Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಎಂಟಿಸಿ, ಕೆಎಸ್‌ಆರ್‌ಟಿಸಿ ನೌಕರರ ವಜಾ ಖಂಡಿಸಿ ಮುಂದುವರೆದ ಪಾದಯಾತ್ರೆ; ತುಮಕೂರಿನಿಂದ ಸಿಎಂ ನಿವಾಸದತ್ತ ಹೊರಟ ನೌಕರರು

ನಿನ್ನ ತಡರಾತ್ರಿ ಸಿದ್ದಗಂಗಾ ಮಠಕ್ಕೆ ಆಗಮಿಸಿದ್ದ ನೌಕರರು ಇಂದು ಮಠದಿಂದ ಬೆಂಗಳೂರಿನತ್ತ ಪಾದಯಾತ್ರೆ ಮುಂದುವರೆಸಿದ್ದಾರೆ. ಸಾರಿಗೆ ಮುಷ್ಕರ ಸಮಯದಲ್ಲಿ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ನೌಕರರ ವಜಾ ಹಿನ್ನೆಲೆಯಲ್ಲಿ ವಜಾ ಆದೇಶ ರದ್ದುಗೊಳಿಸಿ ಪುನರ್ ನೇಮಕಗೊಳಿಸುವಂತೆ ಪಾದಯಾತ್ರೆ ನಡೆಸುತ್ತಿದ್ದಾರೆ.

ಬಿಎಂಟಿಸಿ, ಕೆಎಸ್‌ಆರ್‌ಟಿಸಿ ನೌಕರರ ವಜಾ ಖಂಡಿಸಿ ಮುಂದುವರೆದ ಪಾದಯಾತ್ರೆ; ತುಮಕೂರಿನಿಂದ ಸಿಎಂ ನಿವಾಸದತ್ತ ಹೊರಟ ನೌಕರರು
ಬಿಎಂಟಿಸಿ, ಕೆಎಸ್‌ಆರ್‌ಟಿಸಿ ನೌಕರರ ವಜಾ ಖಂಡಿಸಿ ಮುಂದುವರೆದ ಪಾದಯಾತ್ರೆ, ತುಮಕೂರಿನಿಂದ ಸಿಎಂ ನಿವಾಸದತ್ತ ಹೊರಟ ನೌಕರರು
Follow us
TV9 Web
| Updated By: ಆಯೇಷಾ ಬಾನು

Updated on:Dec 05, 2021 | 1:37 PM

ತುಮಕೂರು: ಬಿಎಂಟಿಸಿ, ಕೆಎಸ್‌ಆರ್‌ಟಿಸಿ ನೌಕರರ ವಜಾ ಖಂಡಿಸಿ ಪಾದಯಾತ್ರೆ ನಡೆಸಲು ನೌಕರರು ಮುಂದಾಗಿದ್ದು ಈಗಾಗಲೇ ತುಮಕೂರಿನ ಸಿದ್ದಗಂಗಾ ಮಠದಿಂದ ಪಾದಯಾತ್ರೆ ಹೊರಟಿದೆ. ನೌಕರರ ವಜಾ ಆದೇಶ ರದ್ದುಗೊಳಿಸಿ ಪುನರ್ ನೇಮಕಕ್ಕೆ ಒತ್ತಾಯಿಸಿ ನವೆಂಬರ್ 29ರಿಂದ ಶುರುವಾದ ಪಾದಯಾತ್ರೆ ಬಳ್ಳಾರಿಯಿಂದ ಬೆಂಗಳೂರಿನ ಸಿಎಂ ನಿವಾಸದವರೆಗೆ ಬರಲಿದೆ. ಸದ್ಯ ಈಗ ತುಮಕೂರಿನ ಸಿದ್ದಗಂಗಾ ಮಠದಿಂದ ಪಾದಯಾತ್ರೆ ಹೊರಟಿದೆ.

