‘ಪಕ್ಷಕ್ಕಾಗಿ ಖರ್ಚು ಮಾಡೋಕೆ ನಾನು ಬೇಕು, ಚೇಲಾಗಳಿಗೆ ಮಾತ್ರ ಟಿಕೆಟ್ ಕೊಡ್ತೀರಾ‘

ಚಿಕ್ಕೋಡಿ: ಕಾಂಗ್ರೆಸ್ ಟಿಕೆಟ್ ತರೋದರಲ್ಲಿ ನೀವು ಸಕ್ಸಸ್ ಆಗಿದ್ದೀರಿ, ಆದ್ರೆ ನಿಮ್ಮನ್ನ ತೆಗೆಯೋದ್ರಲ್ಲಿ ನಾವು ಸಕ್ಸಸ್ ಆಗುತ್ತೇವೆ ಎಂದು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಬುಟಾಳಿ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಅಥಣಿಯಲ್ಲಿ ಕಾಂಗ್ರೆಸ್ ಟಿಕೆಟ್ ವಂಚಿತರಾಗಿರುವ ಬುಟಾಳಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷ ಸಂಘಟನೆ ಮಾಡುವುದಕ್ಕೆ ನಾನು ಬೇಕು, ಪಕ್ಷಕ್ಕಾಗಿ ಖರ್ಚು ಮಾಡುವುದಕ್ಕೆ ನನ್ನನ್ನು ಬಳಸಿಕೊಳ್ತಾರೆ ಆದರೆ ಟಿಕೆಟ್ ಮಾತ್ರ ಚೇಲಾಗಳಿಗೆ ಕೊಡ್ತೀರಾ ಎಂದು ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ […]

‘ಪಕ್ಷಕ್ಕಾಗಿ ಖರ್ಚು ಮಾಡೋಕೆ ನಾನು ಬೇಕು, ಚೇಲಾಗಳಿಗೆ ಮಾತ್ರ ಟಿಕೆಟ್ ಕೊಡ್ತೀರಾ‘
ಸಾಧು ಶ್ರೀನಾಥ್​

Updated on: Nov 19, 2019 | 1:06 PM

ಚಿಕ್ಕೋಡಿ: ಕಾಂಗ್ರೆಸ್ ಟಿಕೆಟ್ ತರೋದರಲ್ಲಿ ನೀವು ಸಕ್ಸಸ್ ಆಗಿದ್ದೀರಿ, ಆದ್ರೆ ನಿಮ್ಮನ್ನ ತೆಗೆಯೋದ್ರಲ್ಲಿ ನಾವು ಸಕ್ಸಸ್ ಆಗುತ್ತೇವೆ ಎಂದು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಬುಟಾಳಿ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ಅಥಣಿಯಲ್ಲಿ ಕಾಂಗ್ರೆಸ್ ಟಿಕೆಟ್ ವಂಚಿತರಾಗಿರುವ ಬುಟಾಳಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷ ಸಂಘಟನೆ ಮಾಡುವುದಕ್ಕೆ ನಾನು ಬೇಕು, ಪಕ್ಷಕ್ಕಾಗಿ ಖರ್ಚು ಮಾಡುವುದಕ್ಕೆ ನನ್ನನ್ನು ಬಳಸಿಕೊಳ್ತಾರೆ ಆದರೆ ಟಿಕೆಟ್ ಮಾತ್ರ ಚೇಲಾಗಳಿಗೆ ಕೊಡ್ತೀರಾ ಎಂದು ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಟಿಕೆಟ್ ಸಿಗುತ್ತಿದ್ದಂತೆ ಡಿಸಿಎಂ ಸವದಿ ಕಾಲು ಹಿಡಿದಿದ್ದನು ಎಂದು ಗಜಾನನ ಮಂಗಸೂಳಿ ವಿರುದ್ಧ S.K.ಬುಟಾಳಿ ಆರೋಪಿಸಿದ್ದಾರೆ.

Published On - 9:16 am, Mon, 18 November 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us