Sign In

By signing in or creating an account, you agree with Associated Broadcasting Company's Terms & Conditions and Privacy Policy.

ವನ್ಯ ಜೀವಿ-ಮಾನವ ಸಂಘರ್ಷ; ಕರ್ನಾಟಕ ರಾಜ್ಯದಲ್ಲಿ ಹೆಚ್ಚುತ್ತಲೇ ಇದೆ ಹುಲಿ, ಚಿರತೆ ದಾಳಿ

Human–wildlife conflict HWC | ಕಳೆದ 24 ಗಂಟೆಗಳ ಅವಧಿಯಲ್ಲಿ ಇಬ್ಬರು ವ್ಯಕ್ತಿಗಳನ್ನ ಹುಲಿಯೊಂದು ಭಯಾನಕವಾಗಿ ಬೇಟೆಯಾಡಿದೆ. ಕುಮಟೂರು ಗ್ರಾಮದಲ್ಲಿ 14 ವರ್ಷದ ಬಾಲನೊಬ್ಬನನ್ನ ಹೆಬ್ಬುಲಿ ಕೊಂದು ಹಾಕಿತ್ತು. ಅದಾಗಿ ಕೇವಲ 10 ಗಂಟೆಗಳ ಅವಧಿಯಲ್ಲೇ ಪಕ್ಕದ ಗ್ರಾಮದಲ್ಲೇ ಅದೇ ಹುಲಿ ಕಾರ್ಮಿಕ ಮಹಿಳೆಯಬ್ಬಳನ್ನ ಬಲಿ ಪಡೆದಿದೆ.

ವನ್ಯ ಜೀವಿ-ಮಾನವ ಸಂಘರ್ಷ; ಕರ್ನಾಟಕ ರಾಜ್ಯದಲ್ಲಿ ಹೆಚ್ಚುತ್ತಲೇ ಇದೆ ಹುಲಿ, ಚಿರತೆ ದಾಳಿ
ಹುಲಿ ಸೆರೆಗೆ ಸಿದ್ದವಾಗಿರುವ ಸಾಕಾನೆಗಳು ಮತ್ತು ಬೋನ್
Follow us
ಆಯೇಷಾ ಬಾನು
| Updated By: Digi Tech Desk

Updated on:Feb 22, 2021 | 3:14 PM

ಮಡಿಕೇರಿ: ವನ್ಯ ಜೀವಿಗಳು ಮತ್ತು ಮಾನವನ ನಡುವಿನ ಸಂಘರ್ಷ ತಾರಕಕ್ಕೇರಿದೆ. ಮನುಷ್ಯನ ತರ್ಕಹೀನ ಸ್ವೇಚ್ಛಾರದಿಂದಾಗಿ ವನ್ಯ ಜೀವಿಗಳ ವಾಸ ಸ್ಥಳಗಳ ಮೇಲೆ ಆಕ್ರಮಣ ಹೆಚ್ಚಾಗಿದೆ. ಒಂದು ಕಡೆಯಿಂದ ಅರಣ್ಯಗಳನ್ನೇ ನಾಶ ಮಾಡುತ್ತಾ ಬಂದಿರುವ ಮಾನವ, ತೀರ ಕಾಡು ಹೊಕ್ಕಿದ್ದು ಅಲ್ಲಿಯೇ ಠಿಕಾಣಿ ಮಾಡಲಾರಂಭಿಸಿದ್ದಾನೆ. ಇದರಿಂದ ದಿಕ್ಕೆಟ್ಟ ವನ್ಯ ಜೀವಿಗಳು ಮಾನವನ ನೆಲಗಳತ್ತ ಹಿಂಡು ಹಿಂಡಾಗಿ ಹೆಜ್ಜೆ ಹಾಕುತ್ತಿವೆ. ತನ್ನ ನೆಲಯನ್ನೇ ಕಳೆದುಕೊಂಡು ದಿಕ್ಕು ತೋಚದಂತಾಗಿ ಪ್ರಾಣಿಗಳು ಹೀಗೆ ಮಾಡುತ್ತಿವೆ. ಇದು ಯಾವುದೋ ಒಂದು ಊರು, ಒಂದು ನಗರ, ಒಂದು ರಾಜ್ಯ, ದೇಶಕ್ಕೆ ಅಂತಾ ಸೀಮಿತವಾಗಿಲ್ಲ; ಎಲ್ಲ ಕಡೆಯೂ ಕಂಡು ಬರುತ್ತಿದೆ. ಮನುಷ್ಯನ ಆಕ್ರಮಣ ಅಷ್ಟರ ಮಟ್ಟಿಗೆ ವನ್ಯ ಜೀವಿಗಳನ್ನು ಕಂಗೆಡಿಸಿದೆ. ಇದಕ್ಕೆ ನಮ್ಮ ಕರ್ನಾಟಕ ರಾಜ್ಯದಲ್ಲಿಯೇ ಬೇಕಾದಷ್ಟು ಉದಾಹರಣಗಳು ಸಿಗುತ್ತಿವೆ. ತಾಜಾ ಆಗಿ ಮೊನ್ನೆ ಹೊಡೆದ ಭಾರಿ ಮಳೆಗೆ.. ತೋಟದ ತುಂಬಾ ಅಣಬೆಗಳು ಎದ್ದಿವೆಯೆಂದು ಅವುಗಳನ್ನು ತರಲು ಹೋದ ಮಹಿಳೆಯೊಬ್ಬರು ಹುಲಿ ಬಾಯಿಗೆ ತುತ್ತಾಗಿದ್ದಾರೆ. Human–wildlife conflict (HWC)

ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ಟಿ.ಶೆಟ್ಟಿಗೇರಿ ಗ್ರಾಮದಲ್ಲಿ ಹುಲಿ ದಾಳಿಗೆ ಮಹಿಳೆ ಬಲಿಯಾಗಿದ್ದಾರೆ. ಇಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಇಬ್ಬರುನ್ನ ಹುಲಿಯೊಂದು ಭಯಾನಕವಾಗಿ ಬೇಟೆಯಾಡಿದೆ. ಕುಮಟೂರು ಗ್ರಾಮದಲ್ಲಿ 14 ವರ್ಷದ ಬಾಲನೊಬ್ಬನನ್ನ ಹೆಬ್ಬುಲಿ ಕೊಂದು ಹಾಕಿತ್ತು. ಅದಾಗಿ ಕೇವಲ 10 ಗಂಟೆಗಳ ಅವಧಿಯಲ್ಲೇ ಪಕ್ಕದ ಗ್ರಾಮದಲ್ಲೇ ಅದೇ ಹುಲಿ ಕಾರ್ಮಿಕ ಮಹಿಳೆಯಬ್ಬಳನ್ನ ಬಲಿ ಪಡೆದಿದೆ. ಎರಡೂ ಪ್ರಕರಣಗಳಲ್ಲಿ ಈ ಚಂಡ ವ್ಯಾಘ್ರ ಮನುಷ್ಯರ ತಲೆಯನ್ನೇ ಘಾಸಿಗೊಳಿಸಿ ಮಿದುಳನ್ನ ಕಿತ್ತಿದೆ. ಪೊನ್ನಂಪೇಟೆ ತಾಲೂಕಿನ ಮತ್ತೂರು ಗ್ರಾಮದಲ್ಲಿ ಶಾಲೆಗೆ ತೆರಳ್ತಿದ್ದಾಗ ಹುಲಿ ನೋಡಿ ಯುವತಿ ಪ್ರಜ್ಞೆತಪ್ಪಿ ಬಿದ್ದ ಘಟನೆಯೂ ನಡೆದಿದೆ. ಬಾಲಕಿಗೆ ಗೋಣಕೊಪ್ಪಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇಷ್ಟೇ ಅಲ್ಲ ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಸಾಕು ಪ್ರಾಣಿಗಳನ್ನು ಹುಲಿಯೊಂದು ಕೊಂದು ಹಾಕಿದೆ.

ಜನರಲ್ಲಿ ಹೆಚ್ಚಾಗುತ್ತಿದೆ ಆತಂಕ ದಕ್ಷಿಣ ಕೊಡಗಿನಲ್ಲಿ ಕಳೆದ ಎರಡು ವರ್ಷಗಳಿಂದ ಹುಲಿ ದಾಳಿ ನಿರಂತರವಾಗಿದೆ. ನಾಗರಹೊಳೆ ಅಭಯಾರಣ್ಯದಿಂದ ಬರೋ ಈ ಹುಲಿಗಳು ಇದುವರೆಗೆ ಜಾನುವಾರುಗಳ ಮೇಲೆ ಮಾತ್ರ ದಾಳಿ ಮಾಡುತ್ತಿದ್ದವು. ಆದ್ರೆ ಇದೀಗ ಹುಲಿಗಳು ಮನುಷ್ಯರ ಮೇಲೆಯೇ ದಾಳಿ ಮಾಡಲಾರಂಭಿಸಿವೆ. ಇದು ಈ ವ್ಯಾಪ್ತಿಯ ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಹಾಗಾಗಿ ಈ ಹುಲಿಯನ್ನ ತಕ್ಷಣವೇ ಗುಂಡಿಟ್ಟು ಕೊಲ್ಲುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಹರಿಹರ ಗ್ರಾಮದಲ್ಲಿ 2 ಹಸುಗಳ ಮೇಲೆ ಹುಲಿ ದಾಳಿ ನಡೆಸಿದೆ. ಜೊತೆಗೆ ದಕ್ಷಿಣ ಕೊಡಗಿನಲ್ಲಿ ಕಳೆದ ಎರಡು ತಿಂಗಳಲ್ಲೇ ಹುಲಿ ದಾಳಿಗೆ 20ಕ್ಕೂ ಅಧಿಕ ಜಾನುವಾರುಗಳು ಬಲಿಯಾಗಿವೆ. ಒಂದೆಡೆ ಆನೆದಾಳಿಯಿಂದ ಜನ್ರು ಪ್ರಾಣ ಕಳೆದುಕೊಳ್ತಾ ಇದ್ರೆ, ಇದೀಗ ಹುಲಿ ಕೂಡ ಮನುಷ್ಯನ ರಕ್ತದ ರುಚಿ ನೋಡಿರೋದು ನಿಜಕ್ಕೂ ಆತಂಕಕಾರಿ. ಈ ಭಾಗದ ಜನ್ರು ಕ್ಷಣಕ್ಷಣಕ್ಕೂ ಜೀವ ಕೈಯಲ್ಲಿ ಹಿಡಿದು ಬದುಕುವಂತಾಗಿದೆ. ಸುಮಾರು ನಾಲ್ಕಾರು ಹುಲಿಗಳು ಈ ಭಾಗದಲ್ಲಿದ್ದು ಇವುಗಳನ್ನು ಶೀಘ್ರವಾಗಿ ಸರೆಹಿಡಿಯಬೇಕಾಗಿದೆ.

