AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೀಟರ್​​ ಎಮ್ಮೆ ಹಾಲಿಗೆ ರೈತರಿಗೆ ಹೆಚ್ಚುವರಿಯಾಗಿ ಸಿಗಲಿದೆ 9.25 ರೂ; ಈ ಜಿಲ್ಲೆಗಳ ರೈತರಿಗೆ ಮಾತ್ರ

ಪ್ರತಿ ಲೀಟರ್ ಎಮ್ಮೆ ಹಾಲಿಗೆ ಹೆಚ್ಚುವರಿಯಾಗಿ ರೈತರಿಗೆ 9.25 ರೂಪಾಯಿ ನೀಡಲು ಕೆಎಂಎಫ್​​​ (KMF) ಮುಂದಾಗಿದೆ. ಕೆಲವು ಜಿಲ್ಲೆಗಳ ರೈತರಿಗೆ ಮಾತ್ರ ಈ ಪ್ರಯೋಜನ ದೊರೆಯಲಿದೆ.

ಲೀಟರ್​​ ಎಮ್ಮೆ ಹಾಲಿಗೆ ರೈತರಿಗೆ ಹೆಚ್ಚುವರಿಯಾಗಿ ಸಿಗಲಿದೆ 9.25 ರೂ; ಈ ಜಿಲ್ಲೆಗಳ ರೈತರಿಗೆ ಮಾತ್ರ
ಸಾಂದರ್ಭಿಕ ಚಿತ್ರ
Ganapathi Sharma
|

Updated on: Jun 10, 2023 | 12:14 PM

Share

ಕಲಬುರಗಿ: ಪ್ರತಿ ಲೀಟರ್ ಎಮ್ಮೆ ಹಾಲಿಗೆ ಹೆಚ್ಚುವರಿಯಾಗಿ ರೈತರಿಗೆ 9.25 ರೂಪಾಯಿ ನೀಡಲು ಕೆಎಂಎಫ್​​​ (KMF) ಮುಂದಾಗಿದೆ. ಸದ್ಯ ಪ್ರತಿ ಲೀಟರ್ ಎಮ್ಮೆ ಹಾಲಿಗೆ 36.80 ರೂ ನೀಡಲಾಗುತ್ತಿದೆ. ಇನ್ನು ಮುಂದೆ ಲೀಟರ್​ ಹಾಲಿಗೆ 46 ರೂ. ನೀಡಲು ಕೆಎಂಎಫ್​​​ ತೀರ್ಮಾನಿಸಿದೆ. ಭಾನುವಾರದಿಂದಲೇ ರೈತರಿಗೆ ಹೆಚ್ಚುವರಿ ಹಣ ನೀಡಲಾಗುವುದು ಎಂದು ಕೆಎಂಎಫ್ ತಿಳಿಸಿದೆ.

ಆದರೆ, ಹೆಚ್ಚುವರಿ ಹಣದ ಪ್ರಯೋಜನ ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆಯ ರೈತರಿಗೆ ಮಾತ್ರ ಅನ್ವಯವಾಗಲಿದೆ ಎಂದು ಈ ಜಿಲ್ಲೆಗಳ ಹಾಲು ಒಕ್ಕೂಟದ ಅಧ್ಯಕ್ಷ ಆರ್​ಕೆ ಪಾಟೀಲ್ ಕಲಬುರಗಿಯಲ್ಲಿ ತಿಳಿಸಿದ್ದಾರೆ.

ಈ ಮಧ್ಯೆ, ರಾಜ್ಯದಲ್ಲಿ ದರ ಏರಿಕೆಯಾಗುವ ಸಾಧ್ಯತೆ ಇದೆ. ನಂದಿನಿ ಹಾಲಿನ ದರ ಪರಿಷ್ಕರಿಸುವಂತೆ ಒಕ್ಕೂಟಗಳು ಪಟ್ಟು ಹಿಡಿದಿವೆ ಎಂದು ಕಳೆದ ಕೆಲವು ದಿನಗಳಿಂದ ವರದಿಯಾಗುತ್ತಿವೆ.

ಬಮೂಲ್​ಗೆ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಪೂರೈಕೆ ಆಗುವ ಹಾಲಿನ ಪ್ರಮಾಣ ಕಡಿಮೆ ಆಗಿತ್ತು. ಹೀಗಾಗಿ ಏಪ್ರಿಲ್ ತಿಂಗಳಿನಲ್ಲಿ ಕಾರ್ಯಕಾರಿಣಿ ಸಭೆಯಲ್ಲಿ ತೀರ್ಮಾನ ಮಾಡಿ ರೈತರಿಗೆ 3 ರೂಪಾಯಿ ಪ್ರೋತ್ಸಾಹ ಧನ ನೀಡಿದ್ದೆವು. ಅದು ಬಮೂಲ್​ಗೆ ಮಾರ್ಚ್ ತಿಂಗಳವರೆಗೆ ಬಂದಿದ್ದ 10 ಕೋಟಿ ರೂ. ಲಾಭದಿಂದ ಕೊಟ್ಟಿದ್ದು. ಇದ್ರಿಂದ ರೈತರಿಗೆ ಲೀಟರ್​​ಗೆ ಗೆ 31 ರೂ ಇದ್ದ ಹಣವನ್ನು 34 ರೂ.ಗೆ ಹೆಚ್ಚಿಸಿದ್ದೆವು. ಜೂನ್ ವರೆಗೆ ಮಾತ್ರ ಅಂದ್ರೆ ಎರಡು ತಿಂಗಳು ಮಾತ್ರ ಪ್ರೋತ್ಸಾಹ ಧನ ನೀಡಬೇಕು ಅಂತ ಮೊದಲೆ ತೀರ್ಮಾನಿಸಿದ್ದೆವು. ಸರ್ಕಾರದ ಪ್ರೋತ್ಸಾಹ ಧನದ ಜೊತೆಗೆ ಒಕ್ಕೂಟದಿಂದ ಪ್ರೋತ್ಸಾಹ ಧನ ನೀಡಲಾಗಿತ್ತು. ನಂತ್ರ ಮೊನ್ನೆ ಪ್ರೋತ್ಸಾಹ ಧನ ವಾಪಸ್ಸು ತೆಗೆದುಕೊಳ್ಳಲು ಮುಂದಾಗಿದ್ದೆವು. ಆದ್ರೆ ಸರ್ಕಾರ ನಾವು ನೀಡಿದ್ದ ಆದೇಶವನ್ನ ವಾಪಸ್ಸು ಪಡೆಯುವಂತೆ ತಿಳಿಸಿದೆ. ಇದರನ್ವಯ ನಾವು ರೈತರಿಗೆ ಕೊಡುವ ಪ್ರೋತ್ಸಾಹ ದರ ಮುಂದುವರೆಸುತ್ತೇವೆ. ಆದರ ಬದಲಿಗೆ ಮಾರಾಟವಾಗುವ ಪ್ರತಿ ಲೀಟರ್ ಮೇಲೆ 5 ರೂ. ಹೆಚ್ಚಿಸಬೇಕು. ರಾಜ್ಯದ 15 ಒಕ್ಕೂಟಗಳು ನಷ್ಟದ ಪರಿಸ್ಥಿತಿಯಲ್ಲಿವೆ ಎಂದು ಬಮೂಲ್ ಅಧ್ಯಕ್ಷ ನರಸಿಂಹ ಮೂರ್ತಿ ಎರಡು ದಿನ ಹಿಂದೆ ತಿಳಿಸಿದ್ದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