ವಕ್ಫ್ ಬೋರ್ಡ್​ನ ಉದ್ಧಟತನಕ್ಕೆ, ಅತಿಕ್ರಮಣ ನೀತಿಗೆ ಇದು ಮತ್ತೊಂದು ಉದಾಹರಣೆ: ತೇಜಸ್ವಿ ಸೂರ್ಯ

ವಕ್ಫ್ ಆಕ್ರಮಿತ ಆಸ್ತಿಗಳ ಕುರಿತಾಗಿ ಸಚಿವ ಎಂಬಿ ಪಾಟೀಲ್​ರ ಗಮನಕ್ಕೆ ಬಂದಿರುವುದು ವಿಜಯಪುರ ಜಿಲ್ಲೆಯ ಕೇವಲ ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ ಕೆಲವು ಜಮೀನುಗಳಿಗೆ ಬಂದಿರುವ ನೋಟಿಸ್​ಗಳ ಕುರಿತಾಗಿ ಮಾತ್ರ. ಆದರೆ ಜಿಲ್ಲೆಯ 211 ಗ್ರಾಮ ಪಂಚಾಯತಿಗಳ ರೈತರು, ಸಾರ್ವಜನಿಕರ ಗೋಳು ಕೂಡ ಇದೇ ಆಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಕಿಡಿಕಾರಿದ್ದಾರೆ.

ವಕ್ಫ್ ಬೋರ್ಡ್​ನ ಉದ್ಧಟತನಕ್ಕೆ, ಅತಿಕ್ರಮಣ ನೀತಿಗೆ ಇದು ಮತ್ತೊಂದು ಉದಾಹರಣೆ: ತೇಜಸ್ವಿ ಸೂರ್ಯ
ವಕ್ಫ್ ಬೋರ್ಡ್​ನ ಉದ್ಧಟತನಕ್ಕೆ, ಅತಿಕ್ರಮಣ ನೀತಿಗೆ ಇದು ಮತ್ತೊಂದು ಉದಾಹರಣೆ: ತೇಜಸ್ವಿ ಸೂರ್ಯ
Follow us
|

Updated on:Oct 20, 2024 | 9:57 PM

ಬೆಂಗಳೂರು, ಅಕ್ಟೋಬರ್​ 20: ವಕ್ಫ್ ಆಸ್ತಿ ಎಂದು ನೋಟಿಸ್ ಬಂದರೆ ಆತಂಕ ಬೇಡ ಎಂಬ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್​ ಹೇಳಿಕೆ ವಿಚಾರವಾಗಿ ವಕ್ಫ್ ಬೋರ್ಡ್​ನ ಉದ್ಧಟತನಕ್ಕೆ, ಅತಿಕ್ರಮಣ ಮತ್ತು ವಿಸ್ತರಣಾ ನೀತಿಗೆ ಇದು ಮತ್ತೊಂದು ಉದಾಹರಣೆ ಎಂದು ಬಿಜೆಪಿ ಸಂಸದ ತೇಜಸ್ವಿ (Tejasvi Surya) ಸೂರ್ಯ ಕಿಡಿಕಾರಿದ್ದಾರೆ.

ಎಂಬಿ ಪಾಟೀಲ್ ವಿರುದ್ಧ ತೇಜಸ್ವಿ ಸೂರ್ಯ ಕಿಡಿ

ಸದ್ಯ ಈ ವಿಚಾರವಾಗಿ ಟ್ವೀಟ್ ಮಾಡಿರುವ ತೇಜಸ್ವಿ ಸೂರ್ಯ, ವಕ್ಫ್ ಆಕ್ರಮಿತ ಆಸ್ತಿಗಳ ಕುರಿತಾಗಿ ಸಚಿವ ಎಂಬಿ ಪಾಟೀಲ್​ರ ಗಮನಕ್ಕೆ ಬಂದಿರುವುದು ವಿಜಯಪುರ ಜಿಲ್ಲೆಯ ಕೇವಲ ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ ಕೆಲವು ಜಮೀನುಗಳಿಗೆ ಬಂದಿರುವ ನೋಟಿಸ್​ಗಳ ಕುರಿತಾಗಿ ಮಾತ್ರ. ಆದರೆ ಜಿಲ್ಲೆಯ 211 ಗ್ರಾಮ ಪಂಚಾಯತಿಗಳ ರೈತರು, ಸಾರ್ವಜನಿಕರ ಗೋಳು ಕೂಡ ಇದೇ ಆಗಿದೆ ಎಂದಿದ್ದಾರೆ.