ಸಾರಿಗೆ ನೌಕರರ ಮುಷ್ಕರ ರಾಜ್ಯಾದ್ಯಂತ ಭರ್ಜರಿ ಸೌಂಡ್ ಮಾಡಿತ್ತು, ವೇತನ ವೆಚ್ಚಳ ಹಾಗೂ ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಬಸ್‌ಗಳನ್ನು ನಿಲ್ಲಿಸಿ ಮುಷ್ಕರ ನಡೆಸಿದ್ದರು, ಮುಷ್ಕರದಲ್ಲಿ ಬಹುತೇಕ ಮಂದಿ ಭಾಗಿಯಾಗಿದ್ದರು. ಹೀಗೆ ಭಾಗಿಯಾದ್ದವರಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ನೌಕರರನ್ನ ಸಾರಿಗೆ ಇಲಾಖೆ ವಜಾ ಮಾಡಿದ್ದರು. ಸದ್ಯ ವಜಾ ಹಿಂಪಡೆದು ಪುನರ್ ನೇಮಕ ಮಾಡುವಂತೆ ನೌಕರರು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.

ಕೆಲ ತಿಂಗಳುಗಳ ಹಿಂದೆ ರಾಜ್ಯಾದ್ಯಂತ ಸಾರಿಗೆ ಇಲಾಖೆ ನೌಕರರು ವಿವಿಧ ಬೇಡಿಕೆ ಈಡೇರಿಕೆಗಳನ್ನ ಆಗ್ರಹಿಸಿ ಮುಷ್ಕರ ನಡೆಸಿದ್ದರು. ಕರ್ತವ್ಯಕ್ಕೆ ಹಾಜರ್ ಆಗದೇ ಮುಷ್ಕರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.ಹೀಗೆ ಭಾಗಿಯಾಗಿದ್ದವರಲ್ಲಿ ಸಾರಿಗೆ ಇಲಾಖೆ, ಸುಮಾರು ಎರಡೂವರೆ ಸಾವಿರ ನೌಕರನ್ನ ವಜಾ ಮಾಡಿತ್ತು.ಇದರಿಂದ ನೌಕರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಸದ್ಯ ಇದನ್ನ ಪುನರ್ ನೇಮಕ ಮಾಡುವಂತೆ ಸ್ವಾನಿಮಾನಿ ಸಾರಿಗೆ ನೌಕರರ ಬ್ಯಾನರ್ ಅಡಿಯಲ್ಲಿ ಪಾದಯಾತ್ರೆ ಮಾಡಲಾಗುತ್ತಿದೆ.

tmk bmtc ksrtc padyathre 1

ಬಿಎಂಟಿಸಿ, ಕೆಎಸ್‌ಆರ್‌ಟಿಸಿ ನೌಕರರ ವಜಾ ಖಂಡಿಸಿ ಮುಂದುವರೆದ ಪಾದಯಾತ್ರೆ

ತುಮಕೂರಿನಿಂದ ಸಿಎಂ ನಿವಾಸದತ್ತ ಹೊರಟ ನೌಕರರು ನವೆಂಬರ್ 29 ರಂದು ಬಳ್ಳಾರಿಯಿಂದ ಬೆಂಗಳೂರು ವರೆಗೂ ಪಾದಯಾತ್ರೆ ನಡೆಯಲಿದ್ದು, ಸಿಎಂ ಬೊಮ್ಮಾಯಿಗೆ ನಿವಾಸಕ್ಕೆ ಪಾದಯಾತ್ರೆ ನಡೆಯುತ್ತಿದೆ. ಸದ್ಯ ತಡರಾತ್ರಿ ತುಮಕೂರಿನ ಸಿದ್ದಗಂಗಾ ಮಠಕ್ಕೆ ಆಗಮಿಸಿದ ನೌಕರರ ಪಾದಯಾತ್ರೆ, ಮಠದಲ್ಲಿ ವಾಸ್ತವ್ಯ ಇದ್ದು ಇಂದು ಬೆಳಿಗ್ಗೆ ಬೆಂಗಳೂರಿನತ್ತ ತೆರಳುತ್ತಿದ್ದಾರೆ. ಪ್ರತಿದಿನ 20-30 ಕಿಲೋಮೀಟರ್ ಪಾದಯಾತ್ರೆ ಮಾಡುತ್ತಿದ್ದು,ವಜಾ ಹಾಗೂ ಅಮಾನತು ಆಗಿರುವ ನೌಕರನ್ನ ಕೂಡಲೇ ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ.ಅಲ್ಲದೇ ಕಳೆದ ಎಂಟು ತಿಂಗಳಿನಿಂದ ಬರೀ ಆಶ್ವಾಸನೆ ನೀಡುತ್ತಿದ್ದು, ಬರೀ ಆದೇಶವಾಗಿಯೇ ಉಳಿದಿದೆ. ಇದರಿಂದ ಮಕ್ಕಳಿಗೆ ವಿಧ್ಯಾಭ್ಯಾಸ ತೊಂದರೆ ಸೇರಿದಂತೆ ಜೀವನ ನಡೆಸಲು ಕಷ್ಟವಾಗಿದೆ ಅಂತಾ ಅಳಲು ತೋಡಿಕೊಂಡಿದ್ದಾರೆ.

