AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲವರ್​​ ಜೊತೆ ಮದುವೆಯಾಗಿದ್ದರೆ ರಾಣಿಯಂತೆ ಇರ್ತಿದ್ದೆ, ಹಳ್ಳಿಗುಗ್ಗುನ್ನ ಮದುವೆಯಾಗಿಬಿಟ್ಟೆ ಎಂದು ಟಾರ್ಚರ್​, ಮೆಟ್ರೋ ಇಂಜಿನಿಯರ್ ಸಾವಿಗೆ ಶರಣು!

ಪ್ರಿಯಾಂಕ ಮದುವೆಗೂ ಮುನ್ನ ಮೈಸೂರಿನಲ್ಲಿ ವ್ಯಾಸಂಗ ಮಾಡೋ ವೇಳೆ ಆಕೆಗೆ ಪ್ರಿಯಕರ ಇದ್ದು, ಆತನೊಟ್ಟಿಗೆ ಮದುವೆಯಾಗ ಬಯಸಿದ್ದಳಂತೆ.. ಆದರೆ ಮಂಜುನಾಥ್ ಜೊತೆ ಮದುವೆಯಾಗಿದ್ದಕ್ಕೆ ಕುಪಿತಗೊಂಡು ನೀನು ಹಳ್ಳಿ ಗುಗ್ಗು, ನಾನು ಅವನೊಟ್ಟಿಗೆ ಮದುವೆಯಾಗಿದ್ದರೇ ರಾಣಿ ಹಾಗೆ ಇರ್ತಿದ್ದೆ ಅಂತಾ ತನ್ನ ಸಹೋದರ ರಾಕೇಶ್ ನೊಟ್ಟಿಗೆ ಸೇರಿ ಮಂಜುನಾಥ್ ಗೆ ಇನ್ನಿಲ್ಲದ ಕಿರುಕುಳ ನೀಡುತ್ತಿದ್ದರಂತೆ.

ಲವರ್​​ ಜೊತೆ ಮದುವೆಯಾಗಿದ್ದರೆ ರಾಣಿಯಂತೆ ಇರ್ತಿದ್ದೆ, ಹಳ್ಳಿಗುಗ್ಗುನ್ನ ಮದುವೆಯಾಗಿಬಿಟ್ಟೆ ಎಂದು ಟಾರ್ಚರ್​, ಮೆಟ್ರೋ ಇಂಜಿನಿಯರ್ ಸಾವಿಗೆ ಶರಣು!
ಹೆಂಡತಿ ಟಾರ್ಚರ್​, ಮೆಟ್ರೋದಲ್ಲಿ ಇಂಜಿನಿಯರ್ ಆಗಿದ್ದ ಗಂಡ ಸಾವಿಗೆ ಶರಣು!
TV9 Web
| Updated By: ಸಾಧು ಶ್ರೀನಾಥ್​|

Updated on:Sep 14, 2023 | 7:36 PM

Share

ಅವರದು 9 ವರ್ಷಗಳ ಹಿಂದೆ ಮದುವೆಯಾಗಿದ್ದ ಜೋಡಿ, ಗುರು ಹಿರಿಯರು ನೋಡಿ ನಿಶ್ಚಯಿಸಿ ಅದ್ದೂರಿಯಾಗಿ ಮದುವೆ ಮಾಡಿದ್ದರು, ಆ ಹುಡುಗ ಕೂಡ ಜೋರಾಗಿಯೇ ಇದ್ದ, ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡ್ತಿದ್ದ, ಸುಮಾರು 70 ಸಾವಿರ ಸಂಬಳ ಜೊತೆಗೆ ಇರೊದಕ್ಕೆ ಕ್ವಾರ್ಟರ್ಸ್​… ಹೀಗಿದ್ದರೂ ಪತ್ನಿಯ ಟಾರ್ಚರ್, ಪತ್ನಿಯೇ ಹೊಡೆದು ಬಡಿದು ಕಿರುಕುಳ ನೀಡುತ್ತಿದ್ದಳಂತೆ! ನಾನು ಯಾರನ್ನು ಲವ್ ಮಾಡಿದ್ದೆನೋ ಅವನನ್ನೇ ಮದುವೆಯಾಗಬೇಕಿತ್ತು ಅಂತಾ ವರಾತ ತೆಗೆಯುತ್ತಿದ್ದಳಂತೆ. ಜೊತೆಗೆ ನೀನು ಅವಳ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದೀಯಾ ಅಂತಾ ಸದಾ ಅನುಮಾನಪಡುತ್ತಿದ್ದಳಂತೆ. ಹಲವು ಬಾರಿ ರಾಜೀ ಪಂಚಾಯತಿ ನಡೆಸಿದರೂ ಕೂಡ ಸುಮ್ಮನೆ ಆಗಿಲ್ಲ ಮಹಾತಾಯಿ. ಕೊನೆಗೆ ತಮ್ಮ ಸಹೋದರನಿಗೆ ಆಡಿಯೋ ಕಳಿಸಿ ಆತ್ಮಹತ್ಯೆ ಗೆ ಶರಣಾಗಿದ್ದಾನೆ ಗಂಡ.