ತೇಜಸ್ವಿ ಸೂರ್ಯ ಟ್ವೀಟ್​

ವಿಜಯಪುರ ಜಿಲ್ಲೆಯೊಂದರಲ್ಲಯೇ 12,900 ಎಕರೆಯಷ್ಟು ಭೂಮಿಯನ್ನು ಶೀಘ್ರಗತಿಯಲ್ಲಿ ವಕ್ಫ್‌ ಹೆಸರಿಗೆ ನೋಂದಾಯಿಸಲು ಜಮೀರ್‌ ಅಹ್ಮದ್‌ ಖಾನ್​ ಅವರು ಹೇಳಿದ್ದರೂ ಕೂಡ, ನೈಜ ಅಂಕಿ-ಅಂಶಗಳ ಪ್ರಕಾರ 15,900 ಎಕರೆ ಗಳಷ್ಟು ಭೂಮಿ ಅತಿಕ್ರಮಣವಾಗಿರುವ ಅಂದಾಜಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿನ ಭೂಮಿ ದಲಿತರು ಮತ್ತು ಹಿಂದುಳಿದ ವರ್ಗದ ಜನರದ್ದಾಗಿದೆ ಎಂಬುದು ಗಮನಾರ್ಹ ಎಂದು ಹೇಳಿದ್ದಾರೆ.

ಇತ್ತೀಚೆಗೆ ಸಚಿವ ಜಮೀರ್ ಅಹ್ಮದ್ ಖಾನ್​ ಅವರು, ವಿಜಯಪುರದಲ್ಲಿ ಅಧಿಕಾರಿಗಳಿಗೆ ಕೇವಲ ಮೌಖಿಕ ಆದೇಶ ನೀಡಿ, 12,900 ಎಕರೆ ಭೂಮಿಯನ್ನು ವಕ್ಫ್‌ ಹೆಸರಿನಲ್ಲಿ ನಮೂದಾಗಿರುವ ಎಲ್ಲ ಆಸ್ತಿಗಳನ್ನು ನೋಂದಣಿ ಮಾಡಿಕೊಳ್ಳಲು ಅಧಿಕಾರಿಗಳಿಗೆ ಖಡಕ್‌ ಆದೇಶ ನೀಡಿದರೆ, ತಾವುಗಳು ರೈತರ, ಸಾರ್ವಜನಿಕರ ಪರವಾಗಿ ಸಾಂತ್ವನ ಹೇಳುತ್ತಿರುವುದು ಒಂದಕ್ಕೊಂದು ತದ್ವಿರುದ್ಧವಾಗಿದೆ. ಇದರಿಂದ ಸಾರ್ವಜನಿಕರಿಗೆ ಯಾವ ಸಂದೇಶ ನೀಡಿದಂತಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಕಾಲುಕೆರೆದು ಜಗಳಕ್ಕೆ ಹೋಗುವ ಪ್ರವೃತ್ತಿ ಪ್ರದರ್ಶಿಸಿದ ಸಚಿವ ಜಮೀರ್ ಅಹ್ಮದ್

ಕಾಂಗ್ರೆಸ್​ ಪಕ್ಷಕ್ಕೆ ವಕ್ಫ್​​ನ ಅತಿಕ್ರಮಣದ ಬಗ್ಗೆ, ಜನಸಾಮಾನ್ಯರ ಬಗೆಗೆ ನೈಜ ಕಾಳಜಿ ಇದ್ದರೆ, ಪ್ರಸ್ತುತ ಬಿಜೆಪಿ ಸರ್ಕಾರ ತರಲು ಉದ್ದೇಶಿಸಿರುವ ವಕ್ಫ್‌ ಕಾಯ್ದೆ ತಿದ್ದುಪಡಿಗೆ ವಿರೋಧಿಸದೇ ಸಹಕಾರ ನೀಡಬೇಕಿದ್ದು, ತಾವುಗಳು ಈ ಕುರಿತು ಧ್ವನಿ ಎತ್ತಿ, ವಿಜಯಪುರದ ಹಿಂದೂಗಳ ಪರವಾಗಿ ನಿಲ್ಲುವಂತೆ ವಿನಂತಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:56 pm, Sun, 20 October 24