ಇನ್ನೂ ಸರ್ಕಾರ ಕೂಡಲೇ ಇದನ್ನ ಹಿಂಪಡೆದು ಪುನರ್ ನೇಮಕ ಮಾಡಬೇಕು,ಈ ಹಿಂದೆ 6-4-21 ರಲ್ಲಿ ಇದ್ದಂತಹ ನೌಕರರ ಸ್ಥಿತಿಯನ್ನ ಸರ್ಕಾರ ಕಾಪಾಡಬೇಕು ಅಂತಾ ಮನವಿ ಮಾಡಿದ್ದಾರೆ.ಅಲ್ಲದೆ ಈ ಪಾದಯಾತ್ರೆ ಯಾವುದೇ ಸರ್ಕಾರ ಅಧಿಕಾರಿಗಳ ನಿಗಮಗಳ ವಿರುದ್ಧ ಪಾದಯಾತ್ರೆ ಮಾಡ್ತಿಲ್ಲ. ನಮ್ಮ ಉದ್ದೇಶ ಈಡೇರಿಕೆಗೆ ಪಾದಯಾತ್ರೆ ಮಾಡಲಾಗುತ್ತಿದೆ ಅಂತಾ ಹೇಳಿದ್ದಾರೆ. ಮುಷ್ಕರದ ಪೂರ್ವ ಸಮಯದಲ್ಲಿ ಇದ್ದಹಾಗೇ ಮುಂದುವರೆಸಿ ಅಂತಾ ಪಾದಯಾತ್ರಿಗಳು ಮನವಿ ಮಾಡಿದ್ದಾರೆ.

ವರದಿ: ಮಹೇಶ್, ಟಿವಿ9 ತುಮಕೂರು

ಇದನ್ನೂ ಓದಿ: Shivaram: ಶಿವರಾಂ ನೆನೆದು ಭಾವುಕರಾದ ಹಿರಿಯ ನಟಿಯರು; ಭಾರತಿ, ಜಯಮಾಲ, ಸುಮಲತಾ ಹೇಳಿದ್ದೇನು?

