ಶಾಲಾ ಆವರಣದಲ್ಲಿ ಕಟ್ಟಡಕ್ಕೆ ವಿರೋಧ: ಕ್ರೀಡಾಪಟುಗಳ ವಿರುದ್ಧ ಸಚಿವ ಮಾಧುಸ್ವಾಮಿ ಗರಂ; ಇದೆನ್ ನಿಮ್ಮ ಆಸ್ತಿನಾ? ಜಾಸ್ತಿ ಆಯ್ತು ಎಂದರು

ಇದೇನ್ ನಿಮ್ಮ ಅಪ್ಪನದಾ? ಜಾಸ್ತಿ ಆಯ್ತು, ಅಂತಾ ಕಟ್ಟಡ ಬೇಡ ಅಂತಾ ಹೇಳಲು ಬಂದಿದ್ದಾ ಕ್ರೀಡಾಪಟುಗಳ ಮೇಲೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಸಕ ಜೆಸಿ ಮಾಧುಸ್ವಾಮಿ ಫುಲ್ ಗರಂ ಆಗಿದ್ದಾರೆ. ಇದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಇಂದು ಬೆಳಗ್ಗೆ ನಡೆದ ಘಟನೆ.

ಶಾಲಾ ಆವರಣದಲ್ಲಿ ಕಟ್ಟಡಕ್ಕೆ ವಿರೋಧ: ಕ್ರೀಡಾಪಟುಗಳ ವಿರುದ್ಧ ಸಚಿವ ಮಾಧುಸ್ವಾಮಿ ಗರಂ; ಇದೆನ್ ನಿಮ್ಮ ಆಸ್ತಿನಾ? ಜಾಸ್ತಿ ಆಯ್ತು ಎಂದರು
ಶಾಲಾ ಆವರಣದಲ್ಲಿ ಕಟ್ಟಡಕ್ಕೆ ವಿರೋಧ: ಕ್ರೀಡಾಪಟುಗಳ ವಿರುದ್ಧ ಸಚಿವ ಮಾಧುಸ್ವಾಮಿ ಗರಂ; ಇದೆನ್ ನಿಮ್ಮ ಆಸ್ತಿನಾ? ಜಾಸ್ತಿ ಆಯ್ತು ಎಂದರು
Edited By:

Updated on: Sep 07, 2021 | 11:16 AM

ತುಮಕೂರು: ಅದು ವಾಯುವಿಹಾರಿಗಳು ಓಡಾಡುತ್ತಿದ್ದ ಮೈದಾನ,ಆ ಮೈದಾನದಲ್ಲಿ ಪ್ರತಿನಿತ್ಯ ಸ್ಥಳಿಯರು, ಕ್ರೀಡಾಪಟುಗಳು ವಾಕ್ ಮಾಡೋದು ಜೊತೆಗೆ ಕ್ರಿಕೆಟ್, ಕಬ್ಬಡ್ಡಿ, ಷಟಲ್ ಬ್ಯಾಡ್ಮಿಂಟನ್​ ಅಂತಾ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು ಅವರು. ಆದರೆ ಸದ್ಯ ಮೈದಾನದಲ್ಲಿ ಸರ್ಕಾರ ಶಾಲಾ ಕಟ್ಟಡ ನಿರ್ಮಿಸಲು ಮುಂದಾಗಿದ್ದಾರೆ.

ಇದಕ್ಕೆ ಕ್ರೀಡಾಪಟುಗಳು ಸೇರಿದಂತೆ ವಾಯುವಿಹಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶಾಲಾ ಮೈದಾನದಲ್ಲಿ ಕಟ್ಟಡ ಬೇಡ ನಮಗೆ ತೊಂದರೆ ಯಾಗುತ್ತೆ ಅಂತಾ ವಿರೋಧಿಸಿದ್ದಾರೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಸಕ ಜೆಸಿ ಮಾಧುಸ್ವಾಮಿ ವಾಯುವಿಹಾರಿಗಳ ಮೇಲೆ ಪುಲ್ ಗರಂ ಆಗಿದ್ದಾರೆ.

ಇದೇನ್ ನಿಮ್ಮ ಅಪ್ಪನದಾ? ಜಾಸ್ತಿ ಆಯ್ತು, ಅಂತಾ ಕಟ್ಟಡ ಬೇಡ ಅಂತಾ ಹೇಳಲು ಬಂದಿದ್ದ ಕ್ರೀಡಾಪಟುಗಳ ಮೇಲೆ ಜೆಸಿ ಮಾಧುಸ್ವಾಮಿ ಫುಲ್ ಗರಂ ಆಗಿದ್ದಾರೆ. ಇದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಇಂದು ಬೆಳಗ್ಗೆ ನಡೆದ ಘಟನೆ.

ಕಳೆದ ಒಂದು ವರ್ಷದಿಂದಲೂ ಕಟ್ಟಡ ನಿರ್ಮಿಸಲು ಸ್ಥಳೀಯರು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಯಾಕೆಂದರೆ ಶಾಲೆ ಮೈದಾನ ಹುಳಿಯಾರಿಗೆ ದೊಡ್ಡದಾಗಿದ್ದು ವಾಕ್ ಮಾಡಲು ಹಾಗೂ ಕ್ರೀಡಾಪಟುಗಳಿಗೆ ಪ್ರಾಕ್ಟಿಸ್ ಪಡೆಯಲು ಸಹಕಾರಿಯಾಗಿದೆಯಂತೆ. ಸದ್ಯ ಕಟ್ಟಡ ನಿರ್ಮಿಸಿದರೆ ತೊಂದರೆಯಾಗಲಿದೆ ಅಂತಾ ಸಚಿವರಿಗೆ ಮನವಿ ಮಾಡಲು ಹೋಗಿದ್ದಾಗ ಸಚಿವ ಮಾಧುಸ್ವಾಮಿ ಅವರು ಗರಂ ಆಗಿದ್ದಾರೆ. ವಿರೋಧದ ನಡುವೆಯೂ ಶಾಲೆ ಕಟ್ಟಡಕ್ಕೆ ಶಂಕುಸ್ಥಾಪನೆ ನಡೆಸಲಾಗಿದೆ.

ಇದೇನ್ ನಿಮ್ಮ ಅಪ್ಪನದಾ? ಜಾಸ್ತಿ ಆಯ್ತು, ಅಂತಾ ಕಟ್ಟಡ ಬೇಡ ಅಂತಾ ಹೇಳಲು ಬಂದಿದ್ದ ಕ್ರೀಡಾಪಟುಗಳ ಮೇಲೆ ಜೆಸಿ ಮಾಧುಸ್ವಾಮಿ ಫುಲ್ ಗರಂ ಆಗಿದ್ದಾರೆ.

ಆನ್‌ಲೈನ್ ಗ್ಯಾಂಬ್ಲಿಂಗ್ ಗೇಮ್‌ ನಿಷೇಧಕ್ಕೆ ಕರ್ನಾಟಕ ಸರ್ಕಾರ ತೀರ್ಮಾನ: ಸಂಪುಟ ಸಭೆ ಬಳಿಕ ಸಚಿವ ಮಾಧುಸ್ವಾಮಿ ಪ್ರಕಟ

(building construction in Huliyar Primary School localites oppose minister JC Madhuswamy move)