AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಲೆ ಬೆದರಿಕೆ ಬಂದಿರೋದು ನೂರಕ್ಕೆ ನೂರು ಸತ್ಯ, ಸಿಎಂಗೂ ಮಾಹಿತಿ ನೀಡಿದ್ದೇನೆ: ಮಾಜಿ ಶಾಸಕ ಸುರೇಶ್ ಗೌಡ

ನನಗೆ ಕೊಲೆ ಬೆದರಿಕೆ ಬಂದಿರುವುದು ನೂರಕ್ಕೆ ನೂರು ಸತ್ಯ. ಈ ಕುರಿತಾಗಿ ನಾನು ಸಿಎಂ ಬೊಮ್ಮಾಯಿ ಅವರಿಗೂ ಮಾಹಿತಿ ನೀಡಿದ್ದೇನೆ ಎಂದು ಹೇಳಿದರು.

ಕೊಲೆ ಬೆದರಿಕೆ ಬಂದಿರೋದು ನೂರಕ್ಕೆ ನೂರು ಸತ್ಯ, ಸಿಎಂಗೂ ಮಾಹಿತಿ ನೀಡಿದ್ದೇನೆ: ಮಾಜಿ ಶಾಸಕ ಸುರೇಶ್ ಗೌಡ
ಮಾಜಿ ಶಾಸಕ ಸುರೇಶ್ ಗೌಡ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Nov 23, 2022 | 3:38 PM

ತುಮಕೂರು: ನನಗೆ ಕೊಲೆ ಬೆದರಿಕೆ (threats) ಬಂದಿರುವುದು ನೂರಕ್ಕೆ ನೂರು ಸತ್ಯ. ಆಯುಧ ಪೂಜೆ ದಿನ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವರನ್ನ ಭೇಟಿಯಾಗಿ ಕೊಲೆ ಬೆದರಿಕೆ ಬಗ್ಗೆ ವಿವರಣೆ ಕೊಟ್ಟಿದ್ದೇನೆ. ಒಂದು ತಿಂಗಳ ಹಿಂದೆ ಕಮಿಷನರ್​ಗೆ ದೂರು ಕೂಡ ಕೊಟ್ಟಿದ್ದೇನೆ ಎಂದು ಮಾಜಿ ಶಾಸಕ ಸುರೇಶ್ ಗೌಡ ಹೇಳಿದರು. ನಗರದಲ್ಲಿ ಮಾತನಾಡಿದ ಅವರು,  ಸರ್ಕಾರ ಶಕ್ತಿಶಾಲಿಯಾಗಿದೆ. ಗುಪ್ತಚರ ಇಲಾಖೆಯಿಂದ ವರದಿ ಬಂದಿದೆ. ತನಿಖೆ ನಡೆಯುತ್ತಿದೆ. ಹಾಗಾಗಿ ಮೀಡಿಯಾ ಮುಂದೆ ಬಂದಿರಲಿಲ್ಲ. ಇನ್ನು ಕರ್ನಾಟಕ ರಾಜ್ಯದಲ್ಲಿ ಶಾಂತಿಯುತ ರಾಜಕಾರಣ ನಡೆಯುತ್ತೆ. ವ್ಯಕ್ತಿಗತ ಆರೋಪ ಯಾರು ಮಾಡೋದಿಲ್ಲಾ. ರಾಜಕೀಯವಾಗಿ ವಿರೋಧ ಮಾಡುತ್ತಾರೆ, ಹೊರೆತು ಕೊಲೆ ಮಾಡುವಷ್ಟು ನೀಚ ರಾಜಕಾರಣಕ್ಕೆ ಯಾರು ಇಳಿದಿಲ್ಲ ಎಂದು ಹೇಳಿದರು.