Published On - 1:36 pm, Sun, 5 December 21

ಬೆನ್ನು ನೋವಿದ್ದರೂ ಕುಂಟುತ್ತಾ ಬಂದು ‘ವಾಮನ’ ಸಿನಿಮಾ ನೋಡಿದ ದರ್ಶನ್
ಬೆನ್ನು ನೋವಿದ್ದರೂ ಕುಂಟುತ್ತಾ ಬಂದು ‘ವಾಮನ’ ಸಿನಿಮಾ ನೋಡಿದ ದರ್ಶನ್
ರೈಲ್ವೆ ಹಳಿ ಮೇಲೆ ಮಲಗಿ ತನ್ನ ಮೇಲೆ ರೈಲು ಹೋಗುವ ರೀಲ್ಸ್ ಮಾಡಿದ ಯುವಕ!
ರೈಲ್ವೆ ಹಳಿ ಮೇಲೆ ಮಲಗಿ ತನ್ನ ಮೇಲೆ ರೈಲು ಹೋಗುವ ರೀಲ್ಸ್ ಮಾಡಿದ ಯುವಕ!
ಈ ಸಿನಿಮಾ ಒಪ್ಪಿಕೊಳ್ಳಲು ಭಯವಾಯ್ತು; ಅಜ್ಞಾತವಾಸಿ ಬಗ್ಗೆ ರಂಗಾಯಣ ರಘು ಮಾತು
ಈ ಸಿನಿಮಾ ಒಪ್ಪಿಕೊಳ್ಳಲು ಭಯವಾಯ್ತು; ಅಜ್ಞಾತವಾಸಿ ಬಗ್ಗೆ ರಂಗಾಯಣ ರಘು ಮಾತು
ಹಣ ಗಳಿಸುತ್ತಿಲ್ಲವೆಂದು ಗಂಡನಿಗೆ ಹೆಂಡತಿಯಿಂದ ಕಪಾಳಮೋಕ್ಷ; ಆಮೇಲೇನಾಯ್ತು?
ಹಣ ಗಳಿಸುತ್ತಿಲ್ಲವೆಂದು ಗಂಡನಿಗೆ ಹೆಂಡತಿಯಿಂದ ಕಪಾಳಮೋಕ್ಷ; ಆಮೇಲೇನಾಯ್ತು?
‘ವಾಮನ’ ಸಿನಿಮಾ ನೋಡಲು ಬಂದ ದರ್ಶನ್; ಚಿಕ್ಕಣ್ಣ, ಧನ್ವೀರ್ ಜತೆ ಕುಶಲೋಪರಿ
‘ವಾಮನ’ ಸಿನಿಮಾ ನೋಡಲು ಬಂದ ದರ್ಶನ್; ಚಿಕ್ಕಣ್ಣ, ಧನ್ವೀರ್ ಜತೆ ಕುಶಲೋಪರಿ
ವಾಹನ ಹತ್ತದೆ ಕಾರ್ಯಕರ್ತರೊಂದಿಗೆ ರ‍್ಯಾಲಿಯಲ್ಲಿ ನಡೆದ ವಿಜಯೇಂದ್ರ
ವಾಹನ ಹತ್ತದೆ ಕಾರ್ಯಕರ್ತರೊಂದಿಗೆ ರ‍್ಯಾಲಿಯಲ್ಲಿ ನಡೆದ ವಿಜಯೇಂದ್ರ
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಬೆಲೆ ಏರಿಕೆ ಅನಿವಾರ್ಯ ಎಂದ ಕೈ ಶಾಸಕ
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಬೆಲೆ ಏರಿಕೆ ಅನಿವಾರ್ಯ ಎಂದ ಕೈ ಶಾಸಕ
ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆ 50 ರೂ ಜಾಸ್ತಿ ಮಾಡಿಲ್ಲವೇ? ರೆಡ್ಡಿ
ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆ 50 ರೂ ಜಾಸ್ತಿ ಮಾಡಿಲ್ಲವೇ? ರೆಡ್ಡಿ
ಬಾನು ಅವರ 12 ಉತ್ಕೃಷ್ಟ ಕತೆಗಳ ಸಂಕಲನ ಬೂಕರ್ ಪ್ರಶಸ್ತಿಗೆ ಶಾರ್ಟ್​ಲಿಸ್ಟ್ !
ಬಾನು ಅವರ 12 ಉತ್ಕೃಷ್ಟ ಕತೆಗಳ ಸಂಕಲನ ಬೂಕರ್ ಪ್ರಶಸ್ತಿಗೆ ಶಾರ್ಟ್​ಲಿಸ್ಟ್ !
ಇನ್ಮುಂದೆ KSRTC ಬಸ್​ ಟ್ರ್ಯಾಕ್​ ಮಾಡಬಹುದು: ಹೇಗೆ? ವಿಡಿಯೋ ನೋಡಿ
ಇನ್ಮುಂದೆ KSRTC ಬಸ್​ ಟ್ರ್ಯಾಕ್​ ಮಾಡಬಹುದು: ಹೇಗೆ? ವಿಡಿಯೋ ನೋಡಿ