ಸಾಗರದಲ್ಲಿ ಬಜರಂಗದಳ ಕಾರ್ಯಕರ್ತನ ಹತ್ಯೆಗೆ ಯತ್ನ; ಮಂಗಳವಾರ ಅಘೋಷಿತ ಬಂದ್​ಗೆ ಕರೆ

| Updated By: ಆಯೇಷಾ ಬಾನು

Updated on: Jan 09, 2023 | 2:06 PM

Shivamogga: ಸುನೀಲ್​​​ ಜೊತೆ ಸಮೀರ್ ಕಿರಿಕ್​​ ಮಾಡಿಕೊಂಡಿದ್ದಾನೆ. ಈ ವೇಳೆ ಸುನೀಲ್ ಮೇಲೆ ಮಚ್ಚು ಬೀಸಿ ಸಮೀರ್ ಎಸ್ಕೇಪ್ ಆಗಿದ್ದಾನೆ.

ಸಾಗರದಲ್ಲಿ ಬಜರಂಗದಳ ಕಾರ್ಯಕರ್ತನ ಹತ್ಯೆಗೆ ಯತ್ನ; ಮಂಗಳವಾರ ಅಘೋಷಿತ ಬಂದ್​ಗೆ ಕರೆ
ಸುನೀಲ್
Follow us on

ಶಿವಮೊಗ್ಗ: ಜಿಲ್ಲೆಯ ಸಾಗರ ನಗರದಲ್ಲಿ ಬಜರಂಗದಳ ಕಾರ್ಯಕರ್ತನ ಹತ್ಯೆಗೆ ಯತ್ನ ನಡೆದಿದೆ. ನಿನ್ನೆ(ಜ.08) ಶಿವಮೊಗ್ಗದಲ್ಲಿ ನಡೆದ ಶೌರ್ಯ ಸಂಚಲನ ಯಾತ್ರೆಯಲ್ಲಿ ಬೆಳ್ಳಂ ಬೆಳಗ್ಗೆ ಸುನೀಲ್ ಎಂಬ ಬಜರಂಗದಳ ಕಾರ್ಯಕರ್ತನನ್ನು ಸಮೀರ್ ಎಂಬಾತ ಹತ್ಯೆಗೆ ಯತ್ನಿಸಿದ್ದಾನೆ. ದಾಳಿ ವೇಳೆ ಕೂದಲೆಳೆ ಅಂತರದಲ್ಲಿ ಸುನೀಲ್ ಪಾರಾಗಿದ್ದಾನೆ.

ಕಾರ್ಯಕ್ರಮಕ್ಕೆ ತೆರಳಿದ್ದ ಸುನೀಲ್​​​ ಜೊತೆ ಸಮೀರ್ ಕಿರಿಕ್​​ ಮಾಡಿಕೊಂಡಿದ್ದಾನೆ. ಈ ವೇಳೆ ಸುನೀಲ್ ಮೇಲೆ ಮಚ್ಚು ಬೀಸಿ ಸಮೀರ್ ಎಸ್ಕೇಪ್ ಆಗಿದ್ದಾನೆ. ​​ಸುನೀಲ್​ ಮೇಲೆ ದಾಳಿಗೆ ಯತ್ನಿಸಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಾಗರ ನಗರದ ಬಿ.ಹೆಚ್​​.ರಸ್ತೆಯ ಬಸ್ ನಿಲ್ದಾಣ ಬಳಿ ಘಟನೆ ನಡೆದಿದ್ದು ಸಾಗರ ನಗರ ಪೊಲೀಸ್​​​ ಠಾಣೆಯಲ್ಲಿ ದೂರು ದಾಖಲಾಗಿದೆ. ​​

ಹಿಂದೂಪರ ಸಂಘಟನೆಯಿಂದ ನಾಳೆ ಸಾಗರ ನಗರ ಬಂದ್​ಗೆ ಕರೆ

ಇನ್ನು ಘಟನೆ ಸಂಬಂಧ ಬಜರಂಗದಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಹಿಂದೂಪರ ಸಂಘಟನೆಯಿಂದ ನಾಳೆ ಸಾಗರ ನಗರ ಬಂದ್​ಗೆ ಕರೆ ನೀಡಲಾಗಿದೆ. ಸಾಗರದಲ್ಲಿ ಹಿಂದೂಪರ ಸಂಘಟನೆಯಿಂದ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ.

ಇದನ್ನೂ ಓದಿ: ಯಾರುಯಾರೋ ನನ್ನ ಮನೆಗೆ ಬಂದು ಫೋಟೋ ತೆಗೆಸಿಕೊಳ್ತಾರೆ; ಆ ಫೋಟೋ ತೋರಿಸಿ ತೇಜೋವಧೆ ಮಾಡಬಾರದು -ಹೆಚ್​ಡಿಕೆ ವಿರುದ್ಧ ಆರಗ ಜ್ಞಾನೇಂದ್ರ ವಾಗ್ದಾಳಿ

ಸಾಗರದಲ್ಲಿ ನಾವು ಶಾಂತಿಯಿಂದ ಜೀವನ ಮಾಡಲು ಸಾಧ್ಯವಾಗುತ್ತಿಲ್ಲ ಅನ್ನೋದು ಜಿಹಾದಿಗಳಿಂದ ಗೊತ್ತಾಗುತ್ತಿದೆ. ಇವತ್ತಿನ ಕೃತ್ಯದಿಂದ ಜೀವನ ಮಾಡಲು ಸಾಧ್ಯವಾಗುತ್ತಿಲ್ಲ ಅನ್ನೋದು ಗೊತ್ತಾಗುತ್ತಿದೆ. ಈಗಲಾದರೂ ಸಾಗರ ಜನರು ಎಚ್ಚರವಾಗಿ, ನಮ್ಮ ಜೊತೆಗೆ ಕೈ ಜೋಡಿಸಿ, ಇಲ್ಲದೇ ಇದ್ರೆ ನಿಮ್ಮ ಮನೆಯ ಮುಂದಿ ಬೀದಿಯ ಹೆಣ ಆಗೋದು ಖಂಡಿತ ಎಂದು ವಿಶ್ವ ಹಿಂದು ಪರಿಷತ್ ಮುಖಂಡ ರವೀಶ್ ಮನವಿ ಮಾಡಿದ್ದಾರೆ.

ಸಾಗರದಲ್ಲಿ ನಾಳೆ ಬೆಳಗ್ಗೆ ಯಿಂದ ಮಧ್ಯಾಹ್ನ 2ಗಂಟೆ ವರೆಗೆ ಅಘೋಷಿತ ಬಂದ್​ ಮಾಡಬೇಕು ಎಂದು ವಿಶ್ವ ಹಿಂದು ಪರಿಷತ್ ಮುಖಂಡ ಕರೆ ನೀಡಿದ್ದಾರೆ. ಸಾಗರದ ಬೀದಿ ಬೀದಿಯಲ್ಲಿ ಇಂದು ನಾವು ಮೆರವಣಿಗೆ ಮಾಡಲಿದ್ದೇವೆ. ಹಾಗಾಗಿ ಸಾಗರದ ಜನತೆ ಸ್ವಯಂ ಪ್ರೇರಣೆಯಿಂದ ನಾಳಿನ ಬಂದ್​ಗೆ ಬೆಂಬಲಿಸಿ, ಸ್ಪಂದಿಸಿ ಹಿಂದು ಉಳಿವಿಗಾಗಿ ಸಾಗರದ ಜನ ಸಹಕರಿಸಿ ಎಂದು ಮನವಿ ಮಾಡಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:06 pm, Mon, 9 January 23