AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫುಡ್ ಕಾಂಪಿಟಿಷನ್​ಗೆ ಲಗ್ಗೆ ಇಟ್ಟ ಭಾರತ: ಪ್ರಥಮ ಬಾರಿಗೆ ಅಡುಗೆ ವಿಭಾಗದಲ್ಲಿ ತಾಯ್ನಾಡಿಗೆ ಪ್ರಶಸ್ತಿ ತಂದುಕೊಟ್ಟ ದಕ್ಷಿಣ ಕನ್ನಡದ ಹರ್ಷವರ್ಧನ್

ಫ್ರಾನ್ಸ್‌ನಲ್ಲಿ ನಡೆದ 47ನೇ ವಿಶ್ವ ಕೌಶಲ್ಯ ಸ್ಪರ್ಧೆಯಲ್ಲಿ ಭಾರತದ ಹರ್ಷವರ್ಧನ್ ಮೆಡಲಿಯನ್ ಆಫ್ ಎಕ್ಸಲೆನ್ಸ್ ಅನ್ನು ಗೆದ್ದು ಭಾರತಕ್ಕೆ ಹೆಮ್ಮೆಯನ್ನು ತಂದಿದ್ದಾರೆ. ಅಡುಗೆ ಕ್ಷೇತ್ರದಲ್ಲಿ ಭಾರತದ ಮೊದಲ ಈ ಸಾಧನೆ ಮಾಡಿದ್ದಾರೆ. ಹರ್ಷವರ್ಧನ್ ಅವರ ಅಂತಾರಾಷ್ಟ್ರೀಯ ಮಟ್ಟದ ಅಡುಗೆ ಕೌಶಲ್ಯ ಮತ್ತು ಉಣಬಡಿಕೆ ಪ್ರಸ್ತುತಿಯಿಂದ ಈ ಗೆಲುವು ಸಾಧ್ಯವಾಗಿದೆ.

ಫುಡ್ ಕಾಂಪಿಟಿಷನ್​ಗೆ ಲಗ್ಗೆ ಇಟ್ಟ ಭಾರತ: ಪ್ರಥಮ ಬಾರಿಗೆ ಅಡುಗೆ ವಿಭಾಗದಲ್ಲಿ ತಾಯ್ನಾಡಿಗೆ ಪ್ರಶಸ್ತಿ ತಂದುಕೊಟ್ಟ ದಕ್ಷಿಣ ಕನ್ನಡದ ಹರ್ಷವರ್ಧನ್
ಫುಡ್ ಕಾಂಪಿಟಿಷನ್​ಗೆ ಲಗ್ಗೆ ಇಟ್ಟ ಭಾರತ: ಪ್ರಥಮ ಬಾರಿಗೆ ಅಡುಗೆ ವಿಭಾಗದಲ್ಲಿ ತಾಯ್ನಾಡಿಗೆ ಪ್ರಶಸ್ತಿ ತಂದುಕೊಟ್ಟ ದಕ್ಷಿಣ ಕನ್ನಡದ ಹರ್ಷವರ್ಧನ್
Follow us
ಪ್ರಜ್ವಲ್ ಅಮೀನ್​, ಉಡುಪಿ
| Updated By: ಗಂಗಾಧರ​ ಬ. ಸಾಬೋಜಿ

