AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪರೂಪದ, ಅಲ್ಪಾಯುಷಿ ಪತಂಗ ಕ್ಯಾಮರಾ ಕಣ್ಣಿಗೆ ಬಿತ್ತು!

ಉಡುಪಿ: ಜಿಲ್ಲೆಯ ಶಿರ್ವ ಸಮೀಪದ ಕಲ್ಲೊಟ್ಟಿ ಗ್ರಾಮದ ನಾಗಬನವೊಂದರಲ್ಲಿ ಒಂದು ವಿಭಿನ್ನ ಪತಂಗ ಪತ್ತೆಯಾಗಿದೆ. ಹಾವಿನ ತಲೆಯಂತೆ ಹೋಲುವ ಮತ್ತು ಪ್ರಪಂಚದಲ್ಲಿ ಅತ್ಯಂತ ಬೃಹತ್ ಗಾತ್ರದ ಪತಂಗಗಳಲ್ಲಿ ಒಂದಾದ ಇದರ ಹೆಸರು ಅಟ್ಲಾಸ್​ ಮಾತ್​. ಕರಾವಳಿ ಜಿಲ್ಲೆಯಲ್ಲಿ ಅಪರೂಪವಾಗಿ ಕಾಣಸಿಗುವ ಈ ಪತಂಗದ ವೈಜ್ಞಾನಿಕ ಹೆಸರು ಌಟಕಸ್ ಅಟ್ಲಾಸ್. ಸುಮಾರು 24 ಸೆಂಟಿಮೀಟರ್​ ವಿಸ್ತೀರ್ಣ ಹೊಂದಿರುವ ಈ ಅಟ್ಲಾಸ್​ ಮಾತ್​ನ ತುಸು ದೂರದಿಂದ ಸೂಕ್ಷ್ಮವಾಗಿ ಗಮನಿಸಿದರೆ ಥೇಟ್​ ಹಾವಿನ ತೆಲೆಯಂತೆ ಹೋಲುತ್ತದೆ. ಅಪರೂಪದ ಅಲ್ಪಾಯುಷಿ ಪತಂಗ ಕ್ಯಾಮರಾದಲ್ಲಿ […]

ಅಪರೂಪದ, ಅಲ್ಪಾಯುಷಿ ಪತಂಗ ಕ್ಯಾಮರಾ ಕಣ್ಣಿಗೆ ಬಿತ್ತು!
KUSHAL V
| Edited By: |

Updated on:Jun 17, 2020 | 2:28 PM

Share

ಉಡುಪಿ: ಜಿಲ್ಲೆಯ ಶಿರ್ವ ಸಮೀಪದ ಕಲ್ಲೊಟ್ಟಿ ಗ್ರಾಮದ ನಾಗಬನವೊಂದರಲ್ಲಿ ಒಂದು ವಿಭಿನ್ನ ಪತಂಗ ಪತ್ತೆಯಾಗಿದೆ. ಹಾವಿನ ತಲೆಯಂತೆ ಹೋಲುವ ಮತ್ತು ಪ್ರಪಂಚದಲ್ಲಿ ಅತ್ಯಂತ ಬೃಹತ್ ಗಾತ್ರದ ಪತಂಗಗಳಲ್ಲಿ ಒಂದಾದ ಇದರ ಹೆಸರು ಅಟ್ಲಾಸ್​ ಮಾತ್​.

ಕರಾವಳಿ ಜಿಲ್ಲೆಯಲ್ಲಿ ಅಪರೂಪವಾಗಿ ಕಾಣಸಿಗುವ ಈ ಪತಂಗದ ವೈಜ್ಞಾನಿಕ ಹೆಸರು ಌಟಕಸ್ ಅಟ್ಲಾಸ್. ಸುಮಾರು 24 ಸೆಂಟಿಮೀಟರ್​ ವಿಸ್ತೀರ್ಣ ಹೊಂದಿರುವ ಈ ಅಟ್ಲಾಸ್​ ಮಾತ್​ನ ತುಸು ದೂರದಿಂದ ಸೂಕ್ಷ್ಮವಾಗಿ ಗಮನಿಸಿದರೆ ಥೇಟ್​ ಹಾವಿನ ತೆಲೆಯಂತೆ ಹೋಲುತ್ತದೆ.

