AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯ Covid ಚಾರ್ಜ್​ಶೀಟ್ ಸಿದ್ಧ, ಅಷ್ಟಾರೋಪ ಪಟ್ಟಿ ಇಲ್ಲಿದೆ

ಬೆಂಗಳೂರು: ಕೊವಿಡ್​ ಚಿಕಿತ್ಸೆಗೆ ಸಂಬಂಧಿಸಿ ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ನಿನ್ನೆ ನಡೆದ Facebook Live ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದರು. ಜೊತೆಗೆ, ಮಾಜಿ ಸಿದ್ದರಾಮಯ್ಯ ಸೇರಿ ಇತರೆ ವಿರೋಧ ಪಕ್ಷದ ನಾಯಕರಿಗೆ ನಿಯಂತ್ರಣ ಕಾರ್ಯದಲ್ಲಿ ಸಲಹೆ ನೀಡಲು ಸಹ ಮನವಿ ಮಾಡಿದ್ದರು. ಇದನ್ನೂ ಓದಿ: ‘ರಾಜ್ಯದ ಜನತೆಗೆ ಲೆಕ್ಕ ಕೊಡಿ’ ಎಂದು ಸರ್ಕಾರಕ್ಕೆ ಸಿದ್ದರಾಮಯ್ಯ ಕೇಳಿರುವ 6 ಪ್ರಶ್ನೆ ಇಲ್ಲಿದೆ ಈ ನಡುವೆ ಕೊವಿಡ್​ ಸಂಬಂಧಪಟ್ಟಂತೆ ​ರಾಜ್ಯ ಸರ್ಕಾರದ ವಿರುದ್ಧ […]

ಸಿದ್ದರಾಮಯ್ಯ Covid ಚಾರ್ಜ್​ಶೀಟ್ ಸಿದ್ಧ, ಅಷ್ಟಾರೋಪ ಪಟ್ಟಿ ಇಲ್ಲಿದೆ
ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಸಿಎಂ ಯಡಿಯೂರಪ್ಪ
KUSHAL V
| Edited By: |

Updated on:Jul 23, 2020 | 3:22 PM

Share

ಬೆಂಗಳೂರು: ಕೊವಿಡ್​ ಚಿಕಿತ್ಸೆಗೆ ಸಂಬಂಧಿಸಿ ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ನಿನ್ನೆ ನಡೆದ Facebook Live ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದರು. ಜೊತೆಗೆ, ಮಾಜಿ ಸಿದ್ದರಾಮಯ್ಯ ಸೇರಿ ಇತರೆ ವಿರೋಧ ಪಕ್ಷದ ನಾಯಕರಿಗೆ ನಿಯಂತ್ರಣ ಕಾರ್ಯದಲ್ಲಿ ಸಲಹೆ ನೀಡಲು ಸಹ ಮನವಿ ಮಾಡಿದ್ದರು.

ಇದನ್ನೂ ಓದಿ: ‘ರಾಜ್ಯದ ಜನತೆಗೆ ಲೆಕ್ಕ ಕೊಡಿ’ ಎಂದು ಸರ್ಕಾರಕ್ಕೆ ಸಿದ್ದರಾಮಯ್ಯ ಕೇಳಿರುವ 6 ಪ್ರಶ್ನೆ ಇಲ್ಲಿದೆ

ಈ ನಡುವೆ ಕೊವಿಡ್​ ಸಂಬಂಧಪಟ್ಟಂತೆ ​ರಾಜ್ಯ ಸರ್ಕಾರದ ವಿರುದ್ಧ ಸಮರ ಸಾರಲು ಮಾಜಿ ಸಿಎಂ ಸಿದ್ದರಾಮಯ್ಯ ಸಿದ್ಧತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.  ಈ ನಿಟ್ಟಿನಲ್ಲಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ತಯಾರಿಸುವ ಆರೋಪಪಟ್ಟಿಯ ವಿವರ ಇದೀಗ ಟಿವಿ9ಗೆ ಲಭ್ಯವಾಗಿದೆ. ಅದರ ಪ್ರಕಾರ ವೈದ್ಯಕೀಯ ಪರಿಕರಗಳ ಖರೀದಿ, ಆಹಾರ ಮತ್ತ ಹೆಲ್ತ್​ ಕಿಟ್​ ವಿತರಣೆ ಮತ್ತು ಇತರೆ ವಿಷಯಗಳಿಗೆ ಸಂಬಂಧಪಟ್ಟಂತೆ ಹಲವು ಪ್ರಶ್ನೆ ಮತ್ತು ಆರೋಪಗಳನ್ನ ಮಾಡಲು ಮುಂದಾಗಿದ್ದಾರೆ. ಅಂದ ಹಾಗೆ, ಸಿದ್ದರಾಮಯ್ಯ ತಯಾರಿಸಿರುವ ಆರೋಪಪಟ್ಟಿ ಹೀಗಿದೆ.