Updated on: Nov 07, 2024 | 7:01 PM

ಉಡುಪಿ, ನವೆಂಬರ್​ 07: ಕ್ರೀಡಾ ಒಲಿಂಪಿಕ್ಸ್​ನಲ್ಲಿ ಭಾರತದ ಪದಕಗಳ ಬೇಟೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿದೆ. ಫ್ರಾನ್ಸ್​ನಲ್ಲಿ ನಡೆದ ಸ್ಕಿಲ್ ಒಲಂಪಿಕ್ಸ್​ನಲ್ಲಿ ಭಾರತ ಮಹತ್ವದ ಸಾಧನೆಯನ್ನು ಮಾಡುತ್ತಿದೆ. ಇದೇ ಮೊದಲ ಬಾರಿಗೆ ಅಡುಗೆ (food competition) ವಿಭಾಗದಲ್ಲಿ ಮೆಡಲಿಯನ್ ಆಫ್ ಎಕ್ಸಲೆನ್ಸ್ ಪಡೆಯುವ ಮೂಲಕ ಭಾರತ ಜಗತ್ತಿನ ಫುಡ್ ಕಾಂಪಿಟಿಷನ್​ಗೆ ಲಗ್ಗೆ ಇಟ್ಟಿದೆ.

ಭಾರತದ ಹರ್ಷವರ್ಧನ್ ಮೆಡಲೀಯನ್ ಅವಾರ್ಡ್

ಹೊಟ್ಟೆ ಹಸಿವಿಗೆ ಬಾಯಿ ರುಚಿಗೆ ಚಪ್ಪರಸಿ ತಿನ್ನಲು ಭಾರತದಲ್ಲಿ ಸಾವಿರ ಸಾವಿರ ಖಾದ್ಯಗಳಿವೆ. ಪ್ರಪಂಚದ ಬೇರೆಲ್ಲೂ ಸಿಗದ ವೆರೈಟಿ ಫುಡ್ ಗಳು ನಮ್ಮಲ್ಲಿ ತಯಾರಾಗುತ್ತವೆ. ಇಂಟರ್ ಬ್ಯಾಶನಲ್ ಫುಡ್ ಕಾಂಪಿಟಿಷನ್ ನಲ್ಲಿ ಇದೆ ಮೊಟ್ಟಮೊದಲ ಬಾರಿಗೆ ಭಾರತ ಆಯ್ಕೆಯಾಗಿ ಸ್ಪರ್ಧೆ ಮಾಡಿದೆ. ಪ್ರಪಂಚದ 43 ದೇಶಗಳನ್ನ ಹಿಂದಿಕ್ಕಿ ಭಾರತದ ಹರ್ಷವರ್ಧನ್ ಮೆಡಲೀಯನ್ ಅವಾರ್ಡ್ ಪಡೆದಿದ್ದಾರೆ.

ಇದನ್ನೂ ಓದಿ: ಏನಿದು ತುಳು ಜನರ ಮುಳ್ಳಮುಟ್ಟೆ ಆಚರಣೆ? ದೀಪಾವಳಿಗೂ ಇದಕ್ಕೂ ಇರುವ ನಂಟು ತಿಳಿಯಿರಿ

ಫ್ರಾನ್ಸ್​ನಲ್ಲಿ ನಡೆದ 47ನೇ ವಿಶ್ವ ಕೌಶಲ್ಯ ಸ್ಪರ್ಧೆಯಲ್ಲಿ ಮಣಿಪಾಲ ಮಾಹೆ ವಿವಿಯಲ್ಕಿ ಪಾಕಶಾಸ್ತ್ರ ಕಲಿಯುತ್ತಿರುವ ಹರ್ಷವರ್ಧನ್, ಈ ಸಾಧನೆಯನ್ನು ಮಾಡಿದ್ದಾರೆ. ಮೂರು ತಿಂಗಳ ಕಠಿಣ ಪರಿಶ್ರಮ, ಅಂತರಾಷ್ಟ್ರೀಯ ಗುಣಮಟ್ಟವನ್ನು ತನ್ನ ಖಾದ್ಯ ತಯಾರಿ ಮತ್ತು ಉಣಬಡಿಸುವ ವಿಭಾಗದಲ್ಲಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ.