ಅಪರೂಪದ ಅಲ್ಪಾಯುಷಿ ಪತಂಗ ಕ್ಯಾಮರಾದಲ್ಲಿ ಸೆರೆ  ಅತ್ಯಂತ ಕಡಿಮೆ ಜೀವಿತಾವಧಿ ಹೊಂದಿರುವ ಈ ಪತಂಗವು ಕೇವಲ ಒಂದು ಅಥವಾ ಎರಡು ವಾರಗಳ ಕಾಲ ಮಾತ್ರ ಬದುಕಿರುತ್ತದೆ. ಚಕ್ಕೆ, ಚೆರ್ರಿ, ಪೇರಳೆ, ಸಂಪಿಗೆ ಹೀಗೆ ಕೆಲವೊಂದು ಮರಗಳ ಎಲೆಗಳಲ್ಲಿ ಮಾತ್ರ ಈ ಪತಂಗ ಮೊಟ್ಟೆ ಇಡುತ್ತದೆ. ಬಳಿಕ ಮೊಟ್ಟೆಯಿಂದ ಹೊರ ಬರುವ ಹುಳ ಆ ಮರದ ಎಲೆಗಳನ್ನೇ ತಿಂದು ಕೋಶವನ್ನು ರಚಿಸುತ್ತದೆ. ಕೆಲವು ದಿನಗಳ ನಂತರ ಅದರಿಂದ ಹೊರಬರುವ ಪತಂಗವು ಮತ್ತೆ ಬೆಳೆದು, ಸಂತಾನೋತ್ಪತ್ತಿ ಕ್ರಿಯೆಯಲ್ಲಿ ತೊಡಗಿ, ಮೊಟ್ಟೆ ಇಟ್ಟು ತದ ನಂತರ ಅಸುನೀಗುತ್ತದೆ. ಹೀಗೆ ವಿಶೇಷವಾಗಿರುವ ಈ ಪತಂಗವನ್ನ ಉಡುಪಿಯ ಉರಗ ತಜ್ಞ ಗುರುರಾಜ್ ಸನಿಲ್ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

ಈ ಪತಂಗಕ್ಕೆ ಬಾಯಿ, ಜೀರ್ಣಾಂಗ ವ್ಯವಸ್ಥೆ ಎಂಬುದೇ ಇಲ್ಲ! ಇದರ ಜೊತೆಗೆ ವಿಶೇಷವೆಂದರೆ ಈ ಪತಂಗಕ್ಕೆ ಬಾಯಿ ಹಾಗೂ ಜೀರ್ಣಾಂಗ ವ್ಯವಸ್ಥೆ ಎಂಬುದೇ ಇಲ್ಲ. ಹಾಗಾಗಿ ಕೋಶದಿಂದ ಹೊರಬಂದ ಪತಂಗ ಏನ್ನನೂ ತಿನ್ನುವುದಿಲ್ಲ. ಇದಕ್ಕೆ ಬೇಕಾದ ಎಲ್ಲಾ ಪೌಷ್ಟಿಕಾಂಶವನ್ನು ಹುಳು ಆಗಿರುವಾಗಲೇ ಎಲೆಗಳನ್ನು ತಿಂದು ಸಂಪಾದಿಸಿಕೊಳ್ಳುತ್ತದೆ. ಹೀಗಾಗಿ ಅಟ್ಲಾಸ್​ ಮಾತ್​ ತನ್ನ ಶಕ್ತಿಯನ್ನು ಸಂರಕ್ಷಿಸಲು ಅತ್ಯಂತ ಕಡಿಮೆ ಹಾರಾಟ ಮಾಡಿ ಹೆಚ್ಚಾಗಿ ಎಲೆಯ ಮೇಲೇ ವಿಶ್ರಾಂತಿ ಮಾಡುತ್ತಾ ಕಂಡುಬರುತ್ತೆ. ದಿನ ಕಳೆದಂತೆ ತುಂಬಾ ಬಲಹೀನವಾಗುವ ಈ ಪತಂಗ ಅಂತಿಮವಾಗಿ ಹಕ್ಕಿ, ಓತಿ ಮತ್ತು ಇರುವೆಗಳ ಕೈಯಲ್ಲಿ ಸಿಲುಕಿ ಆಹಾರವಾಗಿ ಬಿಡುತ್ತೆ ಎಂದು ತಜ್ಞರು ತಿಳಿಸಿದ್ದಾರೆ. -ಹರೀಶ್ ಪಾಲೆಚ್ಚಾರ್

Published On - 7:13 pm, Tue, 16 June 20

ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
ಶಿಕ್ಷಕರ ನೇಮಕಾತಿ ಬಗ್ಗೆ ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ ಸಿದ್ದರಾಮಯ್ಯ
ಶಿಕ್ಷಕರ ನೇಮಕಾತಿ ಬಗ್ಗೆ ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ ಸಿದ್ದರಾಮಯ್ಯ