AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುರ್ಗಕ್ಕೆ ಬರಲಿದೆ ಭದ್ರಾ ನೀರು, ಆದ್ರೆ ಇಲ್ಲಿನ ಕೆರೆಕಟ್ಟೆಗೆ ಅದನ್ನ ಹಿಡಿದಿಡುವ ಸಾಮರ್ಥ್ಯ ಇದೆಯಾ?

ಚಿತ್ರದುರ್ಗ: ಬರದನಾಡು ಚಿತ್ರದುರ್ಗ ಜನರ ಬಹುದಿನಗಳ ಕನಸು ಭದ್ರಾ ಮೇಲ್ದಂಡೆ ಯೋಜನೆ ಕೊನೇ ಹಂತದಲ್ಲಿದೆ. ಚಿಕ್ಕಮಗಳೂರು ಜಿಲ್ಲೆ ಮುತ್ತಿನಕೊಪ್ಪ, ಭದ್ರಾ ಡ್ಯಾಂ ಹಾಗೂ ಅಜ್ಜಂಪುರ ಬಳಿ ಭರದಿಂದ ಕೆಲಸ ನಡೀತಿದೆ. ಈ ಯೋಜನೆಯಿಂದಾಗಿ ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ 193 ಹಳ್ಳಿಗಳಿಗೆ ನೀರಾವರಿ ಸೌಲಭ್ಯ ಸಿಗಲಿದೆ. ಅಲ್ಲದೆ, ನಾಲ್ಕು ಜಿಲ್ಲೆಗಳ 156 ಕೆರೆಗಳಿಗೆ ನೀರು ತುಂಬಿಸುವ ಉದ್ದೇಶ ಕೂಡ ಇದೆ. ಆದ್ರೆ, ನೀರು ತುಂಬಬೇಕಾದ ಕೆರೆಗಳೇ ದುಸ್ಥಿತಿಯಲ್ಲಿವೆ. ಚಿತ್ರದುರ್ಗ ಜಿಲ್ಲೆಯ ಬಹುತೇಕ ಕೆರೆಗಳಲ್ಲಿ ಗಿಡ ಗಂಟಿಗಳು ಬೆಳೆದಿದ್ದು, […]

ದುರ್ಗಕ್ಕೆ ಬರಲಿದೆ ಭದ್ರಾ ನೀರು, ಆದ್ರೆ ಇಲ್ಲಿನ ಕೆರೆಕಟ್ಟೆಗೆ ಅದನ್ನ ಹಿಡಿದಿಡುವ ಸಾಮರ್ಥ್ಯ ಇದೆಯಾ?
ಸಾಧು ಶ್ರೀನಾಥ್​
|

Updated on:Nov 18, 2019 | 7:55 AM

Share

ಚಿತ್ರದುರ್ಗ: ಬರದನಾಡು ಚಿತ್ರದುರ್ಗ ಜನರ ಬಹುದಿನಗಳ ಕನಸು ಭದ್ರಾ ಮೇಲ್ದಂಡೆ ಯೋಜನೆ ಕೊನೇ ಹಂತದಲ್ಲಿದೆ. ಚಿಕ್ಕಮಗಳೂರು ಜಿಲ್ಲೆ ಮುತ್ತಿನಕೊಪ್ಪ, ಭದ್ರಾ ಡ್ಯಾಂ ಹಾಗೂ ಅಜ್ಜಂಪುರ ಬಳಿ ಭರದಿಂದ ಕೆಲಸ ನಡೀತಿದೆ.

ಈ ಯೋಜನೆಯಿಂದಾಗಿ ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ 193 ಹಳ್ಳಿಗಳಿಗೆ ನೀರಾವರಿ ಸೌಲಭ್ಯ ಸಿಗಲಿದೆ. ಅಲ್ಲದೆ, ನಾಲ್ಕು ಜಿಲ್ಲೆಗಳ 156 ಕೆರೆಗಳಿಗೆ ನೀರು ತುಂಬಿಸುವ ಉದ್ದೇಶ ಕೂಡ ಇದೆ. ಆದ್ರೆ, ನೀರು ತುಂಬಬೇಕಾದ ಕೆರೆಗಳೇ ದುಸ್ಥಿತಿಯಲ್ಲಿವೆ.

ಚಿತ್ರದುರ್ಗ ಜಿಲ್ಲೆಯ ಬಹುತೇಕ ಕೆರೆಗಳಲ್ಲಿ ಗಿಡ ಗಂಟಿಗಳು ಬೆಳೆದಿದ್ದು, ಹೂಳು ತುಂಬಿಕೊಂಡಿದೆ. ಈ ಬಗ್ಗೆ ನೀರಾವರಿ ಇಲಾಖೆ ಕೂಡ ತಲೆ ಕೆಡಿಸಿಕೊಂಡಿಲ್ಲ. ಹೀಗಾಗಿ, ದುಸ್ಥಿತಿಯಲ್ಲಿರೋ ಕೆರೆಗಳಿಗೆ ನೀರು ಬಂದ್ರೆ ಕಥೆ ಏನು ಅನ್ನೋದು ಸ್ಥಳೀಯರ ಪ್ರಶ್ನೆ.

ಕೆರೆ ಅಭಿವೃದ್ಧಿಗೆ ರೈತರ ಪಟ್ಟು: ಇನ್ನು ಇತ್ತೀಚೆಗೆ ಸುರಿದ ಮಹಾ ಮಳೆಯಿಂದಾಗಿ ನೀರಗುಂದ ಗ್ರಾಮದ ಕೆರೆ ಕಟ್ಟೆ ಒಡೆದು ನೀರು ಹರಿದು ಹೋಗಿದೆ. ಕಾತ್ರಾಳ್ ಕೆರೆ ತೂಬು ಒಡೆದಿದ್ದು ಕಳೆದೊಂದು ತಿಂಗಳಿಂದ ನೀರು ಪೋಲಾಗುತ್ತಿದೆ. ಇಷ್ಟೇ ಅಲ್ಲ. ಚಿತ್ರದುರ್ಗ ತಾಲೂಕಿನ ಮುದ್ದಾಪುರ ಕೆರೆ, ಮಲ್ಲಾಪುರ ಕೆರೆ ಹಾಗು ಗೋನೂರು ಕೆರೆಗಳ ಒಡ್ಡು ಶಿಥಿಲಗೊಂಡಿದೆ.

ಒಂದ್ವೇಳೆ ಕೆರೆ ಏನಾದ್ರೂ ಫುಲ್ ಆದ್ರೆ ಒಡ್ಡು ಒಡೆದು ಹೋಗೋ ಎಲ್ಲಾ ಸಾಧ್ಯತೆ ಇದೆ. ಇದಲ್ಲದೆ, ಜಿಲ್ಲೆಯ 30ಕ್ಕೂ ಹೆಚ್ಚು ಕೆರೆಗಳು ದುಸ್ಥಿತಿಯಲ್ಲಿವೆ. ಹೀಗಾಗಿ, ಭದ್ರಾ ಮೇಲ್ದಂಡೆ ಯೋಜನೆ ನೀರು ಬರುವ ಮುನ್ನ ಕೆರೆಗಳನ್ನ ಅಭಿವೃದ್ಧಿಪಡಿಸಿ ಅಂತ ರೈತರು ಪಟ್ಟು ಹಿಡಿದಿದ್ದಾರೆ.

Published On - 7:03 am, Mon, 18 November 19