ಒಂದು ಹುಲಿ ಸೆರೆ ಸದ್ಯ ಅರಣ್ಯ ಇಲಾಖೆ ಸಿಬ್ಬಂದಿ 5 ಸಾಕಾನೆಗಳನ್ನು ಬಳಸಿ ಟಿ.ಶೆಟ್ಟಿಗೇರಿ, ಮಂಚಳ್ಳಿ ವ್ಯಾಪ್ತಿಯಲ್ಲಿ ಹುಲಿ ಸೆರೆಗೆ ಕಾರ್ಯಾಚರಣೆ ನಡೆಸಿದ್ದು ನಿನ್ನೆ (ಫೆ. 21) ಒಂದು ಹುಲಿ ಸೆರೆ ಹಿಡಿಯಲಾಗಿದೆ. ಈ ವ್ಯಾಪ್ತಿಯಲ್ಲಿ ಮತ್ತೊಂದು ಹುಲಿ ಇರುವ ಸಾಧ್ಯತೆ ಇದ್ದು ಎರಡು ಪ್ರದೇಶಗಳಲ್ಲಿ ಬೋನ್ ಅಳವಡಿಸಲಾಗಿದೆ. 50ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆಯುತ್ತಿದೆ.

ತಾಯಿ, ಮಗನ ಮೇಲೆ ಚಿರತೆ ದಾಳಿ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬೈರಗೊಂಡನಹಳ್ಳಿಯ ಬೋವಿ ಕಾಲೋನಿಯಲ್ಲಿ ಜಮೀನಿಗೆ ತೆರಳುತ್ತಿದ್ದ ತಾಯಿ, ಮಗನ ಮೇಲೆ ಚಿರತೆ ದಾಳಿ ನಡೆಸಿದೆ. ಗಾಯಾಳುಗಳಾದ ಚಂದ್ರಮ್ಮ, ಕಿರಣ್‌ಗೆ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಚಿರತೆಯನ್ನು ಸೆರೆಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಹಗಲು ವೇಳೆಯೇ ಕಾಣಿಸಿಕೊಳ್ಳುತ್ತಿರುವ ಎರಡು ಚಿರತೆಗಳಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿದೆ.

Tiger Attack Madikeri

ಹುಲಿ ಹಿಡಿಯಲು ಸಿದ್ದತೆ ಕುರಿತು ಚರ್ಚಿಸುತ್ತಿರುವ ಸಿಬ್ಬಂದಿ

Tiger Attack Madikeri

ಹುಲಿ ಸೆರೆ ಹಿಡಿಯಲು ಬೋನ್ ಅಳವಡಿಸುತ್ತಿರುವ ಸಿಬ್ಬಂದಿ

Tiger Attack Madikeri

ಹುಲಿ ಸೆರೆ ಹಿಡಿಯಲು ಸಿದ್ದವಾಗಿರುವ ಬೋನ್

ಇದನ್ನೂ ಓದಿ: Tiger Attack | ಕೊಡಗಿನಲ್ಲಿ ಹುಲಿ ದಾಳಿಗೆ ಇಬ್ಬರು ಬಲಿ, ಕಾರ್ಯಾಚರಣೆಗೆ ಸಾಕಾನೆಗಳನ್ನು ಕರೆಸಿದ ಅರಣ್ಯ ಇಲಾಖೆ

Published On - 2:50 pm, Mon, 22 February 21

ಮೈಸೂರು: ಶತಮಾನದಷ್ಟು ಹಳೆಯದಾದ ಕಟ್ಟಡದ ಮೇಲೆ ವಕ್ಫ್​ ಕಣ್ಣು, ನೋಟೀಸ್
ಮೈಸೂರು: ಶತಮಾನದಷ್ಟು ಹಳೆಯದಾದ ಕಟ್ಟಡದ ಮೇಲೆ ವಕ್ಫ್​ ಕಣ್ಣು, ನೋಟೀಸ್
ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?
ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?
Horoscope: ಶುಕ್ರವಾರ, ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
Horoscope: ಶುಕ್ರವಾರ, ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ
ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