BBK11: ಜಗದೀಶ್ ಬಳಿಕ ಬಿಗ್ ಬಾಸ್ ಮನೆಯಲ್ಲಿ ಹನುಮಂತನ ಹವಾ ಶುರು
BBK11: ಜಗದೀಶ್ ಬಳಿಕ ಬಿಗ್ ಬಾಸ್ ಮನೆಯಲ್ಲಿ ಹನುಮಂತನ ಹವಾ ಶುರು
‘ಸುದೀಪ್ ತಾಯಿ ನಿಧನದಿಂದ ನಮಗೆಲ್ಲ ದುಃಖವಾಗಿದೆ’: ಒಡನಾಟ ನೆನೆದ ಬೊಮ್ಮಾಯಿ
‘ಸುದೀಪ್ ತಾಯಿ ನಿಧನದಿಂದ ನಮಗೆಲ್ಲ ದುಃಖವಾಗಿದೆ’: ಒಡನಾಟ ನೆನೆದ ಬೊಮ್ಮಾಯಿ
ಡಿಕೆ ಶಿವಕುಮಾರ್​​ರನ್ನು ಸಿಎಂ ಮಾಡಿ ತೋರಿಸುತ್ತೇವೆ: ಸ್ವಾಮೀಜಿ ಶಪಥ
ಡಿಕೆ ಶಿವಕುಮಾರ್​​ರನ್ನು ಸಿಎಂ ಮಾಡಿ ತೋರಿಸುತ್ತೇವೆ: ಸ್ವಾಮೀಜಿ ಶಪಥ
ಸುದೀಪ್ ತಾಯಿ ಬಗ್ಗೆ ರಾಘಣ್ಣ ಮಾತು, ಹಳೆಯ ನೆನಪುಗಳ ಮೆಲುಕು
ಸುದೀಪ್ ತಾಯಿ ಬಗ್ಗೆ ರಾಘಣ್ಣ ಮಾತು, ಹಳೆಯ ನೆನಪುಗಳ ಮೆಲುಕು
ದೆಹಲಿ: ಸಿಆರ್​ಪಿಎಫ್​ ಸ್ಕೂಲ್ ಎದುರು ನಿಗೂಢ ಸ್ಫೋಟ
ದೆಹಲಿ: ಸಿಆರ್​ಪಿಎಫ್​ ಸ್ಕೂಲ್ ಎದುರು ನಿಗೂಢ ಸ್ಫೋಟ
ಬೆಂಗಳೂರು ಮಳೆ: ಸಿಲ್ಕ್​ಬೋರ್ಡ್​ ಜಂಕ್ಷನ್​​ನಲ್ಲಿ ರಸ್ತೆಯಲ್ಲಿ ನಿಂತ ನೀರು
ಬೆಂಗಳೂರು ಮಳೆ: ಸಿಲ್ಕ್​ಬೋರ್ಡ್​ ಜಂಕ್ಷನ್​​ನಲ್ಲಿ ರಸ್ತೆಯಲ್ಲಿ ನಿಂತ ನೀರು
ಬಿಗ್​ಬಾಸ್ ವೇದಿಕೆ ಮೇಲೆ ಲಾಯರ್ ಜಗದೀಶ್, ಮನೆಗೆ ಮತ್ತೆ ಎಂಟ್ರಿ?
ಬಿಗ್​ಬಾಸ್ ವೇದಿಕೆ ಮೇಲೆ ಲಾಯರ್ ಜಗದೀಶ್, ಮನೆಗೆ ಮತ್ತೆ ಎಂಟ್ರಿ?
ಸ್ತ್ರೀಯರು ಬೈತಲೆ ತೆಗೆದು ತಲೆ ಬಾಚಿದ್ರೆ ಏನಾಗುತ್ತೆ? ವಿಡಿಯೋ ನೋಡಿ
ಸ್ತ್ರೀಯರು ಬೈತಲೆ ತೆಗೆದು ತಲೆ ಬಾಚಿದ್ರೆ ಏನಾಗುತ್ತೆ? ವಿಡಿಯೋ ನೋಡಿ
ವಾರ ಭವಿಷ್ಯ: ಅಕ್ಟೋಬರ್ 21 ರಿಂದ 27 ರವರೆಗೆ ವಾರ ಭವಿಷ್ಯ ಹೀಗಿದೆ
ವಾರ ಭವಿಷ್ಯ: ಅಕ್ಟೋಬರ್ 21 ರಿಂದ 27 ರವರೆಗೆ ವಾರ ಭವಿಷ್ಯ ಹೀಗಿದೆ
Nithya Bhavishya: ರವಿವಾರ ಸಂಕಷ್ಟ ಚತುರ್ಥಿ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ರವಿವಾರ ಸಂಕಷ್ಟ ಚತುರ್ಥಿ ದಿನದ ರಾಶಿ ಭವಿಷ್ಯ ತಿಳಿಯಿರಿ