ಹರ್ಷವರ್ಧನ್ ಫ್ರಾನ್ಸ್​ನ ಲಿಯಾನ್​ನಲ್ಲಿ, ಹಾಟ್ ಕಿಚನ್, ಕೋಲ್ಡ್ ಕಿಚನ್, ಬಫೆ ಪ್ರೆಸೆಂಟೇಷನ್, ಬೇಕರಿ ಮಾಡ್ಯೂಲ್ ವಿಭಾಗದಲ್ಲಿ ವರ್ಲ್ಡ್ ಸ್ಕಿಲ್ ಮಾನದಂಡಗಳಿಗೆ ಅನುಗುಣವಾಗಿ ಅಡುಗೆ ತಯಾರಿ ಮಾಡಿದ್ದಾರೆ. ಸುಮಾರು ಆರು ತಿಂಗಳ ದೈಹಿಕ ಮತ್ತು ಮಾನಸಿಕ ಫಿಟ್ನೆಸ್​ಗೆ ವಿಶೇಷ ತರಬೇತಿಗಳನ್ನ ಹರ್ಷವರ್ಧನ್ ಅವರಿಗೆ ನೀಡಲಾಗಿತ್ತು. 47 ವರ್ಷಗಳಲ್ಲಿ ಭಾರತ ಪ್ರಥಮವಾಗಿ ಈ ಸ್ಪರ್ಧೆಯಲ್ಲಿ ಭಾಗಿಯಾಗಿ ಮೆಡಾಲಿಯನ್ ಪಡೆದುಕೊಂಡಿದೆ ಎಂಬುದು ಮತ್ತೊಂದು ಹೆಮ್ಮೆಯ ವಿಚಾರ.

ಇದನ್ನೂ ಓದಿ: ಉಡುಪಿ: ಮೈಕ್ರೋ ಫೈನಾನ್ಸ್ ಕಿರುಕುಳ ಆರೋಪ, 20 ಸಾವಿರ ಸಾಲಕ್ಕೆ 2 ಲಕ್ಷ ರೂ ವಸೂಲಿಗಿಳಿದ ಬ್ಯಾಂಕ್ ಸಿಬ್ಬಂದಿ