ಪತ್ನಿಯ ಕಾಟಕ್ಕೆ ಬೇಸತ್ತು ಇಂಜಿನಿಯರ್ ಒಬ್ಬರು​ ಸಾವಿನ ಹಾದಿ ಹಿಡಿದಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕು ಕೆ.ಬಿ.ಕ್ರಾಸ್ ಬಳಿಯ ಕುಂದೂರು ಪಾಳ್ಯದಲ್ಲಿ ನಡೆದಿದೆ. 38 ವರ್ಷದ ಮಂಜುನಾಥ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ದುರ್ದೈವಿಯಾಗಿದ್ದು ,ಪತ್ನಿಯ ನಿರಂತರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಮಂಜುನಾಥ್, ಬೆಂಗಳೂರಿನ ಬಿಎಂಆರ್​ಸಿಎಲ್​ನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಕಳೆದ 10 ವರ್ಷದ ಹಿಂದೆ ತುರುವೇಕೆರೆ ಮೂಲದ ಪ್ರಿಯಾಂಕಾಳನ್ನು ಮದುವೆಯಾಗಿದ್ದರು.ಇಬ್ಬರಿಗೂ ಏಳು ವರ್ಷದ ಮಗಳಿದ್ದು, ದಂಪತಿಯಿಬ್ಬರೂ ಬೆಂಗಳೂರಿನಲ್ಲಿ ವಾಸವಿದ್ದರು. ಗಂಡ-ಹೆಂಡತಿ ನಡುವೆ ಹೊಂದಾಣಿಕೆ ಇಲ್ಲದೆ ಪದೇಪದೇ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ.

ಮದುವೆಯಾದ ಬಳಿಕ ಮಂಜುನಾಥ್​ಗೆ ಪತ್ನಿ ಪ್ರಿಯಾಂಕಾ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ನೀನು ಹಳ್ಳಿ ಗುಗ್ಗು, ನಿನ್ನನ್ನು ಮದುವೆಯಾಗಲು ನನಗೆ ಇಷ್ಟ ಇರಲಿಲ್ಲ ಎಂದು ಪದೇಪದೇ ಪ್ರಿಯಾಂಕಾ ಚುಚ್ಚಿ ಚುಚ್ಚಿ ಮಾತನಾಡುತ್ತಿದ್ದಳು ಎನ್ನಲಾಗಿದೆ. ಈ ಬಗ್ಗೆ ಮಂಜುನಾಥ್ ಅನೇಕ ಬಾರಿ ಕುಟುಂಬಸ್ಥರ ಬಳಿ ಹೇಳಿಕೊಂಡಿದ್ದು,ಕುಟುಂಬದ ಹಿರಿಯರು ಮೂರ್ನಾಲ್ಕು ಬಾರಿ ರಾಜಿ ಪಂಚಾಯ್ತಿ ಸಹ ಮಾಡಿದ್ದರು..ಪತ್ನಿಯ ನಿರಂತರ ಕಿರುಕುಳಕ್ಕೆ ಬೇಸತ್ತ ಮಂಜುನಾಥ್, ಕೊನೆಗೂ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಪ್ರಿಯಾಂಕ ಮದುವೆಗೂ ಮುನ್ನ ಮೈಸೂರಿನಲ್ಲಿ ವ್ಯಾಸಂಗ ಮಾಡೋ ವೇಳೆ ಆಕೆಗೆ ಪ್ರಿಯಕರ ಇದ್ದು, ಆತನೊಟ್ಟಿಗೆ ಮದುವೆ ಯಾಗಬಯಸಿದ್ದಳಂತೆ.. ಆದರೆ ಮಂಜುನಾಥ್ ಜೊತೆ ಮದುವೆಯಾಗಿದ್ದಕ್ಕೆ ಕುಪಿತಗೊಂಡು ನೀನು ಹಳ್ಳಿ ಗುಗ್ಗು, ನಾನು ಅವನೊಟ್ಟಿಗೆ ಮದುವೆಯಾಗಿದ್ದರೇ ರಾಣಿ ಹಾಗೆ ಇರ್ತಿದ್ದೆ ಅಂತಾ ತನ್ನ ಸಹೋದರ ರಾಕೇಶ್ ನೊಟ್ಟಿಗೆ ಸೇರಿ ಮಂಜುನಾಥ್ ಗೆ ಇನ್ನಿಲ್ಲದ ಕಿರುಕುಳ ನೀಡುತ್ತಿದ್ದರಂತೆ.