ಸಿದ್ದರಾಮಯ್ಯ ತಯಾರಿಸಿರುವ ಆರೋಪಪಟ್ಟಿಯ ವಿವರ ಹೀಗಿದೆ 1. ಕೇಂದ್ರ ಸರ್ಕಾರ 4 ಲಕ್ಷ ರೂಪಾಯಿಗೆ ಒಂದು ವೆಂಟಿಲೇಟರ್ ಖರೀದಿಸಿದೆ. ಆದರೆ, ರಾಜ್ಯ ಸರ್ಕಾರ ಮಾತ್ರ ಒಂದು ವೆಂಟಿಲೇಟರ್‌ಗೆ 18 ಲಕ್ಷ ರೂಪಾಯಿ ನೀಡಿದ್ದೇಕೆ? 2.ರಾಜ್ಯಕ್ಕೆ ಕೇಂದ್ರ ಸರ್ಕಾರ 1,600 ವೆಂಟಿಲೇಟರ್​ಗಳನ್ನ ನೀಡಿದೆ. ಈ ನಡುವೆ ರಾಜ್ಯ ಸರ್ಕಾರ ಎಷ್ಟು ವೆಂಟಿಲೇಟರ್​ಗಳನ್ನ ಖರೀದಿಸಿದೆ? ಅದರ ದರ ಹಾಗೂ ವ್ಯತ್ಯಾಸದ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು 3.ತಮಿಳುನಾಡು 4 ಲಕ್ಷ ರೂಪಾಯಿಗೆ ಒಂದು ವೆಂಟಿಲೇಟರ್ ಖರೀದಿ ಮಾಡಿದೆ. ಆದರೆ, ನಮ್ಮ ಸರ್ಕಾರ ಮಾತ್ರ ನಾಲ್ಕು ಪಟ್ಟು ಹೆಚ್ಚಿನ ದರ ಸಂದಾಯ ಮಾಡಿರೋದು ಏಕೆ? 4. ಸರ್ಕಾರದ ಬೇರೆ ಬೇರೆ ಇಲಾಖೆಗಳು 4 ಸಾವಿರ ಕೋಟಿ ರೂಪಾಯಿ ವಿವಿಧ ಕಾರ್ಯಗಳಿಗೆ ಖರ್ಚು ಮಾಡಿದೆ. ಆದರೆ, ಯಾವುದೇ ಟೆಂಡರ್ ಕರೆಯದೆ ಇಷ್ಟು ದೊಡ್ಡ ಮೊತ್ತ ಹೇಗೆ ಖರ್ಚಾಯಿತು? 5. BIEC ಕೊವಿಡ್ ಕೇರ್ ಸೆಂಟರ್‌ನಲ್ಲಿ ಸುಮಾರು 9,000 ರೂಪಾಯಿ ಮೌಲ್ಯದ ಹಾಸಿಗೆ ಸೆಟ್‌ಗಳನ್ನು ದಿನಕ್ಕೆ 800 ರೂಪಾಯಿ ಎಂಬಂತೆ 3 ತಿಂಗಳಿಗೆ ಬಾಡಿಗೆ ಪಡೆದಿರುವುದೇಕೆ? 6. ಈಗ ಬಾಡಿಗೆ ನೀಡಿದವರಿಂದಲೇ ಸರ್ಕಾರ ಅರ್ಧ ದರಕ್ಕೆ ಹಾಸಿಗೆ ಸೆಟ್ ಮಾರಾಟ ಮಾಡುವಂತೆ ಅಧಿಕಾರಿಗಳಿಂದ ತೀವ್ರ ಒತ್ತಡ ಹಾಕಿಸುತ್ತಾ ಇದೆ, ಏಕೆ? 7. ಹೆಲ್ತ್​ ಕಿಟ್ ವಿತರಣೆಯಲ್ಲೂ ಭಾರಿ ಗೋಲ್​ಮಾಲ್ ಆಗಿದ್ದು, ಸಂಘ ಸಂಸ್ಥೆಗಳು‌‌ ನೀಡಿದ್ದ ಲೆಕ್ಕವನ್ನ ಸರ್ಕಾರದ ಲೆಕ್ಕದಲ್ಲಿ ತೋರಿಸಲಾಗ್ತಾಯಿದೆ 8. ಆಹಾರ ಕಿಟ್‌ ವಿತರಣೆಯಲ್ಲೂ ಇದೇ ರೀತಿ ಬಿಲ್ ಮಾಡಲಾಗಿದೆ ಹೀಗೆ, ಸರ್ಕಾರಕ್ಕೆ ಅಷ್ಟಾರೋಪ ಪಟ್ಟಿ ತಯಾರಿಸಿರುವ ಸಿದ್ದರಾಮಯ್ಯ ಇದೀಗ ಇದನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಸಮರ ಸಾರಲು ಸಜ್ಜಾಗಿದ್ದಾರೆ.

Published On - 3:11 pm, Wed, 22 July 20

ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ
ಗಾಂಜಾ ಪೆಡ್ಲರ್ ಜತೆ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ: ಜನಾರ್ದನ ರೆಡ್ಡಿ ಆರೋಪ
ಗಾಂಜಾ ಪೆಡ್ಲರ್ ಜತೆ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ: ಜನಾರ್ದನ ರೆಡ್ಡಿ ಆರೋಪ
ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್