ಕೊಡಗು ಅರಣ್ಯ ಪ್ರದೇಶದಲ್ಲಿ ಹುಲಿ ದಾಳಿಗೆ ಮರಿಯಾನೆ ಸಾವು; ಮತ್ತೊಂದೆಡೆ ಕಾಡಾನೆ ಸಾವು

| Updated By: ಸಾಧು ಶ್ರೀನಾಥ್​

Updated on: Jul 05, 2021 | 10:06 AM

Wild elephants death: ಶ್ರೀಮಂಗಲ ಅರಣ್ಯ ವಿಭಾಗದ ಅರಣ್ಯಾಧಿಕಾರಿಗಳು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಪಶು ವೈದ್ಯಾಧಿಕಾರಿ ಮುಜೀಬ್ ಗಂಡಾನೆಯ ಶವಪರೀಕ್ಷೆ ನಡೆಸಿದ್ದಾರೆ. ಶವಪರೀಕ್ಷೆ ವರದಿ ಬಂದ ಮೇಲೆ ಗಂಡಾನೆಯ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ ಎಂದು  ಶ್ರೀಮಂಗಲ ಆರ್​ಎಫ್​ಒ (Srimangala RFO) ವೀರೇಂದ್ರ ತಿಳಿಸಿದ್ದಾರೆ.  

ಕೊಡಗು ಅರಣ್ಯ ಪ್ರದೇಶದಲ್ಲಿ ಹುಲಿ ದಾಳಿಗೆ ಮರಿಯಾನೆ ಸಾವು; ಮತ್ತೊಂದೆಡೆ ಕಾಡಾನೆ ಸಾವು
ಕೊಡಗು ಅರಣ್ಯ ಪ್ರದೇಶದಲ್ಲಿ ಹುಲಿ ದಾಳಿಗೆ ಮರಿಯಾನೆ ಸಾವು; ಮತ್ತೊಂದೆಡೆ ಕಾಡಾನೆ ಸಾವು
Follow us on

ಮಡಿಕೇರಿ: ನಾಗರಹೊಳೆ ಉದ್ಯಾನವನ ವ್ಯಾಪ್ತಿಯಲ್ಲಿ ಘಟನೆ ಹುಲಿ ದಾಳಿಗೆ ಒಂದು ತಿಂಗಳ ಮರಿಯಾನೆ ಸಾವಿಗೀಡಾಗಿದೆ. ಇನ್ನು, ಪೊನ್ನಂಪೇಟೆ ತಾಲ್ಲೂಕಿನಲ್ಲಿ ಕಾಡಾನೆಗಳ ಕಾದಾಟದಲ್ಲಿ 14 ವರ್ಷದ ಗಂಡಾನೆ ಮೃತಪಟ್ಟಿದೆ. 

ಪ್ರತ್ಯೇಕ ಪ್ರಕರಣಗಳಲ್ಲಿ ಎರಡು ಕಾಡಾನೆಗಳು ಮೃತಪಟ್ಟಿವೆ. ಕೊಡಗು-ಮೈಸೂರು ಗಡಿಯ ನಾಗರಹೊಳೆ ವ್ಯಾಪ್ತಿಯಲ್ಲಿ (Nagarahole National Park ) ದಕ್ಷಿಣ ಕೊಡಗು ಭಾಗದಲ್ಲಿ ನಿಟ್ಟೂರು ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಹುಲಿ ದಾಳಿಗೆ ಒಂದು ತಿಂಗಳ ಮರಿಯಾನೆ (elephant calf) ಸಾವನ್ನಪ್ಪಿದೆ.

ಎಎಸ್​ಎಫ್ ಗೋಪಾಲ್​ ಮತ್ತು ಇತರೆ ಅರಣ್ಯ ಸಿಬ್ಬಂದಿಯು ಮರಿಯಾನೆ ದೇಹ ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹುಲಿ ದಾಳಿಯಿಂದಲೇ ಒಂದು ತಿಂಗಳ ಮರಿಯಾನೆ ಮೃತಪಟ್ಟಿದೆ ಎಂದು ದೃಢಪಡಿಸಿದ್ದಾರೆ.

ಪೊನ್ನಂಪೇಟೆ ತಾಲ್ಲೂಕಿನ ಪೂಜೆಕಲ್ಲು ವ್ಯಾಪ್ತಿಯಲ್ಲಿ ನಡೆದಿರುವ ಘಟನೆಯಲ್ಲಿ ಕಾಡಾನೆಗಳ ಕಾದಾಟದಲ್ಲಿ 14 ವರ್ಷದ ಗಂಡಾನೆ (male wild elephant) ಅಸುನೀಗಿದೆ ಎನ್ನಲಾಗಿದೆ. ಎರಡೂ ಸ್ಥಳಗಳಿಗೆ ಅರಣ್ಯಾಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.  ಪೂಜೆಕಲ್ಲು ವ್ಯಾಪ್ತಿಯಲ್ಲಿ ಕಲ್ಪನಾ ಎಂಬುವವರ ಖಾಸಗಿ ಎಸ್ಟೇಟ್​ಗೆ ಸಮೀಪ 14 ವರ್ಷದ ಗಂಡಾನೆ ಮೃತದೇಹ ಪತ್ತೆಯಾಗಿದೆ.

ಶ್ರೀಮಂಗಲ ಅರಣ್ಯ ವಿಭಾಗದ ಅರಣ್ಯಾಧಿಕಾರಿಗಳು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಪಶು ವೈದ್ಯಾಧಿಕಾರಿ ಮುಜೀಬ್ ಗಂಡಾನೆಯ ಶವಪರೀಕ್ಷೆ ನಡೆಸಿದ್ದಾರೆ. ಶವಪರೀಕ್ಷೆ ವರದಿ ಬಂದ ಮೇಲೆ ಗಂಡಾನೆಯ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ ಎಂದು  ಶ್ರೀಮಂಗಲ ಆರ್​ಎಫ್​ಒ (Srimangala RFO) ವೀರೇಂದ್ರ ತಿಳಿಸಿದ್ದಾರೆ.

(two wild elephants get killed near nagarahole park says Virendra Srimangala RFO)

ಕೊಡಗು ಜಿಲ್ಲೆಯಲ್ಲಿ ಹುಲಿ ದಾಳಿಗೆ ಬಾಲಕ ಬಲಿ: ಅರಣ್ಯ ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ

Published On - 10:03 am, Mon, 5 July 21