ಸುರೇಶ್ ಗೌಡರನ್ನ ಕೊಲೆ ಮಾಡಬೇಕು ಎಂದು ಶಾಸಕ ಗೌರಿಶಂಕರ್, ಅಟಿಕಾ ಬಾಬು ಸೇರಿ 5 ಕೋಟಿ ಹಣ ನೀಡಿರುತ್ತಾರೆ. ಹಿರೇಹಳ್ಳಿ ಮಹೇಶ್, ಜೈಲಿನಲ್ಲಿರೋ ಒಬ್ಬ ಖೈದಿಗೆ ಸುಮಾರು ಭಾರಿ ಪೋನ್ ಮಾಡಿದ್ದಾರೆ. ಕಳೆದ ಹದಿನೈದು ದಿನದ ಹಿಂದೆ ಎಲ್.ಹೆಚ್​ನಲ್ಲಿ ಶಾಸಕ ಗೌರಿಶಂಕರ್​ರನ್ನ ಅಟಿಕಾ ಬಾಬು ಭೇಟಿಯಾಗಿರೋ ಬಗ್ಗೆ ಮಾಹಿತಿ ಇದೆ. ಸರ್ಕಾರದಲ್ಲಿರೋ ಇಂಟೆಲಿಜೆನ್ಸ್ ತುಂಬಾ ಪ್ರಬಲವಾಗಿರುವುದರಿಂದ ಎಲ್ಲಾ ಮಾಹಿತಿ ಲಭ್ಯವಾಗಿದೆ. ಗೌರಿಶಂಕರ್ ಭಾಗಿಯಾಗಿದ್ದಾರೋ ಇಲ್ವೋ ಗೊತಿಲ್ಲಾ. ಆದರೆ ತನಿಖೆ ಆಗಬೇಕು. ಇದರ ಹಿಂದೆ ಎಷ್ಟೇ ದೊಡ್ಡ ವ್ಯಕ್ತಿ ಇದ್ದರೂ ತನಿಖೆ ಆಗಬೇಕು. ಗೌರಿಶಂಕರ್ ಹಿಂಬಾಲಕ ಹಿರೇಹಳ್ಳಿ ಮಹೇಶ್ ಜೈಲಿನಲ್ಲಿರೋ ಖೈದಿಗೆ ಕರೆ ಮಾಡಿ ಮಾತನಾಡಿರೋ ಪೋನ್ ನಂಬರ್ ಕೂಡ ಕೊಟ್ಟಿದ್ದೇನೆ ಎಂದು ತಿಳಿಸಿದರು.

ನಾನು ಗೌರಿಶಂಕರ್ ವಿರುದ್ದ ತರಕಾರು ಅರ್ಜಿಯನ್ನ ಕೊಟ್ಟಿದ್ದೆ. ಅದು ಜಡ್ಜ್‌ಮೆಂಟ್ ಹಂತದಲ್ಲಿದೆ. ಆ ಹತಾಶೆ ಭಾವದಿಂದ ಹಿರೇಹಳ್ಳಿ ಮಹೇಶ್, ಗೌರಿಶಂಕರ್ ಇಬ್ಬರು ಸೇರಿ ಹಣ ಒದಗಿಸಲು ಅಟಿಕಾ ಬಾಬು ಹೆಸರನ್ನ ಕೂಡ ತಂದಿದ್ದಾರೆ. ಖೈದಿಗೆ ಹಣ ಯಾರು ಕೂಡುತ್ತಾರೆ ಅಂದ್ರೆ ಅಟಿಕಾ ಬಾಬು ಕೊಡುತ್ತಾರೆ ಅಂತಾ ಹಿರೇಹಳ್ಳಿ ಮಹೇಶ್ ಹೇಳಿದ್ದಾರೆ. ಅಟಿಕಾ ಬಾಬು, ಗೌರಿಶಂಕರ್ ಭಾಗಿಯಾಗಿದ್ದಾರೋ ಗೊತ್ತಿಲ್ಲಾ. ಹಿರೇಹಳ್ಳಿ ಮಹೇಶ್ ಭಾಗಿಯಾಗಿರೋದು ಸತ್ಯ. ನನಗೆ ಗೌರಿಶಂಕರ್ ಮೇಲೆ ವೈಯಕ್ತಿಕವಾಗಿ ಆರೋಪ ಮಾಡೋಕೆ ಇಷ್ಟ ಇಲ್ಲ ಎಂದರು.

ಸತ್ಯ ಇಲ್ಲದೇ ನಾನು ಯಾರ ಮೇಲೂ ಆರೋಪ ಮಾಡೋದಿಲ್ಲಾ. ನಕಲಿ ವ್ಯಾಕ್ಸಿನ್, ನಕಲಿ ಬಾಂಡ್ ಬಗ್ಗೆ ತಕರಾರು ಅರ್ಜಿಯ ತನಿಖೆ ನಡೆಯುತ್ತಿದೆ. ಅವರ ಬ್ಯಾಗ್ರೌಂಡ್ ಕೊರಟಗೆರೆಯಲ್ಲಿಅವರ ತಂದೆ ಯಾರು ಯಾರಿಗೆ ಏನೇನ್ ಮಾಡಿದ್ದಾರೆ ಗೊತ್ತಿದೆ. ಗ್ರಾಮಾಂತರ ಜನರು ಮುಗ್ಧರಿದ್ದಾರೆ. ಇಲ್ಲಿ ಕೂಡ ಏನೋ ಮಾಡೋಕೆ ಹೋದರು, ಆದರೆ ನಾವು ಬಿಟ್ಟಿಲ್ಲ ಎಂದು ಮಾಜಿ ಶಾಸಕ ಸುರೇಶ್ ಗೌಡ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:28 pm, Wed, 23 November 22

