AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೆಚ್ಚಿನ ಶಿಕ್ಷಕನಿಗೆ ಹಳೆ ವಿದ್ಯಾರ್ಥಿಗಳಿಂದ ಅದ್ದೂರಿ ಬೀಳ್ಕೊಡುಗೆ: ಗ್ರಾಮಸ್ಥರ ಪ್ರೀತಿಗೆ ಭಾವುಕರಾದ ಟೀಚರ್​

Tumakuru news: ತುಮಕೂರು ತಾಲೂಕಿನ ಶಿರಾವರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸತತ 35 ವರ್ಷದಿಂದ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಟಿ ನರಸಿಂಹಮೂರ್ತಿ ಅವರು ಇಂದು ನಿವೃತ್ತಿ ಹೊಂದಿದ್ದಾರೆ. ಈ ಹಿನ್ನೆಲೆ ಗ್ರಾಮಸ್ಥರು ಹಾಗೂ ಹಳೆ ವಿದ್ಯಾರ್ಥಿಗಳು ಶಿಕ್ಷಕರನ್ನು ಬೆಳ್ಳಿ ರಥದಲ್ಲಿ ಕುರಿಸಿ ಊರ ತುಂಬ ಮೆರವಣಿಗೆ ಮಾಡುವ ಮೂಲಕ ಬೀಳ್ಕೊಡುಗೆ ನೀಡಿದ್ದಾರೆ.

ನೆಚ್ಚಿನ ಶಿಕ್ಷಕನಿಗೆ ಹಳೆ ವಿದ್ಯಾರ್ಥಿಗಳಿಂದ ಅದ್ದೂರಿ ಬೀಳ್ಕೊಡುಗೆ: ಗ್ರಾಮಸ್ಥರ ಪ್ರೀತಿಗೆ ಭಾವುಕರಾದ ಟೀಚರ್​
ಬೆಳ್ಳಿ ರಥದಲ್ಲಿ ಕುರಿಸಿ ಶಿಕ್ಷಕನಿಗೆ ಊರಲ್ಲಿ ಅದ್ದೂರಿ ಮೆರವಣೆಗೆ
ಮಹೇಶ್ ಇ, ಭೂಮನಹಳ್ಳಿ
| Updated By: ಗಂಗಾಧರ​ ಬ. ಸಾಬೋಜಿ|

Updated on:Jul 31, 2023 | 7:48 PM

Share

ತುಮಕೂರು, ಜುಲೈ 31: ಶಿಕ್ಷಕ (teacher) ರೇಂದರೆ ಪಾಠ ಬೋದಿಸುವವರು ಮಾತ್ರವಲ್ಲ. ಸನ್ಮಾರ್ಗದಲ್ಲಿ ನಡೆಯುವಂತೆ ದಾರಿ ತೋರಿಸುವ ಮಾರ್ಗದರ್ಶಕರು. ಅಂತಹ ನೆಚ್ಚಿನ ಶಿಕ್ಷಕನಿಗೆ‌ ಬೀಳ್ಕೊಡುಗೆ ಕೊಡಲು ಆ ಊರನ್ನೇ ಹಬ್ಬದಂತೆ ಸಡಗರದಿಂದ ಅಲಂಕರಿಸಿ ಊರ ತುಂಬಾ ಅದ್ದೂರಿಯಾಗಿ ಮೆರವಣಿಗೆ ಮಾಡಿರುವಂತಹ ಅಪರೂಪದ ಘಟನೆ ತುಮಕೂರು ತಾಲ್ಲೂಕಿನ ಶಿರಾವರ ಗ್ರಾಮದಲ್ಲಿ ಕಂಡುಬಂದಿದೆ.

ತುಮಕೂರು ತಾಲೂಕಿನ ಶಿರಾವರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸತತ 35 ವರ್ಷದಿಂದ ಟಿ ನರಸಿಂಹಮೂರ್ತಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಗ್ರಾಮದ ಗ್ರಾಮಸ್ಥರಿಗೆ ಮನೆ ಮಗನಂತೆ ಇದ್ದ ಟಿ ನರಸಿಂಹಮೂರ್ತಿ ಇಂದು ನಿವೃತ್ತಿ ಹೊಂದಿದ್ದಾರೆ. ಅಂತಹ ಶಿಕ್ಷಕನಿಗೆ ಗ್ರಾಮಸ್ಥರು ಎಲ್ಲರೂ ಸೇರಿಕೊಂಡು ಅದ್ದೂರಿಯಾಗಿ ಬೀಳ್ಕೊಡುಗೆ ನೀಡಿದ್ದಾರೆ. ಗ್ರಾಮಸ್ಥರ ಪ್ರೀತಿ ಕಂಡು ಆ ಶಿಕ್ಷಕ ಭಾವುಕರಾಗಿದ್ದಾರೆ.

