AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಯಚೂರು: ಹಾರೋ ಬೂದಿಗೆ ಚಿನ್ನದ ಬೆಲೆ, ವಿಲೇವಾರಿ ವಾಹನಗಳಿಂದ ಖಾಕಿ ಹಫ್ತಾ ವಸೂಲಿ

ರಾಯಚೂರು ಜಿಲ್ಲೆಯಲ್ಲಿರುವ ವಿದ್ಯುತ್ ಉತ್ಪಾದನಾ ಘಟಕದಿಂದ ಹಾರಿ ಬರುವ ಬೂದಿಯನ್ನು ವಿಲೇವಾರಿ ಮಾಡಲು ಕೊಂಡೊಯ್ಯುವ ಟ್ರಕ್​ಗಳನ್ನು ತಡೆಯುತ್ತಿರುವ ಶಕ್ತಿನಗರ ಠಾಣಾ ಪೊಲೀಸರು, ಹಫ್ತ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಅಲ್ಲದೆ, ತಿಂಗಳಿಗೆ ಇಂತಿಷ್ಟು ಅಂತ ವಾಹನ ಚಾಲಕರು ನೀಡಬೇಕಂತೆ. ಸದ್ಯ ಹಣ ನೀಡದ ಹಿನ್ನೆಲೆ ನಾಲ್ಕು ದಿನಗಳಿಂದ ಅರಣ್ಯ ಪ್ರದೇಶದಲ್ಲಿ ಲೋಡೆಡ್ ಟ್ರಕ್​ಗಳು ನಿಂತಲ್ಲೇ ನಿಂತಿವೆ.

ರಾಯಚೂರು: ಹಾರೋ ಬೂದಿಗೆ ಚಿನ್ನದ ಬೆಲೆ, ವಿಲೇವಾರಿ ವಾಹನಗಳಿಂದ ಖಾಕಿ ಹಫ್ತಾ ವಸೂಲಿ
ಹಾರೋ ಬೂದಿ ತುಂಬಿರುವ ಟ್ರಕ್​ಗಳು
ಭೀಮೇಶ್​​ ಪೂಜಾರ್
| Updated By: Rakesh Nayak Manchi|

Updated on:Sep 17, 2023 | 11:52 AM

Share

ತುಮಕೂರು, ಸೆ.17: ಜಿಲ್ಲೆಯಲ್ಲಿರುವ ಆರ್​​ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕದಿಂದ ಹಾರಿ ಬರುವ ಬೂದಿಯನ್ನು (Power Generation Unit Ashes) ವಿಲೇವಾರಿ ಮಾಡಲು ಕೊಂಡೊಯ್ಯುವ ಟ್ರಕ್​ಗಳನ್ನು ತಡೆಯುತ್ತಿರುವ ಶಕ್ತಿನಗರ ಠಾಣಾ ಪೊಲೀಸರು, ಹಫ್ತ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಅಲ್ಲದೆ, ತಿಂಗಳಿಗೆ ಇಂತಿಷ್ಟು ಅಂತ ವಾಹನ ಚಾಲಕರು ನೀಡಬೇಕಂತೆ. ಸದ್ಯ ಹಣ ನೀಡದ ಹಿನ್ನೆಲೆ ನಾಲ್ಕು ದಿನಗಳಿಂದ 600 ರಿಂದ 700 ಟ್ರಕ್​ಗಳು ಅರಣ್ಯ ಪ್ರದೇಶದಲ್ಲಿ ನಿಂತಲ್ಲೇ ನಿಂತಿವೆ.

ರಾಯಚೂರು ತಾಲೂಕಿನ ಶಕ್ತಿನಗರದ ಆರ್​ಟಿಪಿಎಸ್ ವ್ಯಾಪ್ತಿಯಲ್ಲಿ ಹಣ ವಸೂಲಿಗಾಗಿ ಶಕ್ತಿ ನಗರ ಠಾಣೆ ಪಿಎಸ್​ಐ ಸೌಮ್ಯ ವಾಹನಗಳನ್ನ ತಡೆದು ನಿಲ್ಲಿಸುತ್ತಿದ್ದಾರೆ. ಹಣ ಕೊಡದ್ದಕ್ಕೆ ಸುಮಾರು 600-700 ಟ್ರಕ್​ಗಳನ್ನು ಅರಣ್ಯ ಪ್ರದೇಶದಲ್ಲಿ ನಿಲ್ಲಿಸಲಾಗಿದೆ. ಹೀಗೆ ನಿಲ್ಲಿಸಿದ ವಾಹನಗಳು ಸುಮಾರು 2 ಕಿ.ಮೀ ವ್ಯಾಪ್ತಿಯುದ್ದಕ್ಕೂ ವ್ಯಾಪಿಸಿದೆ.