Video: ಉತ್ತರಕಾಶಿಯಲ್ಲಿ ಮೇಘಸ್ಫೋಟ, 9 ಮಂದಿ ನಾಪತ್ತೆ
Video: ಉತ್ತರಕಾಶಿಯಲ್ಲಿ ಮೇಘಸ್ಫೋಟ, 9 ಮಂದಿ ನಾಪತ್ತೆ
Weekly Horoscope: ಜೂನ್​ 30 ರಿಂದ ಜುಲೈ 6 ರವರೆಗಿನ ವಾರ ಭವಿಷ್ಯ
Weekly Horoscope: ಜೂನ್​ 30 ರಿಂದ ಜುಲೈ 6 ರವರೆಗಿನ ವಾರ ಭವಿಷ್ಯ
ಆಷಾಢ ಮಾಸದಲ್ಲಿ ಶುಭ ಕಾರ್ಯಗಳನ್ನ ಯಾಕೆ ಮಾಡಬಾರದು ತಿಳಿಯಿರಿ
ಆಷಾಢ ಮಾಸದಲ್ಲಿ ಶುಭ ಕಾರ್ಯಗಳನ್ನ ಯಾಕೆ ಮಾಡಬಾರದು ತಿಳಿಯಿರಿ
ಆಶ್ಲೇಷ ನಕ್ಷತ್ರದಲ್ಲಿ ಚಂದ್ರ ಸಂಚಾರ, ಈ ದಿನ ಯಾರಿಗೆಲ್ಲಾ ಶುಭ ತಿಳಿಯಿರಿ
ಆಶ್ಲೇಷ ನಕ್ಷತ್ರದಲ್ಲಿ ಚಂದ್ರ ಸಂಚಾರ, ಈ ದಿನ ಯಾರಿಗೆಲ್ಲಾ ಶುಭ ತಿಳಿಯಿರಿ
ಉತ್ತರಾಖಂಡದಲ್ಲಿ ಪ್ರವಾಹ; ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಸರಯೂ ನದಿ
ಉತ್ತರಾಖಂಡದಲ್ಲಿ ಪ್ರವಾಹ; ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಸರಯೂ ನದಿ
ಜೈನ ಮುನಿಗಳಿಂದ ಪ್ರಧಾನಿ ಮೋದಿಗೆ ಧರ್ಮ ಚಕ್ರವರ್ತಿ ಬಿರುದು ಪ್ರದಾನ
ಜೈನ ಮುನಿಗಳಿಂದ ಪ್ರಧಾನಿ ಮೋದಿಗೆ ಧರ್ಮ ಚಕ್ರವರ್ತಿ ಬಿರುದು ಪ್ರದಾನ
ಧೂಮಪಾನ ಮತ್ತು ಡ್ರಗ್ಸ್ ಸೇವನೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ: ಡಾ ಸದಾನಂದ
ಧೂಮಪಾನ ಮತ್ತು ಡ್ರಗ್ಸ್ ಸೇವನೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ: ಡಾ ಸದಾನಂದ
ಮಳೆಯಿಂದ ಚಾರ್ ಧಾಮ್ ಯಾತ್ರೆಗೆ ಅಡ್ಡಿ; ಕೇದಾರನಾಥ ಮಾರ್ಗದಲ್ಲಿ ಭೂಕುಸಿತ
ಮಳೆಯಿಂದ ಚಾರ್ ಧಾಮ್ ಯಾತ್ರೆಗೆ ಅಡ್ಡಿ; ಕೇದಾರನಾಥ ಮಾರ್ಗದಲ್ಲಿ ಭೂಕುಸಿತ
ಸ್ಕಂದಗಿರಿ ಮತ್ತು ಬಹುನಂದೀಶ್ವವರ ದೇವಸ್ಥಾನಕ್ಕೂ ನೋ ಎಂಟ್ರಿ: ಜಿಲ್ಲಾಡಳಿತ
ಸ್ಕಂದಗಿರಿ ಮತ್ತು ಬಹುನಂದೀಶ್ವವರ ದೇವಸ್ಥಾನಕ್ಕೂ ನೋ ಎಂಟ್ರಿ: ಜಿಲ್ಲಾಡಳಿತ
ಬೌಲಿಂಗ್ ಕೋಚ್ ಜೊತೆ WWE ಆಡಿ ಸೋತ ಅರ್ಷದೀಪ್, ಆಕಾಶ್
ಬೌಲಿಂಗ್ ಕೋಚ್ ಜೊತೆ WWE ಆಡಿ ಸೋತ ಅರ್ಷದೀಪ್, ಆಕಾಶ್