ಇದನ್ನೂ ಓದಿ: ಏಕಾಏಕಿ ಮನೆಗೆ ನುಗ್ಗಿ ಕರೆದುಕೊಂಡು ಹೋದರು, ಅಪರಾಧಿಯಂತೆ ನಡೆಸಿಕೊಂಡರು: ಪೊಲೀಸರ ವಿರುದ್ಧ ಶಕುಂತಲಾ ನಟರಾಜ್​ ಆರೋಪ

ಟಿ ನರಸಿಂಹಮೂರ್ತಿ ಅವರು ಕೇವಲ ಮಕ್ಕಳಿಗೆ ಶಿಕ್ಷಕರಲ್ಲದೇ ಗ್ರಾಮಸ್ಥರಿಗೂ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು. ಈ ಹಿನ್ನೆಲೆ ಆ ಗ್ರಾಮಸ್ಥರು ಹಾಗೂ ಹಳೆ ವಿದ್ಯಾರ್ಥಿಗಳು ಸೇರಿ ತಮ್ಮ ನೆಚ್ಚಿನ ಶಿಕ್ಷಕನನ್ನು ಬೆಳ್ಳಿರಥ ಮೇಲೆ‌ ಕುರಿಸಿ ತಲೆಗೆ ಪೇಟ ತೊಡಿಸಿ, ಶಾಲು ಹಾಕಿ ಇಡೀ ಗ್ರಾಮದ ಸುತ್ತ ಸುಮಾರು 2 ಕಿಲೋಮೀಟರ್, ಮೆರವಣಿಗೆ ಮಾಡಿದ್ದಾರೆ. ಅಲ್ಲದೇ ಪೂರ್ಣ ಕುಂಬ ಕಳಸ, ಬ್ಯಾಂಡ್ ಸೆಟ್, ಮೀರಗಾಸೆ, ತಮಟೆ ವಾದ್ಯ, ಪಟಾಕಿ ಸಿಡಿಸಿ ಇಡೀ ಊರಿನಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿ ಅದ್ದೂರಿಯಾಗಿ ಕಾರ್ಯಕ್ರಮ ಮಾಡಿ ಊರಿನ ಜನರಿಗೆಲ್ಲಾ ಹೋಳಿಗೆ ಊಟ ಹಾಕುವ ಮೂಲಕ ತನ್ನ ನೆಚ್ಚಿನ ಶಿಕ್ಷಕನಿಗೆ ಅದ್ದೂರಿಯಾಗಿ ಬೀಳ್ಕೊಡುಗೆ ಕೊಟ್ಟಿದ್ದಾರೆ.

ಇದನ್ನೂ ಓದಿ: ತುಮಕೂರು: ಅತಿಯಾದ ಭಾರ ತಾಳಲಾರದೆ ಮೇಲಕ್ಕೆದ್ದ ಲಾರಿಯ ಕ್ಯಾಬಿನ್​ ಭಾಗ

ನರಸಿಂಹಮೂರ್ತಿ ಗರಡಿಯಲ್ಲಿ ಕಲಿತ ಸಾವಿರಾರು ಜನರು ಸಾಫ್ಟ್‌ವೇರ್ ಇಂಜಿನಿಯರ್, ಡಾಕ್ಟರ್, ರಾಜಕಾರಣಿಗಳು, ದೇಶ ವಿದೇಶಗಳಲ್ಲಿ ಹಲವು ಕೆಲಸಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂತಹ ನೆಚ್ಚಿನ ಶಿಕ್ಚಕನಿಗೆ ಕೊಟ್ಟ ಅದ್ದೂರಿ ಬೀಳ್ಕೊಡುಗೆ ಸನ್ಮಾನಕ್ಕೆ ಮನಸೋತ ಶಿಕ್ಷಕ ನರಸಿಂಹಮೂರ್ತಿ ಆ ಗ್ರಾಮಸ್ಥರ ಪ್ರೀತಿಗೆ ಭಾವುಕರಾಗಿ ಎಲ್ಲಾ ಶಿಕ್ಷಕರು ವಿದ್ಯಾರ್ಥಿಗಳ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡರೆ ಇಂತಹ ಸನ್ಮಾನಗಳು ಎಲ್ಲರಿಗೂ ಸಿಗುತ್ತೆ ಎಂದಿದ್ದಾರೆ.

ತನ್ನ ಶಿಕ್ಷಕ ತಮ್ಮ ಶಾಲೆಯನ್ನ ಬಿಟ್ಟು ಹೋಗುತ್ತಿರುವುದಕ್ಕೆ ಆ ಗ್ರಾಮಸ್ಥರೆಲ್ಲಾ ಭಾವುಕರಾಗಿದ್ದಾರೆ. ಮುಂದೆ ಇಂತಹ ಶಿಕ್ಷಕರು ನಮ್ಮ ಶಾಲೆಗೆ ಸಿಗಲಿ ಎನ್ನುವ ಮೂಲಕ ಶಿಕ್ಷಕರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಆಶಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 7:45 pm, Mon, 31 July 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