ಜೊತೆಗೆ, ಇತ್ತೀಚೆಗೆ ಮಂಜುನಾಥ್ ಆಕೆಯ ಸಹೋದರಿ ಪುಷ್ಪಲತಾಳ ಬಳಿ ಮನೆ ತೆಗೆದುಕೊಳ್ಳೋದಾಗಿ ಹೇಳಿ ಎರಡೆಳೆ ಚಿನ್ನದ ಸರ, ಒಡವೆಗಳನ್ನು ಸಾಲವಾಗಿ ಪಡೆದು ಹೋಗಿದ್ದನಂತೆ. ಆತ್ಮಹತ್ಯೆಗೂ ಮುನ್ನ ತನ್ನ ಸಹೋದರನಿಗೆ ಆಡಿಯೋ ಮೆಸೇಜ್ ಕಳುಹಿಸಿದ್ದು, ನನಗೆ ಅವಳ ಜತೆ ಜೀವನ ಮಾಡುವುದಕ್ಕೆ ಆಗುತ್ತಿಲ್ಲ. ಆ ಮನೆಹಾಳಿ ಕಾಟವನ್ನು ತಾಳಲಾರದೇ ನಾನು ಸಾಯುತ್ತಿದ್ದೇನೆ.

ನನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಮಂಜುನಾಥ್​​ ಆಡಿಯೋ ಮೆಸೇಜ್​ ಕಳುಹಿಸಿ, ಬಳಿಕ ಕುಂದೂರು ಪಾಳ್ಯದ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಇನ್ನು ಬೆಂಗಳೂರಿನಲ್ಲಿ ಮನೆ ತೆಗೆದುಕೊಳ್ಳಲು ಇತ್ತೀಚೆಗೆ ಅಕ್ಕ ಪುಷ್ಪ ಬಳಿ ಎರಡೆಳೆ ಸರ ಸೇರಿದಂತೆ ಒಡವೆ ಆಧಾರ್ ಕಾರ್ಡ್ ತೆಗೆದುಕೊಂಡು ಹೋಗಿದ್ದನಂತೆ, ತಮ್ಮನ ಕಳೆದುಕೊಂಡ ಅಕ್ಕನ ಆಕ್ರಂದನ ಮುಗಿಲುಮುಟ್ಟಿದೆ.

ಸದ್ಯ ಮೃತ ಮಂಜುನಾಥ್ ಪತ್ನಿ ಪ್ರಿಯಾಂಕಾ ವಿರುದ್ಧ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.. ಹೆಂಡತಿಯ ಕಾಟಕ್ಕೆ ಬೇಸತ್ತ ಇಂಜಿನಿಯರ್ ಆತ್ಮಹತ್ಯೆಗೆ ಶರಣಾಗಿದ್ದು ಮಾತ್ರ ದುರ್ದೈವವೇ ಸರಿ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 7:32 pm, Thu, 14 September 23

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!