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವನಾದ ಹರ್ಷವರ್ಧನ್​ಗೆ ಸ್ಥಳೀಯ ಎಲ್ಲಾ ಬಗೆಯ ಖಾದ್ಯಗಳನ್ನು ತಯಾರು ಮಾಡುವ ಚಾಕಚಕ್ಯತೆ ಇದೆ. ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಿಗೆ ಬೇಕಾದ, ಪ್ರಪಂಚದ ಜನರು ಮೆಚ್ಚುವ ಖಾದ್ಯಗಳನ್ನು ತಯಾರು ಮಾಡುವುದನ್ನು ಕಾಲೇಜಿನಲ್ಲಿ ಕರಗತ ಮಾಡುತ್ತಿದ್ದಾರೆ. ಹರ್ಷವರ್ಧನ್ ಭಾರತದ ಅಗ್ರ ಬಾಣಸಿಗ ಆಗೋದರಲ್ಲಿ ಯಾವುದೇ ಸಂಶಯ ಇಲ್ಲ. ಮುಂದಿನ ವರ್ಷಗಳಲ್ಲಿ ಚಿನ್ನ ಗುರಿ ಇಡುವ ಎಲ್ಲಾ ಸಿದ್ಧತೆಗಳನ್ನ ಮಾಡಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಮ್ಮ ಪಕ್ಷದ ಅಧ್ಯಕ್ಷರಿಗೆ ಮಾಲೆ ಹಾಕಿ, ಕಪಾಳಕ್ಕೆ ಬಾರಿಸಿದ ನಾಯಕ
ತಮ್ಮ ಪಕ್ಷದ ಅಧ್ಯಕ್ಷರಿಗೆ ಮಾಲೆ ಹಾಕಿ, ಕಪಾಳಕ್ಕೆ ಬಾರಿಸಿದ ನಾಯಕ
ನನ್ನ ವಯಸ್ಸು 35, ಶಿವಣ್ಣ ಚಿತ್ರರಂಗಕ್ಕೆ ಬಂದೇ 40 ವರ್ಷ ಆಗಿದೆ: ಧ್ರುವ
ನನ್ನ ವಯಸ್ಸು 35, ಶಿವಣ್ಣ ಚಿತ್ರರಂಗಕ್ಕೆ ಬಂದೇ 40 ವರ್ಷ ಆಗಿದೆ: ಧ್ರುವ
ಫೋಟೋ, ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಜಲಪಾತಗಳ ಬಂಡೆಗಳೇ ಆಗಬೇಕೇ?
ಫೋಟೋ, ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಜಲಪಾತಗಳ ಬಂಡೆಗಳೇ ಆಗಬೇಕೇ?
ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ: ಕಾಗೇರಿ
ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ: ಕಾಗೇರಿ
ಅಪಾರ್ಟ್​ಮೆಂಟ್​​ನಲ್ಲಿ ಬೆಂಕಿ ಅವಘಡ; ಮಹಡಿಯಿಂದ ಹಾರಿದ ತಂದೆ, ಮಕ್ಕಳ ಸಾವು
ಅಪಾರ್ಟ್​ಮೆಂಟ್​​ನಲ್ಲಿ ಬೆಂಕಿ ಅವಘಡ; ಮಹಡಿಯಿಂದ ಹಾರಿದ ತಂದೆ, ಮಕ್ಕಳ ಸಾವು
ಅಪ್ಪು ಇದ್ದ ಕಡೆ ನಗುವಿಗೆಲ್ಲಿ ಕೊರತೆ, ಅಪ್ಪು ಹಳೆ ವಿಡಿಯೋ
ಅಪ್ಪು ಇದ್ದ ಕಡೆ ನಗುವಿಗೆಲ್ಲಿ ಕೊರತೆ, ಅಪ್ಪು ಹಳೆ ವಿಡಿಯೋ
ಜಾತಿಗಣತಿಯ ಮರುಸರ್ವೇ ಮಾಡಿಸಲು ಹೈಕಮಾಂಡ್ ಸೂಚಿಸಿದೆ: ಸಿದ್ದರಾಮಯ್ಯ
ಜಾತಿಗಣತಿಯ ಮರುಸರ್ವೇ ಮಾಡಿಸಲು ಹೈಕಮಾಂಡ್ ಸೂಚಿಸಿದೆ: ಸಿದ್ದರಾಮಯ್ಯ
ಶಾಂತಿಯುತವಾಗಿ ಹೋರಾಟ ಮಾಡುವ ವಾಟಾಳ್ ಇವತ್ತು ಭಿನ್ನವಾಗಿ ಕಂಡರು
ಶಾಂತಿಯುತವಾಗಿ ಹೋರಾಟ ಮಾಡುವ ವಾಟಾಳ್ ಇವತ್ತು ಭಿನ್ನವಾಗಿ ಕಂಡರು
ಸಿದ್ದರಾಮಯ್ಯ ಬಚಾವಾಗಲು ಸಾಧ್ಯವೇ ಇಲ್ಲ ಎಂದ ಸ್ನೇಹಮಯಿ ಕೃಷ್ಣ
ಸಿದ್ದರಾಮಯ್ಯ ಬಚಾವಾಗಲು ಸಾಧ್ಯವೇ ಇಲ್ಲ ಎಂದ ಸ್ನೇಹಮಯಿ ಕೃಷ್ಣ
ಜಾತಿ ಗಣತಿ ವರದಿ, ಕಾಲ್ತುಳಿತದ ಬಗ್ಗೆ CM-DCMಗೆ ಹೈಕಮಾಂಡ್ ಖಡಕ್​ ಸೂಚನೆ
ಜಾತಿ ಗಣತಿ ವರದಿ, ಕಾಲ್ತುಳಿತದ ಬಗ್ಗೆ CM-DCMಗೆ ಹೈಕಮಾಂಡ್ ಖಡಕ್​ ಸೂಚನೆ