ಕೊಠಡಿಗಳು ಗ್ರಾಮ ಪಂಚಾಯತ್ ಚುನಾವಣೆಗೆ ಬಳಕೆ: ಕಾಲೇಜಿಗೆ ಬಂದ ವಿದ್ಯಾರ್ಥಿಗಳು ವಾಪಸ್​

ಕಾಲೇಜಿನ ಕೋಣೆಗಳು ಚುನಾವಣೆಗೆ ಬಳಿಕಯಾದ ಹಿನ್ನೆಲೆಯಿಂದಾಗಿ ಗಬ್ಬೆದ್ದು ನಾರುತ್ತಿವೆ. ಎಲ್ಲಂದರಲ್ಲಿ ಕಸ ಬಿದ್ದಿದ್ದು ತಾಲೂಕು ಆಡಳಿತ ಕಸವನ್ನ ಕ್ಲೀನ್ ಮಾಡುವ ಗೋಜಿಗೆ ಇನ್ನೂ ಸಹ ಹೋಗಿಲ್ಲ. ಇಂದಿನಿಂದ ಕಾಲೇಜು ಆರಂಭವಾಗಿರುವುದರಿಂದ ಉಪನ್ಯಾಸಕರು ಕಾಲೇಜಿನಲ್ಲಿ ಬಂದು ಕುಳಿತ್ತಿದ್ದಾರೆ.

ಕೊಠಡಿಗಳು ಗ್ರಾಮ ಪಂಚಾಯತ್ ಚುನಾವಣೆಗೆ ಬಳಕೆ: ಕಾಲೇಜಿಗೆ ಬಂದ ವಿದ್ಯಾರ್ಥಿಗಳು ವಾಪಸ್​
ಗಬ್ಬೆದ್ದು ನಾರುತ್ತಿರುವ ಕಾಲೇಜು ಕೊಠಡಿಗಳು
Edited By: ಆಯೇಷಾ ಬಾನು

Updated on: Jan 01, 2021 | 1:37 PM

ಯಾದಗಿರಿ: ಕಾಲೇಜು ಕೋಣೆ ಸಿದ್ಧವಿರದ ಕಾರಣ ವಿದ್ಯಾರ್ಥಿನಿಯರು ಮನೆಗೆ ವಾಪಸ್ ಹೋದ ಘಟನೆ ಯಾದಗಿರಿ ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದೆ.

ಗ್ರಾ.ಪಂ ಚುನಾವಣೆ ಮಸ್ಟರಿಂಗ್ ಹಾಗೂ ಡಿ ಮಸ್ಟರಿಂಗ್​ಗಾಗಿ ಬಳಕೆಯಾಗಿದ್ದ ಕಾಲೇಜಿನ ಕೋಣೆಗಳು ಇವತ್ತಿನಿಂದ ಓಪನ್ ಆಗಿದ್ರು ಸಹ ಈ ಕಾಲೇಜು ಇನ್ನು ಸಿದ್ದವಾಗಿಲ್ಲ. ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕು ಆಡಳಿತಕ್ಕೆ ಕಾಲೇಜು ಕಟ್ಟಡ ನೀಡಲಾಗಿತ್ತು. ಆದರೆ ಚುನಾವಣೆ ಮುಗಿದು ಎರಡು ದಿನ ಕಳೆದ್ರು ತಾಲೂಕು ಆಡಳಿತ ಇನ್ನು ಸಹ ಕಾಲೇಜು ಕಟ್ಟಡವನ್ನ ಬಿಟ್ಟುಕೊಟ್ಟಿಲ್ಲ.

ಕಾಲೇಜಿನ ಕೋಣೆಗಳು ಚುನಾವಣೆಗೆ ಬಳಿಕಯಾದ ಹಿನ್ನೆಲೆಯಿಂದಾಗಿ ಗಬ್ಬೆದ್ದು ನಾರುತ್ತಿವೆ. ಎಲ್ಲಂದರಲ್ಲಿ ಕಸ ಬಿದ್ದಿದ್ದು ತಾಲೂಕು ಆಡಳಿತ ಕಸವನ್ನ ಕ್ಲೀನ್ ಮಾಡುವ ಗೋಜಿಗೆ ಇನ್ನೂ ಸಹ ಹೋಗಿಲ್ಲ. ಇಂದಿನಿಂದ ಕಾಲೇಜು ಆರಂಭವಾಗಿರುವುದರಿಂದ ಉಪನ್ಯಾಸಕರು ಕಾಲೇಜಿನಲ್ಲಿ ಬಂದು ಕುಳಿತ್ತಿದ್ದಾರೆ. ಆದರೆ ಕೊಠಡಿಗಳು ರೆಡಿ ಇಲ್ಲದ ಕಾರಣ ಕಾಲೇಜಿಗೆ ಬಂದಿದ್ದ ವಿದ್ಯಾರ್ಥಿನಿಯರು ಕೊಠಡಿಯಲ್ಲಿ ಕೂರಲು ಹಿಂದೇಟು ಹಾಕಿದ್ದಾರೆ. ಹೀಗಾಗಿ ಉಪನ್ಯಾಸಕರು, ವಿದ್ಯಾರ್ಥಿಗಳಿಂದ ಒಪ್ಪಿಗೆ ಪತ್ರ ಪಡೆದು ಅವರನ್ನು ಮನೆಗೆ ಕಳುಹಿಸಿದ್ದಾರೆ.

‘ಬನ್ನಿ ಕೊರೊನಾ ಓಡಿಸೋಣ ವಿದ್ಯಾರ್ಥಿಗಳನ್ನು ಓದಿಸೋಣ’ 10 ತಿಂಗಳ ಬಳಿಕ ಇಂದಿನಿಂದ ಶಾಲಾ-ಕಾಲೇಜು ರೀ ಓಪನ್

Published On - 12:15 pm, Fri, 1 January 21

pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us