ಇದನ್ನೂ ಓದಿ: ಬೆಂಗಳೂರು: ಸಂಚಾರ ದಟ್ಟಣೆ ನಿಯಂತ್ರಿಸಲು ವಾಹನ ಸವಾರರಿಂದ ದಟ್ಟಣೆ ಶುಲ್ಕ ವಸೂಲಿಗೆ ಚಿಂತನೆ

ಸುಮಾರು 600-700 ಟ್ರಕರ್​ಗಳಿಂದ ತಿಂಗಳಿಗೆ 6-7 ಸಾವಿರ ಹಫ್ತಾ ನೀಡುವಂತೆ ಡಿಮ್ಯಾಂಡ್ ಮಾಡುತ್ತಿದ್ದಾರೆ. ಒಂದು ಹೊತ್ತಿನ ಊಟಕ್ಕೆ ಮತ್ತು ಒಂದು ಹನಿ ನೀರಿಗೂ ಪರದಾಡುವಂತಾಗಿದೆ. ಟ್ರಕ್ ಹೊರಗಡೆ ಹೋಗಬೇಕೆಂದರೆ ಹಫ್ತ ನೀಡಲೇ ಬೇಕು ಅಂತ ಎಚ್ಚರಿಕೆ ನೀಡಿದ್ದಾರೆ. ಇದರಿಂದಾಗಿ ನಾವು ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ಚಾಲಕರು, ಕ್ಲೀನರ್​ಗಳು ಗಂಭೀರ ಆರೋಪ ಮಾಡಿದ್ದಾರೆ.

ಆರ್​​ಟಿಪಿಎಸ್​ನ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಬಳಕೆಯಾಗುವ ಕಲ್ಲಿದ್ದಲಿನ ವೇಸ್ಟೇಜ್​​ಗೆ ಆ್ಯಶ್ (ಹಾರೋ ಬೂದಿ) ಅಂತ ಹೆಸರು. ಸಿಮೆಂಟ್ ಫ್ಯಾಕ್ಟರಿ, ಕಾರ್ಖಾನೆಗಳಲ್ಲಿ ಬಳಕೆಯಾಗುವ ಆ್ಯಶ್​ಗೆ ಆಂಧ್ರ, ತೆಲಂಗಾಣ, ರಾಜ್ಯದಲ್ಲೂ ಭಾರೀ ಬೇಡಿಕೆ ಇದೆ. ಈ ಹಾರೋ ಬೂದಿಗೆ ಚಿನ್ನದ ಬೆಲೆ ಬಂದಿದ್ದರಿಂದ ಈಗ ಪೊಲೀಸರು ಹಫ್ತಾಗೆ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

ಎಸ್​ಪಿ, ಹೆಚ್ಚುವರಿ ಎಸ್​ಪಿ ಅವರಿಗೂ ಮಾಹಿತಿ ಇಲ್ಲದೇ 700 ಟ್ರಕ್​ಗಳನ್ನು ತಡೆದು ನಿಲ್ಲಿಸಲಾಗಿದೆ. ಈ ಬಗ್ಗೆ ಮಾಹಿತಿ ಕೇಳಿದ ಹಿರಿಯ ಅಧಿಕಾರಿಗಳು ಶಾಕ್ ಆಗಿದ್ದಾರೆ. ಆರ್​ಟಿಪಿಎಸ್ ವಿವಿಧ ಕಂಪೆನಿಗಳಿಗೆ ಆ್ಯಶ್ ನೀಡಿ ವಾರ್ಷಿಕ ಸುಮಾರು 40 ಕೋಟಿ ವರೆಗೆ ಆದಾಯ ಪಡೆಯುತ್ತಿದೆ.

ನಿಮಯ ಗಾಳಿಗೆ ತೂರಿ ಬೂದಿ ಸಾಗಾಟ

ಬೂದಿ ಸಾಗಿಸುವಾಗ ನೀರನ್ನು ಸಿಂಪಡಿಸಿಕೊಂಡು ಕೊಂಡೊಯ್ಯಬೇಕು. ಆದರೆ, ಈ ಟ್ರಕ್​ಗಳಲ್ಲಿ ನೀರನ್ನು ಸಿಂಪಡಿಸದೇ ಸಾಗಿಸುತ್ತಿದ್ದಿದ್ದರಿಂದ ಊರಿನ ಜನರಿಗೆ ಸಮಸ್ಯೆ ಉಂಟಾಗುತ್ತಿತ್ತು. ಹೀಗಾಗಿ ಪೊಲೀಸರು ಟ್ರಕ್​ಗಳನ್ನು ತಡೆದಿದ್ದಾರೆ ಹೊರತು ಹಣ ವಸೂಲಿಗಲ್ಲ ಎಂದು ರಾಯಚೂರು ಗ್ರಾಮಾಂತರ ಶಾಸಕ ಬಸನಗೌಡ ದಡ್ಡಾಲ್ ಸ್ಪಷ್ಟನೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:38 am, Sun, 17 September 23

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?