AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Linga Mudra Stone: ಉಡುಪಿಯಲ್ಲಿ 400 ವರ್ಷಗಳಷ್ಟು ಹಳೆಯದಾದ ‘ಲಿಂಗ ಮುದ್ರೆ’ ಕಲ್ಲು ಪತ್ತೆ!

ಕಲ್ಲಿನ ಮೇಲಿನ ಸಂದೇಶವು ಸೂರ್ಯ ಮತ್ತು ಚಂದ್ರರಿರುವವರೆಗೂ ಅಂದಿನ ರಾಜನ ಸಾಮ್ರಾಜ್ಯವು ಜೀವಿಸುತ್ತದೆ ಎಂದು ಸೂಚಿಸುತ್ತದೆ

Linga Mudra Stone: ಉಡುಪಿಯಲ್ಲಿ 400 ವರ್ಷಗಳಷ್ಟು ಹಳೆಯದಾದ 'ಲಿಂಗ ಮುದ್ರೆ' ಕಲ್ಲು ಪತ್ತೆ!
Linga Mudra StoneImage Credit source: News Karnataka
ನಯನಾ ಎಸ್​ಪಿ
ನಯನಾ ಎಸ್​ಪಿ|

Updated on: Mar 14, 2023 | 5:38 PM

Share

ಉಡುಪಿ: ಕರ್ನಾಟಕದ ಉಡುಪಿ (Udupi) ಜಿಲ್ಲೆಯಲ್ಲಿ ಸೂರ್ಯ, ಚಂದ್ರ, ಶಿವಲಿಂಗ (Shivalinga) ಮತ್ತು ನಂದಿಯ ಶಾಸನಗಳಿರುವ ‘ಲಿಂಗ ಮುದ್ರೆ’ ಕಲ್ಲು ಪತ್ತೆಯಾಗಿದೆ ಎಂದು ಅಧಿಕಾರಿಗಳು ಸೋಮವಾರ (ಮಾರ್ಚ್ 13) ತಿಳಿಸಿದ್ದಾರೆ. ಕುಂದಾಪುರ (Kundapura) ತಾಲೂಕಿನ ಬಸ್ರೂರು (Basrur) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಶೋಕ ಉದ್ಯಾನವನದಲ್ಲಿ ಸಮತಟ್ಟು ಕೆಲಸವಾಗುತ್ತಿರುವಾಗ ಸುಮಾರ 400 ವರ್ಷಗಳಷ್ಟು ಹಳೆಯದಾದ ಕಲ್ಲು ಪತ್ತೆಯಾಗಿದೆ. ಸ್ಥಳೀಯರ ಸಹಾಯದಿಂದ ಇದನ್ನು ಹೊರ ತೆಗೆಯಲಾಗಿದೆ.

ಈ ವಿಷಯವನ್ನು ಇತಿಹಾಸಕಾರರೊಬ್ಬರ ಗಮನಕ್ಕೆ ತರಲಾಯಿತು. ಕಲ್ಲಿನ ಮೇಲಿನ ಸಂದೇಶವು ಸೂರ್ಯ ಮತ್ತು ಚಂದ್ರರಿರುವವರೆಗೂ ಅಂದಿನ ರಾಜನ ಸಾಮ್ರಾಜ್ಯವು ಜೀವಿಸುತ್ತದೆ ಎಂದು ಸೂಚಿಸುತ್ತದೆ ಎಂದು ಇತಿಹಾಸ ಸಂಶೋಧಕ ಪ್ರೊ. ಟಿ. ಮುರುಗೇಶಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ಹಿಂದಿನ ಶತಮಾನದಲ್ಲಿ ಶೈವರು ಶಿವನನ್ನು, ವೈಷ್ಣವರು ವಿಷ್ಣುವನ್ನು ಮತ್ತು ಜೈನರು ತೀರ್ಥಂಕರರನ್ನು ಪೂಜಿಸುವುದು ಸಾಮಾನ್ಯವಾಗಿತ್ತು. ಶೈವರು ತಮ್ಮ ಭೂ ಗಡಿಯಲ್ಲಿ ಲಿಂಗ ಮುದ್ರೆಯ ಕಲ್ಲುಗಳನ್ನು ಸ್ಥಾಪಿಸಿದರೆ ವೈಷ್ಣವರು ವಾಮನಮುದ್ರೆ ಕಲ್ಲುಗಳನ್ನು ಹಾಕುತ್ತಿದ್ದರು ಮತ್ತು ಜೈನರು ಮುಕ್ಕೊಡೆ ಕಲ್ಲುಗಳನ್ನು ಹಾಕುತ್ತಿದ್ದರು. ಇದು ಅವರ ನೆಲದ ಗಡಿಗಳನ್ನು ಗುರುತಿಸುವ ಮಾರ್ಗವಾಗಿತ್ತು. ಇದಕ್ಕೆ ಅನುಗುಣವಾಗಿ ಬಸ್ರೂರಿನಲ್ಲಿ ದೊರೆತ ಲಿಂಗ ಮುದ್ರೆಯ ಕಲ್ಲುಗಳನ್ನು ಗಡಿ ಗುರುತಿಸಲು ಇಡಲಾಗಿದೆ.” ” ಎಂದು ಪ್ರೊ. ಮುರುಗೇಶಿ ತಿಳಿಸಿದ್ದಾರೆ.

ಇದನ್ನೂ ಓದಿ: ಅಲ್ಲಾ ಬಗ್ಗೆ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ: ಅವರ ಮಾತಿಗೂ ಮೆದುಳಿಗೂ ಕನೆಕ್ಷನ್ ಇಲ್ಲ ಎಂದ ಖಾದರ್

ಇತಿಹಾಸದ ಶಿಲಾ ಶಾಸನಗಳು, ಯುದ್ಧ ಸ್ಮಾರಕಗಳು, ಗಡಿಗಲ್ಲುಗಳನ್ನು ಸಂರಕ್ಷಿಸಲು ಸಾರ್ವಜನಿಕರ ಸಹಕಾರ ಮತ್ತು ಬೆಂಬಲ ಅಗತ್ಯವಾಗಿದ್ದು, ನಮ್ಮ ನೆಲದ ಇತಿಹಾಸದಲ್ಲಿ ದಾಖಲೆಯನ್ನು ನಮೂದಿಸಬೇಕು ಎಂದು ಮುರುಗೇಶಿ ಹೇಳಿದರು.

Follow Us
Nayana SP
Nayana SP

ಹುಟ್ಟೂರು ದಕ್ಷಿಣ ಕನ್ನಡ ಬೆಳೆದದ್ದು ನಮ್ಮ ಬೆಂಗಳೂರಿನಲ್ಲಿ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಶಿಕ್ಷಣ, ಜೋತಿಷ್ಯ, ಉದ್ಯೋಗ, ಹೀಗೆ ಹಲವು. ಕಳೆದ ಎರಡು ವರ್ಷಗಳಿಂದ ಡಿಜಿಟಲ್​ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ಓದುಗರ ಅಭಿರುಚಿಗೆ ಅನುಗುಣವಾಗಿ ಲೇಖನಗಳನ್ನು ಬರೆಯುವುದು ನನ್ನ ಪ್ರಯತ್ನ.