​ಗಳಾಗಿದ್ದು, 15 ದಿನಗಳ ಹಿಂದೆ ಈ ಎರಡೂ ಗುಂಪುಗಳ ಮಧ್ಯೆ ಗಲಾಟೆ ನಡೆದಿತ್ತು.

ಶಿವಮೊಗ್ಗ: ವೈಯಕ್ತಿಕ ಕಾರಣಕ್ಕೆ ಯುವಕರ ನಡುವೆ ಗಲಾಟೆ; 3 ಮಂದಿಗೆ ಚಾಕು ಇರಿತ
ತುಂಗಾನಗರ ಪೊಲೀಸ್​ ಠಾಣೆ
Follow us on

ಶಿವಮೊಗ್ಗ ನ.10: ವೈಯಕ್ತಿಕ ಕಾರಣಕ್ಕೆ ಎರಡು ಗ್ಯಾಂಗ್​ಗಳ (Gang) ಗಲಾಟೆ ನಡೆದಿದ್ದು ಮೂವರಿಗೆ ಚಾಕು ಇರಿದಿರುವ ಘಟನೆ ಜೆಪಿ ನಗರ (JP Nagar) ಬಳಿ ಗುರುವಾರ (ನ.09) ರಾತ್ರಿ ನಡೆದಿದೆ. ಟಿಪ್ಪುನಗರದ ಸಮೀರ್ (23), ಫರಾಜ್(24), ಜೆ.ಪಿ.ನಗರದ ಮೊಹಮದ್ ಖಾಲಿದ್ ಅಲಿಯಾಸ್​ ಸೋನು (19) ಚಾಕು ಇರಿತದಿಂದ ಗಾಯಗೊಂಡವರು. ಮೂವರು ಶಿವಮೊಗ್ಗ ರೌಡಿಶೀಟರ್​ಗಳು. 15 ದಿನದ ಹಿಂದೆ ರೌಡಿಶೀಟರ್​ಗಳಾದ ಸಮೀರ್​​​, ಫರಾಜ್​ ಮತ್ತು ಸಲ್ಲು, ಸೆಬು, ಸೋನು, ಕತ್ರು ಗ್ಯಾಂಗ್​ ನಡುವೆ ಗಲಾಟೆ ನಡೆದಿತ್ತು.

ಯುವಕರು ಗುರುವಾರ ಜೆಪಿನಗರದ ಜಂಡೆಕಟ್ಟೆ ಬಳಿ ಗ್ಯಾರವಿ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಪರಸ್ಪರ ಗುರಾಯಿಸಿಕೊಂಡು, ಮತ್ತೆ ಮಾರಕಾಸ್ತ್ರದಿಂದ ಬಡಿದಾಡಿಕೊಂಡಿದ್ದಾರೆ. ಗಲಾಟೆಯಲ್ಲಿ ಮೂವರಿಗೆ ಚಾಕುವಿನಿಂದ ಇರಿಯಲಾಗಿದೆ. ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವಮೊಗ್ಗ ನಗರದ ತುಂಗಾನಗರ ಠಾಣೆಯಲ್ಲಿ ಐಪಿಸಿ 323, 324, 307, 504, 341 r/w 149 IPC ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: 17 ವರ್ಷದ ಅಪ್ರಾಪ್ತೆ ಮೇಲೆ ಮೂವರಿಂದ ಅತ್ಯಾಚಾರ

ಚಾಕು ಇರಿತಕ್ಕೆ ಸಂಬಂಧಿಸಿದಂತೆ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಮೀರ್, ಸೋನು ಸೇರಿದಂತೆ ಮೂವರಿಗೆ ಹರಿತವಾದ ವಸ್ತುವಿನಿಂದ ಚುಚ್ಚಲಾಗಿದೆ. ದೇಹದ ಎದೆಯ ಭಾಗಕ್ಕೆ ಹಾಗೂ ಕೈ ಮತ್ತು ಕತ್ತಿನ ಭಾಗಕ್ಕೆ ಚಾಕುವಿನಿಂದ ಇರಿಯಲಾಗಿದೆ. ಪ್ರಾಣಾಪ್ರಾಯದಿಂದ ಎಲ್ಲರೂ ಪಾರಾಗಿದ್ದಾರೆ. ದೂರು ಪಡೆದಿದ್ದೇವೆ. ಈ ಎರಡು ಗುಂಪಿನ ನಡುವೆ ಮೊದಲಿನಿಂದ ವೈಯಕ್ತಿಕ ದ್ವೇಷ ಇದೆ‌. ಕಳೆದ 15 ದಿನಗಳ ಹಿಂದೆಯೂ ಕೂಡ ಇದೇ ರೀತಿ ಗಲಾಟೆ ಮಾಡಿಕೊಂಡಿದ್ದರು. ಗುರುವಾರ ರಾತ್ರಿ ಕಾರ್ಯಕ್ರಮವೊಂದರಲ್ಲಿ ಗುರಾಯಿಸಿಕೊಂಡು ಗಲಾಟೆ ಮಾಡಿಕೊಂಡಿದ್ದಾರೆ. ಪ್ರಕರಣದಲ್ಲಿ ಮೂವರನ್ನು ಈಗಾಗಲೇ ನಾವು ವಶಕ್ಕೆ ಪಡೆದಿದ್ದೇವೆ ಎಂದು ಶಿವಮೊಗ್ಗ ಎಸ್ಪಿ ಜಿ‌.ಕೆ.ಮಿಥುನ್ ಕುಮಾರ್ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:51 am, Fri, 10 November 23