AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಂದೇ ಮಾತರಂ ಗೀತೆಗೆ ಅಮ್ಮ ಮತ್ತು ಮಗನ ಯಕ್ಷಗಾನ ಕುಣಿತ; ವಿಡಿಯೋ ವೈರಲ್

ಹಿರಿಯ ಭಾಗವತ ಕೊಳಗಿ ಅವರ ಹಿನ್ನೆಲೆ ಧ್ವನಿಯಲ್ಲಿ ಹಾಡಲಾಗಿರುವ ಯಕ್ಷಗಾನ ವಂದೇ ಮಾತರಂ ಹಾಡಿಗೆ, ತಾಯಿ ಮಗ ಕಲಾತ್ಮಕವಾಗಿ ಹೆಜ್ಜೆ ಹಾಕಿದ್ದಾರೆ. ಅದರಲ್ಲೂ ಸಮುದ್ರದ ದಡದಲ್ಲಿ ನಿಂತು ಕುಣಿದ ಕುಣಿತ ಎಲ್ಲರನ್ನು ಆಕರ್ಷಿಸುತ್ತಿದೆ.

ವಂದೇ ಮಾತರಂ ಗೀತೆಗೆ ಅಮ್ಮ ಮತ್ತು ಮಗನ ಯಕ್ಷಗಾನ ಕುಣಿತ; ವಿಡಿಯೋ ವೈರಲ್
ಕಡಲತೀರದಲ್ಲಿ ಯಕ್ಷಗಾನದ ಕುಣಿತ
TV9 Web
| Edited By: |

Updated on:Oct 20, 2021 | 2:20 PM

Share

ಉಡುಪಿ: ಯಕ್ಷಗಾನ ಯಾವತ್ತೂ ಪ್ರಯೋಗಗಳೊಂದಿಗೆ ಕೂಡಿಕೊಂಡಿರುವ ಕಲೆ. ಅದರಂತೆ ಅಮ್ಮ ಮತ್ತು ಮಗ ಜೋಡಿಯಾಗಿ ಯಕ್ಷಗಾನ ಮಾಡಿದ್ದು, ಸಖತ್ ಸ್ಟೆಪ್ಸ್ ಹಾಕುವ ಮೂಲಕ ವೈರಲ್ ಆಗಿದ್ದಾರೆ. ಇದೇ ಮೊದಲ ಬಾರಿಗೆ ತಾಯಿ ಮತ್ತು ಮಗ ಜೊತೆಯಾಗಿ ವಂದೇ ಮಾತರಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ವೇದಿಕೆಯಲ್ಲಿ ಯಕ್ಷಗಾನ ನಡೆಯುವುದು ಮಾಮೂಲು, ಆದರೆ ಕಡಲತೀರದಲ್ಲಿ ಯಕ್ಷಗಾನದ ಕುಣಿತ ಎಂದರೆ ಆ ಬಗೆಗಿನ ನಿರೀಕ್ಷೆಯೇ ಬೇರೆ.

ಕರಾವಳಿಯ ಕಲೆ ಹೊಸರೂಪದಲ್ಲಿ ಪ್ರಸ್ತುತ ಗೊಂಡಿದೆ. ತಾಯಿ ಭಾವನ ದೇವಾಡಿಗ ಜೊತೆ ಪುತ್ರ ಆಶಿಶ್ ದೇವಾಡಿಗ ಮನಮೋಹಕವಾಗಿ ಹೆಜ್ಜೆ ಹಾಕಿದ್ದಾರೆ. ಹಿರಿಯ ಭಾಗವತ ಕೊಳಗಿ ಅವರ ಹಿನ್ನೆಲೆ ಧ್ವನಿಯಲ್ಲಿ ಹಾಡಲಾಗಿರುವ ಯಕ್ಷಗಾನ ವಂದೇ ಮಾತರಂ ಹಾಡಿಗೆ, ತಾಯಿ ಮಗ ಕಲಾತ್ಮಕವಾಗಿ ಹೆಜ್ಜೆ ಹಾಕಿದ್ದಾರೆ. ಅದರಲ್ಲೂ ಸಮುದ್ರದ ದಡದಲ್ಲಿ ನಿಂತು ಕುಣಿದ ಕುಣಿತ ಎಲ್ಲರನ್ನು ಆಕರ್ಷಿಸುತ್ತಿದೆ.

ಪ್ರಕೃತಿಯ ಮಡಿಲಲ್ಲಿ ನಡೆದಿರುವ ಈ ಅಪೂರ್ವ ದೃಶ್ಯಾವಳಿಗಳು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಯಕ್ಷಗಾನದ ಅಪರೂಪದ ಹೆಜ್ಜೆ ಗಾರಿಕೆಯನ್ನು, ಈ ದೃಶ್ಯಾವಳಿಗಳಲ್ಲಿ ನೋಡಬಹುದು. ಮಗನಿಗೆ ಸ್ಪರ್ಧೆ ನೀಡುವ ರೀತಿಯಲ್ಲಿ, ಕುಣಿದ ತಾಯಿಯಂತೂ ಎಲ್ಲರ ಗಮನಸೆಳೆಯುತ್ತಿದ್ದಾರೆ. ಈ ಮೂಲಕ ದೇಶಭಕ್ತಿ ಗೀತೆಯೊಂದು ಹೊಸ ರೂಪದಲ್ಲಿ ಜನರ ಮುಂದೆ ಪ್ರಸ್ತುತ ಗೊಂಡಿದೆ.

ವರದಿ: ಹರೀಶ್ ಪಾಲೇಚ್ಚಾರ್

ಇದನ್ನೂ ಓದಿ: ಹಾಸನ: ಸಮವಸ್ತ್ರದಲ್ಲೇ ಪೊಲೀಸರ ಎಣ್ಣೆ ಪಾರ್ಟಿ; ವಿಡಿಯೋ ವೈರಲ್​

Viral Video: ತಲೆ ಕೂದಲಿನಲ್ಲಿಯೇ ವಾಹನವನ್ನು ಎಳೆದು ತಂದ ಯುವತಿ! ಶಾಕಿಂಗ್ ವಿಡಿಯೋ ವೈರಲ್​

Published On - 12:38 pm, Wed, 20 October 21

ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